AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ನೋ ಸ್ಪೇಯಿಂದ ಬೆಂಕಿ; ಹುಟ್ಟುಹಬ್ಬದ ಸಂಭ್ರಮವನ್ನು ಕಿತ್ತುಕೊಳ್ಳಬಹುದು ಜೋಕೆ

ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾಗ ಸ್ನೇಹಿತನ ಮುಖಕ್ಕೆ ಸ್ನೋ ಸ್ಪ್ರೇ ಮಾಡಿದಾಗ ಮುಖಕ್ಕೆ ಬೆಂಕಿ ಹತ್ತಿಕೊಂಡಿರುವ ಘಟನೆ ನಡೆದಿದೆ.

ಸ್ನೋ ಸ್ಪೇಯಿಂದ ಬೆಂಕಿ; ಹುಟ್ಟುಹಬ್ಬದ ಸಂಭ್ರಮವನ್ನು ಕಿತ್ತುಕೊಳ್ಳಬಹುದು ಜೋಕೆ
ಹುಟ್ಟು ಹಬ್ಬದ ಸಂಭ್ರಮದ ವೇಳೆ ಮುಖಕ್ಕೆ ಬೆಂಕಿ ತಗುಲಿದ್ದ ಚಿತ್ರ
shruti hegde
|

Updated on: Mar 26, 2021 | 12:07 PM

Share

ತಮ್ಮ ಆತ್ಮೀಯ ಸ್ನೇಹಿತನ ಹುಟ್ಟು ಹಬ್ಬದ ಸಂಭ್ರಮವನ್ನು ಆಚರಿಸುತ್ತಿರುವಾಗ ಹೃದಯ ಕದಡುವ ಘಟನೆಯೊಂದು ನಡೆದಿದೆ. ವ್ಯಕ್ತಿ ಕೇಕ್​ ಕತ್ತರಿಸಲೆಂದು ಬಾಗಿದಾಗ ಸ್ನೇಹಿತರು ಆತನ ಮುಖಕ್ಕೆ ಸ್ನೋ ಸ್ಪ್ರೇ ಮಾಡುತ್ತಾರೆ. ಅದೇ ವೇಳೆ ಮೇಣದ ಬತ್ತಿಗೆ ಹಚ್ಚಿದ್ದ ಬೆಂಕಿ ಸ್ನೋ ಸ್ಪ್ರೇಗೆ ಹಿಡಿದು ವ್ಯಕ್ತಿಯ ಮುಖಕ್ಕೆ ಬೆಂಕಿ ಹಚ್ಚಿಕೊಳ್ಳುವ ಭಯಾನಕ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. 

ಕಳೆದ ತಿಂಗಳು ಸ್ನೇಹಿತರೆಲ್ಲ ಕೂಡಿ ತಮ್ಮ ಆತ್ಮೀಯ ಸ್ನೇಹಿತನ ಹುಟ್ಟು ಹಬ್ಬದ ಆಚರಣೆಗೆಂದು ಕೇಕ್​ ಜೊತೆ ಮೇಣದ ಬತ್ತಿ ಹಚ್ಚಿ ದೀಪ ಬೆಳಗಿ ಸಕಲ ಸಿದ್ಧತೆ ಮಾಡಿಕೊಂಡಿರುತ್ತಾರೆ. ಇದೇ ವೇಳೆ ಕೇಕ್​ ಕತ್ತರಿಸಲೆಂದು ವ್ಯಕ್ತಿ ಬಾಗುತ್ತಿದ್ದಾಗ, ಖುಷಿಯಿಂದ ಸ್ನೇಹಿತರು ವ್ಯಕ್ತಿ ಮುಖಕ್ಕೆ ಸ್ನೋ ಸ್ಪ್ರೇ ಮಾಡುತ್ತಾರೆ. ಕೇಕ್​ ಪಕ್ಕದಲ್ಲಿ ಬೆಳಗಿದ್ದ ಮೇಣದ ಬತ್ತಿಯ ಬೆಂಕಿ ವ್ಯಕ್ತಿ ಮುಖಕ್ಕೆ ಎರಚಿದ್ದ ಸ್ನೋ ನೊರೆಗೆ ತಗಲುತ್ತದೆ.

ಮುಖಕ್ಕೆ ಬೆಂಕಿ ಹತ್ತಿದ ತಕ್ಷಣ ಆತನ ಸ್ನೇಹಿತರು ಸಹಾಯಕ್ಕಾಗಿ ಓಡುತ್ತಾರೆ. ತಡ ಮಾಡದೇ ಬೆಂಕಿ ಆರಿಸುತ್ತಾರೆ. ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಗಮನಿಸಿದ ಟ್ರಾವೆಲ್ ಬ್ಲಾಗರ್​ ‘ಪಾರ್ಟಿ ಸ್ನೋ ಸ್ಪ್ರೇ ಕಣ್ಣಿಗೆ ಒಳ್ಳೆಯದಲ್ಲದ ರಾಸಾಯನಿಕಗಳನ್ನು ಹೊಂದಿರುತ್ತದೆ. ಇದು ಕಣ್ಣಿನ ಕಿರಿಕಿರಿಯುಂಟು ಮಾಡುತ್ತದೆ. ಕಣ್ಣು ಉರಿಯಲು ಪ್ರಾರಂಭಿಸುತ್ತದೆ. ಈ ದಿನಗಳಲ್ಲಿ ಯುವ ಹುಡುಗರು ಮತ್ತು ಹುಡುಗಿಯರು ಪಾರ್ಟಿಗಳಲ್ಲಿ, ವಿಶೇಷವಾಗಿ ಜನ್ಮದಿನಗಳಲ್ಲಿ ಸ್ನೋ ಸ್ಪ್ರೇಗಳೊಂದಿಗೆ ಆಟವಾಡುತ್ತಾರೆ. ದೇಹಕ್ಕೆ ಸಿಂಪಡಿಸುತ್ತಾರೆ. ಪಾರ್ಟಿ ಸ್ಪ್ರೇಗಳು ಹೆಚ್ಚು ಉರಿಯುವ ರಾಸಾಯನಿಕಗಳನ್ನು ಹೊಂದಿರುವುದರಿಂದ ಅಪಾಯಕಾರಿ. ಆದ್ದರಿಂದ, ಅದನ್ನು ಬೆಂಕಿಯ ಬಳಿ ಸಿಂಪಡಿಸದಂತೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ’.

ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಲಾದ ವಿಡಿಯೋ ಇದೀಗ ಡಿಲಿಟ್​ ಆಗಿದೆ.

ಇದನ್ನೂ ಓದಿ: ಹೊತ್ತಿ ಉರಿದ ಕೊಟ್ಟಿಗೆ; ನೋಡನೋಡುತ್ತಲೇ ಸಜೀವ ದಹನವಾದ ಆಕಳು, ಕಲಬುರಗಿಯಲ್ಲಿ ಮನಕಲಕುವ ಘಟನೆ

Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು