Sign In

By signing in or creating an account, you agree with Associated Broadcasting Company's Terms & Conditions and Privacy Policy.

viral video: ಗೂಡಿನ ಗೇಟ್​ ತೆರೆದ ತಕ್ಷಣ ಮಾಲೀಕನ ಮೇಲೆ ಎರಗಿ ಮುದ್ದಿಸಿದ ಸಿಂಹ: ಬೆರಗಾದ ನಟ್ಟಿಗರು

ನಾಯಿಮರಿಯಂತೆ ಸಿಂಹವನ್ನು ಎತ್ತಿ ಆಡಿಸುವುದನ್ನು ಕಂಡು ನೆಟ್ಟಿಗರು ಬೆರಗಾಗಿದ್ದಾರೆ. ಇನ್ನೂ ಕೆಲವರು ಈ ಭಯಾನಕ ವೀಡಿಯೋ ನೋಡಿ ಸಿಂಹ ವ್ಯಕ್ತಿಯ ಮೇಲೆ ದಾಳಿ ನಡೆಸಿದೆ ಎಂದುಕೊಂಡಿದ್ದಾರೆ.

viral video: ಗೂಡಿನ ಗೇಟ್​ ತೆರೆದ ತಕ್ಷಣ ಮಾಲೀಕನ ಮೇಲೆ ಎರಗಿ ಮುದ್ದಿಸಿದ ಸಿಂಹ: ಬೆರಗಾದ ನಟ್ಟಿಗರು
ವೀಡಿಯೋದಿಂದ ಸೆರೆಹಿಡಿಯಲಾದ ಚಿತ್ರ
Follow us
TV9 Web
| Updated By: Pavitra Bhat Jigalemane

Updated on: Dec 19, 2021 | 11:48 AM

ಕಾಡು ಪ್ರಾಣಿಗಳನ್ನು ದೂರದಿಂದಲೆ ನೋಡಿದರೂ ಕಾಲು ನಡುಗುವಷ್ಟು ಭಯವಾಗುತ್ತದೆ. ಸಾಮಾನ್ಯವಾಗಿ ಸಿಂಹ, ಹುಲಿಯಂತಹ ಕಾಡ ಪ್ರಾಣಿಗಳನ್ನು ಮೃಗಾಲಯಗಳಲ್ಲಿ ನೋಡುತ್ತೇವೆ. ಗೂಡಿನಲ್ಲಿ ಬಂಧಿಯಾಗಿರುವ ಪ್ರಾಣಿ ಮತ್ತು ಅವುಗಳ ಆರ್ಭಟವನ್ನು ನೋಡಿಯೇ ಗಾಬರಿಯಾಗುತ್ತದೆ. ಹೀಗಿದ್ದಾಗ ಇಲ್ಲೊಬ್ಬ ವ್ಯಕ್ತಿ ಸಿಂಹವೊಂದನ್ನು ಸಾಕಿದ್ದಾರೆ. ಅಲ್ಲದೆ ಅದರರೊಟ್ಟಿಗೆ ಅನ್ಯೋನ್ಯವಾದ ಸ್ನೇಹ ಬೆಳೆಸಿದ್ದಾರೆ. ಅದೆಷ್ಟರಮಟ್ಟಿಗೆ ಎಂದರೆ ಗೂಡಿನ ಗೇಟನ್ನು ತೆರೆದ ತಕ್ಷಣ ಸಿಂಹ ವ್ಯಕ್ತಿಯ ಮೈಮೇಲೆ ಎರಗಿ ಅದರದೇ ರೀತಿಯಲ್ಲಿ ಮುದ್ದಿಸುತ್ತದೆ. ಅದರ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ನಾಯಿಮರಿಯಂತೆ ಸಿಂಹವನ್ನು ಎತ್ತಿ ಆಡಿಸುವುದನ್ನು ಕಂಡು ನೆಟ್ಟಿಗರು ಬೆರಗಾಗಿದ್ದಾರೆ. ಇನ್ನೂ ಕೆಲವರು ಈ ಭಯಾನಕ ವೀಡಿಯೋ ನೋಡಿ ಸಿಂಹ ವ್ಯಕ್ತಿಯ ಮೇಲೆ ದಾಳಿ ನಡೆಸಿದೆ ಎಂದುಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾದ ಕಲಹರಿ ಮರುಭೂಮಿಯಲ್ಲಿನ ಮೀಸಲು ಪ್ರದೇಶದಲ್ಲಿ ಈ ವೀಡಿಯೋವನ್ನು ಸೆರೆಹಿಡಿಯಲಾಗಿದೆ. ವಾಲ್​ ಎನ್ನುವ ವ್ಯಕ್ತಿ ಸಿಂಹವನ್ನು ಸಾಕಿದ್ದು ಅದಕ್ಕೆ ಸಿರ್ಗಾ ಎಂದು ನಾಮಕರಣ ಮಾಡಿದ್ದಾರೆ. ಸಿರ್ಗಾಗೆ 9 ವರ್ಷ ವಯಸ್ಸು. ತಾವು ಸಾಕಿದ ಪ್ರೀತಿಯ ಸಿರ್ಗಾದ ಇನ್ಸ್ಟಾಗ್ರಾಮ್​ ಖಾತೆಯನ್ನೂ ತೆರೆದಿದ್ದಾರೆ. ಸಿರ್ಗಾಥೆಲಿಯೊನೆಸ್​ ಎನ್ನುವ ಹೆಸರಿನ ಪೇಜ್​ಅನ್ನು ತೆರೆದಿದ್ದಾರೆ. ಆಗಾಗ ಅದರಲ್ಲಿ ಸಿರ್ಗಾದ ಫೋಟೋ, ವೀಡಿಯೋಗಳನ್ನು ಹಂಚಿಕೊಳ್ಳುತ್ತಾರೆ.

View this post on Instagram

A post shared by Sirga (@sirgathelioness)

ಸಿರ್ಗಾದ ಇನ್ಸ್ಟಾಗ್ರಾಮ್​ ಅಕೌಂಟ್​ಗೆ 78 ಸಾವಿರ ಫಾಲೋವರ್ಸ್​ ಇದ್ದಾರೆ. ಸದ್ಯ ಕಲಹರಿ ಮರುಭೂಮಿಯಲ್ಲಿ ಸಿರ್ಗಾನ ಓಡಾಟ, ಅದರ ದಿನನಿತ್ಯದ ಜೀವನದ ಕುರಿತು ಕೆಲವು ವೀಡಿಯೋ ತುಣುಕುಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಗೇಟನ್ನು ತೆರೆದ ತಕ್ಷಣ ಪ್ರೀತಿಯಿಂದ ತನ್ನ ಮಾಲೀಕನ ಮೇಲೆ ಹಾರುವ ವೀಡಿಯೋ ಸಖತ್​ ವೈರಲ್​ ಆಗಿದೆ. ಸದ್ಯ ವೀಡಿಯೋ 2,700ಕ್ಕೆ ಹೆಚ್ಚು ಲೈಕ್ಸ್​ ಪಡೆದಿದೆ.

ಇದನ್ನೂ ಓದಿ:

Viral Video: ಭರ್ಜರಿ ನೃತ್ಯದ ಮೂಲಕ ನೆಟ್ಟಿಗರ ಮನಗೆದ್ದ 63 ವರ್ಷದ ಮಹಿಳೆ; ವಿಡಿಯೋ ನೋಡಿ

ನಾಯಿಗಳ ಮೇಲೆ ಕೋತಿಗಳ ಸೇಡು: ಒಂದೇ ತಿಂಗಳಿನಲ್ಲಿ 250 ನಾಯಿಗಳನ್ನು ಹತ್ಯೆಗೈದ ಕೋತಿಗಳ ಹಿಂಡು

ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!