Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ನಿಮಿಷ, ನನ್ನ ಮುದ್ದುನಾಯಿಗೆ ಊಟ ಮಾಡಿಸಬೇಕು; ಮೇಕಪ್​ ಮಧ್ಯೆ ಬ್ರೇಕ್​ ತೆಗೆದುಕೊಂಡ ವಧು

Indian Bride : ಸಾಕಿದ ನಾಯಿಗಳು ಮಕ್ಕಳಿಗಿಂತ ಹೆಚ್ಚು ಎನ್ನುವುದಕ್ಕೆ ಉದಾಹರಣೆ ಈ ವಿಡಿಯೋ. ತನ್ನ ನಾಯಿಗೆ ಊಟ ಮಾಡಿಸಬೇಕು ಎನ್ನುವ ಕಾರಣಕ್ಕೆ ಈ ವಧು ಮೇಕಪ್​ನಿಂದ ಬ್ರೇಕ್​ ತೆಗೆದುಕೊಳ್ಳುತ್ತಾಳೆ.

ಒಂದೇ ನಿಮಿಷ, ನನ್ನ ಮುದ್ದುನಾಯಿಗೆ ಊಟ ಮಾಡಿಸಬೇಕು; ಮೇಕಪ್​ ಮಧ್ಯೆ ಬ್ರೇಕ್​ ತೆಗೆದುಕೊಂಡ ವಧು
ಮೇಕಪ್ ಅರ್ಧಕ್ಕೆ ಬಿಟ್ಟು ತನ್ನ ನಾಯಿಗೆ ಉಣ್ಣಿಸುತ್ತಿರುವ ವಧು
Follow us
TV9 Web
| Updated By: ಶ್ರೀದೇವಿ ಕಳಸದ

Updated on: Dec 08, 2022 | 3:18 PM

Viral Video : ವಧು ತನ್ನ ಮದುವೆಯ ತಯಾರಿಯಲ್ಲಿ ಮುಳುಗಿದರೆ ಮುಗಿಯಿತು. ಕೈಗೊಬ್ಬರು ಕಾಲಿಗೊಬ್ಬರು ತಲೆಗೊಬ್ಬರು, ಬೆರಳಿಗೊಬ್ಬರು… ಎಷ್ಟು ಜನರಾದರೂ ಸಾಲುವುದೇ ಇಲ್ಲ ಅವಳ ಸಹಾಯಕ್ಕೆ. ರಾಜಕುಮಾರಿಯಂತೆ ಮಿನುಗುತ್ತಿರುತ್ತಾಳೆ. ಆದರೆ ಈ ವಿಡಿಯೋದಲ್ಲಿ ನೋಡಿ. ಈ ವಧು ತನ್ನ ಮದುವೆಗೆಂದು ಮೇಕಪ್ ಮಾಡಿಸಿಕೊಳ್ಳುತ್ತಿದ್ದಾಗ ತನ್ನ ಮುದ್ದುನಾಯಿಗೆ ಊಟ ಮಾಡಿಸಬೇಕಿರುವುದು ನೆನಪಾಗಿದೆ. ಮೇಕಪ್​ ಅರ್ಧಕ್ಕೇ ಬಿಟ್ಟು, ನಾಯಿಗೆ ಊಟ ಮಾಡಿಸಲು ಬಂದಿದ್ದಾಳೆ.

View this post on Instagram

A post shared by Simar K (@simark_makeup)

ಮಗುವಿನಂತೆ ನೋಡಿಕೊಳ್ಳುತ್ತಿದ್ದರೆ ಮಾತ್ರ ಇಂಥ ನಾಯಿಗಳನ್ನು ಸಾಕಬೇಕು ಎನ್ನುವುದು ಅಕ್ಷರಶಃ ನಿಜ. ಇಲ್ಲವಾದಲ್ಲಿ ಜೋಲುಮುಖ ಹಾಕಿಕೊಂಡು ಕುಳಿತುಬಿಡುತ್ತವೆ ಅಥವಾ ಕುಣಿದು ಕುಪ್ಪಳಿಸಿ ನಿಮ್ಮ ಜೀವ ಹಿಂಡಿಬಿಡುತ್ತವೆ. ಒಟ್ಟು ಗರ್ಭಗುಡಿಯ ಮುಂದೆ ಬಸವಣ್ಣ ಕುಳಿತ ಹಾಗೆ ನೀವು ಸದಾ ಅವುಗಳ ದೇಖರೇಖಿ ಮಾಡುತ್ತಲೇ ಇರಬೇಕು.

ಹಿಂದೆಮುಂದೆ ನೋಡದೆ ಸೀದಾ ನೆಲದ ಮೇಲೆ ಕುಳಿತು ಮಗುವಿಗೆ ಉಣ್ಣಿಸಿದ ಹಾಗೆ ಉಣಿಸುತ್ತಿದ್ದಾಳೆ. 1 ಲಕ್ಷಕ್ಕೂ ಹೆಚ್ಚು ಜನ ಈ ವಿಡಿಯೋ ನೋಡಿದ್ದಾರೆ. 5,000ಕ್ಕೂ ಹೆಚ್ಚು ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ.

ಗಂಡನ ಮನೆಗೆ ಈ ಮುದ್ದುನಾಯಿಯನ್ನೂ ಕರೆದುಕೊಂಡು ಹೋಗುತ್ತಾಳೆಯೇ? ಎಂಬ ಪ್ರಶ್ನೆ ಏಳದೇ ಇರದು ಅಲ್ಲವೆ?

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ನಿಮ್ಮಲ್ಲಿನ ದುಶ್ಚಟಗಳನ್ನು ಇನ್ನೊಬ್ಬರಿಗೆ ಕಲಿಸಿದರೆ ಉಂಟಾಗುವ ಪರಿಣಾಮವೇನು?
ನಿಮ್ಮಲ್ಲಿನ ದುಶ್ಚಟಗಳನ್ನು ಇನ್ನೊಬ್ಬರಿಗೆ ಕಲಿಸಿದರೆ ಉಂಟಾಗುವ ಪರಿಣಾಮವೇನು?
Horoscope: ಶುಕ್ರವಾರ, ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
Horoscope: ಶುಕ್ರವಾರ, ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
ತವರಿನಲ್ಲಿ ಗೆದ್ದ ಆರ್​ಸಿಬಿ; ಮುಗಿಲು ಮುಟ್ಟಿದ ಫ್ಯಾನ್ಸ್ ಸಂಭ್ರಮ
ತವರಿನಲ್ಲಿ ಗೆದ್ದ ಆರ್​ಸಿಬಿ; ಮುಗಿಲು ಮುಟ್ಟಿದ ಫ್ಯಾನ್ಸ್ ಸಂಭ್ರಮ
ಒಳ್ಳೆಯ ಸಿನಿಮಾ ಮಾಡಿದ್ರೂ ಜನ ಬರಲ್ಲ ಯಾಕೆ? ಪಾಸಿಟಿವ್ ಉತ್ತರ ನೀಡಿದ ರಾಘಣ್ಣ
ಒಳ್ಳೆಯ ಸಿನಿಮಾ ಮಾಡಿದ್ರೂ ಜನ ಬರಲ್ಲ ಯಾಕೆ? ಪಾಸಿಟಿವ್ ಉತ್ತರ ನೀಡಿದ ರಾಘಣ್ಣ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ