Covid 19: ಕೊರೊನಾಕ್ಕೆ ಬಲಿಯಾದ ಗರ್ಭಿಣಿ ವೈದ್ಯೆ; ಗಂಡ ಹಂಚಿಕೊಂಡ ಮನಕಲಕುವ ವಿಡಿಯೋ ಸಂದೇಶ ಇಲ್ಲಿದೆ

ಸಾವಿಗೆ ಕೆಲವು ದಿನಗಳ ಹಿಂದೆ ದೆಹಲಿ ಮೂಲದ ವೈದ್ಯರಾದ ಡಾ. ಡಿಂಪಲ್​ ಅರೋರಾ ಚಾವ್ಲಾ ತನ್ನ ಕುಟುಂಬ ಮತ್ತು ಸ್ನೇಹಿತರಿಗೆ ಕೊರೊನಾ ವೈರಸ್​ಅನ್ನು ಲಘುವಾಗಿ ತೆಗೆದುಕೊಳ್ಳದಂತೆ ಎಚ್ಚರಿಕೆಯ ಮಾತುಗಳನ್ನಾಡಿ ವಿಡಿಯೋ ಸಂದೇಶವನ್ನು ಕಳುಹಿಸಿದ್ದರು.

Covid 19: ಕೊರೊನಾಕ್ಕೆ ಬಲಿಯಾದ ಗರ್ಭಿಣಿ ವೈದ್ಯೆ; ಗಂಡ ಹಂಚಿಕೊಂಡ ಮನಕಲಕುವ ವಿಡಿಯೋ ಸಂದೇಶ ಇಲ್ಲಿದೆ
ಡಾ. ಡಿಂಪಲ್​ ಅರೋರಾ ಚಾವ್ಲಾ ಕುಟುಂಬ
Follow us
|

Updated on:May 12, 2021 | 5:04 PM

ಡಾ. ಡಿಂಪಲ್​ ಅರೋರಾ ಚಾವ್ಲಾ ದಂತ ವೈದ್ಯರು. ಏಪ್ರಿಲ್​ನಲ್ಲಿ ಕೊವಿಡ್​ ಪರೀಕ್ಷೆಗೆ ಒಳಗಾದಾಗ ಅವರು 7 ತಿಂಗಳ ಗರ್ಭಿಣಿ. ಪರೀಕ್ಷೆಯ ವರದಿಯ ಪ್ರಕಾರ ವೈದ್ಯೆ ಡಿಂಪಲ್​ ಅರೋರಾ ಚಾವ್ಲಾ ಅವರಿಗೆ ಕೊವಿಡ್​ ಪಾಸಿಟಿವ್​ ಬಂತು. ಈಗ ತಾನೆ ಜಗತ್ತು ನೋಡಲಿರುವ ಮಗುವನ್ನು 34ನೇ ವಯಸ್ಸಿನಲ್ಲಿರುವ ಅವರು ಕಳೆದುಕೊಂಡರು. ಆ ನೋವಿನಲ್ಲಿಯೂ ದೃತಿಗೆಡದೇ ಕೊರೊನಾ ವೈರಸ್​ ವಿರುದ್ಧ ಹೋರಾಡಿದರು. ಆದರೆ ದುರಾದೃಷ್ಟವಶಾತ್​ ತನ್ನ ಮೂರು ವರ್ಷದ ಮಗು ಮತ್ತು ಗಂಡನನ್ನು ಬಿಟ್ಟು ಇಹಲೋಕ ತ್ಯಜಿಸಿದ್ದಾರೆ.

ಸಾವಿಗೆ ಕೆಲವು ದಿನಗಳ ಹಿಂದೆ ದೆಹಲಿ ಮೂಲದ ವೈದ್ಯರಾದ ಇವರು ತನ್ನ ಕುಟುಂಬ ಮತ್ತು ಸ್ನೇಹಿತರಿಗೆ ಕೊರೊನಾ ವೈರಸ್​ಅನ್ನು ಲಘುವಾಗಿ ತೆಗೆದುಕೊಳ್ಳದಂತೆ ಎಚ್ಚರಿಕೆಯ ಮಾತುಗಳನ್ನಾಡಿ ವಿಡಿಯೋ ಸಂದೇಶವನ್ನು ಕಳುಹಿಸಿದ್ದರು. ‘ಬಹಳ ಕಷ್ಟದಿಂದ ಈ ವಿಡಿಯೋ ಮಾಡುತ್ತಿದ್ದೇನೆ. ಎಲ್ಲರಿಗೂ ಹೇಳಬಯಸುವುದೇನೆಂದರೆ, ದಯವಿಟ್ಟು ಕೊರೊನಾ ಸೋಂಕನ್ನು ಅಷ್ಟು ಲಘುವಾಗಿ ತೆಗೆದುಕೊಳ್ಳಬೇಡಿ. ಆರೋಗ್ಯಕ್ಕೆ ತುಂಬಾ ಗಂಭೀರವಾದ ಲಕ್ಷಣಗಳನ್ನು ಬೀರುತ್ತದೆ. ನನಗೆ ಮಾತನಾಡಲು ಸಹ ಆಗುತ್ತಿಲ್ಲ. ನನ್ನ ಈ ಸಂದೇಶ ಎಲ್ಲರಿಗೆ ಮನಮುಟ್ಟಿದೆ ಎಂದು ನಾನು ಬಯಸುತ್ತೇನೆ. ಈ ಸಂದೇಶವನ್ನು ಎಲ್ಲರಿಗೂ ತಿಳಿಸಿ’ ಎಚ್ಚರಿಕೆ ನೀಡಿದ ಸಂದೇಶವನ್ನು ಏಪ್ರಿಲ್​ 7ರಂದು ರೆಕಾರ್ಡ್​ ಮಾಡಿದ 2 ನಿಮಿಷ 20 ಸೆಕೆಂಡುಗಳ ವಿಡಿಯೋದಲ್ಲಿ ನೋಡಬಹುದಾಗಿದೆ.

‘ನಿಮ್ಮ ಆತ್ಮೀಯರೊಂದಿಗೆ, ಸ್ನೇಹಿತರೊಂದಿಗೆ, ಮನೆಯವರೊಂದಿಗೆ ಅಥವಾ ಹೊರಗೆ ಹೋಗುವಾಗ ದಯವಿಟ್ಟು ಮುಖಗವಸನ್ನು ಧರಿಸಿ’ ಎಂದು ಡಾ. ಡಿಂಪಲ್​ ಅರೋರಾ ಚಾವ್ಲಾ ಎಚ್ಚರಿಸಿದ್ದರು. ಈ ವಿಡಿಯೋವನ್ನು ಪತಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ಸಾವಿರಾರು ಜನರು ಸಂತಾಪ ಸೂಚಿಸಿದ್ದಾರೆ.

ಎನ್​ಡಿಟಿವಿಯೊಂದಿಗೆ ಮಾತನಾಡಿದ ರವೀಶ್​ ಚಾವ್ಲಾ ಅವರು, ಜನರು, ನನ್ನ ಹೆಂಡತಿಯ ಕೊನೆಯ ಆಶಯಗಳನ್ನು ಗೌರವಿಸುತ್ತಿದ್ದಾರೆ. ಆಕೆ ಹೇಳಿದ ಮಾತುಗಳೆಲ್ಲವೂ ಜಾಗೃತಿ ಮೂಡಿಸುವ ಸಂದೇಶಗಳಾಗಿವೆ. ಆದ್ದರಿಂದ ಯಾರೂ ಕೂಡಾ ಸಾಂಕ್ರಾಮಿಕವನ್ನು ಲಘುವಾಗಿ ಪರಿಗಣಿಸುವುದಿಲ್ಲ ಎಂದು ಮಾತನಾಡಿದರು.

‘ಮುನ್ನೆಚ್ಚರಿಕೆಯ ಕುರಿತಾಗಿ ಜನರಿಗೆ ತಿಳಿಸುವುದು ಡಾ. ಡಿಂಪಲ್​ ಚಾವ್ಲಾ ಅವರಿಗೆ ಸಹಜ ಸ್ವಭಾವವಾಗಿತ್ತು. ಹಾಗಾಗಿ ತನ್ನ ಕುಟುಂಬದ ಸದಸ್ಯರು ಮತ್ತು ಸ್ನೇಹಿತರಿಗಾಗಿ ವಿಡಿಯೋ ರೆಕಾರ್ಡ್​ ಮಾಡಿದ್ದರು. ಆದರೆ ಅವರ ಅಕಾಲಿಕ ಮರಣವು, ಈ ಸಂದೇಶವನ್ನು ಜಗತ್ತಿಗೆ ಪೋಸ್ಟ್​ ಮಾಡುವಂತೆ ಮಾಡಿತು. ಕೊವಿಡ್​ಅನ್ನು ದಯಮಾಡಿ ಲಘುವಾಗಿ ಪರಿಗಣಿಸಬೇಡಿ ಎಂದು ತಮ್ಮ ನೋವನ್ನು ಹಂಚಿಕೊಳ್ಳುವುದರ ಮೂಲಕ ಜನರಿಗೆ ಸೂಚನೆ ನೀಡಿದರು. ನಿಮಗಾಗಿ ಮಾತ್ರವಲ್ಲದೇ ಸುತ್ತ-ಮುತ್ತಲಿನ ಜನರಿಗಾಗಿ ನೀವು ಮುಖಗವಸನ್ನು ಧರಿಸಬೇಕು. ವಯಸ್ಸಾದವರು, ಗರ್ಭಿಣಿಯರಿರುತ್ತಾರೆ ಅವರಿಗೋಸ್ಕರ ನೀವು ಮುಖಗವಸನ್ನು ಧರಿಸಲು ಮರೆಯದಿರಿ ಎಂದು ಅವರು ಸಂದೇಶ ಸಾರಿದರು.

ಕೊವಿಡ್​ನಿಂದ ತನ್ನ ಹೆಂಡತಿ ಹೋರಾಡಿದ ಘಟನೆಯನ್ನು ಹೇಳಿದ ಚಾವ್ಲಾ ಅವರು, ಕೊವಿಡ್​ ಪಾಸಿಟಿವ್​ ಬಂದ 10 ದಿನಗಳ ಬಳಿಕ ಅವರಿಗೆ ಉಸಿರಾಡಲು ಕಷ್ಟವಾಗತೊಡಗಿತು. ಆಕೆಯನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದೆವು. ಆಸ್ಪತ್ರೆಯಲ್ಲಿ ರೆಮ್ಡೆಸಿವಿರ್​ ನೀಡಲಾಯಿತು. ಜೊತೆಗೆ ಎರಡು ಸುತ್ತಿನ ಪ್ಲಾಸ್ಮಾ ಚಿಕಿತ್ಸೆ ನೀಡಲಾಗಿತ್ತು ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಕೊರೊನಾ ಸೋಂಕು: ಮಂಗಳೂರಿನಲ್ಲಿ ಗರ್ಭಿಣಿ ವೈದ್ಯೆ ಬಲಿ; ಮುಳಬಾಗಿಲಿನಲ್ಲಿ ಸ್ಟುಡಿಯೋ ಮಾಲೀಕ-ಪತ್ನಿ ಸಾವು

Published On - 5:01 pm, Wed, 12 May 21

ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ