AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold Man: ತಿರುಮಲ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದ ‘ಗೋಲ್ಡ್​​ ಮ್ಯಾನ್​’

ಕೊಂಡ ವಿಜಯ್ ಕುಮಾರ್ ಎಂಬ ಹೆಸರಿಗಿಂತ 'ಗೋಲ್ಡ್​​ ಮ್ಯಾನ್​' ಎಂದೇ ಖ್ಯಾತಿ ಪಡೆದ ಇವರು ಶುಕ್ರವಾರ, ಮಾರ್ಚ್ 15 ರಂದು, ತಿರುಮಲದಲ್ಲಿ ಶ್ರೀವಾರಿಯ ವಿಐಪಿ ಬ್ರೇಕ್ ದರ್ಶನದಲ್ಲಿ ತಿರುಮಲ ವೆಂಕಟೇಶ್ವರ ಸ್ವಾಮಿಯ ಸೇವೆಯಲ್ಲಿ ಭಾಗಿಯಾದರು.

Gold Man: ತಿರುಮಲ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದ 'ಗೋಲ್ಡ್​​ ಮ್ಯಾನ್​'
Konda Vijay Kumar
ಅಕ್ಷತಾ ವರ್ಕಾಡಿ
|

Updated on: Mar 15, 2024 | 6:37 PM

Share

ಹೋಪ್ ಫೌಂಡೇಶನ್ ಅಧ್ಯಕ್ಷ ಕೊಂಡ ವಿಜಯ್ ಕುಮಾರ್ ತಿರುಮಲ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದರು. ಕೊಂಡ ವಿಜಯ್ ಕುಮಾರ್ ಎಂಬ ಹೆಸರಿಗಿಂತ ‘ಗೋಲ್ಡ್​​ ಮ್ಯಾನ್​’ ಎಂದೇ ಖ್ಯಾತಿ ಪಡೆದ ಇವರು ಶುಕ್ರವಾರ ( ಮಾರ್ಚ್ 15)  ತಿರುಮಲದಲ್ಲಿ ಶ್ರೀವಾರಿಯ ವಿಐಪಿ ಬ್ರೇಕ್ ದರ್ಶನದಲ್ಲಿ ಸ್ವಾಮಿಯ ಸೇವೆಯಲ್ಲಿ ಭಾಗಿಯಾದರು. ಸುಮಾರು ಹತ್ತು ಕಿಲೋ ತೂಕದ ಚಿನ್ನಾಭರಣಗಳನ್ನು ಧರಿಸಿ ಶ್ರೀಗಳಿಗೆ ಪೂಜೆ ಸಲ್ಲಿಸಿದರು. ದರ್ಶನ ಮುಗಿಸಿ ದೇವಸ್ಥಾನದಿಂದ ಹೊರ ಬಂದ ‘ಗೋಲ್ಡ್​​ ಮ್ಯಾನ್​’ ಜೊತೆಗೆ ಸೆಲ್ಫಿ ತೆಗೆಯಲು ಜನಸಾಗರವೇ ಮುಗಿಬಿದ್ದಿತ್ತು.

ಕೊರಳಿನಲ್ಲಿ ವಿವಿಧ ವಿನ್ಯಾಸದ ಸರಗಳು, ಬೃಹತ್ ಲಾಕೆಟ್, ಮಣಿಕಟ್ಟು, ಹತ್ತು ಬೆರಳುಗಳಲ್ಲಿ ಹತ್ತು ಚಿನ್ನದ ಉಂಗುರಗಳು ಮತ್ತು ಕೈಗಡಿಯಾರ ಧರಿಸಿ ಬಂದ ವಿಜಯ್ ಕುಮಾರ್. ತಮ್ಮ ಹೋಪ್ ಫೌಂಡೇಶನ್ ಮೂಲಕ ನಿತ್ಯ ನೂರಾರು ಭಕ್ತರಿಗೆ ದರ್ಶನ ಭಾಗ್ಯ ನೀಡುತ್ತಿದ್ದು, ಮುಂದೆ ಸಹಸ್ರಾರು ಜನರಿಗೆ ದರ್ಶನ ನೀಡುವ ಶಕ್ತಿಯನ್ನು ಸ್ವಾಮಿ ನೀಡಲಿ ಎಂದು ಬೇಡಿಕೊಳ್ಳುತ್ತೇನೆ ಎಂದು ಮಾಧ್ಯಮಗಳ ಮುಂದೆ ಕೊಂಡ ವಿಜಯ್ ಕುಮಾರ್ ಮಾತನಾಡಿದರು.

ಇದನ್ನೂ ಓದಿ: ದೇವಾಲಯ ಧ್ವಂಸ ಮಾಡಲು ಬಂದ ವ್ಯಕ್ತಿ ದೇವರ ವಿಗ್ರಹದ ಮುಂದೆಯೇ ಸಾವು

ಈ ಪ್ರತಿಷ್ಠಾನದ ಮೂಲಕ ಸಾವಿರಾರು ಜನರಿಗೆ ಅನ್ನಸಂತರ್ಪಣೆ ಮಾಡಲಾಗುತ್ತಿದೆ . ಸೇವಾ ಕಾರ್ಯಕ್ರಮಗಳೆಲ್ಲ ನನ್ನದೆ ವೈಯಕ್ತಿಕ ಹಣವಾಗಿದ್ದು, ಯಾರಿಂದಲೂ ದೇಣಿಗೆ ಸಂಗ್ರಹಿಸುತ್ತಿಲ್ಲ ಎಂದರು. ವೆಂಕಟೇಶ್ವರ ಸ್ವಾಮಿ ನನಗೆ ಇಂತಹ ದೊಡ್ಡ ಅವಕಾಶ ಕೊಟ್ಟಿದ್ದು ನನ್ನ ಅದೃಷ್ಟ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇವರೊಂದಿಗೆ ಪ್ರತಿಷ್ಠಾನದ ಹಲವು ಸದಸ್ಯರು ಉಪಸ್ಥಿತರಿದ್ದರು.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ