Viral Video: ಸೋರುತಿಹುದು ರೈಲುಮಾಳಿಗೀ; ‘ವಂದೇಭಾರತ್’ನ ಪ್ರಯಾಣಿಕರಿಗೆ ಉಚಿತ ಶವರ್

Vande Bharat Express: ಲಿರಿಲ್​ ಸಾಬೂನಿನ ಮುಂದಿನ ಜಾಹೀರಾತನ್ನು ಚಿತ್ರೀಕರಿಸಲು ಇದು ಸುಂದರವಾದ ಸ್ಥಳ. ಈ ರೈಲಿನಲ್ಲಿ ಪ್ರಯಾಣಿಸಲು ಆಧಾರ್, ಪ್ಯಾನ್​ ಲಿಂಕ್ ಮಾಡಿದರೆ ಸಾಕೇ? ಅಂತೆಲ್ಲ ಪಟ್ಟಾಂಗ ಹೊಡೆಯುತ್ತಿದ್ದಾರೆ ನೆಟ್ಟಿಗರು.

Viral Video: ಸೋರುತಿಹುದು ರೈಲುಮಾಳಿಗೀ; 'ವಂದೇಭಾರತ್'ನ ಪ್ರಯಾಣಿಕರಿಗೆ ಉಚಿತ ಶವರ್
ವಂದೇ ಭಾರತ್ ಎಕ್ಸ್​ಪ್ರೆಸ್ ರೈಲಿನಲ್ಲಿ ಅಸ್ತವ್ಯಸ್ಥಗೊಂಡ ಏರ್​ಕೂಲರ್​ನಿಂದಾಗಿ ನೀರೋನೀರು​
Follow us
|

Updated on:Jun 15, 2023 | 5:33 PM

Indian Railways : ”ಕೇಳಿರಿ ಕೇಳಿರಿ! ಭಾರತೀಯ ರೈಲುಪ್ರಯಾಣಿಕರಿಗೆ ಶುಭ ಸುದ್ದಿ, ಬೆಳಗ್ಗೆ 6ಕ್ಕೆ ಶುರುವಾಗುವ ವಂದೇಭಾರತ್ ಎಕ್ಸ್​ಪ್ರೆಸ್​ನಲ್ಲಿ ಪ್ರಯಾಣಿಸುವವರಿಗೆ ಉಚಿತವಾಗಿ ಮತ್ತು ಕಡ್ಡಾಯವಾಗಿ ಶವರ್ ಸೌಲಭ್ಯ. ಮೋದಿಯವರ ನಾಯಕತ್ವದಲ್ಲಿ ಆರಂಭಗೊಂಡ ಈ ದೂರದೃಷ್ಟಿ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳುವಂಥವರಾಗಿ”; ವಿಡಿಯೋ ಟ್ವೀಟ್​ ಇದೀಗ ವೈರಲ್ ಆಗುತ್ತಿದೆ. ಇದಕ್ಕೆ ಪ್ರತ್ಯೇಕ ಭತ್ಯೆ ಭರಿಸಬೇಕೇ ಅಥವಾ ಪ್ಯಾನ್​, ಆಧಾರ್​ ಕಾರ್ಡ್​ ಲಿಂಕ್ ಮಾಡಿದರೆ ಸಾಕೇ? ಎಂದು ನೆಟ್ಟಿಗರು ಒಕ್ಕೊರಲಿನಿಂದ ಕೇಳುತ್ತಿದ್ದಾರೆ.

ಅಯ್ಯೋ ಮೋದಿಯವರಿಗೆ ಇಂಥಾ ಐಡಿಯಾಗಳನ್ನು ಕೊಡಬೇಡಿ. ಮೊದಲೇ ಅವರು ಅತ್ಯುತ್ತಮ ದಾರ್ಶನಿಕರು, ಈ ಯೋಜನೆಯನ್ನು ಜಾರಿ ತಂದಲ್ಲಿ ಕೃತಜ್ಞತೆ ಸಲ್ಲಿಸಬೇಕಾಗುತ್ತದೆ ಎಂದು ಕೆಲವರು ವ್ಯಂಗ್ಯವಾಡಿದ್ದಾರೆ. ಫಸ್ಟ್​ ಕ್ಲಾಸ್​ ಬೋಗಿಗಳನ್ನು ಬುಕ್​ ಮಾಡಿನೋಡಿ, ಅಲ್ಲಿ ಟಬ್​ಗಳನ್ನೇ ಅಳವಡಿಸಲಾಗಿದೆ ಎಂದು ಒಬ್ಬರು ಹೇಳಿದ್ದಾರೆ. ಹೌದು ಕಳೆದ ತಿಂಗಳು ನಾವು ವಂದೇಭಾರತ್​ ರೈಲಿನಲ್ಲಿ ಪ್ರಯಾಣಿಸಿದಾಗ ಎಸಿಯಿಂದ ನೀರು ಸೋರುತ್ತಿದೆ ಎಂದು ಎಕ್ಸಿಕ್ಯೂಟಿವ್​ ಕ್ಲಾಸ್​ನಿಂದ ಯಾರೋ ಸ್ಪೀಕರ್​ನಲ್ಲಿ ಕೂಗುತ್ತಿರುವುದು ಕೇಳಿಸಿತ್ತು ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Rahul Gandhi: ಅಮೆರಿಕನ್​ ಟ್ರಕ್ ಯಾತ್ರಾ; ವಾಷಿಂಗ್ಟನ್​ ಡಿಸಿಯಿಂದ ನ್ಯೂಯಾರ್ಕ್​ಗೆ ರಾಹುಲ್ ಪ್ರಯಾಣ

ವೈಫಲ್ಯಗಳು ಸಂಭವಿಸುತ್ತವೆ ನಿಜ. ಹಾಗಂತ ದೇಶ ಪಕ್ಷ ರಾಷ್ಟ್ರವನ್ನು ಲೆಕ್ಕಿಸದೇ ಇಂತಹ ವಿಷಯಗಳಿಗಾಗಿ ಪ್ರಧಾನಿಯನ್ನು ಅಪಹಾಸ್ಯ ಮಾಡುವ ಅಗತ್ಯವಿಲ್ಲ. ನಿಮ್ಮನ್ನು ನೀವು ಸುಧಾರಿಸಿಕೊಳ್ಳಿ ಎಂದು ಟೀಕಾಕಾರರಿಗೆ ಮೋದಿ ಅಭಿಮಾನಿಗಳು ಬುದ್ಧಿವಾದ ಹೇಳಿದ್ದಾರೆ. ಆದರೂ ನೆಟ್ಟಿಗರು ಸುಮ್ಮನಿರದೆ; ಲಿರಿಲ್​ ಸಾಬೂನಿನ ಮುಂದಿನ ಜಾಹೀರಾತನ್ನು ಚಿತ್ರೀಕರಿಸಲು ಇದು ಸುಂದರವಾದ ಸ್ಥಳ ಎಂದು ಹಾಸ್ಯವಾಡಿದ್ದಾರೆ. ಪ್ರಯಾಣಿಕರು ಭಾರೀ ಹಣ ತೆತ್ತು ಈ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾರೆ. ಆಹಾರದಿಂದ ಹಿಡಿದು ಇನ್ನಿತರೇ ಸೌಲಭ್ಯಗಳ ಬಗ್ಗೆ ಮೋದಿ ಸರ್ಕಾರ ಗಮನಹರಿಸಬೇಕು ಎಂದಿದ್ದಾರೆ.

ಶವರ್​ ಯೋಜನೆ ಮುಕ್ತಾಯಗೊಳ್ಳುವ ಮೊದಲೇ ವಂದೇಭಾರತ್ ಎಕ್ಸ್​ಪ್ರೆಸ್​ನಲ್ಲಿ ಪ್ರಯಾಣಿಸುವ ಆಸೆಯುಂಟಾಗುತ್ತಿದೆಯೇ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:12 pm, Thu, 15 June 23

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ