AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆದರಿದ ಹರಿಣಿಯರು; ಕುಖ್ಯಾತ ಸರಣಿ ಹಂತಕ ಚಾರ್ಲ್ಸ್​ ಶೋಭರಾಜ ವಿಮಾನ ಪ್ರಯಾಣದ ಫೋಟೋ ವೈರಲ್

Charles Sobhraj : 78 ವರ್ಷದ ಚಾರ್ಲ್ಸ್​ ಶೋಭರಾಜ 20 ವರ್ಷಗಳ ಕಾಲ ನೇಪಾಳದ ಜೈಲಿನಲ್ಲಿದ್ದ. 2 ದಿನಗಳ ಹಿಂದೆಯಷ್ಟೇ ಬಿಡುಗಡೆಗೊಂಡ ಈತ ಪ್ಯಾರೀಸ್​ಗೆ ಪ್ರಯಾಣಿಸುತ್ತಿದ್ದ. ಈ ಸಂದರ್ಭದಲ್ಲಿ ತೆಗೆದ ಫೋಟೋ ಇದಾಗಿದೆ.

ಬೆದರಿದ ಹರಿಣಿಯರು; ಕುಖ್ಯಾತ ಸರಣಿ ಹಂತಕ ಚಾರ್ಲ್ಸ್​ ಶೋಭರಾಜ ವಿಮಾನ ಪ್ರಯಾಣದ ಫೋಟೋ ವೈರಲ್
ಜೈಲಿನಿಂದ ಬಿಡುಗಡೆಗೊಂಡು ಪ್ಯಾರೀಸ್​ಗೆ ಪ್ರಯಾಣಿಸುತ್ತಿರುವ ಚಾರ್ಲ್ಸ್​ ಶೋಭರಾಜ್​, ಪಕ್ಕದಲ್ಲಿರುವ ಯುವತಿಯರ ಮುಖಭಾವ ಗಮನಿಸಿ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Dec 26, 2022 | 6:40 PM

Viral Video : ಸರಣಿ ಕೊಲೆಗಳಿಂದ ಕುಖ್ಯಾತಿ ಪಡೆದಿರುವ ಚಾರ್ಲ್ಸ್​ ಶೋಭರಾಜನ ಪಕ್ಕದಲ್ಲಿ ಕುಳಿತುಕೊಳ್ಳುವ ಪ್ರಸಂಗ ಬಂದರೆ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದನ್ನು ಕಲ್ಪಿಸಿಕೊಳ್ಳಿ. ಅವನ ಹೆಸರು ಕೇಳಿದರೇ ಸಾಕು! ಇನ್ನು ಅವನ ಬಳಿ ಕುಳಿತುಕೊಳ್ಳುವುದೆಂದರೆ? ಹಾಗೂ ಹೀಗೂ ಕುಳಿತುಕೊಂಡಿರಿ, ಈ ಅನುಭವದ ಬಗ್ಗೆ ಹಂಚಿಕೊಳ್ಳಿ ಎಂದರೆ ನಿಮ್ಮಲ್ಲಿ ಬಹುಶಃ ಶಬ್ದಗಳೇ ಇರುವುದಿಲ್ಲ. ಅಂಥ ಆತಂಕ, ಭಯ ನಿಮ್ಮನ್ನು ಆವರಿಸದೇ ಇರದು. ಇದೀಗ ವೈರಲ್ ಆಗಿರುವ ಈ ಫೋಟೋ ಗಮನಿಸಿ. ಚಾರ್ಲ್ಸ್​ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾನೆ. ಅವನ ಪಕ್ಕದಲ್ಲಿ ಈ ಯುವತಿಯರು ಬೆದರಿದ ಹರಿಣಿಯಂತೆ ಕುಳಿತಿದ್ದಾರೆ.

ಜಗತ್ತಿನಾದ್ಯಂತ ಕನಿಷ್ಟ 20 ಜನರನ್ನಾದರೂ ಕೊಂದು ಕುಖ್ಯಾತಿ ಪಡೆದ ಸರಣಿಹಂತಕ ಚಾರ್ಲ್ಸ್​ ಶೋಭರಾಜ್ ಎರಡು ದಿನಗಳ ಹಿಂದೆಯಷ್ಟೇ ನೇಪಾಳದ ಜೈಲಿನಿಂದ ಬಿಡುಗಡೆಗೊಂಡಿದ್ಧಾನೆ. 1975ರಲ್ಲಿ ಉತ್ತರ ಅಮೆರಿಕದ ಇಬ್ಬರು ಪ್ರಜೆಗಳನ್ನು ಕೊಂದಿದ್ದಕ್ಕಾಗಿ 20 ವರ್ಷಗಳ ಕಾಲ ಜೈಲುಬಂದಿಯಾಗಿದ್ದ. ಇದೀಗ ಉತ್ತಮ ನಡೆವಳಿಕೆ ಆಧಾರದ ಮೇಲೆ ಬಿಡುಗಡೆಗೊಂಡಿದ್ದಾನೆ. ನಂತರ ಕತಾರ್​ ಏರ್​ವೇಸ್ ಮೂಲಕ ದೋಹಾಗೆ ತೆರಳಿ ಅಲ್ಲಿಂದ ಪ್ಯಾರೀಸ್​ನಲ್ಲಿ ವಾಸಿಸಲು ತೆರಳಿದ್ದಾನೆ.  ಈ ಪ್ರಯಾಣದ ಮಧ್ಯೆಯೇ  ತೆಗೆದ ಫೋಟೋ ಇದಾಗಿದೆ.

ಬಿಕಿನಿ ಧರಿಸಿದ ಮಹಿಳೆಯರನ್ನೇ ಈತ ಗುರಿ ಇಟ್ಟುಕೊಂಡು ಕೊಲೆ ಮಾಡುತ್ತಿದ್ದನಾದ್ದರಿಂದ ಇವನಿಗೆ ‘ಬಿಕಿನಿ ಕಿಲ್ಲರ್’ ಎಂದು ಬಿರುದು ನೀಡಲಾಗಿತ್ತು! ನೆಟ್​ಫ್ಲಿಕ್ಸ್​ನ  ‘ದಿ ಸರ್ಪೆಂಟ್​’ ಸೀರೀಸ್​ಗೆ ಇವನೇ ಸ್ಫೂರ್ತಿ. ಇವನ ಜೀವನವೃತ್ತಾಂತವನ್ನಿಟ್ಟುಕೊಂಡು ಈ ಸೀರೀಸ್​ನ ಕಥೆ ಹೆಣೆಯಲಾಗಿದೆ.

ಇದನ್ನೂ ಓದಿ : ಮದುವೆ ಮಂಟಪದ ಹೊರಗೆ ಝೊಮ್ಯಾಟೋ ಡೆಲಿವರಿ ಏಜೆಂಟ್ ಡ್ಯಾನ್ಸ್​ ವಿಡಿಯೋ ವೈರಲ್

1970 ರ ದಶಕದಲ್ಲಿ ಏನಿಲ್ಲವೆಂದರೂ 20 ಜನರನ್ನು ಕೊಂದ ಆರೋಪ ಇವನ ಮೇಲಿತ್ತು. ಈತ ತನ್ನದೇ ಆದ ವಿಶಿಷ್ಟ ಮೋಡಿಯಿಂದ ತನಗೆ ಬೇಕಾದವರೊಂದಿಗೆ ಸ್ನೇಹ ಬೆಳೆಸುತ್ತಿದ್ದ, ಕ್ರಮೇಣ ವಿಶ್ವಾಸ ಗಳಿಸಿ ಅವರನ್ನು ಬಲಿಪಶುವನ್ನಾಗಿಸುತ್ತಿದ್ದ. ಹೆಚ್ಚಿನ ಮಂದಿ ಹಿಪ್ಪಿಗಳೇ ಇವನಿಗೆ ಬಲಿಯಾಗಿರುವುದು.

ಇಂಥ ಭಯಂಕರ ಚರಿತ್ರೆ ಹೊಂದಿದ ಈತನ ಪಕ್ಕದಲ್ಲಿ ಕುಳಿತು ವಿಮಾನಯಾನ ಮಾಡುವುದೆಂದರೆ ಸುಲಭವೇ?

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 6:29 pm, Mon, 26 December 22

ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಸಿಂಹರಾಶಿಗೆ ಗುರುಬಲ ಶುರು; ಅದೃಷ್ಟ ಕೂಡಿ ಬರಲಿದೆ!
ಸಿಂಹರಾಶಿಗೆ ಗುರುಬಲ ಶುರು; ಅದೃಷ್ಟ ಕೂಡಿ ಬರಲಿದೆ!