AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಹಿಮವೀರರ ಜೋಶ್​​; ಹಿಮದ ಮೇಲೆ, ನಡುಗುವ ಚಳಿಯಲ್ಲಿ ಕಬಡ್ಡಿ ಆಡಿ ಖುಷಿಪಟ್ಟ ಐಟಿಬಿಪಿ ಯೋಧರು

ಐಟಿಬಿಪಿ ಯೋಧರು ಬಿಳಿ ಬಣ್ಣದ, ಪ್ಯಾಡೆಡ್​ ಜಾಕೆಟ್​ಗಳನ್ನು ಧರಿಸಿ, ಗಟ್ಟಿಯಾದ ಬೂಟುಗಳನ್ನು ಹಾಕಿಕೊಂಡು ಫುಲ್ ಖುಷಿಯಿಂದ ಕಬಡ್ಡಿ ಆಡಿದ್ದಾರೆ. ವಿಡಿಯೋವನ್ನು ಐಟಿಬಿಪಿ ಕೂಡ ತನ್ನ ಟ್ವಿಟರ್​ ಅಕೌಂಟ್​​ನಲ್ಲಿ ಶೇರ್ ಮಾಡಿಕೊಂಡಿದೆ.

Video: ಹಿಮವೀರರ ಜೋಶ್​​; ಹಿಮದ ಮೇಲೆ, ನಡುಗುವ ಚಳಿಯಲ್ಲಿ ಕಬಡ್ಡಿ ಆಡಿ ಖುಷಿಪಟ್ಟ ಐಟಿಬಿಪಿ ಯೋಧರು
ಕಬಡ್ಡಿ ಆಡಿದ ಹಿಮವೀರರು
TV9 Web
| Edited By: |

Updated on:Mar 13, 2022 | 4:09 PM

Share

ಹಿಮವೀರರು ಎಂದೇ ಕರೆಯಲ್ಪಡುವ ಇಂಡೋ ಟಿಬೆಟಿಯನ್​ ಬಾರ್ಡರ್​ ಪೊಲೀಸರು, (ITBP), ಹಿಮಾಚ್ಛಾದಿತ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಯೋಧರ ವಿವಿಧ ವಿಡಿಯೋಗಳು ಆಗಾಗ ವೈರಲ್ ಆಗುತ್ತಲೇ ಇರುತ್ತವೆ. ತಾವಿದ್ದಲ್ಲಿ ಕರ್ತವ್ಯ ನಿಭಾಯಿಸುತ್ತ, ಅಲ್ಲಿಯೇ ಆಟ, ಮನರಂಜನೆಯಲ್ಲಿ ತೊಡಗಿಕೊಳ್ಳುತ್ತ, ಸ್ವಾತಂತ್ರ್ಯೋತ್ಸವ, ಆರ್ಮಿ ಡೇ ಇತರ ವಿಶೇಷ ದಿನಗಳನ್ನು ಖುಷಿಯಿಂದ ಆಚರಿಸುವ ಈ ಹಿಮವೀರರ ಇನ್ನೊಂದು ವಿಡಿಯೋ ಇದೀಗ ಸಿಕ್ಕಾಪಟೆ ವೈರಲ್​ ಆಗುತ್ತಿದೆ. ಹಿಮಾಚಲ ಪ್ರದೇಶದಲ್ಲಿ ತಣ್ಣನೆಯ, ಶ್ವೇತಬಣ್ಣದಿಂದ ಕಂಗೊಳಿಸುತ್ತಿರುವ ಹಿಮದಲ್ಲಿ, ಕೊರೆವ ಚಳಿಯಲ್ಲಿ 15-20 ಜನಯೋಧರು ಸೇರಿ ಕಬಡ್ಡಿ ಆಡಿದ್ದಾರೆ. ಈ ವಿಡಿಯೋವನ್ನು ಎಎನ್​ಐ ಸುದ್ದಿ ಸಂಸ್ಥೆಯೂ ಹಂಚಿಕೊಂಡಿದೆ. ಹಾಗೇ ನೆಟ್ಟಿಗರೂ ತುಂಬ ಖುಷಿಯಿಂದ ಶೇರ್​ ಮಾಡಿಕೊಳ್ಳುತ್ತಿದ್ದಾರೆ.

ಐಟಿಬಿಪಿ ಯೋಧರು ಬಿಳಿ ಬಣ್ಣದ, ಪ್ಯಾಡೆಡ್​ ಜಾಕೆಟ್​ಗಳನ್ನು ಧರಿಸಿ, ಗಟ್ಟಿಯಾದ ಬೂಟುಗಳನ್ನು ಹಾಕಿಕೊಂಡು ಫುಲ್ ಖುಷಿಯಿಂದ ಕಬಡ್ಡಿ ಆಡಿದ್ದಾರೆ. ವಿಡಿಯೋವನ್ನು ಐಟಿಬಿಪಿ ಕೂಡ ತನ್ನ ಟ್ವಿಟರ್​ ಅಕೌಂಟ್​​ನಲ್ಲಿ ಶೇರ್ ಮಾಡಿಕೊಂಡಿದೆ. ಕೆಲವು ವಾರಗಳ ಹಿಮದೆ ಐಟಿಬಿಪಿ ಯೋಧರು ಹಿಮದಲ್ಲಿಯೇ ವಾಲಿಬಾಲ್ ಆಡಿದ ವಿಡಿಯೋ ಸಿಕ್ಕಾಪಟೆ ವೈರಲ್ ಆಗಿತ್ತು. ಇವರು ಭಾರತ-ಚೀನಾ ಗಡಿಯಲ್ಲಿ, 15 ಸಾವಿರ ಅಡಿ ಎತ್ತರದಲ್ಲಿ -20 ಡಿಗ್ರಿ ಸೆಲ್ಸಿಯಸ್​ ಚಳಿಯಲ್ಲಿ ವಾಲಿಬಾಲ್ ಆಡಿದ್ದರು. ಪ್ರಸ್ತುತ ಕಬಡ್ಡಿ ನೋಡಿದ ನೆಟ್ಟಿಗರು ಯೋಧರಿಗೊಂದು ಸಲಾಂ ಹೇಳಿದ್ದಾರೆ. ಅಂದಹಾಗೆ, ಇದೇ ಚಳಿಯಲ್ಲೇ ಅವರಿಗೆ ಕಠಿಣ ತರಬೇತಿಗಳನ್ನೂ ನೀಡಲಾಗುತ್ತದೆ. ಅವರ ಜೀವನವೇ ಈ ಪ್ರದೇಶದಲ್ಲಿ ನಡೆಯುತ್ತಿರುತ್ತದೆ. ಶತ್ರುಗಳ ವಿರುದ್ಧ ದೇಶವನ್ನು ಕಾಪಾಡಲು ಅವರು ಸದಾ ಮೈಮೇಲೆ ಅಪಾಯ ಎಳೆದುಕೊಂಡೇ ಬದುಕುತ್ತಿರುತ್ತಾರೆ.

ಇದನ್ನೂ ಓದಿ: Video: ರಷ್ಯಾದಲ್ಲಿ ಮಳಿಗೆಗಳನ್ನು ಮುಚ್ಚುವುದಾಗಿ ಹೇಳಿದ ಮೆಕ್ ಡೊನಾಲ್ಡ್​​​; ಗಡಿಬಿಡಿಯಿಂದ ಹೊರಟ ಗ್ರಾಹಕರು, ಕಾರುಗಳ ಉದ್ದನೆ ಸಾಲು !

Published On - 4:09 pm, Sun, 13 March 22

Follow Us
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ