AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ‘ಅಯ್ಯೋ, ಮಳೆ ಇದೆ ಬಾ ಇಲ್ಲಿ ಕೊಡೆಯೊಳಗೆ’

Dog Love : ಮಳೆ ಬಂದರೆ ಮೊದಲು ಎಲ್ಲಿ ನಿಲ್ಲಲು ಆಶ್ರಯ ಸಿಕ್ಕೀತು ಎಂದು ಜಾಗ ಹುಡುಕುತ್ತೇವೆ, ಅದಕ್ಕೆ ನಾವು ‘ದೊಡ್ಡವರು’. ಆದರೆ ಮಕ್ಕಳು? ಈ ವಿಡಿಯೋ ನೋಡಿ.

Viral: ‘ಅಯ್ಯೋ, ಮಳೆ ಇದೆ ಬಾ ಇಲ್ಲಿ ಕೊಡೆಯೊಳಗೆ’
‘ಶೀತ ಆಗತ್ತೆ ನೆನೀಬಾರದು ಬಾ ಇಲ್ಲಿ‘
ಶ್ರೀದೇವಿ ಕಳಸದ
|

Updated on: Aug 12, 2022 | 10:31 AM

Share

Viral : ಮಕ್ಕಳ ಮನಸೇ ಹಾಗೆ. ಪ್ರೀತಿ, ಕಾಳಜಿ, ಅಂತಃಕರಣ, ಬೆರಗು, ಮುಗ್ಧತೆ ಬಿಟ್ಟರೆ ಬೇರೇನೂ ಅಲ್ಲಿನ್ನೂ ಮೊಳೆತಿರುವುದಿಲ್ಲ. ತಮಗನಿಸಿದ್ದನ್ನು ಮಾಡಲು ಯಾರ ಅನುಮತಿಯನ್ನೂ ಕೇಳುವುದಿಲ್ಲ. ಈಗಿಲ್ಲಿ ನೋಡಿ ರಾತ್ರಿ ಮಳೆ ಸುರಿಯುತ್ತಿದೆ. ರೇನ್​ಕೋಟ್ ಹಾಕಿಕೊಂಡ ಈ ಪುಟ್ಟ ಹುಡುಗಿಯೊಬ್ಬಳು ನಾಯಿಯೊಂದಕ್ಕೆ ತನ್ನ ಕೊಡೆ ಹಿಡಿದು ಮಳೆಯಿಂದ ರಕ್ಷಿಸಲು ಪ್ರಯತ್ನಿಸುತ್ತಿದ್ದಾಳೆ. ಹೃದಯಸ್ಪರ್ಶಿಯಾದ ಈ ವಿಡಿಯೋ 6.2 ಮಿಲಿಯನ್​ ನೆಟ್ಟಿಗರ ಮನಸ್ಸನ್ನು ಕದ್ದಿದೆ.  4.3ಸಾವಿರ ನೆಟ್ಟಿಗರು ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಹಂಚಿಕೊಂಡವರು ತನ್ಸು ಎಗೆನ್​ ಎಂಬ ಟ್ವಿಟರ್ ಖಾತೆದಾರರು. ಆಗಾಗ ಇವರು ಇಂಥ ಅಪರೂಪದ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುವುದನ್ನು ಗಮನಿಸಿರಬಹುದು.

‘ಹಣದ ವ್ಯಾಮೋಹ, ದುರಾಸೆ, ದ್ವೇಷ, ಸಾಮಾಜಿಕ ಕಟ್ಟಳೆಗಳು, ಗಡಿಗಳು ಇಲ್ಲದಲ್ಲಿ ಹೇಗೆ ಪ್ರೀತಿ ಮತ್ತು ಸ್ವಾತಂತ್ರ್ಯ ಅರಳುತ್ತದೆ ನೋಡಿ, ಜಗತ್ತು ಇರಬೇಕಾದದ್ದು ಹೀಗೆ’ ಆನಂದ ಎನ್ನುವ ಟ್ವಿಟರ್ ಖಾತೆದಾರರು ಈ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ದೈನಂದಿನ ಜಂಜಡಗಳಲ್ಲಿ ಮತ್ತು ಸ್ವಕೇಂದ್ರಿತ ಮನಸ್ಥಿತಿಗಳಲ್ಲಿ ಕಳೆದುಹೋಗುವವರನ್ನು ಹಿಡಿದು ನಿಲ್ಲಿಸಿ ಕ್ಷಣಮಾತ್ರವಾದರೂ ಪ್ರೀತಿ, ಮಾನವೀಯತೆಯ ಬಗ್ಗೆ ಯೋಚಿಸುವಂತೆ ಮಾಡುತ್ತವೆ ಮಕ್ಕಳ, ಪ್ರಾಣಿಗಳ ಇಂಥ ವಿಡಿಯೋಗಳು.

ಮತ್ತಷ್ಟು ಇಂಥ ವೈರಲ್ ವಿಡಿಯೋಗಳಿಗಾಗಿ ಕ್ಲಿಕ್ ಮಾಡಿ

Follow Us
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು