Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾರ್ಚಿಂಗ್​ ವೇಳೆ ಬಾಲಕನನ್ನು ತುಳಿದುಕೊಂಡ ಹೋದ ಗಾರ್ಡ್​ಗಳು: ವೀಡಿಯೋ ವೈರಲ್​

ಇಂಗ್ಲೆಂಡ್​ ರಾಣಿಯ ಸೈನಿಕರು ಮಾರ್ಚಿಂಗ್​ ಮಾಡುವ ವೇಳೆ ದಾರಿಯಲ್ಲಿದ್ದ ಬಾಲಕನನ್ನು ಲೆಕ್ಕಿಸದೆ ತುಳಿದುಕೊಂಡ ಹೋದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಲಂಡನ್​ ಟವರ್​ ಬಳಿ ಮಾರ್ಚಿಂಗ್​ ನಡೆಸುತ್ತಿದ್ದ ವೇಳೆ ಘಟನೆ ನಡೆದಿದೆ.

ಮಾರ್ಚಿಂಗ್​ ವೇಳೆ ಬಾಲಕನನ್ನು ತುಳಿದುಕೊಂಡ ಹೋದ ಗಾರ್ಡ್​ಗಳು: ವೀಡಿಯೋ ವೈರಲ್​
ಮಗುವನ್ನು ತುಳಿದ ಕ್ವೀನ್ಸ್​ ಗಾರ್ಡ್​
Follow us
TV9 Web
| Updated By: Pavitra Bhat Jigalemane

Updated on: Dec 30, 2021 | 5:03 PM

ಇಂಗ್ಲೆಂಡ್​ ರಾಣಿಯ ಸೈನಿಕರು ಮಾರ್ಚಿಂಗ್​ ಮಾಡುವ ವೇಳೆ ದಾರಿಯಲ್ಲಿದ್ದ ಬಾಲಕನನ್ನು ಲೆಕ್ಕಿಸದೆ ತುಳಿದುಕೊಂಡ ಹೋದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಲಂಡನ್​ ಟವರ್​ ಬಳಿ ಮಾರ್ಚಿಂಗ್​ ನಡೆಸುತ್ತಿದ್ದ ವೇಳೆ ಇಬ್ಬರು ರಾಯಲ್​ ಗಾರ್ಡ್​ಗಳು ದಾರಿಯಲ್ಲಿ ಅಡ್ಡಸಿಕ್ಕ ಬಾಲಕನನ್ನು ತಳ್ಳಿದ್ದು ಆತ ಬಿದ್ದಿದ್ದಾನೆ. ಗಾರ್ಡ್​ಗಳು ಪಕ್ಕಕ್ಕೆ ಸರಿಯದೆ ಬಾಲಕನ ಮೆಲೇಯೇ ಕಾಲಿರಿಸಿಕೊಂಡು ಹೋಗಿದ್ದಾರೆ. ಈ ಬಗ್ಗೆ ದಿ ಸನ್​ ವರದಿ ಮಾಡಿದ್ದು ವೀಡಿಯೋವನ್ನು ಹಂಚಿಕೊಂಡಿದೆ.

ವಿಡಿಯೋದಲ್ಲಿ ಮೊದಲು ದಾರಿ ಬಿಡಿ ಎನ್ನುವ ಕೂಗೊಂದು ಕೇಳಿಬರುತ್ತದೆ. ದಾರಿಯ ಮಧ್ಯೆ ಇರುವವರು ಸರಿಯುವುದರೊಳಗೆ ನೀಲಿ ಬಣ್ಣದ ಇಬ್ಬರು ಗಾರ್ಡ್​ಗಳು ದಾಪುಗಾಲು ಹಾಕಿಕೊಂಡು ಬರುತ್ತಿದ್ದರು. ಬಾಲಕ ಪಕ್ಕಕ್ಕೆ ಸರಿಯುವ ಮೊದಲು ಗಾರ್ಡ್​ಗಳ ಕಾಲಿಗೆ ಸಿಕ್ಕಿ ಬೀಳುತ್ತಾನೆ. ನಂತರ ತಕ್ಷಣ ಎದ್ದು ನಿಲ್ಲುತ್ತಾನೆ. ಈ ವೀಡಿಯೋವನ್ನು ಮೊದಲು ಟಿಕ್​ಟಾಕ್​ನಲ್ಲಿ ಹಂಚಿಕೊಳ್ಳಲಾಗಿತ್ತು. ಇದೀಗ  ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್​ ಆಗಿದ್ದು, ಟ್ವಿಟರ್​ನಲ್ಲಿ ವೀಡಿಯೋ 2 ಮಿಲಿಯನ್​ಗೂ ಅಧಿಕ ವೀಕ್ಷಣೆ ಪಡೆದಿದೆ.

ಇಂಗ್ಲೆಂಡ್​ ರಾಣಿಯ ಗಾರ್ಡ್​ಗಳು ನಡೆದುಕೊಂಡ ರೀತಿಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಈ ಬಗ್ಗೆ ರಕ್ಷಣಾ ಸಚಿವಾಲಯ ಎಂದಿನಂತೆ  ಗಾರ್ಡ್​ಗಳು ಗಸ್ತು ತಿರುಗುವ  ವೇಳೆ ಈ ಘಟನೆ ನಡೆದಿದೆ. ಅದರ ಬಗ್ಗೆ ತಿಳಿದಿದೆ. ಮಗುವಿನ ಬಗ್ಗೆ ವಿಚಾರಿಸಲಾಗಿದೆ ಎಂದು ಪ್ರಕಟಣೆ ಹೊರಡಿಸಿದೆ.

ಇದನ್ನೂ ಓದಿ:

ತನ್ನನ್ನು ಮಗುವಿನಂತೆ ನೋಡಿಕೊಳ್ಳಲು, ಡೈಪರ್​ ಬದಲಿಸಲು ಜನರನ್ನು ನೇಮಿಸಿಕೊಂಡ 31 ವರ್ಷದ ವ್ಯಕ್ತಿ

ದೆಹಲಿಯ ಶಾಹೀನ್ ಬಾಗ್ ಮಾರುಕಟ್ಟೆಯ ಚಪ್ಪಲಿ ಶೋ ರೂಂನಲ್ಲಿ ಬೆಂಕಿ ದುರಂತ
ದೆಹಲಿಯ ಶಾಹೀನ್ ಬಾಗ್ ಮಾರುಕಟ್ಟೆಯ ಚಪ್ಪಲಿ ಶೋ ರೂಂನಲ್ಲಿ ಬೆಂಕಿ ದುರಂತ
ಸಿಎಂ ದೂರು ಸಲ್ಲಿಸಲು ಹೇಳಿದರೆ ಸಲ್ಲಿಸುತ್ತೇನೆ, ಬೇಡವೆಂದರೆ ಇಲ್ಲ:ರಾಜೇಂದ್ರ
ಸಿಎಂ ದೂರು ಸಲ್ಲಿಸಲು ಹೇಳಿದರೆ ಸಲ್ಲಿಸುತ್ತೇನೆ, ಬೇಡವೆಂದರೆ ಇಲ್ಲ:ರಾಜೇಂದ್ರ
ರವಿಶಂಕರ್ ಗುರೂಜಿ ಜೊತೆ ಟಿವಿ9 ನೆಟ್‌ವರ್ಕ್‌ ಎಂಡಿ ಬರುಣ್ ದಾಸ್ ಸಂವಾದ
ರವಿಶಂಕರ್ ಗುರೂಜಿ ಜೊತೆ ಟಿವಿ9 ನೆಟ್‌ವರ್ಕ್‌ ಎಂಡಿ ಬರುಣ್ ದಾಸ್ ಸಂವಾದ
ಮಳೆಗಾಲ ಶುರುವಾಗುವ ಮೊದಲು ರಸ್ತೆಗುಂಡಿಗಳು ಮುಚ್ಚಿದರೆ ಸಾಕಿದೆ!
ಮಳೆಗಾಲ ಶುರುವಾಗುವ ಮೊದಲು ರಸ್ತೆಗುಂಡಿಗಳು ಮುಚ್ಚಿದರೆ ಸಾಕಿದೆ!
ಕೇರಳದ ಪ್ರಸಿದ್ಧ ದೇವಾಲಯದಲ್ಲಿ ದರ್ಶನ್ ಶತ್ರು ಸಂಹಾರ ಪೂಜೆ? ವಿಡಿಯೋ
ಕೇರಳದ ಪ್ರಸಿದ್ಧ ದೇವಾಲಯದಲ್ಲಿ ದರ್ಶನ್ ಶತ್ರು ಸಂಹಾರ ಪೂಜೆ? ವಿಡಿಯೋ
ಧರ್ಮಾಧಾರಿತ ಮೀಸಲಾತಿ ಕಾನೂನು ಮತ್ತು ಸಂವಿಧಾನಬಾಹಿರ: ವಿಜಯೇಂದ್ರ
ಧರ್ಮಾಧಾರಿತ ಮೀಸಲಾತಿ ಕಾನೂನು ಮತ್ತು ಸಂವಿಧಾನಬಾಹಿರ: ವಿಜಯೇಂದ್ರ
ಹನಿ ಟ್ರ್ಯಾಪಿಂಗ್ ಸಂಬಂಧಿಸಿದಂತೆ ಹೆಚ್​ಎಂ ಹೇಳಿಕೆ ನೀಡಿದ್ದಾರೆ: ಖಾದರ್
ಹನಿ ಟ್ರ್ಯಾಪಿಂಗ್ ಸಂಬಂಧಿಸಿದಂತೆ ಹೆಚ್​ಎಂ ಹೇಳಿಕೆ ನೀಡಿದ್ದಾರೆ: ಖಾದರ್
ಕರ್ನಾಟಕ ಬಂದ್: ಪ್ರತಿಭಟನೆ ವೇಳೆ ಜನದಟ್ಟಣೆಗೆ ಬೆದರಿ ಓಡಿದ ಎಮ್ಮೆ
ಕರ್ನಾಟಕ ಬಂದ್: ಪ್ರತಿಭಟನೆ ವೇಳೆ ಜನದಟ್ಟಣೆಗೆ ಬೆದರಿ ಓಡಿದ ಎಮ್ಮೆ
ಎಲ್ಲರೂ ಬಂದ್ ಮಾಡ್ತಾ ಹೋದ್ರೆ ಸಾರ್ವಜನಿಕರ ಪಾಡೇನು? ಬಸ್ ಚಾಲಕ
ಎಲ್ಲರೂ ಬಂದ್ ಮಾಡ್ತಾ ಹೋದ್ರೆ ಸಾರ್ವಜನಿಕರ ಪಾಡೇನು? ಬಸ್ ಚಾಲಕ
ಪೊಲೀಸರ ಗೂಂಡಾಗಿರಿಯನ್ನು ಸಹಿಸಲ್ಲ ಎಂದ ವಾಟಾಳ್ ನಾಗರಾಜ್
ಪೊಲೀಸರ ಗೂಂಡಾಗಿರಿಯನ್ನು ಸಹಿಸಲ್ಲ ಎಂದ ವಾಟಾಳ್ ನಾಗರಾಜ್