AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಯಿಯನ್ನು ಕ್ರಿಸ್​ಮಸ್​ ಗಿಫ್ಟ್​ನಂತೆ ಪ್ಯಾಕ್​ ಮಾಡಿದ ಮಾಲೀಕ: ಕ್ಯೂಟ್​ ಡಾಗ್​ ವೀಡಿಯೋ ವೈರಲ್​​

ನಾಯಿಯೊಂದನ್ನು ಕ್ರಿಸ್​ಮಸ್​ ಗಿಫ್ಟ್​ ರೀತಿ ವ್ಯಕ್ತಿಯೊಬ್ಬ ಸುತ್ತುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ಟಿಕ್ ಟಾಕ್​ ವೀಡಿಯೋವನ್ನು ಸ್ಕೂಟಿ ಬಗ್​ ಎನ್ನುವ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ.

ನಾಯಿಯನ್ನು ಕ್ರಿಸ್​ಮಸ್​ ಗಿಫ್ಟ್​ನಂತೆ ಪ್ಯಾಕ್​ ಮಾಡಿದ ಮಾಲೀಕ: ಕ್ಯೂಟ್​ ಡಾಗ್​ ವೀಡಿಯೋ ವೈರಲ್​​
ಗ್ರೇಸಿ ಎನ್ನುವ ನಾಯಿ
TV9 Web
| Edited By: |

Updated on: Dec 25, 2021 | 3:06 PM

Share

ಕ್ರಿಸ್​ಮಸ್​  ಎಲ್ಲೆಡೆ ಹೊಸ ಸಂಭ್ರಮವನ್ನು ತುಂಬಿದೆ. ಕ್ರಿಶ್ಚಿಯನ್​ ಸಮುದಾಯದ ವಿಶೇಷ ದಿನವಾದ ಕ್ರಿಸ್​ಮಸ್​ ಉಡುಗೊರೆಗಳನ್ನು ವಿನಿಮಯ ಮಾಡಿಕೊಂಡು ಪರಸ್ಪರ ಆಶೀರ್ವಾದ ಪಡೆದುಕೊಳ್ಳುವ ಸಮಯ. ಈ ಶುಭ ಸಮಯದಲ್ಲಿ ನಾಯಿಯೊಂದನ್ನು ಕ್ರಿಸ್​ಮಸ್​ ಗಿಫ್ಟ್​ ರೀತಿ ವ್ಯಕ್ತಿಯೊಬ್ಬ ಸುತ್ತುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ಟಿಕ್ ಟಾಕ್​ ವೀಡಿಯೋವನ್ನು ಸ್ಕೂಟಿ ಬಗ್​ ಎನ್ನುವ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ. ಮುದ್ದಾದ ನಾಯಿ ಗಿಫ್ಟ್​ ಪ್ಯಾಕ್​ ಮಾಡುವ ರೀತಿ ಪೇಪರ್​ ಅನ್ನು ಅದರ ಮೈಗೆ ಸುತ್ತಿದರೂ ಸುಮ್ಮನೆ ಮಲಗಿಕೊಳ್ಳುವುದನ್ನು ಕಂಡು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಈ ವೀಡಿಯೋ  40 ಮಿಲಿಯನ್​ಗೂ ಅಧಿಕ ವೀಕ್ಷಣೆ ಪಡೆದಿದ್ದು, 4.7 ಮಿಲಿಯನ್​ ಲೈಕ್ಸ್​ ಅನ್ನು ಪಡೆದಿದೆ.

ನಾಯಿಯ ಮಾಲೀಕ ಸ್ಕಾಟ್​ ಹಬಾರ್ಡ್​ ಎನ್ನುವವರು ಈ ವಿಡೀಯೊವನ್ನು ಹಂಚಿಕೊಂಡಿದ್ದಾರೆ. ಗ್ರೇಸಿ ಎಂದು ಹೆಸರಿಟ್ಟಿರುವ ಈ ನಾಯಿಗೆ 8 ವರ್ಷ.   ವೀಡಿಯೋದಲ್ಲಿ ಮೊದಲು ಬಣ್ಣದ ಚಿತ್ರವಿರುವ ಪೇಪರ್​ ಗಮ್​ಟೇಪ್​, ಕತ್ತರಿ ಮತ್ತು ಕೆಂಪು ಬಣ್ಣದ ಹೂಗಳನ್ನು ನೆಲಕ್ಕೆ ಹಾಕಲಾಗುತ್ತದೆ. ಅದಕ್ಕೆ ನಾಯಿ ಮುದ್ದಗಿ ನಗುವನ್ನು ಬೀರುತ್ತದೆ. ನಂತರ ನಾಯಿಯನ್ನು ನೆಲಕ್ಕೆ ಮಲಗಿಸಿಕೊಂಡು ಪೇಪರ್​ನಲ್ಲಿ ಸುತ್ತುತ್ತಾರೆ. ಬಳಿಕ ಅದಕ್ಕೆ ಗಪ್​ಟೇಪ್​ ಹಚ್ಚಲಾಗುತ್ತದೆ. ನಂತರ ಕೊನೆಯದಾಗಿ ಕೆಮಪು ಬಣ್ಣದ ಹೂವನ್ನು ನಾಯಿಯ ತಲೆಯ ಮೇಲೆ ಇರಿಸಲಾಗುತ್ತದೆ. ಇಷ್ಟೇಲ್ಲಾ ಮಾಡುವಾಗಲೂ ನಾಯಿ ಮುದ್ದಾಗಿ ಮಲಗಿಕೊಂಡಿರುವುದು ನೋಡುಗರ ಮನಗೆದ್ದಿದೆ. ನಾಯಿಯ ಮಾಲೀಕರು ಪ್ರತೀ ವರ್ಷದಂತೆ ಈ ವರ್ಷವೂ ಗ್ರೇಸಿಯನ್ನು ಗಿಫ್ಟ್​ ಪ್ಯಾಕ್​ ಮಾಡಲಾಯಿತು ಎಂದು ಬರೆದುಕೊಂಡಿದ್ದಾರೆ.

ನಾಯಿಯ ಹಲವು ವೀಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಅಗಿದೆ. ಆದರೆ ಕ್ರಿಸ್​​ಮಸ್​ ಸಮಯದಲ್ಲಿ ನಾಯಿಯನ್ನೇ ಗಿಫ್ಟ್​ ಮಾಡಿದ ವೀಡಿಯೋ ಈಗ ಎಲ್ಲರ ಮನ ಗದ್ದಿದ್ದೆ.

ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು