ಓಹ್! ನಿಜಕ್ಕೂ ಸಾಂತಾನ ಬಂಡಿ ಬಂದಿತ್ತೇ?; ವೈರಲ್ ಆದ ಎಮಿರೇಟ್ಸ್​ ಪೋಸ್ಟ್​

Merry Christmas : ವಿಮಾನಕ್ಕೆ ಹಾಕಿದ ಸಾಂತಾನ ಟೋಪಿ ಎಂಥ ಸುಂದರ. ಈ ಹಿಮಸಾರಂಗಗಳು ಈ ಬಂಡಿಯನ್ನು ಎಳೆದುಕೊಂಡು ಹೇಗೆ ಆಕಾಶದಲ್ಲಿ ಓಡುತ್ತಿವೆ? ನೆಟ್ಟಿಗರು ಈ ವಿಷಯವಾಗಿ ತಲೆ ಕೆರೆದುಕೊಳ್ಳುತ್ತಿದ್ದಾರೆ.

ಓಹ್! ನಿಜಕ್ಕೂ ಸಾಂತಾನ ಬಂಡಿ ಬಂದಿತ್ತೇ?; ವೈರಲ್ ಆದ ಎಮಿರೇಟ್ಸ್​ ಪೋಸ್ಟ್​
ಸಾಂತಾನ ಬಂಡಿ ಹಾರುತಿದೆ ನೋಡಿ
Follow us
TV9 Web
| Updated By: ಶ್ರೀದೇವಿ ಕಳಸದ

Updated on: Dec 26, 2022 | 3:46 PM

Viral Video : ಎಮಿರೇಟ್ಸ್​ ಏರ್​ಲೈನ್ಸ್​ ತನ್ನ ಪ್ರಯಾಣಿಕರಿಗಾಗಿ ಮಾಡಿದ ಮ್ಯಾಜಿಕ್​ನ ವಿಡಿಯೋ ಇದೀಗ ವೈರಲ್ ಆಗಿದೆ. ಕ್ರಿಸ್​ಮಸ್​ ನಿಮಿತ್ತ ಒಂದು ವಿಮಾನವನ್ನು ಸಾಂತಾನ ಬಂಡಿಯಂತೆ ಅಲಂಕರಿಸಲಾಗಿತ್ತು. ಹಿಮಸಾರಂಗಗಳು ಆ ವಿಮಾನವೆಂಬ ಬಂಡಿಯನ್ನು ಎಳೆದುಕೊಂಡು ಆಕಾಶದಲ್ಲಿ ಹೋಗುತ್ತಿದ್ದವು. ಈ ವಿಡಿಯೋ ಅನ್ನು ಸಾಮಾಜಿಕ ಜಾಲತಾಣದಲ್ಲಿ ಎಮಿರೇಟ್ಸ್​ ಪೋಸ್ಟ್​ ಮಾಡುತ್ತಿದ್ದಂತೆ ನೆಟ್ಟಿಗರು ಅಚ್ಚರಿಯಿಂದ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Emirates (@emirates)

ಈ ವಿಮಾನವು ಸಾಂತಾನ ಕೆಂಪು ಟೋಪಿಯನ್ನು ಧರಿಸಿದ್ದು, ಹಿಮಸಾರಂಗಗಳು ಇದನ್ನು ಆಕಾಶಕ್ಕೆ ಕೊಂಡೊಯ್ಯುತ್ತವೆ. ನೋಡಿದ ಯಾರಿಗೂ ನಿಜವಾದ ಸಾರಂಗಗಳೇ ಎಂಬ ಅನುಮಾನ ಬಾರದೇ ಇರದು. ಆದರೆ ಈ ವಿಡಿಯೋ ಕ್ಲಿಪ್​ CGI ತಂತ್ರಜ್ಞಾನದಿಂದ ರೂಪುಗೊಂಡಿದೆ. ಈ ಪರಿಕಲ್ಪನೆಯನ್ನು ನೆಟ್ಟಿಗರು ಮೆಚ್ಚಿದ್ದಾರೆ. ಅನೇಕರು ಪ್ರತಿಕ್ರಿಯೆಗಳ ಮೂಲಕ ಶುಭಾಶಯ ಕೋರಿದ್ದಾರೆ. ಸಾಕಷ್ಟು ಜನರು ಈ ವಿಡಿಯೋ ಅನ್ನು ನಿಜವೆಂದೇ ನಂಬಿದ್ದಾರೆ.

ಮಕ್ಕಳು ಇದನ್ನು ನೋಡಿ ಬಹಳ ಮಜಾ ಉಡಾಯಿಸುತ್ತಿದ್ದಾರೆ ಎಂದಿದ್ಧಾರೆ ಒಬ್ಬರು. ಬಹಳ ಅದ್ಭುತವಾಗಿದೆ ಯಾರು ಮಾಡಿದ್ದಿದು ಎಂದು ಕೇಳಿದ್ದಾರೆ ಇನ್ನೊಬ್ಬರು. ಇದು ನಿಜವೇ ಎಂದು ಕೇಳಿದ್ದಾರೆ ಅನೇಕರು. ಫಿಸಿಕ್ಸ್​ಗೆ ಇದು ಅನುಮಾನ ಎಂದಿದ್ದಾರೆ ಮತ್ತೊಬ್ಬರು. ಮೆಚ್ಚುಗೆಯೊಂದಿಗೆ ಅಸಂಬದ್ಧ ಪ್ರತಿಕ್ರಿಯೆಗಳನ್ನೂ ಈ ಪೋಸ್ಟ್ ಹೊಂದಿದೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ಬಿಳಿಗಿರಿರಂಗನ ಬನದಲ್ಲಿ ಜಾಂಬವಂತನ ಕಾದಾಟ, ವಿಡಿಯೋ ನೋಡಿ
ಬಿಳಿಗಿರಿರಂಗನ ಬನದಲ್ಲಿ ಜಾಂಬವಂತನ ಕಾದಾಟ, ವಿಡಿಯೋ ನೋಡಿ
ಸೇಲಂ ಹೈವೇಯಲ್ಲಿ ಟ್ರಕ್‌ನಲ್ಲಿಟ್ಟಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟ
ಸೇಲಂ ಹೈವೇಯಲ್ಲಿ ಟ್ರಕ್‌ನಲ್ಲಿಟ್ಟಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟ
ಬಿಗ್ ಬಾಸ್ ಶೋನಿಂದ ಸಿಕ್ಕ ಸಂಭಾವನೆ ಬಗ್ಗೆ ನನಗೆ ಬೇಸರ ಇಲ್ಲ: ಭವ್ಯಾ ಗೌಡ
ಬಿಗ್ ಬಾಸ್ ಶೋನಿಂದ ಸಿಕ್ಕ ಸಂಭಾವನೆ ಬಗ್ಗೆ ನನಗೆ ಬೇಸರ ಇಲ್ಲ: ಭವ್ಯಾ ಗೌಡ
ನನ್ನನ್ನು ಹುದ್ದೆಯಿಂದ ಸರಿಸಬೇಕೆನ್ನುವವರಿಗೆ ಒಳ್ಳೆಯದಾಗಲಿ: ವಿಜಯೇಂದ್ರ
ನನ್ನನ್ನು ಹುದ್ದೆಯಿಂದ ಸರಿಸಬೇಕೆನ್ನುವವರಿಗೆ ಒಳ್ಳೆಯದಾಗಲಿ: ವಿಜಯೇಂದ್ರ
ಜೈಪುರ ಸಾಹಿತ್ಯ ಉತ್ಸವ; ಕಲ್ ಪೆನ್ ಜೊತೆ ಟಿವಿ9 ಸಿಇಒ ಬರುಣ್ ದಾಸ್ ಸಂವಾದ
ಜೈಪುರ ಸಾಹಿತ್ಯ ಉತ್ಸವ; ಕಲ್ ಪೆನ್ ಜೊತೆ ಟಿವಿ9 ಸಿಇಒ ಬರುಣ್ ದಾಸ್ ಸಂವಾದ
ಪಕ್ಷದ ವಿದ್ಯಮಾನಗಳು ಶಿವಕುಮಾರ್​ರನ್ನು ದೆಹಲಿಗೆ ಹೋಗುವಂತೆ ಮಾಡಿದವೇ?
ಪಕ್ಷದ ವಿದ್ಯಮಾನಗಳು ಶಿವಕುಮಾರ್​ರನ್ನು ದೆಹಲಿಗೆ ಹೋಗುವಂತೆ ಮಾಡಿದವೇ?
ಬೆಳ್ಳಿ ಪರದೆ ಮೇಲೆ ‘ತ್ರಿವ್ಯ’ ಜೋಡಿ, ಭವ್ಯಾ ಗೌಡ ಹೇಳಿದ್ದೇನು?
ಬೆಳ್ಳಿ ಪರದೆ ಮೇಲೆ ‘ತ್ರಿವ್ಯ’ ಜೋಡಿ, ಭವ್ಯಾ ಗೌಡ ಹೇಳಿದ್ದೇನು?
ಸಂಪಾದನೆ ಎಷ್ಟೇ ಇರಲಿ ಉಳಿತಾಯ ಮಾಡಲೇಬೇಕು: ಭವ್ಯಾ ಗೌಡ
ಸಂಪಾದನೆ ಎಷ್ಟೇ ಇರಲಿ ಉಳಿತಾಯ ಮಾಡಲೇಬೇಕು: ಭವ್ಯಾ ಗೌಡ
ತ್ರಿವಿಕ್ರಮ ಜೊತೆ ಗೆಳೆತನ ಅಷ್ಟೇ, ಪೊಸ್ಸೆಸ್ಸಿವ್​ನೆಸ್ ಇರಲಿಲ್ಲ: ಭವ್ಯಾ
ತ್ರಿವಿಕ್ರಮ ಜೊತೆ ಗೆಳೆತನ ಅಷ್ಟೇ, ಪೊಸ್ಸೆಸ್ಸಿವ್​ನೆಸ್ ಇರಲಿಲ್ಲ: ಭವ್ಯಾ
‘ನನ್ನ, ತ್ರಿವಿಕ್ರಮ್ ನಡುವೆ ಏನೂ ಇಲ್ಲ, ಪದೇ ಪದೇ ಇದೇ ಹೇಳೋಕಾಗಲ್ಲ’: ಭವ್ಯಾ
‘ನನ್ನ, ತ್ರಿವಿಕ್ರಮ್ ನಡುವೆ ಏನೂ ಇಲ್ಲ, ಪದೇ ಪದೇ ಇದೇ ಹೇಳೋಕಾಗಲ್ಲ’: ಭವ್ಯಾ