Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ದಯೆಗೆ ಜಗತ್ತನ್ನು ಬದಲಾಯಿಸುವ ಶಕ್ತಿ ಇದೆ, ನೋಡಿ ವಿಡಿಯೋ

Kindness : ಕಣ್ಣಿಗೆ ಪರದೆಯಂಟಿಸಿಕೊಂಡು ಸ್ವಕೇಂದ್ರಿತ ಬದುಕಿನಲ್ಲಿ ಮುಳುಗೇಳುತ್ತಿರುವ ನಾವುಗಳು ನಮ್ಮನ್ನು ಸುತ್ತುವರಿದ ಜೀವಸಂಕುಲದೊಂದಿಗೆ ಹೇಗೆ ಸ್ಪಂದಿಸಬೇಕು ಎನ್ನುವುದನ್ನು ರೂಢಿಸಿಕೊಳ್ಳಬೇಕಿದೆ, ಮಕ್ಕಳಿಗೂ ಹೇಳಿಕೊಡಬೇಕಿದೆ.

Viral Video: ದಯೆಗೆ ಜಗತ್ತನ್ನು ಬದಲಾಯಿಸುವ ಶಕ್ತಿ ಇದೆ, ನೋಡಿ ವಿಡಿಯೋ
ಬಾ ನನ್ನ ಮೇಲೆ ಮಲಗು...
Follow us
ಶ್ರೀದೇವಿ ಕಳಸದ
|

Updated on:May 30, 2023 | 2:21 PM

Sleeping : ಎಡವಿದರೆ, ಮುಗ್ಗರಿಸಿದರೆ, ಬಿದ್ದರೆ, ಏನೋ ಕಳೆದುಕೊಂಡರೆ, ಏನೋ ಮುರಿದುಕೊಂಡರೆ, ಯಾರಿಂದಲೋ ಅವಮಾನ ಅನುಭವಿಸಿದರೆ, ತಪ್ಪಿಲ್ಲದೆ ಬೈಸಿಕೊಂಡರೆ… ಹೀಗೆ ಅರಿವಿದ್ದೋ ಇಲ್ಲದೆಯೋ ನಮ್ಮೊಂದಿಗಿರುವವರು ಇಂಥ ಸಂದರ್ಭವನ್ನು ಎದುರಿಸಿದಾಗ ನಾವು ಹೇಗಿರಬೇಕು? ಹೇಗಿರುತ್ತೇವೆ ಅಥವಾ ಹೇಗಿದ್ದೆವು? ಬಾಲ್ಯವನ್ನೊಮ್ಮೆ (Childhood) ನೆನಪಿಸಿಕೊಳ್ಳಿ. ಅಂಥದೇ ಬಾಲ್ಯವನ್ನು ನೆನಪಿಸುವ ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ಈ ಮಗು ಕೂತಲ್ಲೇ ತೂಕಡಿಸುತ್ತಿದೆ. ಪುಟ್ಟ ಬೆಂಚಿನ ಅಂಚಿನಲ್ಲಿ ಕುಳಿತ ಇದು ಇನ್ನೇನು ಬಿದ್ದೇ ಹೋಗಬಹುದು ಎನ್ನುವಷ್ಟು ನಿದ್ರೆ. ಪಕ್ಕದಲ್ಲಿರುವ ಮಗು ಟೀಚರ್​ ಕಡೆ ನೋಡುತ್ತ ಪಕ್ಕದಲ್ಲಿರುವ ಸ್ನೇಹಿತನೊಂದಿಗೆ ಹರಟೆಯನ್ನೂ ಹೊಡೆಯುತ್ತಿದೆ. ಹೀಗಿರುವಾಗ ಈ ಮಗು ತೂಕಡಿಸುತ್ತಿರುವುದು ಗಮನಕ್ಕೆ ಬಂದಿದ್ದೇ ಭುಜದ ಮೇಲೆ ಕೈಹಾಕಿ ತನ್ನ ಭುಜದ ಮೇಲೆ ಮಲಗಿಸಿಕೊಂಡಿದೆ. ಹಾಗೆ ಮಲಗಿಸಿಕೊಳ್ಳುವ ಮೊದಲು ಆ ಮಗುವಿನ ಮುಖ ಗಮನಿಸಿದಿರಾ?

ಇದನ್ನೂ ಓದಿ : Viral Video: ಕೊಲ್ಕತ್ತೆಯ ಈ ರಸಗುಲ್ಲಾ ರೋಲ್​! ವ್ಲಾಗರ್​ ಕೊಟ್ಟ ಸ್ಪಷ್ಟನೆ ಇಲ್ಲಿದೆ

ನೆಟ್ಟಿಗರು ಈ ವಿಡಿಯೋ ನೋಡಿ ಪ್ರಫುಲ್ಲಿತರಾಗುತ್ತಿದ್ದಾರೆ. ಧಾವಂತದ ಬದುಕಿನಲ್ಲಿ ಇದು ತಂಗಾಳಿಯಂತೆ ನಮ್ಮನ್ನು ಅರಳಿಸುತ್ತಿದೆ ಎನ್ನುತ್ತಿದ್ದಾರೆ. ಇದು ಅತ್ಯಂತ ಮೌಲ್ಯಯುತವಾದ ಕ್ಷಣ. ಇದು ಮಾನವೀಯತೆಯ ನಿಜವಾದ ಶಕ್ತಿ. ಮೊದಲು ನಗಲು ಶುರು ಮಾಡಿದೆ ನಂತರ ನನಗವರಿಲ್ಲದೆಯೇ ಕಣ್ಣೀರಿಳಿದವು, ಇದು ಅತ್ಯಂತ ಹೃದ್ಯವಾಗಿದೆ ಅಂತೆಲ್ಲ ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ.

ಇದನ್ನೂ ಓದಿ : Viral: ಅತ್ತೆ ಸೊಸೆ ಒಂದೇ ಸೀರೆ; ಇದು ನಿಜಕ್ಕೂ ಆರ್ಥಿಕ ಹಿಂಜರಿಕೆ ಎನ್ನುತ್ತಿರುವ ನೆಟ್ಟಿಗರು

ದಯೆ, ಕರುಣೆ, ಅನುಕಂಪ, ಸಹಾನುಭೂತಿ, ಸಹಾಯ ಎನ್ನುವುದೇ ಮಾನವೀಯತೆಗೆ ಬುನಾದಿ.  ನಿತ್ಯಸಂಗತಿಗಳಲ್ಲಿ ಇವುಗಳನ್ನು ಕಂಡುಕೊಳ್ಳುವ ಬಗೆ ಹೇಗೆ ಎನ್ನುವುದನ್ನು ನಮ್ಮ ಮಕ್ಕಳಿಗೆ ಎಳವೆಯಲ್ಲಿಯೇ ಹೇಳಿಕೊಡಬೇಕು. ಅದಕ್ಕಾಗಿ ದೊಡ್ಡ ದೊಡ್ಡ ಪುಸ್ತಕಗಳನ್ನೇ ಓದಬೇಕು, ಪರೀಕ್ಷೆಗಳನ್ನೇ ಬರೆಯಬೇಕು ಅಂತೇನಿಲ್ಲ. ಪರದೆಗಳಿಗೆ ಅಂಟಿಕೊಂಡು ಸ್ವಕೇಂದ್ರಿತ ಬದುಕಿನಲ್ಲಿ ಮುಳುಗೇಳುತ್ತಿರುವ ನಾವುಗಳು ನಮ್ಮನ್ನು ಸುತ್ತುವರಿದ ಜೀವಸಂಕುಲದೊಂದಿಗೆ, ಮನುಷ್ಯರೊಂದಿಗೆ ಹೇಗೆ ಸ್ಪಂದಿಸಬೇಕು ಎನ್ನುವುದನ್ನು ರೂಢಿಸಿಕೊಳ್ಳಬೇಕಿದೆ.

ಏನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:11 pm, Tue, 30 May 23

ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ
ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್