AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ನಿಮಿಷ, ನನ್ನ ಮುದ್ದುನಾಯಿಗೆ ಊಟ ಮಾಡಿಸಬೇಕು; ಮೇಕಪ್​ ಮಧ್ಯೆ ಬ್ರೇಕ್​ ತೆಗೆದುಕೊಂಡ ವಧು

Indian Bride : ಸಾಕಿದ ನಾಯಿಗಳು ಮಕ್ಕಳಿಗಿಂತ ಹೆಚ್ಚು ಎನ್ನುವುದಕ್ಕೆ ಉದಾಹರಣೆ ಈ ವಿಡಿಯೋ. ತನ್ನ ನಾಯಿಗೆ ಊಟ ಮಾಡಿಸಬೇಕು ಎನ್ನುವ ಕಾರಣಕ್ಕೆ ಈ ವಧು ಮೇಕಪ್​ನಿಂದ ಬ್ರೇಕ್​ ತೆಗೆದುಕೊಳ್ಳುತ್ತಾಳೆ.

ಒಂದೇ ನಿಮಿಷ, ನನ್ನ ಮುದ್ದುನಾಯಿಗೆ ಊಟ ಮಾಡಿಸಬೇಕು; ಮೇಕಪ್​ ಮಧ್ಯೆ ಬ್ರೇಕ್​ ತೆಗೆದುಕೊಂಡ ವಧು
ಮೇಕಪ್ ಅರ್ಧಕ್ಕೆ ಬಿಟ್ಟು ತನ್ನ ನಾಯಿಗೆ ಉಣ್ಣಿಸುತ್ತಿರುವ ವಧು
TV9 Web
| Edited By: |

Updated on: Dec 08, 2022 | 3:18 PM

Share

Viral Video : ವಧು ತನ್ನ ಮದುವೆಯ ತಯಾರಿಯಲ್ಲಿ ಮುಳುಗಿದರೆ ಮುಗಿಯಿತು. ಕೈಗೊಬ್ಬರು ಕಾಲಿಗೊಬ್ಬರು ತಲೆಗೊಬ್ಬರು, ಬೆರಳಿಗೊಬ್ಬರು… ಎಷ್ಟು ಜನರಾದರೂ ಸಾಲುವುದೇ ಇಲ್ಲ ಅವಳ ಸಹಾಯಕ್ಕೆ. ರಾಜಕುಮಾರಿಯಂತೆ ಮಿನುಗುತ್ತಿರುತ್ತಾಳೆ. ಆದರೆ ಈ ವಿಡಿಯೋದಲ್ಲಿ ನೋಡಿ. ಈ ವಧು ತನ್ನ ಮದುವೆಗೆಂದು ಮೇಕಪ್ ಮಾಡಿಸಿಕೊಳ್ಳುತ್ತಿದ್ದಾಗ ತನ್ನ ಮುದ್ದುನಾಯಿಗೆ ಊಟ ಮಾಡಿಸಬೇಕಿರುವುದು ನೆನಪಾಗಿದೆ. ಮೇಕಪ್​ ಅರ್ಧಕ್ಕೇ ಬಿಟ್ಟು, ನಾಯಿಗೆ ಊಟ ಮಾಡಿಸಲು ಬಂದಿದ್ದಾಳೆ.

View this post on Instagram

A post shared by Simar K (@simark_makeup)

ಮಗುವಿನಂತೆ ನೋಡಿಕೊಳ್ಳುತ್ತಿದ್ದರೆ ಮಾತ್ರ ಇಂಥ ನಾಯಿಗಳನ್ನು ಸಾಕಬೇಕು ಎನ್ನುವುದು ಅಕ್ಷರಶಃ ನಿಜ. ಇಲ್ಲವಾದಲ್ಲಿ ಜೋಲುಮುಖ ಹಾಕಿಕೊಂಡು ಕುಳಿತುಬಿಡುತ್ತವೆ ಅಥವಾ ಕುಣಿದು ಕುಪ್ಪಳಿಸಿ ನಿಮ್ಮ ಜೀವ ಹಿಂಡಿಬಿಡುತ್ತವೆ. ಒಟ್ಟು ಗರ್ಭಗುಡಿಯ ಮುಂದೆ ಬಸವಣ್ಣ ಕುಳಿತ ಹಾಗೆ ನೀವು ಸದಾ ಅವುಗಳ ದೇಖರೇಖಿ ಮಾಡುತ್ತಲೇ ಇರಬೇಕು.

ಹಿಂದೆಮುಂದೆ ನೋಡದೆ ಸೀದಾ ನೆಲದ ಮೇಲೆ ಕುಳಿತು ಮಗುವಿಗೆ ಉಣ್ಣಿಸಿದ ಹಾಗೆ ಉಣಿಸುತ್ತಿದ್ದಾಳೆ. 1 ಲಕ್ಷಕ್ಕೂ ಹೆಚ್ಚು ಜನ ಈ ವಿಡಿಯೋ ನೋಡಿದ್ದಾರೆ. 5,000ಕ್ಕೂ ಹೆಚ್ಚು ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ.

ಗಂಡನ ಮನೆಗೆ ಈ ಮುದ್ದುನಾಯಿಯನ್ನೂ ಕರೆದುಕೊಂಡು ಹೋಗುತ್ತಾಳೆಯೇ? ಎಂಬ ಪ್ರಶ್ನೆ ಏಳದೇ ಇರದು ಅಲ್ಲವೆ?

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಅಟ್ಟಾಡಿಸಿದ ಆನೆ, ಭಯಾನಕ ವಿಡಿಯೋ ನೋಡಿ
ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಅಟ್ಟಾಡಿಸಿದ ಆನೆ, ಭಯಾನಕ ವಿಡಿಯೋ ನೋಡಿ