Viral Video: ಜೆಸಿಬಿ, ಸಿಮೆಂಟ್ ಮಿಕ್ಸರ್ ಬಳಸಿ 2 ಲಕ್ಷ ಜನರಿಗೆ ಅಡುಗೆ 

ಜೆಸಿಬಿ ಮತ್ತು ಸಿಮೆಂಟ್ ಮಿಕ್ಸರ್ಗಳನ್ನು ವಿವಿಧ ರೀತಿಯ ಕಾಮಗಾರಿ ಕೆಲಸಗಳಲ್ಲಿ ಬಳಸಲಾಗುತ್ತದೆ. ಆದ್ರೆ ಈ ಯಂತ್ರಗಳನ್ನು ಬಳಸಿ ಅಡುಗೆಯನ್ನು ಸಹ ಮಾಡಬಹುದೆಂದು ನಿಮಗೆ ಗೊತ್ತಾ? ಹೌದು ಮಧ್ಯಪ್ರದೇಶದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಸುಮಾರು 2 ಲಕ್ಷ  ಅಡುಗೆ ತಯಾರಿಸಲು ಈ ಜೆಸಿಬಿ ಮತ್ತು ಸಿಮೆಂಟ್ ಮಿಕ್ಸರ್ ಯಂತ್ರಗಳನ್ನು ಬಳಸಲಾಗಿದೆ.  ಜೆಸಿಬಿ ಮತ್ತು ಸಿಮೆಂಟ್ ಮಿಕ್ಸರ್ ಬಳಸಿ ಅಡುಗೆ ತಯಾರಿಸುತ್ತಿರುವ ಪರಿಯನ್ನೊಮ್ಮೆ ನೀವೇ   ನೋಡಿ. 

Follow us
| Updated By: ಅಕ್ಷಯ್​ ಪಲ್ಲಮಜಲು​​

Updated on:Dec 21, 2023 | 2:45 PM

ಜೆಸಿಬಿ ಮತ್ತು ಸಿಮೆಂಟ್ ಮಿಕ್ಸ್​​​ರ್​​​ಗಳನ್ನು ವಿವಿಧ ರೀತಿಯ ಕಾಮಗಾರಿ ಕೆಲಸಗಳಲ್ಲಿ ಬಳಸಲಾಗುತ್ತದೆ. ಆದ್ರೆ ಈ ಯಂತ್ರಗಳ ಸಹಾಯದಿಂದ   ಅಡುಗೆಯನ್ನು ಸಹ ಮಾಡಬಹುದೆಂದು ನಿಮಗೆ ಗೊತ್ತಾ? ಅರೇ…  ಗ್ರೈಂಡರ್, ಮಿಕ್ಸಿ ಇತ್ಯಾದಿಗಳ ಸಹಾಯದಿಂದ ಸುಲಭವಾಗಿ ಅಡುಗೆಯನ್ನು  ತಯಾರು ಮಾಡಬಹುದು, ಆದ್ರೆ ಅಡುಗೆ ಮಾಡಲು ಯಾರಾದ್ರೂ ಈ ಬೃಹತ್ ಯಂತ್ರಗಳನ್ನು ಉಪಯೋಗಿಸ್ತಾರಾ?  ಉಪಯೋಗಿಸಿದ್ರೂ ಅದೆಂಗೆ ಜೆಸಿಬಿ ಮತ್ತು ಸಿಮೆಂಟ್ ಮಿಕ್ಸರ್ ಬಳಸಿ ಅಡುಗೆ ತಯಾರಿಸಲು ಸಾಧ್ಯ ಎಂದು ನೀವು ಭಾವಿಸಬಹುದು.  ಹಾಗಿದ್ರೆ ಈ ವಿಡಿಯೋವನ್ನೊಮ್ಮೆ ನೋಡಿ.

ವರದಿಗಳ ಪ್ರಕಾರ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ದಂಡುವಾ ಧಾಮ್ ನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಅಡುಗೆಯನ್ನು ತಯಾರಿಸಲು  ಈ ಎರಡು ಬೃಹತ್ ಯಂತ್ರಗಳಾದ ಜೆಸಿಬಿ ಮತ್ತು ಸಿಮೆಂಟ್ ಮಿಕ್ಸರ್ ಯಂತ್ರಗಳನ್ನು ಬಳಸಲಾಗಿದೆ. ಹೌದು  ಈ ಕಾರ್ಯಕ್ರಮದಲ್ಲಿ ಲಕ್ಷಗಟ್ಟಲೆ ಜನರು ಭಾಗವಹಿಸಿದ್ದು, ಇಷ್ಟು ಜನರಿಗೆ ಒಂದೇ ಬಾರಿಗೆ ವಿವಿಧ ಬಗೆಯ ಅಡುಗೆಯನ್ನು ತಯಾರು ಮಾಡುವುದು ಅಷ್ಟು ಸುಲಭದ ಕೆಲಸವಲ್ಲ, ಅಲ್ಲದೆ ಒಂದೇ ಬಾರಿಗೆ ಸುಮಾರು 2 ಲಕ್ಷ ಜನರಿಗೆ  ಸುಮಾರು 1200 ಕೆಜಿ ತರಕಾರಿಗಳ ಸಾಂಬರ್ ತಯಾರಿಸಬೇಕಿತ್ತು. ಒಲೆಯ ಮುಂದೆ ಸೌಟು ಹಿಡಿದುಕೊಂಡು ಇಷ್ಟು ದೊಡ್ಡ ಪ್ರಮಾಣದಲ್ಲಿ ಸಾಂಬರ್ ತಯಾರಿಸುವುದೆಂದರೆ ಸುಲಭದ ಮಾತೇ ಅಲ್ಲ, ಈ ಕಾರಣಕ್ಕಾಗಿ ಸಂಬಾರ್ ತಯಾರಿಸಲು ಜೆಸಿಬಿಯನ್ನು ಬಳಸಲಾಗಿದೆ. ಅಲ್ಲದೆ ಈ ಬಿಸಿ ಬಿಸಿ ಸಾಂಬರ್ ಅನ್ನು ಸೌಟಿನ ಬದಲಿಗೆ ಜೆಸಿಬಿ ಸಹಾಯದಿಂದಲೇ ಒಂದು ಪಾತ್ರೆಯಿಂದ ಇನ್ನೊಂದು ಪಾತ್ರೆಗೆ ವರ್ಗಾಯಿಸಲಾಗಿದೆ. ಮತ್ತು   ಊಟದ ಜೊತೆಗೆ ಮಾಲ್ಪರಿ  ಸಿಹಿಯನ್ನು ಸಹ ತಯಾರಿಸಬೇಕಿತ್ತು,  ಈ ಮಾಲ್ಪರಿ ಹಿಟ್ಟನ್ನು  ಕೈಯಲ್ಲಿ ತಯಾರಿಸುವ ಬದಲು ಸಿಮೆಂಟ್ ಮಿಕ್ಸರ್ ಬಳಸಿ ತಯಾರಿಸಲಾಗಿದೆ.  ಈ  ಭರ್ಜರಿ ಅಡುಗೆ ತಯಾರಿಯ ವಿಡಿಯೋ  ಇದೀಗ ಎಲ್ಲೆಡೆ   ವೈರಲ್ ಆಗುತ್ತಿದೆ.

ಮತ್ತಷ್ಟು ವೈರಲ್​​ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ:

Published On - 2:43 pm, Thu, 21 December 23

ಯುವ ದಸರಾನಲ್ಲಿ ಪ್ರೇಕ್ಷಕರಿಂದ ಪ್ರಮಾಣ ಮಾಡಿಸಿಕೊಂಡ ನಟ ಶ್ರೀಮುರಳಿ
ಯುವ ದಸರಾನಲ್ಲಿ ಪ್ರೇಕ್ಷಕರಿಂದ ಪ್ರಮಾಣ ಮಾಡಿಸಿಕೊಂಡ ನಟ ಶ್ರೀಮುರಳಿ
ಹಾಸನಾಂಬೆ ಭಕ್ತರಿಗೆ ಇಸ್ಕಾನ್ ಲಡ್ಡು; ಡಿಸಿ ಸಿ. ಸತ್ಯಭಾಮ ಹೇಳಿದ್ದಿಷ್ಟು
ಹಾಸನಾಂಬೆ ಭಕ್ತರಿಗೆ ಇಸ್ಕಾನ್ ಲಡ್ಡು; ಡಿಸಿ ಸಿ. ಸತ್ಯಭಾಮ ಹೇಳಿದ್ದಿಷ್ಟು
ತನಿಖೆಗೆ ಆದೇಶಿಸಿದ್ದರೂ ಸಿಎಂ ವಿರುದ್ಧ ಮತ್ತೊಂದು ಹೋರಾಟಕ್ಕೆ ಸಜ್ಜು!
ತನಿಖೆಗೆ ಆದೇಶಿಸಿದ್ದರೂ ಸಿಎಂ ವಿರುದ್ಧ ಮತ್ತೊಂದು ಹೋರಾಟಕ್ಕೆ ಸಜ್ಜು!
CM ವಿರುದ್ದ ದೂರಿಗೆ ಹಿಂಬರಹ ನೀಡಲು ಲೋಕಾಯುಕ್ತ SPಗೆ ಗಡುವು ನೀಡಿದ ದೂರುದಾರ
CM ವಿರುದ್ದ ದೂರಿಗೆ ಹಿಂಬರಹ ನೀಡಲು ಲೋಕಾಯುಕ್ತ SPಗೆ ಗಡುವು ನೀಡಿದ ದೂರುದಾರ
IND vs BAN: ಕಾನ್ಪುರ್​ಗೆ ಬಂದಿಳಿದ ಟೀಮ್ ಇಂಡಿಯಾ: ಇಲ್ಲಿದೆ ವಿಡಿಯೋ
IND vs BAN: ಕಾನ್ಪುರ್​ಗೆ ಬಂದಿಳಿದ ಟೀಮ್ ಇಂಡಿಯಾ: ಇಲ್ಲಿದೆ ವಿಡಿಯೋ
ಪಾಕಿಸ್ತಾನಕ್ಕೆ ಹೋಲಿಕೆ: ಹೈಕೋರ್ಟ್​ ನ್ಯಾಯಾಧೀಶರಿಗೆ ಸುಪ್ರಿಂ ತರಾಟೆ
ಪಾಕಿಸ್ತಾನಕ್ಕೆ ಹೋಲಿಕೆ: ಹೈಕೋರ್ಟ್​ ನ್ಯಾಯಾಧೀಶರಿಗೆ ಸುಪ್ರಿಂ ತರಾಟೆ
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್​ನಲ್ಲಿ ಆ್ಯಪಲ್ ಐಫೋನ್ ಆಫರ್
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್​ನಲ್ಲಿ ಆ್ಯಪಲ್ ಐಫೋನ್ ಆಫರ್
ಸಿದ್ದರಾಮಯ್ಯ ನಿವಾಸಕ್ಕೆ ಮುತ್ತಿಗೆ ಯತ್ನ: ಬಿಜೆಪಿ ನಾಯಕರು ಪೊಲೀಸ್ ವಶಕ್ಕೆ
ಸಿದ್ದರಾಮಯ್ಯ ನಿವಾಸಕ್ಕೆ ಮುತ್ತಿಗೆ ಯತ್ನ: ಬಿಜೆಪಿ ನಾಯಕರು ಪೊಲೀಸ್ ವಶಕ್ಕೆ
ಎಲೆಕ್ಟ್ರಾನಿಕ್ ಸಿಟಿಯಲ್ಲಿ ಓಡಾಡುತ್ತ ಜನರ ನಿದ್ದೆಗೆಡಿಸಿದ್ದ ಚಿರತೆ ಸೆರೆ
ಎಲೆಕ್ಟ್ರಾನಿಕ್ ಸಿಟಿಯಲ್ಲಿ ಓಡಾಡುತ್ತ ಜನರ ನಿದ್ದೆಗೆಡಿಸಿದ್ದ ಚಿರತೆ ಸೆರೆ
ಕ್ಷಣಾರ್ಧದಲ್ಲೇ ಜಲ ಸಮಾಧಿಯಾದ ಎರಡಂತಸ್ತಿನ ಮನೆ
ಕ್ಷಣಾರ್ಧದಲ್ಲೇ ಜಲ ಸಮಾಧಿಯಾದ ಎರಡಂತಸ್ತಿನ ಮನೆ