AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

viral video: ಗೂಡಿನ ಗೇಟ್​ ತೆರೆದ ತಕ್ಷಣ ಮಾಲೀಕನ ಮೇಲೆ ಎರಗಿ ಮುದ್ದಿಸಿದ ಸಿಂಹ: ಬೆರಗಾದ ನಟ್ಟಿಗರು

ನಾಯಿಮರಿಯಂತೆ ಸಿಂಹವನ್ನು ಎತ್ತಿ ಆಡಿಸುವುದನ್ನು ಕಂಡು ನೆಟ್ಟಿಗರು ಬೆರಗಾಗಿದ್ದಾರೆ. ಇನ್ನೂ ಕೆಲವರು ಈ ಭಯಾನಕ ವೀಡಿಯೋ ನೋಡಿ ಸಿಂಹ ವ್ಯಕ್ತಿಯ ಮೇಲೆ ದಾಳಿ ನಡೆಸಿದೆ ಎಂದುಕೊಂಡಿದ್ದಾರೆ.

viral video: ಗೂಡಿನ ಗೇಟ್​ ತೆರೆದ ತಕ್ಷಣ ಮಾಲೀಕನ ಮೇಲೆ ಎರಗಿ ಮುದ್ದಿಸಿದ ಸಿಂಹ: ಬೆರಗಾದ ನಟ್ಟಿಗರು
ವೀಡಿಯೋದಿಂದ ಸೆರೆಹಿಡಿಯಲಾದ ಚಿತ್ರ
TV9 Web
| Edited By: |

Updated on: Dec 19, 2021 | 11:48 AM

Share

ಕಾಡು ಪ್ರಾಣಿಗಳನ್ನು ದೂರದಿಂದಲೆ ನೋಡಿದರೂ ಕಾಲು ನಡುಗುವಷ್ಟು ಭಯವಾಗುತ್ತದೆ. ಸಾಮಾನ್ಯವಾಗಿ ಸಿಂಹ, ಹುಲಿಯಂತಹ ಕಾಡ ಪ್ರಾಣಿಗಳನ್ನು ಮೃಗಾಲಯಗಳಲ್ಲಿ ನೋಡುತ್ತೇವೆ. ಗೂಡಿನಲ್ಲಿ ಬಂಧಿಯಾಗಿರುವ ಪ್ರಾಣಿ ಮತ್ತು ಅವುಗಳ ಆರ್ಭಟವನ್ನು ನೋಡಿಯೇ ಗಾಬರಿಯಾಗುತ್ತದೆ. ಹೀಗಿದ್ದಾಗ ಇಲ್ಲೊಬ್ಬ ವ್ಯಕ್ತಿ ಸಿಂಹವೊಂದನ್ನು ಸಾಕಿದ್ದಾರೆ. ಅಲ್ಲದೆ ಅದರರೊಟ್ಟಿಗೆ ಅನ್ಯೋನ್ಯವಾದ ಸ್ನೇಹ ಬೆಳೆಸಿದ್ದಾರೆ. ಅದೆಷ್ಟರಮಟ್ಟಿಗೆ ಎಂದರೆ ಗೂಡಿನ ಗೇಟನ್ನು ತೆರೆದ ತಕ್ಷಣ ಸಿಂಹ ವ್ಯಕ್ತಿಯ ಮೈಮೇಲೆ ಎರಗಿ ಅದರದೇ ರೀತಿಯಲ್ಲಿ ಮುದ್ದಿಸುತ್ತದೆ. ಅದರ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ನಾಯಿಮರಿಯಂತೆ ಸಿಂಹವನ್ನು ಎತ್ತಿ ಆಡಿಸುವುದನ್ನು ಕಂಡು ನೆಟ್ಟಿಗರು ಬೆರಗಾಗಿದ್ದಾರೆ. ಇನ್ನೂ ಕೆಲವರು ಈ ಭಯಾನಕ ವೀಡಿಯೋ ನೋಡಿ ಸಿಂಹ ವ್ಯಕ್ತಿಯ ಮೇಲೆ ದಾಳಿ ನಡೆಸಿದೆ ಎಂದುಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾದ ಕಲಹರಿ ಮರುಭೂಮಿಯಲ್ಲಿನ ಮೀಸಲು ಪ್ರದೇಶದಲ್ಲಿ ಈ ವೀಡಿಯೋವನ್ನು ಸೆರೆಹಿಡಿಯಲಾಗಿದೆ. ವಾಲ್​ ಎನ್ನುವ ವ್ಯಕ್ತಿ ಸಿಂಹವನ್ನು ಸಾಕಿದ್ದು ಅದಕ್ಕೆ ಸಿರ್ಗಾ ಎಂದು ನಾಮಕರಣ ಮಾಡಿದ್ದಾರೆ. ಸಿರ್ಗಾಗೆ 9 ವರ್ಷ ವಯಸ್ಸು. ತಾವು ಸಾಕಿದ ಪ್ರೀತಿಯ ಸಿರ್ಗಾದ ಇನ್ಸ್ಟಾಗ್ರಾಮ್​ ಖಾತೆಯನ್ನೂ ತೆರೆದಿದ್ದಾರೆ. ಸಿರ್ಗಾಥೆಲಿಯೊನೆಸ್​ ಎನ್ನುವ ಹೆಸರಿನ ಪೇಜ್​ಅನ್ನು ತೆರೆದಿದ್ದಾರೆ. ಆಗಾಗ ಅದರಲ್ಲಿ ಸಿರ್ಗಾದ ಫೋಟೋ, ವೀಡಿಯೋಗಳನ್ನು ಹಂಚಿಕೊಳ್ಳುತ್ತಾರೆ.

View this post on Instagram

A post shared by Sirga (@sirgathelioness)

ಸಿರ್ಗಾದ ಇನ್ಸ್ಟಾಗ್ರಾಮ್​ ಅಕೌಂಟ್​ಗೆ 78 ಸಾವಿರ ಫಾಲೋವರ್ಸ್​ ಇದ್ದಾರೆ. ಸದ್ಯ ಕಲಹರಿ ಮರುಭೂಮಿಯಲ್ಲಿ ಸಿರ್ಗಾನ ಓಡಾಟ, ಅದರ ದಿನನಿತ್ಯದ ಜೀವನದ ಕುರಿತು ಕೆಲವು ವೀಡಿಯೋ ತುಣುಕುಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಗೇಟನ್ನು ತೆರೆದ ತಕ್ಷಣ ಪ್ರೀತಿಯಿಂದ ತನ್ನ ಮಾಲೀಕನ ಮೇಲೆ ಹಾರುವ ವೀಡಿಯೋ ಸಖತ್​ ವೈರಲ್​ ಆಗಿದೆ. ಸದ್ಯ ವೀಡಿಯೋ 2,700ಕ್ಕೆ ಹೆಚ್ಚು ಲೈಕ್ಸ್​ ಪಡೆದಿದೆ.

ಇದನ್ನೂ ಓದಿ:

Viral Video: ಭರ್ಜರಿ ನೃತ್ಯದ ಮೂಲಕ ನೆಟ್ಟಿಗರ ಮನಗೆದ್ದ 63 ವರ್ಷದ ಮಹಿಳೆ; ವಿಡಿಯೋ ನೋಡಿ

ನಾಯಿಗಳ ಮೇಲೆ ಕೋತಿಗಳ ಸೇಡು: ಒಂದೇ ತಿಂಗಳಿನಲ್ಲಿ 250 ನಾಯಿಗಳನ್ನು ಹತ್ಯೆಗೈದ ಕೋತಿಗಳ ಹಿಂಡು

ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರತದ ಸ್ಫೋಟಕ ದಾಂಡಿಗ ನಾಯಕ
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರತದ ಸ್ಫೋಟಕ ದಾಂಡಿಗ ನಾಯಕ
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?