AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಜೆಸಿಬಿ, ಸಿಮೆಂಟ್ ಮಿಕ್ಸರ್ ಬಳಸಿ 2 ಲಕ್ಷ ಜನರಿಗೆ ಅಡುಗೆ 

ಜೆಸಿಬಿ ಮತ್ತು ಸಿಮೆಂಟ್ ಮಿಕ್ಸರ್ಗಳನ್ನು ವಿವಿಧ ರೀತಿಯ ಕಾಮಗಾರಿ ಕೆಲಸಗಳಲ್ಲಿ ಬಳಸಲಾಗುತ್ತದೆ. ಆದ್ರೆ ಈ ಯಂತ್ರಗಳನ್ನು ಬಳಸಿ ಅಡುಗೆಯನ್ನು ಸಹ ಮಾಡಬಹುದೆಂದು ನಿಮಗೆ ಗೊತ್ತಾ? ಹೌದು ಮಧ್ಯಪ್ರದೇಶದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಸುಮಾರು 2 ಲಕ್ಷ  ಅಡುಗೆ ತಯಾರಿಸಲು ಈ ಜೆಸಿಬಿ ಮತ್ತು ಸಿಮೆಂಟ್ ಮಿಕ್ಸರ್ ಯಂತ್ರಗಳನ್ನು ಬಳಸಲಾಗಿದೆ.  ಜೆಸಿಬಿ ಮತ್ತು ಸಿಮೆಂಟ್ ಮಿಕ್ಸರ್ ಬಳಸಿ ಅಡುಗೆ ತಯಾರಿಸುತ್ತಿರುವ ಪರಿಯನ್ನೊಮ್ಮೆ ನೀವೇ   ನೋಡಿ. 

ಮಾಲಾಶ್ರೀ ಅಂಚನ್​
| Edited By: |

Updated on:Dec 21, 2023 | 2:45 PM

Share

ಜೆಸಿಬಿ ಮತ್ತು ಸಿಮೆಂಟ್ ಮಿಕ್ಸ್​​​ರ್​​​ಗಳನ್ನು ವಿವಿಧ ರೀತಿಯ ಕಾಮಗಾರಿ ಕೆಲಸಗಳಲ್ಲಿ ಬಳಸಲಾಗುತ್ತದೆ. ಆದ್ರೆ ಈ ಯಂತ್ರಗಳ ಸಹಾಯದಿಂದ   ಅಡುಗೆಯನ್ನು ಸಹ ಮಾಡಬಹುದೆಂದು ನಿಮಗೆ ಗೊತ್ತಾ? ಅರೇ…  ಗ್ರೈಂಡರ್, ಮಿಕ್ಸಿ ಇತ್ಯಾದಿಗಳ ಸಹಾಯದಿಂದ ಸುಲಭವಾಗಿ ಅಡುಗೆಯನ್ನು  ತಯಾರು ಮಾಡಬಹುದು, ಆದ್ರೆ ಅಡುಗೆ ಮಾಡಲು ಯಾರಾದ್ರೂ ಈ ಬೃಹತ್ ಯಂತ್ರಗಳನ್ನು ಉಪಯೋಗಿಸ್ತಾರಾ?  ಉಪಯೋಗಿಸಿದ್ರೂ ಅದೆಂಗೆ ಜೆಸಿಬಿ ಮತ್ತು ಸಿಮೆಂಟ್ ಮಿಕ್ಸರ್ ಬಳಸಿ ಅಡುಗೆ ತಯಾರಿಸಲು ಸಾಧ್ಯ ಎಂದು ನೀವು ಭಾವಿಸಬಹುದು.  ಹಾಗಿದ್ರೆ ಈ ವಿಡಿಯೋವನ್ನೊಮ್ಮೆ ನೋಡಿ.

ವರದಿಗಳ ಪ್ರಕಾರ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ದಂಡುವಾ ಧಾಮ್ ನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಅಡುಗೆಯನ್ನು ತಯಾರಿಸಲು  ಈ ಎರಡು ಬೃಹತ್ ಯಂತ್ರಗಳಾದ ಜೆಸಿಬಿ ಮತ್ತು ಸಿಮೆಂಟ್ ಮಿಕ್ಸರ್ ಯಂತ್ರಗಳನ್ನು ಬಳಸಲಾಗಿದೆ. ಹೌದು  ಈ ಕಾರ್ಯಕ್ರಮದಲ್ಲಿ ಲಕ್ಷಗಟ್ಟಲೆ ಜನರು ಭಾಗವಹಿಸಿದ್ದು, ಇಷ್ಟು ಜನರಿಗೆ ಒಂದೇ ಬಾರಿಗೆ ವಿವಿಧ ಬಗೆಯ ಅಡುಗೆಯನ್ನು ತಯಾರು ಮಾಡುವುದು ಅಷ್ಟು ಸುಲಭದ ಕೆಲಸವಲ್ಲ, ಅಲ್ಲದೆ ಒಂದೇ ಬಾರಿಗೆ ಸುಮಾರು 2 ಲಕ್ಷ ಜನರಿಗೆ  ಸುಮಾರು 1200 ಕೆಜಿ ತರಕಾರಿಗಳ ಸಾಂಬರ್ ತಯಾರಿಸಬೇಕಿತ್ತು. ಒಲೆಯ ಮುಂದೆ ಸೌಟು ಹಿಡಿದುಕೊಂಡು ಇಷ್ಟು ದೊಡ್ಡ ಪ್ರಮಾಣದಲ್ಲಿ ಸಾಂಬರ್ ತಯಾರಿಸುವುದೆಂದರೆ ಸುಲಭದ ಮಾತೇ ಅಲ್ಲ, ಈ ಕಾರಣಕ್ಕಾಗಿ ಸಂಬಾರ್ ತಯಾರಿಸಲು ಜೆಸಿಬಿಯನ್ನು ಬಳಸಲಾಗಿದೆ. ಅಲ್ಲದೆ ಈ ಬಿಸಿ ಬಿಸಿ ಸಾಂಬರ್ ಅನ್ನು ಸೌಟಿನ ಬದಲಿಗೆ ಜೆಸಿಬಿ ಸಹಾಯದಿಂದಲೇ ಒಂದು ಪಾತ್ರೆಯಿಂದ ಇನ್ನೊಂದು ಪಾತ್ರೆಗೆ ವರ್ಗಾಯಿಸಲಾಗಿದೆ. ಮತ್ತು   ಊಟದ ಜೊತೆಗೆ ಮಾಲ್ಪರಿ  ಸಿಹಿಯನ್ನು ಸಹ ತಯಾರಿಸಬೇಕಿತ್ತು,  ಈ ಮಾಲ್ಪರಿ ಹಿಟ್ಟನ್ನು  ಕೈಯಲ್ಲಿ ತಯಾರಿಸುವ ಬದಲು ಸಿಮೆಂಟ್ ಮಿಕ್ಸರ್ ಬಳಸಿ ತಯಾರಿಸಲಾಗಿದೆ.  ಈ  ಭರ್ಜರಿ ಅಡುಗೆ ತಯಾರಿಯ ವಿಡಿಯೋ  ಇದೀಗ ಎಲ್ಲೆಡೆ   ವೈರಲ್ ಆಗುತ್ತಿದೆ.

ಮತ್ತಷ್ಟು ವೈರಲ್​​ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ:

Published On - 2:43 pm, Thu, 21 December 23

Follow Us
ಬಿರು ಬೇಸಿಗೆಯಲ್ಲೂ ಆಲಿಕಲ್ಲು ಮಳೆ: ಧಾರವಾಡ ಮಂದಿಗೆ ತಂಪೆರೆದ ವರುಣ
ಬಿರು ಬೇಸಿಗೆಯಲ್ಲೂ ಆಲಿಕಲ್ಲು ಮಳೆ: ಧಾರವಾಡ ಮಂದಿಗೆ ತಂಪೆರೆದ ವರುಣ
ನೆಲಮಂಗಲದಲ್ಲಿ 6 ನವಿಲು ಸಾವು: ವಿಷ ಪ್ರಾಶನಮಾಡಿ ಕೊಂದಿರುವ ಶಂಕೆ
ನೆಲಮಂಗಲದಲ್ಲಿ 6 ನವಿಲು ಸಾವು: ವಿಷ ಪ್ರಾಶನಮಾಡಿ ಕೊಂದಿರುವ ಶಂಕೆ
ತಮ್ಮ ಕ್ಷೇತ್ರದ ಜಾತ್ರೆಗೆ ಸಿಎಂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ರಾ ?
ತಮ್ಮ ಕ್ಷೇತ್ರದ ಜಾತ್ರೆಗೆ ಸಿಎಂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ರಾ ?
ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್
ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್
ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ
ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ
ತಂದೆಯ ಅಂತ್ಯಸಂಸ್ಕಾರ ನೆರವೇರಿಸಿ ಲಿಂಗಸಮಾನತೆಯ ಸಂದೇಶ ಸಾರಿದ ಸಹೋದರಿಯರು
ತಂದೆಯ ಅಂತ್ಯಸಂಸ್ಕಾರ ನೆರವೇರಿಸಿ ಲಿಂಗಸಮಾನತೆಯ ಸಂದೇಶ ಸಾರಿದ ಸಹೋದರಿಯರು
ಮನೆಯ ಅಂಗಳದಲ್ಲಿ ಮಲಗಿದ್ದ ವೃದ್ಧೆಗೆ ಕಡಿದೇ ಬಿಡ್ತು ಹಾವು!
ಮನೆಯ ಅಂಗಳದಲ್ಲಿ ಮಲಗಿದ್ದ ವೃದ್ಧೆಗೆ ಕಡಿದೇ ಬಿಡ್ತು ಹಾವು!
ಗ್ಯಾಸ್ ​ಇಲ್ಲದಿದ್ರೂ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ಪ್ರಸಾದ ಲಭ್ಯ!
ಗ್ಯಾಸ್ ​ಇಲ್ಲದಿದ್ರೂ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ಪ್ರಸಾದ ಲಭ್ಯ!
2 ನಿಮಿಷ ತಡವಾಗಿ ಬಂದ ಬಾಲಕನಿಗೆ 2 ಗಂಟೆ ಬಿಸಿಲಲ್ಲಿ ನಿಲ್ಲಿಸಿ ಶಿಕ್ಷೆ!
2 ನಿಮಿಷ ತಡವಾಗಿ ಬಂದ ಬಾಲಕನಿಗೆ 2 ಗಂಟೆ ಬಿಸಿಲಲ್ಲಿ ನಿಲ್ಲಿಸಿ ಶಿಕ್ಷೆ!