Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಯಿಯನ್ನು ಕ್ರಿಸ್​ಮಸ್​ ಗಿಫ್ಟ್​ನಂತೆ ಪ್ಯಾಕ್​ ಮಾಡಿದ ಮಾಲೀಕ: ಕ್ಯೂಟ್​ ಡಾಗ್​ ವೀಡಿಯೋ ವೈರಲ್​​

ನಾಯಿಯೊಂದನ್ನು ಕ್ರಿಸ್​ಮಸ್​ ಗಿಫ್ಟ್​ ರೀತಿ ವ್ಯಕ್ತಿಯೊಬ್ಬ ಸುತ್ತುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ಟಿಕ್ ಟಾಕ್​ ವೀಡಿಯೋವನ್ನು ಸ್ಕೂಟಿ ಬಗ್​ ಎನ್ನುವ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ.

ನಾಯಿಯನ್ನು ಕ್ರಿಸ್​ಮಸ್​ ಗಿಫ್ಟ್​ನಂತೆ ಪ್ಯಾಕ್​ ಮಾಡಿದ ಮಾಲೀಕ: ಕ್ಯೂಟ್​ ಡಾಗ್​ ವೀಡಿಯೋ ವೈರಲ್​​
ಗ್ರೇಸಿ ಎನ್ನುವ ನಾಯಿ
Follow us
TV9 Web
| Updated By: Pavitra Bhat Jigalemane

Updated on: Dec 25, 2021 | 3:06 PM

ಕ್ರಿಸ್​ಮಸ್​  ಎಲ್ಲೆಡೆ ಹೊಸ ಸಂಭ್ರಮವನ್ನು ತುಂಬಿದೆ. ಕ್ರಿಶ್ಚಿಯನ್​ ಸಮುದಾಯದ ವಿಶೇಷ ದಿನವಾದ ಕ್ರಿಸ್​ಮಸ್​ ಉಡುಗೊರೆಗಳನ್ನು ವಿನಿಮಯ ಮಾಡಿಕೊಂಡು ಪರಸ್ಪರ ಆಶೀರ್ವಾದ ಪಡೆದುಕೊಳ್ಳುವ ಸಮಯ. ಈ ಶುಭ ಸಮಯದಲ್ಲಿ ನಾಯಿಯೊಂದನ್ನು ಕ್ರಿಸ್​ಮಸ್​ ಗಿಫ್ಟ್​ ರೀತಿ ವ್ಯಕ್ತಿಯೊಬ್ಬ ಸುತ್ತುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ಟಿಕ್ ಟಾಕ್​ ವೀಡಿಯೋವನ್ನು ಸ್ಕೂಟಿ ಬಗ್​ ಎನ್ನುವ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ. ಮುದ್ದಾದ ನಾಯಿ ಗಿಫ್ಟ್​ ಪ್ಯಾಕ್​ ಮಾಡುವ ರೀತಿ ಪೇಪರ್​ ಅನ್ನು ಅದರ ಮೈಗೆ ಸುತ್ತಿದರೂ ಸುಮ್ಮನೆ ಮಲಗಿಕೊಳ್ಳುವುದನ್ನು ಕಂಡು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಈ ವೀಡಿಯೋ  40 ಮಿಲಿಯನ್​ಗೂ ಅಧಿಕ ವೀಕ್ಷಣೆ ಪಡೆದಿದ್ದು, 4.7 ಮಿಲಿಯನ್​ ಲೈಕ್ಸ್​ ಅನ್ನು ಪಡೆದಿದೆ.

ನಾಯಿಯ ಮಾಲೀಕ ಸ್ಕಾಟ್​ ಹಬಾರ್ಡ್​ ಎನ್ನುವವರು ಈ ವಿಡೀಯೊವನ್ನು ಹಂಚಿಕೊಂಡಿದ್ದಾರೆ. ಗ್ರೇಸಿ ಎಂದು ಹೆಸರಿಟ್ಟಿರುವ ಈ ನಾಯಿಗೆ 8 ವರ್ಷ.   ವೀಡಿಯೋದಲ್ಲಿ ಮೊದಲು ಬಣ್ಣದ ಚಿತ್ರವಿರುವ ಪೇಪರ್​ ಗಮ್​ಟೇಪ್​, ಕತ್ತರಿ ಮತ್ತು ಕೆಂಪು ಬಣ್ಣದ ಹೂಗಳನ್ನು ನೆಲಕ್ಕೆ ಹಾಕಲಾಗುತ್ತದೆ. ಅದಕ್ಕೆ ನಾಯಿ ಮುದ್ದಗಿ ನಗುವನ್ನು ಬೀರುತ್ತದೆ. ನಂತರ ನಾಯಿಯನ್ನು ನೆಲಕ್ಕೆ ಮಲಗಿಸಿಕೊಂಡು ಪೇಪರ್​ನಲ್ಲಿ ಸುತ್ತುತ್ತಾರೆ. ಬಳಿಕ ಅದಕ್ಕೆ ಗಪ್​ಟೇಪ್​ ಹಚ್ಚಲಾಗುತ್ತದೆ. ನಂತರ ಕೊನೆಯದಾಗಿ ಕೆಮಪು ಬಣ್ಣದ ಹೂವನ್ನು ನಾಯಿಯ ತಲೆಯ ಮೇಲೆ ಇರಿಸಲಾಗುತ್ತದೆ. ಇಷ್ಟೇಲ್ಲಾ ಮಾಡುವಾಗಲೂ ನಾಯಿ ಮುದ್ದಾಗಿ ಮಲಗಿಕೊಂಡಿರುವುದು ನೋಡುಗರ ಮನಗೆದ್ದಿದೆ. ನಾಯಿಯ ಮಾಲೀಕರು ಪ್ರತೀ ವರ್ಷದಂತೆ ಈ ವರ್ಷವೂ ಗ್ರೇಸಿಯನ್ನು ಗಿಫ್ಟ್​ ಪ್ಯಾಕ್​ ಮಾಡಲಾಯಿತು ಎಂದು ಬರೆದುಕೊಂಡಿದ್ದಾರೆ.

ನಾಯಿಯ ಹಲವು ವೀಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಅಗಿದೆ. ಆದರೆ ಕ್ರಿಸ್​​ಮಸ್​ ಸಮಯದಲ್ಲಿ ನಾಯಿಯನ್ನೇ ಗಿಫ್ಟ್​ ಮಾಡಿದ ವೀಡಿಯೋ ಈಗ ಎಲ್ಲರ ಮನ ಗದ್ದಿದ್ದೆ.

ನಮ್ಮ ನಡತೆ ಸರಿಯಾಗಿದ್ದರೆ ಯಾರೂ ಟಾರ್ಗೆಟ್ ಮಾಡಲ್ಲ: ಬಾಲಕೃಷ್ಣ
ನಮ್ಮ ನಡತೆ ಸರಿಯಾಗಿದ್ದರೆ ಯಾರೂ ಟಾರ್ಗೆಟ್ ಮಾಡಲ್ಲ: ಬಾಲಕೃಷ್ಣ
ವಕ್ಫ್‌ ತಿದ್ದುಪಡಿ ಮಸೂದೆ ವಿರುದ್ಧ ನಿರ್ಣಯ ಅಂಗೀಕಾರ, ಜೋಶಿ ಏನಂದ್ರು?
ವಕ್ಫ್‌ ತಿದ್ದುಪಡಿ ಮಸೂದೆ ವಿರುದ್ಧ ನಿರ್ಣಯ ಅಂಗೀಕಾರ, ಜೋಶಿ ಏನಂದ್ರು?
ಕುಮಾರಸ್ವಾಮಿ ಹಾಸನ ಬಿಟ್ಟು ರಾಮನಗರ ಬಂದಿದ್ದು ಯಾಕೆ? ಶಿವಕುಮಾರ್
ಕುಮಾರಸ್ವಾಮಿ ಹಾಸನ ಬಿಟ್ಟು ರಾಮನಗರ ಬಂದಿದ್ದು ಯಾಕೆ? ಶಿವಕುಮಾರ್
ನೀರು ಉಳಿಸುವ ಅಭಿಯಾನಕ್ಕಾಗಿ ಸ್ಯಾಂಕಿ ಕೆರೆಯಲ್ಲಿ ಕಾವೇರಿ ಆರತಿ; ಡಿಕೆಶಿ
ನೀರು ಉಳಿಸುವ ಅಭಿಯಾನಕ್ಕಾಗಿ ಸ್ಯಾಂಕಿ ಕೆರೆಯಲ್ಲಿ ಕಾವೇರಿ ಆರತಿ; ಡಿಕೆಶಿ
ಫಲಾನುಭವಿಗಳು ಬಡವರಾದರೇನು, ಅವರಿಗೂ ಕಮಿಟ್ಮೆಂಟ್​ಗಳಿರುತ್ತವೆ: ಸರವಣ
ಫಲಾನುಭವಿಗಳು ಬಡವರಾದರೇನು, ಅವರಿಗೂ ಕಮಿಟ್ಮೆಂಟ್​ಗಳಿರುತ್ತವೆ: ಸರವಣ
ಕೈಗೆ ಗಂಭೀರ ಗಾಯದೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅತ್ತೆ
ಕೈಗೆ ಗಂಭೀರ ಗಾಯದೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅತ್ತೆ
ರವಿಚಂದ್ರನ್ ಲುಕ್​ನಲ್ಲಿ ಮಂಜು ಪಾವಗಡ; ನಾಗವಲ್ಲಿ ಆದ ಚೈತ್ರಾ ಕುಂದಾಪುರ
ರವಿಚಂದ್ರನ್ ಲುಕ್​ನಲ್ಲಿ ಮಂಜು ಪಾವಗಡ; ನಾಗವಲ್ಲಿ ಆದ ಚೈತ್ರಾ ಕುಂದಾಪುರ
IPL 2025: RCB ಅಭ್ಯಾಸ ಪಂದ್ಯದಲ್ಲಿ ಅಬ್ಬರಿಸಿದ ದೇವದತ್ತ್ ಪಡಿಕ್ಕಲ್
IPL 2025: RCB ಅಭ್ಯಾಸ ಪಂದ್ಯದಲ್ಲಿ ಅಬ್ಬರಿಸಿದ ದೇವದತ್ತ್ ಪಡಿಕ್ಕಲ್
ಪ್ರಿಯಕರನ ಜತೆ ಸೇರಿ ಪತಿಯ ಕೊಲೆ ಪ್ರಕರಣ, ಆರೋಪಿಗಳ ಮೇಲೆ ವಕೀಲರಿಂದ ಹಲ್ಲೆ
ಪ್ರಿಯಕರನ ಜತೆ ಸೇರಿ ಪತಿಯ ಕೊಲೆ ಪ್ರಕರಣ, ಆರೋಪಿಗಳ ಮೇಲೆ ವಕೀಲರಿಂದ ಹಲ್ಲೆ
ಮಂತ್ರಗಳನ್ನು ಪಠಿಸುವುದರಿಂದ ರೋಗಗಳು ಗುಣವಾಗುತ್ತವೆಯೇ? ಇಲ್ಲಿದೆ ವಿವರ
ಮಂತ್ರಗಳನ್ನು ಪಠಿಸುವುದರಿಂದ ರೋಗಗಳು ಗುಣವಾಗುತ್ತವೆಯೇ? ಇಲ್ಲಿದೆ ವಿವರ