AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾರ್ಚಿಂಗ್​ ವೇಳೆ ಬಾಲಕನನ್ನು ತುಳಿದುಕೊಂಡ ಹೋದ ಗಾರ್ಡ್​ಗಳು: ವೀಡಿಯೋ ವೈರಲ್​

ಇಂಗ್ಲೆಂಡ್​ ರಾಣಿಯ ಸೈನಿಕರು ಮಾರ್ಚಿಂಗ್​ ಮಾಡುವ ವೇಳೆ ದಾರಿಯಲ್ಲಿದ್ದ ಬಾಲಕನನ್ನು ಲೆಕ್ಕಿಸದೆ ತುಳಿದುಕೊಂಡ ಹೋದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಲಂಡನ್​ ಟವರ್​ ಬಳಿ ಮಾರ್ಚಿಂಗ್​ ನಡೆಸುತ್ತಿದ್ದ ವೇಳೆ ಘಟನೆ ನಡೆದಿದೆ.

ಮಾರ್ಚಿಂಗ್​ ವೇಳೆ ಬಾಲಕನನ್ನು ತುಳಿದುಕೊಂಡ ಹೋದ ಗಾರ್ಡ್​ಗಳು: ವೀಡಿಯೋ ವೈರಲ್​
ಮಗುವನ್ನು ತುಳಿದ ಕ್ವೀನ್ಸ್​ ಗಾರ್ಡ್​
TV9 Web
| Edited By: |

Updated on: Dec 30, 2021 | 5:03 PM

Share

ಇಂಗ್ಲೆಂಡ್​ ರಾಣಿಯ ಸೈನಿಕರು ಮಾರ್ಚಿಂಗ್​ ಮಾಡುವ ವೇಳೆ ದಾರಿಯಲ್ಲಿದ್ದ ಬಾಲಕನನ್ನು ಲೆಕ್ಕಿಸದೆ ತುಳಿದುಕೊಂಡ ಹೋದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಲಂಡನ್​ ಟವರ್​ ಬಳಿ ಮಾರ್ಚಿಂಗ್​ ನಡೆಸುತ್ತಿದ್ದ ವೇಳೆ ಇಬ್ಬರು ರಾಯಲ್​ ಗಾರ್ಡ್​ಗಳು ದಾರಿಯಲ್ಲಿ ಅಡ್ಡಸಿಕ್ಕ ಬಾಲಕನನ್ನು ತಳ್ಳಿದ್ದು ಆತ ಬಿದ್ದಿದ್ದಾನೆ. ಗಾರ್ಡ್​ಗಳು ಪಕ್ಕಕ್ಕೆ ಸರಿಯದೆ ಬಾಲಕನ ಮೆಲೇಯೇ ಕಾಲಿರಿಸಿಕೊಂಡು ಹೋಗಿದ್ದಾರೆ. ಈ ಬಗ್ಗೆ ದಿ ಸನ್​ ವರದಿ ಮಾಡಿದ್ದು ವೀಡಿಯೋವನ್ನು ಹಂಚಿಕೊಂಡಿದೆ.

ವಿಡಿಯೋದಲ್ಲಿ ಮೊದಲು ದಾರಿ ಬಿಡಿ ಎನ್ನುವ ಕೂಗೊಂದು ಕೇಳಿಬರುತ್ತದೆ. ದಾರಿಯ ಮಧ್ಯೆ ಇರುವವರು ಸರಿಯುವುದರೊಳಗೆ ನೀಲಿ ಬಣ್ಣದ ಇಬ್ಬರು ಗಾರ್ಡ್​ಗಳು ದಾಪುಗಾಲು ಹಾಕಿಕೊಂಡು ಬರುತ್ತಿದ್ದರು. ಬಾಲಕ ಪಕ್ಕಕ್ಕೆ ಸರಿಯುವ ಮೊದಲು ಗಾರ್ಡ್​ಗಳ ಕಾಲಿಗೆ ಸಿಕ್ಕಿ ಬೀಳುತ್ತಾನೆ. ನಂತರ ತಕ್ಷಣ ಎದ್ದು ನಿಲ್ಲುತ್ತಾನೆ. ಈ ವೀಡಿಯೋವನ್ನು ಮೊದಲು ಟಿಕ್​ಟಾಕ್​ನಲ್ಲಿ ಹಂಚಿಕೊಳ್ಳಲಾಗಿತ್ತು. ಇದೀಗ  ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್​ ಆಗಿದ್ದು, ಟ್ವಿಟರ್​ನಲ್ಲಿ ವೀಡಿಯೋ 2 ಮಿಲಿಯನ್​ಗೂ ಅಧಿಕ ವೀಕ್ಷಣೆ ಪಡೆದಿದೆ.

ಇಂಗ್ಲೆಂಡ್​ ರಾಣಿಯ ಗಾರ್ಡ್​ಗಳು ನಡೆದುಕೊಂಡ ರೀತಿಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಈ ಬಗ್ಗೆ ರಕ್ಷಣಾ ಸಚಿವಾಲಯ ಎಂದಿನಂತೆ  ಗಾರ್ಡ್​ಗಳು ಗಸ್ತು ತಿರುಗುವ  ವೇಳೆ ಈ ಘಟನೆ ನಡೆದಿದೆ. ಅದರ ಬಗ್ಗೆ ತಿಳಿದಿದೆ. ಮಗುವಿನ ಬಗ್ಗೆ ವಿಚಾರಿಸಲಾಗಿದೆ ಎಂದು ಪ್ರಕಟಣೆ ಹೊರಡಿಸಿದೆ.

ಇದನ್ನೂ ಓದಿ:

ತನ್ನನ್ನು ಮಗುವಿನಂತೆ ನೋಡಿಕೊಳ್ಳಲು, ಡೈಪರ್​ ಬದಲಿಸಲು ಜನರನ್ನು ನೇಮಿಸಿಕೊಂಡ 31 ವರ್ಷದ ವ್ಯಕ್ತಿ

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ