AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ನೋ ಸ್ಪೇಯಿಂದ ಬೆಂಕಿ; ಹುಟ್ಟುಹಬ್ಬದ ಸಂಭ್ರಮವನ್ನು ಕಿತ್ತುಕೊಳ್ಳಬಹುದು ಜೋಕೆ

ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾಗ ಸ್ನೇಹಿತನ ಮುಖಕ್ಕೆ ಸ್ನೋ ಸ್ಪ್ರೇ ಮಾಡಿದಾಗ ಮುಖಕ್ಕೆ ಬೆಂಕಿ ಹತ್ತಿಕೊಂಡಿರುವ ಘಟನೆ ನಡೆದಿದೆ.

ಸ್ನೋ ಸ್ಪೇಯಿಂದ ಬೆಂಕಿ; ಹುಟ್ಟುಹಬ್ಬದ ಸಂಭ್ರಮವನ್ನು ಕಿತ್ತುಕೊಳ್ಳಬಹುದು ಜೋಕೆ
ಹುಟ್ಟು ಹಬ್ಬದ ಸಂಭ್ರಮದ ವೇಳೆ ಮುಖಕ್ಕೆ ಬೆಂಕಿ ತಗುಲಿದ್ದ ಚಿತ್ರ
shruti hegde
|

Updated on: Mar 26, 2021 | 12:07 PM

Share

ತಮ್ಮ ಆತ್ಮೀಯ ಸ್ನೇಹಿತನ ಹುಟ್ಟು ಹಬ್ಬದ ಸಂಭ್ರಮವನ್ನು ಆಚರಿಸುತ್ತಿರುವಾಗ ಹೃದಯ ಕದಡುವ ಘಟನೆಯೊಂದು ನಡೆದಿದೆ. ವ್ಯಕ್ತಿ ಕೇಕ್​ ಕತ್ತರಿಸಲೆಂದು ಬಾಗಿದಾಗ ಸ್ನೇಹಿತರು ಆತನ ಮುಖಕ್ಕೆ ಸ್ನೋ ಸ್ಪ್ರೇ ಮಾಡುತ್ತಾರೆ. ಅದೇ ವೇಳೆ ಮೇಣದ ಬತ್ತಿಗೆ ಹಚ್ಚಿದ್ದ ಬೆಂಕಿ ಸ್ನೋ ಸ್ಪ್ರೇಗೆ ಹಿಡಿದು ವ್ಯಕ್ತಿಯ ಮುಖಕ್ಕೆ ಬೆಂಕಿ ಹಚ್ಚಿಕೊಳ್ಳುವ ಭಯಾನಕ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. 

ಕಳೆದ ತಿಂಗಳು ಸ್ನೇಹಿತರೆಲ್ಲ ಕೂಡಿ ತಮ್ಮ ಆತ್ಮೀಯ ಸ್ನೇಹಿತನ ಹುಟ್ಟು ಹಬ್ಬದ ಆಚರಣೆಗೆಂದು ಕೇಕ್​ ಜೊತೆ ಮೇಣದ ಬತ್ತಿ ಹಚ್ಚಿ ದೀಪ ಬೆಳಗಿ ಸಕಲ ಸಿದ್ಧತೆ ಮಾಡಿಕೊಂಡಿರುತ್ತಾರೆ. ಇದೇ ವೇಳೆ ಕೇಕ್​ ಕತ್ತರಿಸಲೆಂದು ವ್ಯಕ್ತಿ ಬಾಗುತ್ತಿದ್ದಾಗ, ಖುಷಿಯಿಂದ ಸ್ನೇಹಿತರು ವ್ಯಕ್ತಿ ಮುಖಕ್ಕೆ ಸ್ನೋ ಸ್ಪ್ರೇ ಮಾಡುತ್ತಾರೆ. ಕೇಕ್​ ಪಕ್ಕದಲ್ಲಿ ಬೆಳಗಿದ್ದ ಮೇಣದ ಬತ್ತಿಯ ಬೆಂಕಿ ವ್ಯಕ್ತಿ ಮುಖಕ್ಕೆ ಎರಚಿದ್ದ ಸ್ನೋ ನೊರೆಗೆ ತಗಲುತ್ತದೆ.

ಮುಖಕ್ಕೆ ಬೆಂಕಿ ಹತ್ತಿದ ತಕ್ಷಣ ಆತನ ಸ್ನೇಹಿತರು ಸಹಾಯಕ್ಕಾಗಿ ಓಡುತ್ತಾರೆ. ತಡ ಮಾಡದೇ ಬೆಂಕಿ ಆರಿಸುತ್ತಾರೆ. ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಗಮನಿಸಿದ ಟ್ರಾವೆಲ್ ಬ್ಲಾಗರ್​ ‘ಪಾರ್ಟಿ ಸ್ನೋ ಸ್ಪ್ರೇ ಕಣ್ಣಿಗೆ ಒಳ್ಳೆಯದಲ್ಲದ ರಾಸಾಯನಿಕಗಳನ್ನು ಹೊಂದಿರುತ್ತದೆ. ಇದು ಕಣ್ಣಿನ ಕಿರಿಕಿರಿಯುಂಟು ಮಾಡುತ್ತದೆ. ಕಣ್ಣು ಉರಿಯಲು ಪ್ರಾರಂಭಿಸುತ್ತದೆ. ಈ ದಿನಗಳಲ್ಲಿ ಯುವ ಹುಡುಗರು ಮತ್ತು ಹುಡುಗಿಯರು ಪಾರ್ಟಿಗಳಲ್ಲಿ, ವಿಶೇಷವಾಗಿ ಜನ್ಮದಿನಗಳಲ್ಲಿ ಸ್ನೋ ಸ್ಪ್ರೇಗಳೊಂದಿಗೆ ಆಟವಾಡುತ್ತಾರೆ. ದೇಹಕ್ಕೆ ಸಿಂಪಡಿಸುತ್ತಾರೆ. ಪಾರ್ಟಿ ಸ್ಪ್ರೇಗಳು ಹೆಚ್ಚು ಉರಿಯುವ ರಾಸಾಯನಿಕಗಳನ್ನು ಹೊಂದಿರುವುದರಿಂದ ಅಪಾಯಕಾರಿ. ಆದ್ದರಿಂದ, ಅದನ್ನು ಬೆಂಕಿಯ ಬಳಿ ಸಿಂಪಡಿಸದಂತೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ’.

ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಲಾದ ವಿಡಿಯೋ ಇದೀಗ ಡಿಲಿಟ್​ ಆಗಿದೆ.

ಇದನ್ನೂ ಓದಿ: ಹೊತ್ತಿ ಉರಿದ ಕೊಟ್ಟಿಗೆ; ನೋಡನೋಡುತ್ತಲೇ ಸಜೀವ ದಹನವಾದ ಆಕಳು, ಕಲಬುರಗಿಯಲ್ಲಿ ಮನಕಲಕುವ ಘಟನೆ

ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!