AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಸೋರುತಿಹುದು ರೈಲುಮಾಳಿಗೀ; ‘ವಂದೇಭಾರತ್’ನ ಪ್ರಯಾಣಿಕರಿಗೆ ಉಚಿತ ಶವರ್

Vande Bharat Express: ಲಿರಿಲ್​ ಸಾಬೂನಿನ ಮುಂದಿನ ಜಾಹೀರಾತನ್ನು ಚಿತ್ರೀಕರಿಸಲು ಇದು ಸುಂದರವಾದ ಸ್ಥಳ. ಈ ರೈಲಿನಲ್ಲಿ ಪ್ರಯಾಣಿಸಲು ಆಧಾರ್, ಪ್ಯಾನ್​ ಲಿಂಕ್ ಮಾಡಿದರೆ ಸಾಕೇ? ಅಂತೆಲ್ಲ ಪಟ್ಟಾಂಗ ಹೊಡೆಯುತ್ತಿದ್ದಾರೆ ನೆಟ್ಟಿಗರು.

Viral Video: ಸೋರುತಿಹುದು ರೈಲುಮಾಳಿಗೀ; 'ವಂದೇಭಾರತ್'ನ ಪ್ರಯಾಣಿಕರಿಗೆ ಉಚಿತ ಶವರ್
ವಂದೇ ಭಾರತ್ ಎಕ್ಸ್​ಪ್ರೆಸ್ ರೈಲಿನಲ್ಲಿ ಅಸ್ತವ್ಯಸ್ಥಗೊಂಡ ಏರ್​ಕೂಲರ್​ನಿಂದಾಗಿ ನೀರೋನೀರು​
ಶ್ರೀದೇವಿ ಕಳಸದ
|

Updated on:Jun 15, 2023 | 5:33 PM

Share

Indian Railways : ”ಕೇಳಿರಿ ಕೇಳಿರಿ! ಭಾರತೀಯ ರೈಲುಪ್ರಯಾಣಿಕರಿಗೆ ಶುಭ ಸುದ್ದಿ, ಬೆಳಗ್ಗೆ 6ಕ್ಕೆ ಶುರುವಾಗುವ ವಂದೇಭಾರತ್ ಎಕ್ಸ್​ಪ್ರೆಸ್​ನಲ್ಲಿ ಪ್ರಯಾಣಿಸುವವರಿಗೆ ಉಚಿತವಾಗಿ ಮತ್ತು ಕಡ್ಡಾಯವಾಗಿ ಶವರ್ ಸೌಲಭ್ಯ. ಮೋದಿಯವರ ನಾಯಕತ್ವದಲ್ಲಿ ಆರಂಭಗೊಂಡ ಈ ದೂರದೃಷ್ಟಿ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳುವಂಥವರಾಗಿ”; ವಿಡಿಯೋ ಟ್ವೀಟ್​ ಇದೀಗ ವೈರಲ್ ಆಗುತ್ತಿದೆ. ಇದಕ್ಕೆ ಪ್ರತ್ಯೇಕ ಭತ್ಯೆ ಭರಿಸಬೇಕೇ ಅಥವಾ ಪ್ಯಾನ್​, ಆಧಾರ್​ ಕಾರ್ಡ್​ ಲಿಂಕ್ ಮಾಡಿದರೆ ಸಾಕೇ? ಎಂದು ನೆಟ್ಟಿಗರು ಒಕ್ಕೊರಲಿನಿಂದ ಕೇಳುತ್ತಿದ್ದಾರೆ.

ಅಯ್ಯೋ ಮೋದಿಯವರಿಗೆ ಇಂಥಾ ಐಡಿಯಾಗಳನ್ನು ಕೊಡಬೇಡಿ. ಮೊದಲೇ ಅವರು ಅತ್ಯುತ್ತಮ ದಾರ್ಶನಿಕರು, ಈ ಯೋಜನೆಯನ್ನು ಜಾರಿ ತಂದಲ್ಲಿ ಕೃತಜ್ಞತೆ ಸಲ್ಲಿಸಬೇಕಾಗುತ್ತದೆ ಎಂದು ಕೆಲವರು ವ್ಯಂಗ್ಯವಾಡಿದ್ದಾರೆ. ಫಸ್ಟ್​ ಕ್ಲಾಸ್​ ಬೋಗಿಗಳನ್ನು ಬುಕ್​ ಮಾಡಿನೋಡಿ, ಅಲ್ಲಿ ಟಬ್​ಗಳನ್ನೇ ಅಳವಡಿಸಲಾಗಿದೆ ಎಂದು ಒಬ್ಬರು ಹೇಳಿದ್ದಾರೆ. ಹೌದು ಕಳೆದ ತಿಂಗಳು ನಾವು ವಂದೇಭಾರತ್​ ರೈಲಿನಲ್ಲಿ ಪ್ರಯಾಣಿಸಿದಾಗ ಎಸಿಯಿಂದ ನೀರು ಸೋರುತ್ತಿದೆ ಎಂದು ಎಕ್ಸಿಕ್ಯೂಟಿವ್​ ಕ್ಲಾಸ್​ನಿಂದ ಯಾರೋ ಸ್ಪೀಕರ್​ನಲ್ಲಿ ಕೂಗುತ್ತಿರುವುದು ಕೇಳಿಸಿತ್ತು ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Rahul Gandhi: ಅಮೆರಿಕನ್​ ಟ್ರಕ್ ಯಾತ್ರಾ; ವಾಷಿಂಗ್ಟನ್​ ಡಿಸಿಯಿಂದ ನ್ಯೂಯಾರ್ಕ್​ಗೆ ರಾಹುಲ್ ಪ್ರಯಾಣ

ವೈಫಲ್ಯಗಳು ಸಂಭವಿಸುತ್ತವೆ ನಿಜ. ಹಾಗಂತ ದೇಶ ಪಕ್ಷ ರಾಷ್ಟ್ರವನ್ನು ಲೆಕ್ಕಿಸದೇ ಇಂತಹ ವಿಷಯಗಳಿಗಾಗಿ ಪ್ರಧಾನಿಯನ್ನು ಅಪಹಾಸ್ಯ ಮಾಡುವ ಅಗತ್ಯವಿಲ್ಲ. ನಿಮ್ಮನ್ನು ನೀವು ಸುಧಾರಿಸಿಕೊಳ್ಳಿ ಎಂದು ಟೀಕಾಕಾರರಿಗೆ ಮೋದಿ ಅಭಿಮಾನಿಗಳು ಬುದ್ಧಿವಾದ ಹೇಳಿದ್ದಾರೆ. ಆದರೂ ನೆಟ್ಟಿಗರು ಸುಮ್ಮನಿರದೆ; ಲಿರಿಲ್​ ಸಾಬೂನಿನ ಮುಂದಿನ ಜಾಹೀರಾತನ್ನು ಚಿತ್ರೀಕರಿಸಲು ಇದು ಸುಂದರವಾದ ಸ್ಥಳ ಎಂದು ಹಾಸ್ಯವಾಡಿದ್ದಾರೆ. ಪ್ರಯಾಣಿಕರು ಭಾರೀ ಹಣ ತೆತ್ತು ಈ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾರೆ. ಆಹಾರದಿಂದ ಹಿಡಿದು ಇನ್ನಿತರೇ ಸೌಲಭ್ಯಗಳ ಬಗ್ಗೆ ಮೋದಿ ಸರ್ಕಾರ ಗಮನಹರಿಸಬೇಕು ಎಂದಿದ್ದಾರೆ.

ಶವರ್​ ಯೋಜನೆ ಮುಕ್ತಾಯಗೊಳ್ಳುವ ಮೊದಲೇ ವಂದೇಭಾರತ್ ಎಕ್ಸ್​ಪ್ರೆಸ್​ನಲ್ಲಿ ಪ್ರಯಾಣಿಸುವ ಆಸೆಯುಂಟಾಗುತ್ತಿದೆಯೇ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:12 pm, Thu, 15 June 23

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ