AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ರಷ್ಯಾದಲ್ಲಿ ಮಳಿಗೆಗಳನ್ನು ಮುಚ್ಚುವುದಾಗಿ ಹೇಳಿದ ಮೆಕ್ ಡೊನಾಲ್ಡ್​​​; ಗಡಿಬಿಡಿಯಿಂದ ಹೊರಟ ಗ್ರಾಹಕರು, ಕಾರುಗಳ ಉದ್ದನೆ ಸಾಲು !

ರಷ್ಯಾದ ಮೇಲೆ ನಿರ್ಬಂಧ ಹೇರಿದ ಕಂಪನಿಗಳಲ್ಲಿ ಮೆಕ್​ ಡೊನಾಲ್ಡ್ ಕೂಡ ಒಂದು. ಅಮೆರಿಕ ಮೂಲದ, ಬಹುರಾಷ್ಟ್ರೀಯ ಆಹಾರ ನಿಗಮವಾದ ಇದು ರಷ್ಯಾದಲ್ಲಿರುವ ಒಟ್ಟು 850 ರೆಸ್ಟೋರೆಂಟ್​, ಅಂಗಡಿಗಳನ್ನು ತಾತ್ಕಾಲಿಕವಾಗಿ ಮುಚ್ಚುವುದಾಗಿ ನಾಲ್ಕು ದಿನಗಳ ಹಿಂದೆ ಘೋಷಿಸಿತ್ತು.

Video: ರಷ್ಯಾದಲ್ಲಿ ಮಳಿಗೆಗಳನ್ನು ಮುಚ್ಚುವುದಾಗಿ ಹೇಳಿದ ಮೆಕ್ ಡೊನಾಲ್ಡ್​​​; ಗಡಿಬಿಡಿಯಿಂದ ಹೊರಟ ಗ್ರಾಹಕರು, ಕಾರುಗಳ ಉದ್ದನೆ ಸಾಲು !
ಮೆಕ್​ ಡೊನಾಲ್ಡ್​ ಮಳಿಗೆಯೆದುರು ಕಾರುಗಳಲ್ಲಿ ಕುಳಿತು ಕಾಯುತ್ತಿರುವ ಗ್ರಾಹಕರು
TV9 Web
| Edited By: |

Updated on:Mar 13, 2022 | 3:44 PM

Share

ಉಕ್ರೇನ್​ ಮೇಲೆ ಯುದ್ಧ ಮಾಡುತ್ತಿರುವ ರಷ್ಯಾ (Russia Attack On Ukraine) ಮೇಲೆ ವಿವಿಧ ದೇಶಗಳು, ಕಂಪನಿಗಳು, ರೆಸ್ಟೋರೆಂಟ್​ಗಳೆಲ್ಲ ನಿರ್ಬಂಧ ಹೇರಿವೆ. ಇದು ರಷ್ಯಾದ ಆರ್ಥಿಕತೆಯ ಮೇಲೆ ಕೂಡ ದುಷ್ಪರಿಣಾಮ ಬೀರುತ್ತಿದೆ. ಆಹಾರ ಕೊರತೆ ಎದುರಾಗುತ್ತಿದೆ. ಹೀಗಾಗಿ ರಷ್ಯಾದ ಜನರು ಮುಂದೆ ತಮಗೆ ಬೇಕಾಗಿದ್ದು ಸಿಗುತ್ತದೆಯೋ ಇಲ್ಲವೋ ಎಂಬ ಆತಂಕದಿಂದ ಗುಂಪುಗುಂಪಾಗಿ ಅಂಗಡಿಗಳು, ರೆಸ್ಟೋರೆಂಟ್​ಗಳಿಗೆ ಲಗ್ಗೆ ಇಡುತ್ತಿದ್ದಾರೆ. ಇದನ್ನು ನೋಡಿದ ಸರ್ಕಾರ ಅಗತ್ಯ ವಸ್ತುಗಳ ಖರೀದಿ ಮೇಲೆ ಕೂಡ ನಿರ್ಬಂಧ ವಿಧಿಸುತ್ತಿದೆ. ಆದರೂ ಲೆಕ್ಕಿಸದ ಜನರು, ಕ್ಯೂನಲ್ಲಿ ನಿಂತು ತಮಗೆ ಬೇಕಾಗಿದ್ದನ್ನು ಖರೀದಿಸುತ್ತಿದ್ದಾರೆ.

ಹೀಗೆ ರಷ್ಯಾದ ಮೇಲೆ ನಿರ್ಬಂಧ ಹೇರಿದ ಕಂಪನಿಗಳಲ್ಲಿ ಮೆಕ್​ ಡೊನಾಲ್ಡ್ ಕೂಡ ಒಂದು. ಅಮೆರಿಕ ಮೂಲದ, ಬಹುರಾಷ್ಟ್ರೀಯ ಆಹಾರ ನಿಗಮವಾದ ಇದು ರಷ್ಯಾದಲ್ಲಿರುವ ಒಟ್ಟು 850 ರೆಸ್ಟೋರೆಂಟ್​, ಅಂಗಡಿಗಳನ್ನು ತಾತ್ಕಾಲಿಕವಾಗಿ ಮುಚ್ಚುವುದಾಗಿ ನಾಲ್ಕು ದಿನಗಳ ಹಿಂದೆ ಘೋಷಿಸಿತ್ತು. ಹಾಗೇ, ಮುಚ್ಚಿದೆ. ಹಾಗಿದ್ದಾಗ್ಯೂ ರಷ್ಯಾದ ರೆಸ್ಟೋರೆಂಟ್​ಗಳಲ್ಲಿ ಕೆಲಸ ಮಾಡುವ ಸುಮಾರು 62 ಸಾವಿರ ತನ್ನ ಉದ್ಯೋಗಿಗಳಿಗೆ ವೇತನ ನೀಡುವುದಾಗಿಯೂ ಹೇಳಿತ್ತು. ಅದೇನೇ ಇರಲಿ, ರಷ್ಯಾದಲ್ಲಿ ಮೆಕ್​ ಡೊನಾಲ್ಡ್​ ಮಳಿಗೆಗಳನ್ನು ಮುಚ್ಚುತ್ತೇವೆ ಎಂದು ಕಂಪನಿ ಘೋಷಣೆ ಮಾಡಿದ ದಿನ, ಒಂದೊಂದು ಅಂಗಡಿಯ ಮುಂದೆಯೂ ಸಾವಿರಾರು ಜನರು ಕ್ಯೂ ನಿಂತಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಅಂಥ ಒಂದು ವಿಡಿಯೋ ವೈರಲ್ ಆಗಿದೆ. ಮೆಕ್ ಡೊನಾಲ್ಡ್​ ಸ್ಟೋರ್​ವೊಂದರ ಎದುರು ಬಹುದೂರದವರೆಗೆ ಸಾಲಾಗಿ ಕಾರನ್ನು ನಿಲ್ಲಿಸಿಕೊಂಡು, ಗ್ರಾಹಕರು ಕಾಯುವುದನ್ನು ವಿಡಿಯೋದಲ್ಲಿ ನೋಡಬಹುದು. ಇನ್ನೊಂದೆಡೆ ಸ್ಟಾರ್​ ಬಕ್ಸ್ ಕೂಡ ರಷ್ಯಾದಲ್ಲಿ ತನ್ನ ಕಾಫಿ ಶಾಪ್​ಗಳನ್ನು ಕ್ಲೋಸ್ ಮಾಡಿದೆ.

ಇದನ್ನೂ ಓದಿ: ತಪ್ಪು ಮಾಡದವರು ಬಲಿಪಶು ಆಗುವುದು ಬೇಡ: ಬಸವರಾಜ ಹೊರಟ್ಟಿ

Published On - 3:43 pm, Sun, 13 March 22

Follow Us
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ