‘ಸಾಕು ಚಿಂದಿ ಆಯ್ದಿದ್ದು ಇನ್ನು ತರಕಾರಿ ಮಾರಿ’; 75 ವರ್ಷದ ಅಜ್ಜಿಗೆ ಸಹಾಯ ಮಾಡಿದ ‘ತರುಣ’ ಬ್ಲಾಗರ್

Ragpicker start new life : ಬ್ಲಾಗರ್​ ಒಬ್ಬರು 75 ವರ್ಷದ ಚಿಂದಿ ಆಯುವ ಅಜ್ಜಿಗೆ ಸಹಾಯ ಮಾಡಿದ ವಿಡಿಯೋ ವೈರಲ್ ಆಗಿದೆ. ಭಾರತಕ್ಕೆ ಇಂಥ ‘ತರುಣ’ರ ಅವಶ್ಯಕತೆ ಇದೆ ಎಂದಿದ್ದಾರೆ ನೆಟ್ಟಿಗರು. ಹೃದಯಸ್ಪರ್ಶಿಯಾದ ಈ ವಿಡಿಯೋ ನೋಡಿ.

‘ಸಾಕು ಚಿಂದಿ ಆಯ್ದಿದ್ದು ಇನ್ನು ತರಕಾರಿ ಮಾರಿ’; 75 ವರ್ಷದ ಅಜ್ಜಿಗೆ ಸಹಾಯ ಮಾಡಿದ ‘ತರುಣ’ ಬ್ಲಾಗರ್
IAS officer shares video of blogger who helped 75 yr old ragpicker start new life
Follow us
| Updated By: ಶ್ರೀದೇವಿ ಕಳಸದ

Updated on:Oct 19, 2022 | 12:04 PM

Viral Video : 25 ಅಲ್ಲ, ಈ ಅಜ್ಜಿಗೆ 75! ಇನ್ನೂ ಎಷ್ಟು ವರ್ಷ ಇವರು ಹೀಗೆ ಬೀದಿಬೀದಿ ಅಲೆದು, ಕಸದತೊಟ್ಟಿಯಲ್ಲಿ ತಡಕಾಡುತ್ತ ಚಿಂದಿ ಆಯ್ದು ಜೀವನ ಸಾಗಿಸಬೇಕು? ಇದನ್ನು ನೋಡಿದ ಯಾರೂ ಮರುಗದೇ ಇರಲಾರರು. ನಮ್ಮ ಸುತ್ತಮುತ್ತ ಇಂಥ ಅನೇಕರನ್ನು ಕಾಣುತ್ತೇವೆ. ಆದರೆ ಅವರಿಗಾಗಿ ನಾವೇನು ಮಾಡುತ್ತ ಬಂದಿದ್ದೇವೆ? ನಮ್ಮ ನಮ್ಮ ಬೆಚ್ಚಗಿನ ಗೂಡುಗಳನ್ನು ರಕ್ಷಣೆ ಮಾಡಿಕೊಳ್ಳುವುದರಲ್ಲಿಯೇ ನಾವು ಮುಳುಗಿದ್ದೇವಲ್ಲವೆ? ಇದೀಗ ವೈರಲ್ ಆಗಿರುವ ಈ ವಿಡಿಯೋ ಮಾತ್ರ ಬಹಳ ವಿಭಿನ್ನವಾಗಿದೆ. 75 ವರ್ಷದ ಅಜ್ಜಿಯೊಬ್ಬರಿಗೆ ಬ್ಲಾಗರ್ ಒಬ್ಬರು ಹೊಸ ಜೀವನಕ್ಕೆ ತೆರೆದುಕೊಳ್ಳಲು ಸಹಾಯ ಮಾಡಿದ್ದಾರೆ. ಈ ವಿಡಿಯೋ ನೆಟ್ಟಿಗರ ಮನ ಕರಗಿಸುತ್ತಿದೆ, ಅವರಲ್ಲಿ ಮಾನವೀಯತೆಯನ್ನು ಜಾಗೃತಗೊಳಿಸುವಂತಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈತನಕ 1 ಮಿಲಿಯನ್​ ಜನರು ಈ ವಿಡಿಯೋ ನೋಡಿದ್ದಾರೆ. ಇದನ್ನು ಟ್ವೀಟ್ ಮಾಡಿದವರು ಐಎಎಸ್ ಆಫೀಸರ್ ಅವನೀಶ ಶರಣ. ಅನೇಕರು ಈ ವಿಡಿಯೋ ಅನ್ನು ರೀಟ್ವೀಟ್ ಮಾಡಿದ್ದಾರೆ. ಈ ವಯಸ್ಸಿನಲ್ಲಿಯೂ ಅಜ್ಜಿ ಹೊಟ್ಟೆಪಾಡಿಗೆ ನಿತ್ಯವೂ ಓಡಾಡಿ ಚಿಂದಿ ಆಯ್ದು ಅದನ್ನು ಗುಜರಿ ಅಂಗಡಿಗೆ ಮಾರುವುದೆಂದರೆ ಮನಸ್ಸು ಪಿಚ್ಚೆನ್ನಿಸುತ್ತದೆ. ಸಹಾಯ ಮಾಡಿದರೂ ಆ ದಿನದ ಮಟ್ಟಿಗೆ. ದೀರ್ಘಕಾಲದಲ್ಲಿ ಆ ಸಹಾಯವನ್ನು ಕಾರ್ಯಗತಗೊಳಿಸಲು ಎಲ್ಲರೂ ಮುಂದಾಗಲಾರರು. ಅಲ್ಲೊಬ್ಬರು ಇಲ್ಲೊಬ್ಬರು ಈ ವಿಷಯವಾಗಿ ತೊಡಗಿಕೊಳ್ಳಬಹುದು. ಅಂಥವರ ಪೈಕಿ ಇದೀಗ ಬ್ಲಾಗರ್ ತರುಣ ಮಿಶ್ರಾ ಒಬ್ಬರು ಎನ್ನಿಸಿಕೊಂಡಿದ್ದಾರೆ. ಈ ಅಜ್ಜಿಗೆ ತರಕಾರಿ ಮಾರಿ ಜೀವನ ಸಾಗಿಸಲು ಎಲ್ಲ ರೀತಿಯ ಸಹಾಯ ಮಾಡಿದ್ದಾರೆ.

ಹೊಸ ವ್ಯಾಪಾರವನ್ನು ಆರಂಭಿಸಲು ತರಕಾರಿ ಗಾಡಿ, ತೂಕದ ಯಂತ್ರ, ಅವಶ್ಯಕ ತರಕಾರಿಗಳನ್ನು, ನಿತ್ಯಜೀವನಕ್ಕೆ ಬೇಕಾಗುವ ಬಟ್ಟೆಬರೆ, ಸೀರೆ, ದಿನಸಿಗಳನ್ನು ತರುಣ ಖರೀದಿಸಿ ಕೊಟ್ಟಿದ್ದಾರೆ.  ಖರೀದಿಸುವಾಗ ಈ ಅಜ್ಜಿಯನ್ನೂ ತಮ್ಮೊಂದಿಗೆ ತಮ್ಮ ಕಾರಿನಲ್ಲಿ ಕರೆದುಕೊಂಡು ಹೋಗುವುದು, ಮಧ್ಯದಲ್ಲೆಲ್ಲೋ ಗಲ್ಲಿಯಲ್ಲಿ ಅಜ್ಜಿಯೊಂದಿಗೆ ಕುಳಿತು ಚಹಾ ಕೂಡ  ಕುಡಿಯುವುದು, ನಂತರ ಎಲ್ಲ ಸಾಮಾನುಗಳನ್ನು ಅಜ್ಜಿಯ ಶೆಡ್ಡಿಗೆ ತಲುಪಿಸಿ ಸ್ವಲ್ಪ ಹೊತ್ತು ಅಲ್ಲಿ ಕಾಲ ಕಳೆಯುವುದು ಎಲ್ಲವನ್ನೂ ಈ ವಿಡಿಯೋದಲ್ಲಿ ನೋಡಬಹುದು.

ಈ ವಿಡಿಯೋ ನೋಡಿದ ನೆಟ್ಟಿಗರು ಬಹಳ ಖುಷಿಪಟ್ಟಿದ್ದಾರೆ. ಅಜ್ಜಿ ನೀಡಿದ ಆಶೀರ್ವಾದ ನಿಮ್ಮನ್ನು ಎತ್ತರಕ್ಕೇರಿಸುತ್ತದೆ ನೋಡುತ್ತಿರಿ ಬೇಕಿದ್ದರೆ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಎಂಥ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ತರುಣ, ಮನ ತುಂಬಿಬರುತ್ತಿದೆ ಎಂದಿದ್ದಾರೆ ಮತ್ತೂ ಒಬ್ಬರು. ನಿಮ್ಮಂಥವರ ಸಂತತಿ ಹೆಚ್ಚಲಿ, ಭಾರತಕ್ಕೆ ಇಂಥವರ ಅವಶ್ಯಕತೆ ಇದೆ ಎಂದಿದ್ದಾರೆ ಮತ್ತೂ ಒಬ್ಬರು. ಸಿನೆಮಾ, ಶಾಪಿಂಗ್​, ಇಂಟರ್​ನೆಟ್​ ಎಂದು ಕಾಲ ಕಳೆಯುತ್ತಿರುವ ತರುಣ ಪೀಳಿಗೆ ಇಂಥ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಲಿ ಇದಕ್ಕೆ ತರುಣ ಮಾದರಿ ಎಂದಿದ್ದಾರೆ ಮಗದೊಬ್ಬರು.

ನಿಮಗೇನೆನ್ನಿಸುತ್ತದೆ ಈ ವಿಡಿಯೋ ನೋಡಿದರೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:46 am, Wed, 19 October 22

ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು