AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಹಿಮವೀರರ ಜೋಶ್​​; ಹಿಮದ ಮೇಲೆ, ನಡುಗುವ ಚಳಿಯಲ್ಲಿ ಕಬಡ್ಡಿ ಆಡಿ ಖುಷಿಪಟ್ಟ ಐಟಿಬಿಪಿ ಯೋಧರು

ಐಟಿಬಿಪಿ ಯೋಧರು ಬಿಳಿ ಬಣ್ಣದ, ಪ್ಯಾಡೆಡ್​ ಜಾಕೆಟ್​ಗಳನ್ನು ಧರಿಸಿ, ಗಟ್ಟಿಯಾದ ಬೂಟುಗಳನ್ನು ಹಾಕಿಕೊಂಡು ಫುಲ್ ಖುಷಿಯಿಂದ ಕಬಡ್ಡಿ ಆಡಿದ್ದಾರೆ. ವಿಡಿಯೋವನ್ನು ಐಟಿಬಿಪಿ ಕೂಡ ತನ್ನ ಟ್ವಿಟರ್​ ಅಕೌಂಟ್​​ನಲ್ಲಿ ಶೇರ್ ಮಾಡಿಕೊಂಡಿದೆ.

Video: ಹಿಮವೀರರ ಜೋಶ್​​; ಹಿಮದ ಮೇಲೆ, ನಡುಗುವ ಚಳಿಯಲ್ಲಿ ಕಬಡ್ಡಿ ಆಡಿ ಖುಷಿಪಟ್ಟ ಐಟಿಬಿಪಿ ಯೋಧರು
ಕಬಡ್ಡಿ ಆಡಿದ ಹಿಮವೀರರು
TV9 Web
| Edited By: |

Updated on:Mar 13, 2022 | 4:09 PM

Share

ಹಿಮವೀರರು ಎಂದೇ ಕರೆಯಲ್ಪಡುವ ಇಂಡೋ ಟಿಬೆಟಿಯನ್​ ಬಾರ್ಡರ್​ ಪೊಲೀಸರು, (ITBP), ಹಿಮಾಚ್ಛಾದಿತ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಯೋಧರ ವಿವಿಧ ವಿಡಿಯೋಗಳು ಆಗಾಗ ವೈರಲ್ ಆಗುತ್ತಲೇ ಇರುತ್ತವೆ. ತಾವಿದ್ದಲ್ಲಿ ಕರ್ತವ್ಯ ನಿಭಾಯಿಸುತ್ತ, ಅಲ್ಲಿಯೇ ಆಟ, ಮನರಂಜನೆಯಲ್ಲಿ ತೊಡಗಿಕೊಳ್ಳುತ್ತ, ಸ್ವಾತಂತ್ರ್ಯೋತ್ಸವ, ಆರ್ಮಿ ಡೇ ಇತರ ವಿಶೇಷ ದಿನಗಳನ್ನು ಖುಷಿಯಿಂದ ಆಚರಿಸುವ ಈ ಹಿಮವೀರರ ಇನ್ನೊಂದು ವಿಡಿಯೋ ಇದೀಗ ಸಿಕ್ಕಾಪಟೆ ವೈರಲ್​ ಆಗುತ್ತಿದೆ. ಹಿಮಾಚಲ ಪ್ರದೇಶದಲ್ಲಿ ತಣ್ಣನೆಯ, ಶ್ವೇತಬಣ್ಣದಿಂದ ಕಂಗೊಳಿಸುತ್ತಿರುವ ಹಿಮದಲ್ಲಿ, ಕೊರೆವ ಚಳಿಯಲ್ಲಿ 15-20 ಜನಯೋಧರು ಸೇರಿ ಕಬಡ್ಡಿ ಆಡಿದ್ದಾರೆ. ಈ ವಿಡಿಯೋವನ್ನು ಎಎನ್​ಐ ಸುದ್ದಿ ಸಂಸ್ಥೆಯೂ ಹಂಚಿಕೊಂಡಿದೆ. ಹಾಗೇ ನೆಟ್ಟಿಗರೂ ತುಂಬ ಖುಷಿಯಿಂದ ಶೇರ್​ ಮಾಡಿಕೊಳ್ಳುತ್ತಿದ್ದಾರೆ.

ಐಟಿಬಿಪಿ ಯೋಧರು ಬಿಳಿ ಬಣ್ಣದ, ಪ್ಯಾಡೆಡ್​ ಜಾಕೆಟ್​ಗಳನ್ನು ಧರಿಸಿ, ಗಟ್ಟಿಯಾದ ಬೂಟುಗಳನ್ನು ಹಾಕಿಕೊಂಡು ಫುಲ್ ಖುಷಿಯಿಂದ ಕಬಡ್ಡಿ ಆಡಿದ್ದಾರೆ. ವಿಡಿಯೋವನ್ನು ಐಟಿಬಿಪಿ ಕೂಡ ತನ್ನ ಟ್ವಿಟರ್​ ಅಕೌಂಟ್​​ನಲ್ಲಿ ಶೇರ್ ಮಾಡಿಕೊಂಡಿದೆ. ಕೆಲವು ವಾರಗಳ ಹಿಮದೆ ಐಟಿಬಿಪಿ ಯೋಧರು ಹಿಮದಲ್ಲಿಯೇ ವಾಲಿಬಾಲ್ ಆಡಿದ ವಿಡಿಯೋ ಸಿಕ್ಕಾಪಟೆ ವೈರಲ್ ಆಗಿತ್ತು. ಇವರು ಭಾರತ-ಚೀನಾ ಗಡಿಯಲ್ಲಿ, 15 ಸಾವಿರ ಅಡಿ ಎತ್ತರದಲ್ಲಿ -20 ಡಿಗ್ರಿ ಸೆಲ್ಸಿಯಸ್​ ಚಳಿಯಲ್ಲಿ ವಾಲಿಬಾಲ್ ಆಡಿದ್ದರು. ಪ್ರಸ್ತುತ ಕಬಡ್ಡಿ ನೋಡಿದ ನೆಟ್ಟಿಗರು ಯೋಧರಿಗೊಂದು ಸಲಾಂ ಹೇಳಿದ್ದಾರೆ. ಅಂದಹಾಗೆ, ಇದೇ ಚಳಿಯಲ್ಲೇ ಅವರಿಗೆ ಕಠಿಣ ತರಬೇತಿಗಳನ್ನೂ ನೀಡಲಾಗುತ್ತದೆ. ಅವರ ಜೀವನವೇ ಈ ಪ್ರದೇಶದಲ್ಲಿ ನಡೆಯುತ್ತಿರುತ್ತದೆ. ಶತ್ರುಗಳ ವಿರುದ್ಧ ದೇಶವನ್ನು ಕಾಪಾಡಲು ಅವರು ಸದಾ ಮೈಮೇಲೆ ಅಪಾಯ ಎಳೆದುಕೊಂಡೇ ಬದುಕುತ್ತಿರುತ್ತಾರೆ.

ಇದನ್ನೂ ಓದಿ: Video: ರಷ್ಯಾದಲ್ಲಿ ಮಳಿಗೆಗಳನ್ನು ಮುಚ್ಚುವುದಾಗಿ ಹೇಳಿದ ಮೆಕ್ ಡೊನಾಲ್ಡ್​​​; ಗಡಿಬಿಡಿಯಿಂದ ಹೊರಟ ಗ್ರಾಹಕರು, ಕಾರುಗಳ ಉದ್ದನೆ ಸಾಲು !

Published On - 4:09 pm, Sun, 13 March 22

Follow Us
ಕಳ್ಳ ಬೇಟೆ ತಡೆ ಶಿಬಿರ ಧ್ವಂಸ:ಶೂಟೌಟ್​​​​​​​​​ ಕೇಸಿನ ಗ್ರೌಂಡ್ ರಿಪೋರ್ಟ್
ಕಳ್ಳ ಬೇಟೆ ತಡೆ ಶಿಬಿರ ಧ್ವಂಸ:ಶೂಟೌಟ್​​​​​​​​​ ಕೇಸಿನ ಗ್ರೌಂಡ್ ರಿಪೋರ್ಟ್
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ