AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಹಿಮಾಚಲ ಪ್ರದೇಶದ ಮಹಾದೇವ ದೇವಾಲಯಕ್ಕೆ ಬಂದೆರಗಿದ ಸಿಡಿಲು! ವಿಡಿಯೋ ನೋಡಿ

ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಬಳಿಕ ಈ ವಿಡಿಯೋ ಮತ್ತಷ್ಟು ಮೆಚ್ಚುಗೆಗೆ ಪಾತ್ರವಾಗಿದೆ. ಹಲವಾರು ಮಂದಿ ಇದನ್ನು ನೋಡಿ ಅಚ್ಚರಿಪಟ್ಟಿದ್ದಾರೆ. ಹಂಚಿಕೊಂಡಿದ್ದಾರೆ. ಅಪ್​​ಲೋಡ್ ಮಾಡಿದ ಕೆಲವೇ ದಿನಗಳಲ್ಲಿ ವಿಡಿಯೋ ವೈರಲ್ ಆಗಿದೆ.

Viral Video: ಹಿಮಾಚಲ ಪ್ರದೇಶದ ಮಹಾದೇವ ದೇವಾಲಯಕ್ಕೆ ಬಂದೆರಗಿದ ಸಿಡಿಲು! ವಿಡಿಯೋ ನೋಡಿ
ಮಿಂಚು (ಸಂಗ್ರಹ ಚಿತ್ರ)
TV9 Web
| Edited By: |

Updated on:Jun 12, 2021 | 8:05 PM

Share

ಬಹುಶಃ ಬಹುತೇಕ ಮಂದಿ ಭಯಪಡುವ ಒಂದು ಅಂಶ ಎಂದರೆ ಅದು ಸಿಡಿಲು ಎಂದು ಹೇಳಬಹುದು. ಜೋರಾದ ಮಳೆ, ಗಾಳಿ ಅಬ್ಬರಿಸುವ ಸಿಡಿಲು, ಮಿಂಚು, ಗುಡುಗಿಗೆ ಒಂದೊಮ್ಮೆಗೆ ನಾವು ಭಯಪಡುತ್ತೇವೆ. ಮಳೆಗಾಲದ ಸಿಡಿಲು, ಮಿಂಚು ಸಹಿಸಿಕೊಂಡು ಯಾರೂ ಸುಮ್ಮನೆ ಹೊರಹೋಗಲು ಮನಸ್ಸು ಮಾಡುವುದಿಲ್ಲ. ಮನೆಯೊಳಗೆ ಇದ್ದರೂ ಸಿಡಿಲು ಮಿಂಚಿನ ಬಣ್ಣ, ಅದರ ಶಬ್ದಕ್ಕೆ ಗಾಬರಿ ಬೀಳುವುದು ಸಹಜ. ಹಿರಿಯರಂತೂ ಮಕ್ಕಳನ್ನು ಅತೀ ಜೋಪಾನ ಮಾಡಿಬಿಡುತ್ತಾರೆ.

ಇಲ್ಲೀಗ ಅಂತಹ ದೃಶ್ಯವೊಂದು ಸೆರೆಯಾಗಿದೆ. ಸಿಡಿಲು ಬಂದು ಬಡಿಯುತ್ತಿರುವ ಕ್ಷಣವೊಂದು ವಿಡಿಯೋದಲ್ಲಿ ದಾಖಲಾಗಿದೆ. ಇಂತಹ ಕ್ಷಣಗಳನ್ನು ಸೆರೆ ಹಿಡಿಯುವುದು ಬಹಳ ಕಷ್ಟದ ಕೆಲಸ. ಸಿಡಿಲು ಮಿಂಚಿನ ಫೋಟೊ ಸೆರೆ ಹಿಡಿಯಲು ಛಾಯಾಗ್ರಾಹಕನಿಗೆ ಉತ್ತಮ ಕೌಶಲ್ಯ ಬೇಕಿರುತ್ತದೆ. ವಿಡಿಯೋ ತೆಗೆಯಲೂ ಅಷ್ಟೇ. ಸಮಯ, ಸಂದರ್ಭಕ್ಕೆ ಸರಿಯಾಗಿ ಕಾದು ಕುಳಿತು ಈ ಕೆಲಸ ಮಾಡಬೇಕಾಗುತ್ತದೆ.

ಹಿಮಾಚಲ ಪ್ರದೇಶದ ಮಹಾದೇವ ಬೆಟ್ಟದಲ್ಲಿ ಈ ಘಟನೆ ನಡೆದಿದೆ. ಕುಲು ಜಿಲ್ಲೆಯ ಮಹಾದೇವ ದೇವಾಲಯದಲ್ಲಿ ಗುರುವಾರ ಈ ವಿಡಿಯೋವನ್ನು ಸೆರೆ ಹಿಡಿಯಲಾಗಿದೆ. ಉತ್ಸಾಹಿ ಛಾಯಾಗ್ರಾಹಕರೊಬ್ಬರು ಈ ದೃಶ್ಯಾವಳಿಯನ್ನು ತಮ್ಮ ಕ್ಯಾಮಾರಾದಲ್ಲಿ ಬಂಧಿಸಿದ್ದಾರೆ. ಬಳಿಕ, ಸಾಮಾಜಿಕ ಜಾಲತಾಣದಲ್ಲಿ ಕೂಡ ಇದನ್ನು ಅಪ್​ಲೋಡ್ ಮಾಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಬಳಿಕ ಈ ವಿಡಿಯೋ ಮತ್ತಷ್ಟು ಮೆಚ್ಚುಗೆಗೆ ಪಾತ್ರವಾಗಿದೆ. ಹಲವಾರು ಮಂದಿ ಇದನ್ನು ನೋಡಿ ಅಚ್ಚರಿಪಟ್ಟಿದ್ದಾರೆ. ಹಂಚಿಕೊಂಡಿದ್ದಾರೆ. ಅಪ್​​ಲೋಡ್ ಮಾಡಿದ ಕೆಲವೇ ದಿನಗಳಲ್ಲಿ ವಿಡಿಯೋ ವೈರಲ್ ಆಗಿದೆ.

ಕಳೆದ ದಶಕದಿಂದ ಈಚೆಗೆ ಈ ಕಣಿವೆ ಪ್ರದೇಶದಲ್ಲಿ ಸಿಡಿಲು, ಮಿಂಚು ಪ್ರಮಾಣ ಅಧಿಕವಾಗಿದೆ ಎಂದು ಹೇಳಲಾಗುತ್ತಿದೆ. ಈ ಬಾರಿ ಮಹಾದೇವ ದೇವಾಲಯಕ್ಕೆ ಸಿಡಿಲು ಬಂದು ಬಡಿದಿದೆ. ಇದು ಕುಲು ಕಣಿವೆ ಪ್ರದೇಶದಲ್ಲಿ ಇರುವ ಅತಿ ಪುರಾತನ ದೇವಾಲಯವಾಗಿದೆ. ಕೆಲವರು ಈ ಘಟನೆಯನ್ನು ಶಿವನ ಆಶೀರ್ವಾದ ಈ ಪರ್ವತದ ಮೇಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಗೋಲ್​ಗಪ್ಪಾದಲ್ಲಿ ರಿಂಗ್ ಇಟ್ಟು ಪ್ರಪೋಸ್ ಮಾಡಿದ ಹುಡುಗ; ಹೀಗೆ ಮಾಡಿದ್ರೆ ಯಾರೇ ಆದ್ರೂ ಬೀಳ್ದೇ ಇರ್ತಾರಾ?!

World Record: ಈಕೆಯ ರೆಪ್ಪೆ ನೋಡಿದರೆ ನೀವು ಹುಬ್ಬೇರಿಸೋದು ಖಚಿತ! ಏನಿದು ವಿಶೇಷ?

Published On - 7:25 pm, Sat, 12 June 21

ಕೋಗಿಲು ಲೇಔಟ್​ನಲ್ಲಿದ್ದಿದ್ದು ಬಾಂಗ್ಲಾ ಅಕ್ರಮ ವಲಸಿಗರೇ?
ಕೋಗಿಲು ಲೇಔಟ್​ನಲ್ಲಿದ್ದಿದ್ದು ಬಾಂಗ್ಲಾ ಅಕ್ರಮ ವಲಸಿಗರೇ?
ಪೊಲೀಸ್ ಆಯುಕ್ತರ ಕಚೇರಿಗೆ ದಿಢೀರ್ ಭೇಟಿ ನೀಡಿದ ವಿಜಯಲಕ್ಷ್ಮಿ ದರ್ಶನ್
ಪೊಲೀಸ್ ಆಯುಕ್ತರ ಕಚೇರಿಗೆ ದಿಢೀರ್ ಭೇಟಿ ನೀಡಿದ ವಿಜಯಲಕ್ಷ್ಮಿ ದರ್ಶನ್
ಮಾಜಿ ಸಚಿವ ಬಿ. ನಾಗೇಂದ್ರ ಆಪ್ತನ ಮನೆ ಮೇಲೆ ಸಿಬಿಐ ದಾಳಿ
ಮಾಜಿ ಸಚಿವ ಬಿ. ನಾಗೇಂದ್ರ ಆಪ್ತನ ಮನೆ ಮೇಲೆ ಸಿಬಿಐ ದಾಳಿ
ಅಭಿಮಾನಿಗಳ ಜೊತೆ ‘ಮಾರ್ಕ್’ ನೋಡಿದ ಸುದೀಪ್; ಥಿಯೇಟರ್ ಮುಂದೆ ಜನಸಾಗರ
ಅಭಿಮಾನಿಗಳ ಜೊತೆ ‘ಮಾರ್ಕ್’ ನೋಡಿದ ಸುದೀಪ್; ಥಿಯೇಟರ್ ಮುಂದೆ ಜನಸಾಗರ
ಹೊಸ ವರ್ಷಾಚರಣೆ ವೇಳೆ ಎಣ್ಣೆ ಮತ್ತಲ್ಲಿರೋರನ್ನು ಪೊಲೀಸರೇ ಮನೆಗೆ ಬಿಡ್ತಾರಾ?
ಹೊಸ ವರ್ಷಾಚರಣೆ ವೇಳೆ ಎಣ್ಣೆ ಮತ್ತಲ್ಲಿರೋರನ್ನು ಪೊಲೀಸರೇ ಮನೆಗೆ ಬಿಡ್ತಾರಾ?
ಮಹಿಳಾ ಸುರಕ್ಷತೆಗಾಗಿ ಬೆಂಗಳೂರು ಪೊಲೀಸರಿಂದ 50 ಕಡೆ ಮಹಿಳಾ ಸಹಾಯ ಕೇಂದ್ರ
ಮಹಿಳಾ ಸುರಕ್ಷತೆಗಾಗಿ ಬೆಂಗಳೂರು ಪೊಲೀಸರಿಂದ 50 ಕಡೆ ಮಹಿಳಾ ಸಹಾಯ ಕೇಂದ್ರ
ಸುದೀಪ್ ಬಳಿಕ ಪೈರಸಿ ವಿರುದ್ಧ ಧ್ವನಿ ಎತ್ತಿದ ಜಗ್ಗೇಶ್; ಕಾರಣ ಏನು?
ಸುದೀಪ್ ಬಳಿಕ ಪೈರಸಿ ವಿರುದ್ಧ ಧ್ವನಿ ಎತ್ತಿದ ಜಗ್ಗೇಶ್; ಕಾರಣ ಏನು?
ಇಂಟರ್​ನ್ಯಾಷನಲ್​ ಟಿ20 ಲೀಗ್​ನಲ್ಲಿ ಹೊಸ ಇತಿಹಾಸ ಬರೆದ ಆಂಡ್ರೀಸ್ ಗೌಸ್
ಇಂಟರ್​ನ್ಯಾಷನಲ್​ ಟಿ20 ಲೀಗ್​ನಲ್ಲಿ ಹೊಸ ಇತಿಹಾಸ ಬರೆದ ಆಂಡ್ರೀಸ್ ಗೌಸ್
ಆನೇಕಲ್: ಸ್ಲೀಪರ್ ಕೋಚ್ ಬಸ್​ಗಳ ನಡುವೆ ಭೀಕರ ಅಪಘಾತ
ಆನೇಕಲ್: ಸ್ಲೀಪರ್ ಕೋಚ್ ಬಸ್​ಗಳ ನಡುವೆ ಭೀಕರ ಅಪಘಾತ
‘ಕ್ಷಣ ಕ್ಷಣಕ್ಕೂ ಕೊಡ್ತೀವಿ, ತಗೋತಾ ಇರ್ಬೇಕು’; ಗಿಲ್ಲಿಗೆ ಅಶ್ವಿನಿ ಚಾಲೆಂಜ್
‘ಕ್ಷಣ ಕ್ಷಣಕ್ಕೂ ಕೊಡ್ತೀವಿ, ತಗೋತಾ ಇರ್ಬೇಕು’; ಗಿಲ್ಲಿಗೆ ಅಶ್ವಿನಿ ಚಾಲೆಂಜ್