AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೌಗು ಪ್ರದೇಶದಲ್ಲಿ ಕಂಡುಬಂದ ವಿಲಕ್ಷಣ ಗ್ರೀನ್​​ ಪ್ಯೂರಿ ಹಾವು: ದಂಗಾದ ಸ್ಥಳೀಯರು

ಥೈಲ್ಯಾಂಡ್​ನಲ್ಲಿ ಕಾಣಿಸಿಕೊಂಡಿರುವ ಅಪರೂಪದ ಜೀವಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗ್ರೀನ್​ ಪ್ಯೂರಿ ಎನ್ನುವ ವಿಲಕ್ಷಣ ಹಾವು  ಜೌಗು ಪ್ರೇದೇಶದಲ್ಲಿ ಕಂಡುಬಂದಿದೆ.

ಜೌಗು ಪ್ರದೇಶದಲ್ಲಿ ಕಂಡುಬಂದ ವಿಲಕ್ಷಣ ಗ್ರೀನ್​​ ಪ್ಯೂರಿ ಹಾವು: ದಂಗಾದ ಸ್ಥಳೀಯರು
ವಿಲಕ್ಷಣ ಹಾವು
Follow us
TV9 Web
| Updated By: Pavitra Bhat Jigalemane

Updated on:Mar 13, 2022 | 3:27 PM

ನೀರಿನ ಆಳ ಸದಾ ಕುತೂಹಲಗಳ ಆಗರ. ಅದೆಷ್ಟೋ ಅಪರೂಪದ ಜೀವಿಗಳು ಹುದುಗಿಕೊಂಡಿರುತ್ತವೆ. ಇದೀಗ ಥೈಲ್ಯಾಂಡ್​ನಲ್ಲಿ ಕಾಣಿಸಿಕೊಂಡಿರುವ ಅಪರೂಪದ ಜೀವಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗ್ರೀನ್​ ಪ್ಯೂರಿ ಎನ್ನುವ ವಿಲಕ್ಷಣ ಹಾವು  ಜೌಗು ಪ್ರೇದೇಶದಲ್ಲಿ ಕಂಡುಬಂದಿದೆ. ಥೈಲ್ಯಾಂಡ್​ನ ಸಖೋನ್​ ನಖೋನ್​ ಎನ್ನುವಲ್ಲಿ ಈ ಜೀವಿ ಕಂಡು ಬಂದಿದ್ದು, ಜನರು ತಬ್ಬಿಬ್ಬುಗೊಂಡಿದ್ದಾರೆ. ಕೆಲವು ಸ್ಥಳೀಯರು ಈ ಹಾವನ್ನು ಪಪ್​ ಮುಖದ ನೀರಿನ ಹಾವು ಎಂದು ಗುರುತಿಸಿದ್ದಾರೆ.

ಎರಡು ಅಡಿ ಉದ್ದದ ಜೀವಿ ಹಡಗಿನೊಳಗೆ ಚಲಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಹಾವಿನ ತುಪ್ಪಳವು ಅಂಕಡೊಂಕಾಗಿ ಚಲಿಸುವುದನ್ನು ಕಾಣಬಹುದು. ಥಾಯ್ಲೆಂಡ್​ ಸ್ಥಳೀಯರರೊಬ್ಬರು ಹಾವನ್ನು ಗುರುತಿಸಿದ್ದು, ಈ ರೀತಿಯ ಹಾವನ್ನು ಹಿಂದೆಂದೂ ನೋಡಿಲ್ಲ ಎಂದಿದ್ದಾರೆ ಎಂದು ಟೈಮ್ಸ್​​ ನೌ ವರದಿ ತಿಳಿಸಿದೆ. ಸದ್ಯ ಜೀವಿಯನ್ನು ಹಿಡಿದು ಸ್ಥಳೀಯರೊಬ್ಬರ ಮನೆಯಲ್ಲಿ ಇಡಲಾಗಿದೆ. ಈ ಜೀವಿಯ ಮೈಮೇಲಿನ ಪದರಗಳು ಕೆರಾಟಿನ್​ನಿಂದ ಮಾಡಲ್ಪಟ್ಟಿದೆ ಎಂದು  ವನ್ಯಜೀವಿಯ ತಜ್ಞರೊಬ್ಬರು ಹೇಳಿದ್ದಾರೆ.

ಈ ರೀತಿಯ ಹಾವುಗಳು ಆಗ್ನೇಯ ಏಷ್ಯಾದ ಉಷ್ಣವಲಯದ ಪ್ರದೇಶಗಳಲ್ಲಿ  ಕಂಡುಬರುವ ಹೊಮಾಲೊಪ್ಸಿಡೆ ಕುಟುಂಬಕ್ಕೆ ಸೇರಿದ ವಿಷಕಾರಿ ಹಾವಿನ ಸಂತತಿಯಾಗಿದೆ. ಉತ್ತರ ಸುಮಾತ್ರಾದಿಂದ ಸಲಾಂಗಾ ದ್ವೀಪ, ಇಂಡೋನೇಷಿಯಾ ಮತ್ತು ಬೊರ್ನಿಯಯೊದವರೆಗೆ ಈ ಪ್ರಬೇಧಗಳು ಕಾಣಿಸಿಕೊಳ್ಳುತ್ತವೆ.

ಇದನ್ನೂ ಓದಿ:

ಮುಂದುವರೆದ ರಷ್ಯಾ-ಉಕ್ರೇನ್​ ಯುದ್ಧ: ಅಧಿಕೃತವಾಗಿ ಉಕ್ರೇನ್ ಸೇನೆ​ ಸೇರಿದ ಮೊದಲ ಮಹಿಳಾ ಸ್ವಯಂ ಸೇವಕಿ

Published On - 1:23 pm, Sun, 13 March 22

ಆಪರೇಷನ್​ ಸಿಂಧೂರ್: ಇಂದೊಂದು ಸಂತೋಷದ ಸಂಗತಿ, ಮೃತ ಮಂಜುನಾಥ್​ ತಾಯಿ
ಆಪರೇಷನ್​ ಸಿಂಧೂರ್: ಇಂದೊಂದು ಸಂತೋಷದ ಸಂಗತಿ, ಮೃತ ಮಂಜುನಾಥ್​ ತಾಯಿ
ಭಾರತದ ದಾಳಿಯಿಂದ ಕಂಗಾಲಾದ ಪಾಕಿಸ್ತಾನದಿಂದ ಮತ್ತೊಮ್ಮೆ ಹೇಡಿತನ
ಭಾರತದ ದಾಳಿಯಿಂದ ಕಂಗಾಲಾದ ಪಾಕಿಸ್ತಾನದಿಂದ ಮತ್ತೊಮ್ಮೆ ಹೇಡಿತನ
ಆಪರೇಷನ್ ಸಿಂಧೂರ್: ಯುದ್ಧವಾದರೆ ನಾವೂ ಸಿದ್ಧ ಎಂದ ಬಾಗಲಕೋಟೆ ಮಾಜಿ ಯೋಧರು
ಆಪರೇಷನ್ ಸಿಂಧೂರ್: ಯುದ್ಧವಾದರೆ ನಾವೂ ಸಿದ್ಧ ಎಂದ ಬಾಗಲಕೋಟೆ ಮಾಜಿ ಯೋಧರು
ಭಾರತೀಯ ಸೇನೆಯಿರುವಾಗ ನಮಗ್ಯಾವ ಭಯವೂ ಇಲ್ಲ: ಪ್ರವಾಸಿಗರು
ಭಾರತೀಯ ಸೇನೆಯಿರುವಾಗ ನಮಗ್ಯಾವ ಭಯವೂ ಇಲ್ಲ: ಪ್ರವಾಸಿಗರು
ಆಪರೇಷನ್ ಸಿಂಧೂರವನ್ನು ಹಣೆಗೆ ತಿಲಕ ಇಟ್ಟುಕೊಂಡೇ ಹೊಗಳಿದ ಸಿಎಂ ಸಿದ್ದರಾಮಯ್ಯ
ಆಪರೇಷನ್ ಸಿಂಧೂರವನ್ನು ಹಣೆಗೆ ತಿಲಕ ಇಟ್ಟುಕೊಂಡೇ ಹೊಗಳಿದ ಸಿಎಂ ಸಿದ್ದರಾಮಯ್ಯ
ಮನೆಮಾಳಿಗೆ ಮೇಲೆ ನಿಂತು ಧ್ವಂಸಗೊಂಡಿರುವ ಮಸೀದಿಯನ್ನು ವೀಕ್ಷಿಸಿದ ಜನ
ಮನೆಮಾಳಿಗೆ ಮೇಲೆ ನಿಂತು ಧ್ವಂಸಗೊಂಡಿರುವ ಮಸೀದಿಯನ್ನು ವೀಕ್ಷಿಸಿದ ಜನ
ಎಚ್ಚರಿಕೆಯನ್ನು ಹಗುರವಾಗಿ ತೆಗೆದುಕೊಂಡ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ!
ಎಚ್ಚರಿಕೆಯನ್ನು ಹಗುರವಾಗಿ ತೆಗೆದುಕೊಂಡ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ!
‘ಭಾಷೆ-ಸಂಸ್ಕೃತಿಗೆ ಗೌರವಿಸಬೇಕು’; ಸೋನು ನಿಗಮ್​ಗೆ ರಾಗಿಣಿ ಕಿವಿಮಾತು
‘ಭಾಷೆ-ಸಂಸ್ಕೃತಿಗೆ ಗೌರವಿಸಬೇಕು’; ಸೋನು ನಿಗಮ್​ಗೆ ರಾಗಿಣಿ ಕಿವಿಮಾತು
Live: ಆಪರೇಷನ್ ಸಿಂಧೂರ್ ಬೆನ್ನಲ್ಲೇ ಸೇನಾಧಿಕಾರಿಗಳಿಂದ ಸುದ್ದಿಗೋಷ್ಠಿ
Live: ಆಪರೇಷನ್ ಸಿಂಧೂರ್ ಬೆನ್ನಲ್ಲೇ ಸೇನಾಧಿಕಾರಿಗಳಿಂದ ಸುದ್ದಿಗೋಷ್ಠಿ
ಭಾರತದ ಬಲಿಷ್ಠ ಸೇನೆಯನ್ನು ತಡವಿರುವ ಪಾಕ್ ಪತರುಗುಟ್ಟಿದೆ: ಮಾಜಿ ಸೈನಿಕರು
ಭಾರತದ ಬಲಿಷ್ಠ ಸೇನೆಯನ್ನು ತಡವಿರುವ ಪಾಕ್ ಪತರುಗುಟ್ಟಿದೆ: ಮಾಜಿ ಸೈನಿಕರು