Viral Video: ಸೇವಂತಿಗೆ ಚೆಂಡಿನಂಥ ಮುದ್ದುಕೋಳಿ; ಹಿರಿಯರೆಲ್ಲ ಕಿರಿಯರೆದುರು ಹೀಗೆ ಸುಮ್ಮನಿದ್ದರದೇ ಸ್ವರ್ಗ

Friendship : 'ಮಾಧ್ಯಮಗಳು ಮತ್ತು ರಾಜಕಾರಣಿಗಳು ನೀವಿಬ್ಬರು ಭಿನ್ನಜಾತಿಯವರು, ಪರಸ್ಪರ ದ್ವೇಷಿಸಬೇಕು ಎಂದು ಹೇಳುವ ತನಕವಂತೂ ಇವು ಹೀಗೇ ಇರುತ್ತವೆ.'

Viral Video: ಸೇವಂತಿಗೆ ಚೆಂಡಿನಂಥ ಮುದ್ದುಕೋಳಿ; ಹಿರಿಯರೆಲ್ಲ ಕಿರಿಯರೆದುರು ಹೀಗೆ ಸುಮ್ಮನಿದ್ದರದೇ ಸ್ವರ್ಗ
ಕೋಳಿಮರಿಯೊಂದಿಗೆ ಆಡುತ್ತಿರುವ ನಾಯಿಮರಿ
Follow us
|

Updated on:Jun 15, 2023 | 1:20 PM

Innocence : ಮಗುವಾಗಲಿ, ಯಾವುದೇ ಪ್ರಾಣಿ ಪಕ್ಷಿಗಳ ಮರಿಗಳಾಗಲಿ ಸಂಧಿಸುವ ಕಣ್ಣುಗಳಿಗೆ, ಸ್ಪರ್ಶಕ್ಕಷ್ಟೇ ಯಾಕೆ, ತಾಕುವ ನಿರ್ಜೀವಿಗಳಿಗೂ ಸ್ಪಂದಿಸಲು ಹವಣಿಸುತ್ತಿರುತ್ತವೆ. ಕುತೂಹಲ ಮತ್ತು ಪ್ರೀತಿಯೊಂದೇ ಅವುಗಳ ಭಾಷೆ. ತಾನು ಬೇರೆ ಅವರು ಬೇರೆ ಎಂಬ ವ್ಯತ್ಯಾಸ ಗುಲಗಂಜಿಯಷ್ಟೂ ಅವುಗಳಿಗೆ ಸೋಕದು. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ತಾಯಿನಾಯಿ ತನ್ನ ಪಾಡಿಗೆ ತಾನು ಅಂಗಳದಲ್ಲಿ ಮಲಗಿದೆ. ಅಲ್ಲಿಗೆ ಬಂದ ಕೋಳಿಮರಿಯೊಂದಿಗೆ ಮರಿನಾಯಿ ಮನಸಾ ಆಟಕ್ಕಿಳಿದಿದೆ.

ಅಕಸ್ಮಾತ್ ತಾಯಿನಾಯಿಗೆ ಮನುಷ್ಯರ ಹಾಗೆ ಬಾಯಿ ಇದ್ದಿದ್ದರೆ ಏನಾಗುತ್ತಿತ್ತು? ದರದರನೆ ಮರಿನಾಯಿಯ ರಟ್ಟೆ ಎಳೆದುಕೊಂಡು ಮನೆಮಂದಿಯನ್ನೆಲ್ಲ ಸೇರಿಸಿ ಮನೆಯೊಳಗೆ ಕೂಡಿಹಾಕಿ ನೀತಿಪಾಠ ಹೇಳಲು ತೊಡಗುತ್ತಿತ್ತೇನೋ. ಅತ್ತ ಬಡಪಾಯಿ ಕೋಳಿಮರಿ ಪರಿತ್ಯಕ್ತ ಭಾವದಿಂದ ಹೊರಟು ಹೋಗುತ್ತಿತ್ತೇನೋ. ಸದ್ಯ ಇಲ್ಲಿ ಹಾಗಾಗಿಲ್ಲ. ತನ್ನ ಪಾಡಿಗೆ ತಾನು ತಾಯಿನಾಯಿ ಅಂಗಳದಲ್ಲಿ ವಿಶ್ರಮಿಸುತ್ತಿದೆ. ಈ ಎಳೇಜೀವಗಳೆರಡು ತಮ್ಮದೇ ಲೋಕದಲ್ಲಿ ಮೈಮರೆತಿವೆ.

ಇದನ್ನೂ ಓದಿ : Viral Video: ಐಎಫ್​ಎಸ್​ ಅಧಿಕಾರಿ ಸುಸಾಂತ ನಂದಾ ಈ ವಿಡಿಯೋ ನೋಡಿ ಬೇಸರಿಸಿಕೊಂಡಿದ್ದಾರೆ

ಈ ವಿಡಿಯೋ ಅನ್ನು ಈತನಕ 5 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ. ಸದ್ಯ ಇವು ನಮ್ಮ ಹಾಗಿಲ್ಲ. ಈ ಸ್ನೇಹ ಹೀಗೇ ಮುಂದುವರಿಯಲಿ ಎಂದು ಹಾರೈಸಿದ್ದಾರೆ. ಅಯ್ಯೋ ಈ ಕೋಳಿಮರಿಗೆ ಅಪ್ಪ ಅಮ್ಮ ಇಲ್ಲವೆ? ಮುಂದೊಂದು ದಿನ ಆ ತಾಯಿನಾಯಿ, ನಿನ್ನ ಸ್ನೇಹಿತ ನಮಗೆ ಒಳ್ಳೆಯ ಆಹಾರ ಗೊತ್ತಾ, ಎಂದು ಹೇಳಿಬಿಟ್ಟರೆ? ಮಾಧ್ಯಮಗಳು ಮತ್ತು ರಾಜಕಾರಣಿಗಳು ನೀವಿಬ್ಬರು ಭಿನ್ನಜಾತಿಯವರು, ಪರಸ್ಪರ ದ್ವೇಷಿಸಬೇಕು ಎಂದು ಹೇಳುವ ತನಕವಂತೂ ಇವು ಹೀಗೇ ಇರುತ್ತವೆ. ಈ ನಾಯಿ ಸೋಮಾರಿಯೇ, ಯಾಕೆ ಇದು ಸುಮ್ಮನೇ ಕುಳಿತಿದೆ? ಅಂತೆಲ್ಲ ಕೇಳಿದ್ದಾರೆ, ಹೇಳಿದ್ದಾರೆ, ತಿವಿದಿದ್ದಾರೆ ನೆಟ್ಟಿಗರು.

ಇದನ್ನು ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 1:04 pm, Thu, 15 June 23

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ