AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೌಗು ಪ್ರದೇಶದಲ್ಲಿ ಕಂಡುಬಂದ ವಿಲಕ್ಷಣ ಗ್ರೀನ್​​ ಪ್ಯೂರಿ ಹಾವು: ದಂಗಾದ ಸ್ಥಳೀಯರು

ಥೈಲ್ಯಾಂಡ್​ನಲ್ಲಿ ಕಾಣಿಸಿಕೊಂಡಿರುವ ಅಪರೂಪದ ಜೀವಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗ್ರೀನ್​ ಪ್ಯೂರಿ ಎನ್ನುವ ವಿಲಕ್ಷಣ ಹಾವು  ಜೌಗು ಪ್ರೇದೇಶದಲ್ಲಿ ಕಂಡುಬಂದಿದೆ.

ಜೌಗು ಪ್ರದೇಶದಲ್ಲಿ ಕಂಡುಬಂದ ವಿಲಕ್ಷಣ ಗ್ರೀನ್​​ ಪ್ಯೂರಿ ಹಾವು: ದಂಗಾದ ಸ್ಥಳೀಯರು
ವಿಲಕ್ಷಣ ಹಾವು
TV9 Web
| Edited By: |

Updated on:Mar 13, 2022 | 3:27 PM

Share

ನೀರಿನ ಆಳ ಸದಾ ಕುತೂಹಲಗಳ ಆಗರ. ಅದೆಷ್ಟೋ ಅಪರೂಪದ ಜೀವಿಗಳು ಹುದುಗಿಕೊಂಡಿರುತ್ತವೆ. ಇದೀಗ ಥೈಲ್ಯಾಂಡ್​ನಲ್ಲಿ ಕಾಣಿಸಿಕೊಂಡಿರುವ ಅಪರೂಪದ ಜೀವಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗ್ರೀನ್​ ಪ್ಯೂರಿ ಎನ್ನುವ ವಿಲಕ್ಷಣ ಹಾವು  ಜೌಗು ಪ್ರೇದೇಶದಲ್ಲಿ ಕಂಡುಬಂದಿದೆ. ಥೈಲ್ಯಾಂಡ್​ನ ಸಖೋನ್​ ನಖೋನ್​ ಎನ್ನುವಲ್ಲಿ ಈ ಜೀವಿ ಕಂಡು ಬಂದಿದ್ದು, ಜನರು ತಬ್ಬಿಬ್ಬುಗೊಂಡಿದ್ದಾರೆ. ಕೆಲವು ಸ್ಥಳೀಯರು ಈ ಹಾವನ್ನು ಪಪ್​ ಮುಖದ ನೀರಿನ ಹಾವು ಎಂದು ಗುರುತಿಸಿದ್ದಾರೆ.

ಎರಡು ಅಡಿ ಉದ್ದದ ಜೀವಿ ಹಡಗಿನೊಳಗೆ ಚಲಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಹಾವಿನ ತುಪ್ಪಳವು ಅಂಕಡೊಂಕಾಗಿ ಚಲಿಸುವುದನ್ನು ಕಾಣಬಹುದು. ಥಾಯ್ಲೆಂಡ್​ ಸ್ಥಳೀಯರರೊಬ್ಬರು ಹಾವನ್ನು ಗುರುತಿಸಿದ್ದು, ಈ ರೀತಿಯ ಹಾವನ್ನು ಹಿಂದೆಂದೂ ನೋಡಿಲ್ಲ ಎಂದಿದ್ದಾರೆ ಎಂದು ಟೈಮ್ಸ್​​ ನೌ ವರದಿ ತಿಳಿಸಿದೆ. ಸದ್ಯ ಜೀವಿಯನ್ನು ಹಿಡಿದು ಸ್ಥಳೀಯರೊಬ್ಬರ ಮನೆಯಲ್ಲಿ ಇಡಲಾಗಿದೆ. ಈ ಜೀವಿಯ ಮೈಮೇಲಿನ ಪದರಗಳು ಕೆರಾಟಿನ್​ನಿಂದ ಮಾಡಲ್ಪಟ್ಟಿದೆ ಎಂದು  ವನ್ಯಜೀವಿಯ ತಜ್ಞರೊಬ್ಬರು ಹೇಳಿದ್ದಾರೆ.

ಈ ರೀತಿಯ ಹಾವುಗಳು ಆಗ್ನೇಯ ಏಷ್ಯಾದ ಉಷ್ಣವಲಯದ ಪ್ರದೇಶಗಳಲ್ಲಿ  ಕಂಡುಬರುವ ಹೊಮಾಲೊಪ್ಸಿಡೆ ಕುಟುಂಬಕ್ಕೆ ಸೇರಿದ ವಿಷಕಾರಿ ಹಾವಿನ ಸಂತತಿಯಾಗಿದೆ. ಉತ್ತರ ಸುಮಾತ್ರಾದಿಂದ ಸಲಾಂಗಾ ದ್ವೀಪ, ಇಂಡೋನೇಷಿಯಾ ಮತ್ತು ಬೊರ್ನಿಯಯೊದವರೆಗೆ ಈ ಪ್ರಬೇಧಗಳು ಕಾಣಿಸಿಕೊಳ್ಳುತ್ತವೆ.

ಇದನ್ನೂ ಓದಿ:

ಮುಂದುವರೆದ ರಷ್ಯಾ-ಉಕ್ರೇನ್​ ಯುದ್ಧ: ಅಧಿಕೃತವಾಗಿ ಉಕ್ರೇನ್ ಸೇನೆ​ ಸೇರಿದ ಮೊದಲ ಮಹಿಳಾ ಸ್ವಯಂ ಸೇವಕಿ

Published On - 1:23 pm, Sun, 13 March 22

Follow Us
ಕಳ್ಳ ಬೇಟೆ ತಡೆ ಶಿಬಿರ ಧ್ವಂಸ:ಶೂಟೌಟ್​​​​​​​​​ ಕೇಸಿನ ಗ್ರೌಂಡ್ ರಿಪೋರ್ಟ್
ಕಳ್ಳ ಬೇಟೆ ತಡೆ ಶಿಬಿರ ಧ್ವಂಸ:ಶೂಟೌಟ್​​​​​​​​​ ಕೇಸಿನ ಗ್ರೌಂಡ್ ರಿಪೋರ್ಟ್
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ