AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಬೈಕ್​​​ ಸುಟ್ಟು ಮಗನ ಬೈಕ್ ರೇಸಿಂಗ್ ಚಟಕ್ಕೆ ಬ್ರೇಕ್​​ ಹಾಕಿದ ಅಪ್ಪ

"ನನ್ನ ಮಗನನ್ನು ಕಳೆದುಕೊಳ್ಳಲು ನನಗೆ ಇಷ್ಟವಿಲ್ಲ. ಅದಕ್ಕಾಗಿ ಬೈಕ್ ಸುಟ್ಟು ಹಾಕಿದೆ. ಶಾಲೆಗೆ ಹೋಗಲು ಸುಲಭವಾಗಲಿ ಎಂದು ಬೈಕ್​ ಖರೀದಿಸಿದ್ದೆ, ಆದರೆ ಶಾಲೆಗೆ ಹೋಗದೆ ರಾತ್ರಿಯಾದರೂ ಮನೆಗೆ ಬಾರದೆ ಬೈಕ್ ರೇಸಿಂಗ್ ನಲ್ಲಿ ಪಾಲ್ಗೊಳ್ಳುತ್ತಿದ್ದ. ಆದ್ದರಿಂದ ಬೈಕ್ ನಾಶಪಡಿಸದೆ ತನಗೆ ಬೇರೆ ದಾರಿಯಿರಲಿಲ್ಲ" ಎಂದು ತಂದೆ ಹೇಳಿಕೊಂಡಿರುವುದು ವರದಿಯಾಗಿದೆ.

Viral Video: ಬೈಕ್​​​ ಸುಟ್ಟು ಮಗನ ಬೈಕ್ ರೇಸಿಂಗ್ ಚಟಕ್ಕೆ ಬ್ರೇಕ್​​ ಹಾಕಿದ ಅಪ್ಪ
ಅಕ್ಷತಾ ವರ್ಕಾಡಿ
|

Updated on:Oct 05, 2024 | 6:21 PM

Share

ಮಲೇಷ್ಯಾ: ಬೈಕ್ ರೇಸಿಂಗ್ ಬಗ್ಗೆ ಸಖತ್​​ ಕ್ರೇಜ್​ ಹೊಂದಿದ್ದ ತನ್ನ ಮಗ ಅಪಘಾತಕ್ಕೀಡಾಗಬಹುದೆಂಬ ಭಯದಿಂದ ತಂದೆ ಮಗನ ಬೈಕ್‌ಗೆ ಬೆಂಕಿ ಹಚ್ಚಿರುವ ಘಟನೆ ಸೆಂಟ್ರಲ್ ಮಲೇಷ್ಯಾದ ಕೌಲಾಲಂಪುರ್ ಬಳಿಯ ಶಾ ಆಲಂ ಎಂಬಲ್ಲಿ ನಡೆದಿದೆ. ತನ್ನ ಮಗನ ಸುರಕ್ಷತೆಗಾಗಿ ಬೈಕ್‌ಗೆ ಬೆಂಕಿ ಹಚ್ಚಿದ್ದು, ಬೈಕ್ ಸುಟ್ಟು ಹಾಕಿರುವ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ಭಾರೀ ವೈರಲ್​ ಆಗುತ್ತಿದೆ.

ತನ್ನ ಮಗನಿಗೆ ಶಾಲೆಗೆ ಹೋಗಲು ಸುಲಭವಾಗಲಿ ಎಂದು ತಂದೆ ಮೋಟಾರ್ಸೈಕಲ್ ಖರೀದಿಸಿದ್ದರು. ಆದರೆ, ಮಗ ಬೈಕ್ ರೇಸಿಂಗ್ ಚಟಕ್ಕೆ ಬಿದ್ದಾಗ ತಂದೆಗೆ ಭಯ ಶುರುವಾಗಿದೆ . ಅದರಲ್ಲೂ ರಾತ್ರಿ ಹೊತ್ತಿನಲ್ಲಿ ಮಗನ ಚಲನವಲನ ಆತನಿಗೆ ಅತೀವ ಆತಂಕವನ್ನುಂಟು ಮಾಡಿತ್ತು. ಮಗ ಶಾಲೆಗೆ ಹೋಗದೆ ರಾತ್ರಿಯಾದರೂ ಮನೆಗೆ ಬಾರದೆ ಬೈಕ್ ರೇಸಿಂಗ್ ನಲ್ಲಿ ಪಾಲ್ಗೊಳ್ಳುತ್ತಿರುವುದು ತಂದೆಗೆ ತಿಳಿದಿದೆ. ಈ ಕುರಿತು ಮನೆಯಲ್ಲಿ ತಂದೆ ಮಗನ ನಡುವೆ ಹಲವು ಬಾರಿ ಜಗಳವಾಗಿದೆ. ಆದರೆ ಪ್ರಯೋಜನವಾಗಲಿಲ್ಲ ಎಂಬ ಕಾರಣಕ್ಕೆ ಕೊನೆಯದಾಗಿ ತಂದೆ ಮಗನ ಬೈಕನ್ನು ಸುಟ್ಟು ಹಾಕಿರುವುದಾಗಿ ಸ್ಥಳೀಯ ಮಾಧ್ಯಮ ಸಿನ್ ಚ್ಯೂ ಡೈಲಿ ವರದಿ ಮಾಡಿದೆ.

ನನ್ನ ಮಗನನ್ನು ಕಳೆದುಕೊಳ್ಳಲು ನನಗೆ ಇಷ್ಟವಿಲ್ಲ. ಅದಕ್ಕಾಗಿ ಬೈಕ್ ಸುಟ್ಟು ಹಾಕಿದೆ. ತನ್ನ ಮತ್ತು ಮಗನ ನಡುವಿನ ಸಂಘರ್ಷಕ್ಕೆ ಮೋಟಾರ್‌ಸೈಕಲ್ ಪ್ರಮುಖ ಕಾರಣವಾಗಿದ್ದು, ಅದನ್ನು ನಾಶಪಡಿಸದೆ ತನಗೆ ಬೇರೆ ದಾರಿಯಿರಲಿಲ್ಲ ಎಂದು ತಂದೆ ಹೇಳಿಕೊಂಡಿರುವುದು ವರದಿಯಾಗಿದೆ.

ಇದನ್ನೂ ಓದಿ: ಬೇಕರಿಯ ಸ್ವೀಟ್ ಮೇಲೆ ಮಸ್ತಾಗಿ ಓಡಾಡುತ್ತಿರುವ ಇಲಿ, ಇಲ್ಲಿನ ಸಿಹಿ ತಿಂದ್ರೆ ನರಕ ಗ್ಯಾರಂಟಿ

ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣ ಬಳಕೆದಾರರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಂದು ವಿಭಾಗವು ತಂದೆಯ ಕಾರ್ಯವನ್ನು ಸಮರ್ಥಿಸಿಕೊಂಡರೆ, ಇದು ಹಾಗಲ್ಲ ಮತ್ತು ಮಗನನ್ನು ಸರಿಪಡಿಸಬೇಕಾಗಿತ್ತು ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. ತಂದೆ ಮತ್ತು ಮಗನ ನಡುವಿನ ಸಮಸ್ಯೆಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹಲವರು ಕಾಮೆಂಟ್​ನಲ್ಲಿ ಬರೆದುಕೊಂಡಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:19 pm, Sat, 5 October 24

ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ