AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಜೆಸಿಬಿ, ಸಿಮೆಂಟ್ ಮಿಕ್ಸರ್ ಬಳಸಿ 2 ಲಕ್ಷ ಜನರಿಗೆ ಅಡುಗೆ 

ಜೆಸಿಬಿ ಮತ್ತು ಸಿಮೆಂಟ್ ಮಿಕ್ಸರ್ಗಳನ್ನು ವಿವಿಧ ರೀತಿಯ ಕಾಮಗಾರಿ ಕೆಲಸಗಳಲ್ಲಿ ಬಳಸಲಾಗುತ್ತದೆ. ಆದ್ರೆ ಈ ಯಂತ್ರಗಳನ್ನು ಬಳಸಿ ಅಡುಗೆಯನ್ನು ಸಹ ಮಾಡಬಹುದೆಂದು ನಿಮಗೆ ಗೊತ್ತಾ? ಹೌದು ಮಧ್ಯಪ್ರದೇಶದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಸುಮಾರು 2 ಲಕ್ಷ  ಅಡುಗೆ ತಯಾರಿಸಲು ಈ ಜೆಸಿಬಿ ಮತ್ತು ಸಿಮೆಂಟ್ ಮಿಕ್ಸರ್ ಯಂತ್ರಗಳನ್ನು ಬಳಸಲಾಗಿದೆ.  ಜೆಸಿಬಿ ಮತ್ತು ಸಿಮೆಂಟ್ ಮಿಕ್ಸರ್ ಬಳಸಿ ಅಡುಗೆ ತಯಾರಿಸುತ್ತಿರುವ ಪರಿಯನ್ನೊಮ್ಮೆ ನೀವೇ   ನೋಡಿ. 

ಮಾಲಾಶ್ರೀ ಅಂಚನ್​
| Edited By: |

Updated on:Dec 21, 2023 | 2:45 PM

Share

ಜೆಸಿಬಿ ಮತ್ತು ಸಿಮೆಂಟ್ ಮಿಕ್ಸ್​​​ರ್​​​ಗಳನ್ನು ವಿವಿಧ ರೀತಿಯ ಕಾಮಗಾರಿ ಕೆಲಸಗಳಲ್ಲಿ ಬಳಸಲಾಗುತ್ತದೆ. ಆದ್ರೆ ಈ ಯಂತ್ರಗಳ ಸಹಾಯದಿಂದ   ಅಡುಗೆಯನ್ನು ಸಹ ಮಾಡಬಹುದೆಂದು ನಿಮಗೆ ಗೊತ್ತಾ? ಅರೇ…  ಗ್ರೈಂಡರ್, ಮಿಕ್ಸಿ ಇತ್ಯಾದಿಗಳ ಸಹಾಯದಿಂದ ಸುಲಭವಾಗಿ ಅಡುಗೆಯನ್ನು  ತಯಾರು ಮಾಡಬಹುದು, ಆದ್ರೆ ಅಡುಗೆ ಮಾಡಲು ಯಾರಾದ್ರೂ ಈ ಬೃಹತ್ ಯಂತ್ರಗಳನ್ನು ಉಪಯೋಗಿಸ್ತಾರಾ?  ಉಪಯೋಗಿಸಿದ್ರೂ ಅದೆಂಗೆ ಜೆಸಿಬಿ ಮತ್ತು ಸಿಮೆಂಟ್ ಮಿಕ್ಸರ್ ಬಳಸಿ ಅಡುಗೆ ತಯಾರಿಸಲು ಸಾಧ್ಯ ಎಂದು ನೀವು ಭಾವಿಸಬಹುದು.  ಹಾಗಿದ್ರೆ ಈ ವಿಡಿಯೋವನ್ನೊಮ್ಮೆ ನೋಡಿ.

ವರದಿಗಳ ಪ್ರಕಾರ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ದಂಡುವಾ ಧಾಮ್ ನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಅಡುಗೆಯನ್ನು ತಯಾರಿಸಲು  ಈ ಎರಡು ಬೃಹತ್ ಯಂತ್ರಗಳಾದ ಜೆಸಿಬಿ ಮತ್ತು ಸಿಮೆಂಟ್ ಮಿಕ್ಸರ್ ಯಂತ್ರಗಳನ್ನು ಬಳಸಲಾಗಿದೆ. ಹೌದು  ಈ ಕಾರ್ಯಕ್ರಮದಲ್ಲಿ ಲಕ್ಷಗಟ್ಟಲೆ ಜನರು ಭಾಗವಹಿಸಿದ್ದು, ಇಷ್ಟು ಜನರಿಗೆ ಒಂದೇ ಬಾರಿಗೆ ವಿವಿಧ ಬಗೆಯ ಅಡುಗೆಯನ್ನು ತಯಾರು ಮಾಡುವುದು ಅಷ್ಟು ಸುಲಭದ ಕೆಲಸವಲ್ಲ, ಅಲ್ಲದೆ ಒಂದೇ ಬಾರಿಗೆ ಸುಮಾರು 2 ಲಕ್ಷ ಜನರಿಗೆ  ಸುಮಾರು 1200 ಕೆಜಿ ತರಕಾರಿಗಳ ಸಾಂಬರ್ ತಯಾರಿಸಬೇಕಿತ್ತು. ಒಲೆಯ ಮುಂದೆ ಸೌಟು ಹಿಡಿದುಕೊಂಡು ಇಷ್ಟು ದೊಡ್ಡ ಪ್ರಮಾಣದಲ್ಲಿ ಸಾಂಬರ್ ತಯಾರಿಸುವುದೆಂದರೆ ಸುಲಭದ ಮಾತೇ ಅಲ್ಲ, ಈ ಕಾರಣಕ್ಕಾಗಿ ಸಂಬಾರ್ ತಯಾರಿಸಲು ಜೆಸಿಬಿಯನ್ನು ಬಳಸಲಾಗಿದೆ. ಅಲ್ಲದೆ ಈ ಬಿಸಿ ಬಿಸಿ ಸಾಂಬರ್ ಅನ್ನು ಸೌಟಿನ ಬದಲಿಗೆ ಜೆಸಿಬಿ ಸಹಾಯದಿಂದಲೇ ಒಂದು ಪಾತ್ರೆಯಿಂದ ಇನ್ನೊಂದು ಪಾತ್ರೆಗೆ ವರ್ಗಾಯಿಸಲಾಗಿದೆ. ಮತ್ತು   ಊಟದ ಜೊತೆಗೆ ಮಾಲ್ಪರಿ  ಸಿಹಿಯನ್ನು ಸಹ ತಯಾರಿಸಬೇಕಿತ್ತು,  ಈ ಮಾಲ್ಪರಿ ಹಿಟ್ಟನ್ನು  ಕೈಯಲ್ಲಿ ತಯಾರಿಸುವ ಬದಲು ಸಿಮೆಂಟ್ ಮಿಕ್ಸರ್ ಬಳಸಿ ತಯಾರಿಸಲಾಗಿದೆ.  ಈ  ಭರ್ಜರಿ ಅಡುಗೆ ತಯಾರಿಯ ವಿಡಿಯೋ  ಇದೀಗ ಎಲ್ಲೆಡೆ   ವೈರಲ್ ಆಗುತ್ತಿದೆ.

ಮತ್ತಷ್ಟು ವೈರಲ್​​ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ:

Published On - 2:43 pm, Thu, 21 December 23

Follow Us
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!