AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗನಿಗಾಗಿ ಗುಜರಿ ವಸ್ತುಗಳಿಂದ ನಾಲ್ಕು ಚಕ್ರದ ವಾಹನ ತಯಾರಿಸಿದ ವ್ಯಕ್ತಿ : ವಾಹನ ಮೆಚ್ಚಿಕೊಂಡ ಆನಂದ್​ ಮಹೀಂದ್ರಾರಿಂದ ಬೊಲೇರೋ ಗಿಫ್ಟ್

ಆನಂದ್​ ಮಹಿಂದ್ರಾ ಅವರು ಈ ವಾಹನವನ್ನು ನೋಡಿ ಮೆಚ್ಚಿಕೊಂಡಿದ್ದು, ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಮ್ಮ ಜನರ ಕ್ರಿಯೇಟಿವಿಟಿ, ಜಾಣ್ಮೆಯನ್ನು ನಾನು ಸದಾ ಮೆಚ್ಚುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಮಗನಿಗಾಗಿ ಗುಜರಿ ವಸ್ತುಗಳಿಂದ ನಾಲ್ಕು ಚಕ್ರದ ವಾಹನ ತಯಾರಿಸಿದ ವ್ಯಕ್ತಿ : ವಾಹನ ಮೆಚ್ಚಿಕೊಂಡ ಆನಂದ್​ ಮಹೀಂದ್ರಾರಿಂದ ಬೊಲೇರೋ ಗಿಫ್ಟ್
ಆನಂದ್​ ಮಹೀಂದ್ರಾ
TV9 Web
| Updated By: Pavitra Bhat Jigalemane

Updated on:Dec 23, 2021 | 11:09 AM

Share

ಮಹಾರಾಷ್ಟ್ರದ ವ್ಯಕ್ತಿಯೊಬ್ಬರು ಗುಜರಿ ವಸ್ತುಗಳನ್ನು ಬಳಸಿ ನಾಲ್ಕು ಚಕ್ರದ ವಾಹನವನ್ನು ತಯಾರಿಸಿದ್ದಾರೆ. ಹಳೆಯ ಕಾರಿನ ಭಾಗಗಳನ್ನು ಬಳಸಿ ಈ ವಾಹನವನ್ನು ತಯಾರಿಸಲಾಗಿದೆ. ಮಗನ ಆಸೆ ಪೂರೈಸಲು ತಯಾರಿಸಿದ ಈ ವಾಹನ ಈಗ ಮಹೇಂದ್ರ ಗ್ರುಪ್​ ಅಧ್ಯಕ್ಷ ಆನಂದ್​ ಮಹೀಂದ್ರಾ ಅವರ ಗಮನ ಸೆಳೆದಿದೆ. ಹಿಸ್ಟಾರಿಕಾನೋ ಎನ್ನುವ ಯುಟ್ಯೂಬ್ ಚಾನೆಲ್​ ಪ್ರಕಾರ ಈ ವಾಹನವನ್ನು ದತ್ತಾತ್ರೆಯ ಲೊಹರ್​ ಎನ್ನುವ ವ್ಯಕ್ತಿ ತಯಾರಿಸಿದ್ದಾರೆ. ಅಲ್ಪ ವಿದ್ಯಾಭ್ಯಾಸವನ್ನು ಹೊಂದಿದ್ದ ದತ್ತಾತ್ರೆಯ ಎನ್ನುವವರು ಮಗನ ಗಾಡಿಯ ಆಸೆ ಪೂರೈಸಲು ವಿಭಿನ್ನವಾಗಿ ಯೋಚಿಸಿ, ಗುಜರಿ ವಸ್ತುಗಳಿಂದ ವಾಹನ ತಯಾರಿಸಿದ್ದಾರೆ. ಆನಂದ್​ ಮಹಿಂದ್ರಾ ಅವರು ಈ ವಾಹನವನ್ನು ನೋಡಿ ಮೆಚ್ಚಿಕೊಂಡಿದ್ದು, ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಮ್ಮ ಜನರ ಕ್ರಿಯೇಟಿವಿಟಿ, ಜಾಣ್ಮೆಯನ್ನು ನಾನು ಸದಾ ಮೆಚ್ಚುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಮಹಾರಾಷ್ಟ್ರದ ದೇವರಾಷ್ಟ್ರ ಗ್ರಾಮದ ದತ್ತಾತ್ರೆಯ ಲೋಹರ್​ ಅವರು ತಯಾರಿಸಿದ ವಾಹನದ ಕುರಿತು 45 ಸೆಕೆಂಡ್​ಗಳ ವಿಡಿಯೋವನ್ನು ಹಂಚಿಕೊಂಡಿದ್ದಾರೆ ವೀಡಿಯೋದಲ್ಲಿ ವಾಹನವು ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವುದನ್ನು ತೋರಿಸಲಾಗಿದೆ. ಕೇವಲ 60 ಸಾವಿರ ರೂ.ಗಳಲ್ಲಿ ತಯಾರಾದ ಈ ವಾಹನವು ಸಾಮಾನ್ಯವಾಗಿ ದ್ವಿಚಕ್ರ ವಾಹನಗಳಲ್ಲಿ ಕಂಡುಬರುವ ಕಿಕ್​ ಸ್ಟಾರ್ಟ್​ ವಿಧಾನವನ್ನು ಹೊಂದಿದೆ.

ಇನ್ನೊಂದು ವೀಡಿಯೋದಲ್ಲಿ ದತ್ತಾತ್ರೆಯ ಅವರು ನಿರ್ಮಿಸಿದ ಗಾಡಿಯು ಉಳಿದ ವಾಹನಗಳಂತೆ ನಿಯಮವನ್ನು ಹೊಂದಿಲ್ಲದ ಕಾರಣ ಸ್ಥಳೀಯ ಅಧಿಕಾರಿಗಳು ರಸ್ತೆಯಲ್ಲಿ ಸಂಚರಿಸಲು ಅವಕಾಶ ನೀಡಲಿಲ್ಲ. ಈ ಕಾರಣಕ್ಕಾಗಿ ಆನಂದ್​ ಮಹೀಂದ್ರಾ ಅವರು ಬೊಲೆರೋವನ್ನು ಉಡುಗೊರೆಯಾಗಿ ನೀಡಿದ್ದಾರೆ. ಅಲ್ಲದೆ ದತ್ತಾತ್ರೆಯ ಅವರು ತಯಾರಿಸಿದ ವಾಹನವನ್ನು ಮಹೀಂದ್ರಾ ರಿಸರ್ಚ್​ ವ್ಯಾಲಿಯಲ್ಲಿ ಇತರರಿಗೆ ಸ್ಪೂರ್ತಿಯಾಗುವಂತೆ ಪ್ರದರ್ಶಿಲಾಗುವುದು ಎಂದು ತಿಳಿಸಿದ್ದಾರೆ. ಆನಂದ್​ ಮಹೀಂದ್ರಾ ಅವರ ಟ್ವೀಟ್​ ನೆಟ್ಟಿಗರನ್ನು ಆಕರ್ಷಿಸಿದ್ದು 14 ಸಾವಿರಕ್ಕೂ ಹೆಚ್ಚು ಲೈಕ್​ ಮತ್ತು 1300ಕ್ಕೂ ಅಧಿಕ ರೀಟ್ವೀಟ್​ಗಳನ್ನು ಮಾಡಿದ್ದಾರೆ.

ಇದನ್ನೂ ಓದಿ:

Viral Video: ಕುಕ್ಕರ್​ನಲ್ಲಿ ಕಾಫಿ ತಯಾರಿಸಿದ ವ್ಯಕ್ತಿ: ವೀಡಿಯೋ ವೈರಲ್​

Published On - 11:06 am, Thu, 23 December 21

ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಯಶ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಯ್ತು ‘ರಾಮಾಯಣ’ ಸಿನಿಮಾ ಮೊದಲ ಗ್ಲಿಂಪ್ಸ್
ಯಶ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಯ್ತು ‘ರಾಮಾಯಣ’ ಸಿನಿಮಾ ಮೊದಲ ಗ್ಲಿಂಪ್ಸ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ
‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ
ಎಕ್ಸ್​ಟ್ರಾ ಕಾಫಿ ಕಪ್​ಗಾಗಿ ಗಲಾಟೆ: ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ!
ಎಕ್ಸ್​ಟ್ರಾ ಕಾಫಿ ಕಪ್​ಗಾಗಿ ಗಲಾಟೆ: ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ!
ಸುಖಾಸುಮ್ಮನೆ ಹೇಳಿಕೆ ನೀಡುವ ರಾಜಕಾರಣಿಗೆ ಯದುವೀರ್ ಮಾದರಿ
ಸುಖಾಸುಮ್ಮನೆ ಹೇಳಿಕೆ ನೀಡುವ ರಾಜಕಾರಣಿಗೆ ಯದುವೀರ್ ಮಾದರಿ
ಸ್ವಯಂ ನಿವೃತ್ತಿ ಬಗ್ಗೆ ಎಎಸ್​ಪಿ ನಾರಾಯಣ ಭರಮನಿ ಮೊದಲ ಪ್ರತಿಕ್ರಿಯೆ
ಸ್ವಯಂ ನಿವೃತ್ತಿ ಬಗ್ಗೆ ಎಎಸ್​ಪಿ ನಾರಾಯಣ ಭರಮನಿ ಮೊದಲ ಪ್ರತಿಕ್ರಿಯೆ
ಕೋವಿಡ್ ಲಸಿಕೆ ಪಡೆದವರಲ್ಲಿ ಹೃದಯಾಘಾತ ಅಪಾಯ ಕಡಿಮೆ: ಡಾ. ಮೋಹಿತ್ ಗುಪ್ತಾ
ಕೋವಿಡ್ ಲಸಿಕೆ ಪಡೆದವರಲ್ಲಿ ಹೃದಯಾಘಾತ ಅಪಾಯ ಕಡಿಮೆ: ಡಾ. ಮೋಹಿತ್ ಗುಪ್ತಾ