AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಯಿಯ ದಾಳಿಯಿಂದ ತನ್ನ ‘ಅಣ್ಣ’ನನ್ನು ರಕ್ಷಿಸಿದ ಜರ್ಮನ್ ಶೆಫರ್ಡ್​

German Shephard: ನಾಯಿಗಳು ಅತೀ ಸೂಕ್ಷ್ಮ ಸಂವೇದನೆಯುಳ್ಳ ಪ್ರಾಣಿಗಳು. ಇನ್ನೊಂದು ನಾಯಿ ದಾಳಿ ಮಾಡುವ ಮೂಡ್​ನಲ್ಲಿದೆ ಎನ್ನುವುದನ್ನು ಸೆಕೆಂಡುಗಳ ವೇಗದಲ್ಲಿ ಅರ್ಥ ಮಾಡಿಕೊಂಡು ರಕ್ಷಣೆಗೆ ಸನ್ನದ್ಧರಾಗುತ್ತವೆ. ನೋಡಿ ಈ ವಿಡಿಯೋ.

ನಾಯಿಯ ದಾಳಿಯಿಂದ ತನ್ನ ‘ಅಣ್ಣ’ನನ್ನು ರಕ್ಷಿಸಿದ ಜರ್ಮನ್ ಶೆಫರ್ಡ್​
ಅಣ್ಣನನ್ನು ರಕ್ಷಿಸುತ್ತಿರುವ ಜರ್ಮನ್ ಶೆಫರ್ಡ್​
Follow us
TV9 Web
| Updated By: Digi Tech Desk

Updated on:Dec 27, 2022 | 10:57 AM

Viral Video: ತನ್ನ ಅಣ್ಣನೊಂದಿಗೆ ಈ ಜರ್ಮನ್​ ಶೆಫರ್​ ವಾಕಿಂಗ್​ ಬಂದಿದೆ. ಆದರೆ ವಾಕಿಂಗ್​ ಬಂದ ಇನ್ನೊಂದು ನಾಯಿಯು ಇದ್ದಕ್ಕಿದ್ದ ಹಾಗೆ ತನ್ನ ಪೋಷಕನಿಂದ ತಪ್ಪಿಸಿಕೊಂಡು ಬಂದು ಅಣ್ಣನ ಮೇಲೆ ದಾಳಿ ಮಾಡಲು ನೋಡಿದೆ. ಆಗ ಜರ್ಮನ್​ ಶೆಫರ್ಡ್​ ಶರವೇಗದಲ್ಲಿ ಅಣ್ಣನನ್ನು ತಳ್ಳಿ ಆ ನಾಯಿಯೊಂದಿಗೆ ಕಾದಾಡಿ ಅಣ್ಣನನ್ನು ರಕ್ಷಿಸಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಜರ್ಮನ್ ಶೆಫರ್ಡ್​ಗೆ ಶಭಾಷ್​ ಹೇಳುತ್ತಿದ್ದಾರೆ.

ಜರ್ಮನ್ ಶೆಫರ್ಡ್​ಗೆ ಅದೆಷ್ಟು ಬೇಗ ಅರ್ಥವಾಗುತ್ತದೆ ನೋಡಿ ಆ ನಾಯಿಯ ನಡೆವಳಿಕೆ ದಾಳಿಯ ಉದ್ದೇಶದಿಂದ ಕೂಡಿದೆ ಎಂದು.  ಹೇಗೆ ಅವನ ಮೇಲೆ ಬಿದ್ದು ಅವನನ್ನು ರಕ್ಷಿಸುತ್ತದೆ. ಎಲ್ಲವೂ ಸೆಕೆಂಡುಗಳ ಲೆಕ್ಕದಲ್ಲಿ ನಡೆದುಹೋಗುತ್ತದೆ. ಪಾಸಿಟಿವ್ ನ್ಯೂಸ್​ ಎಂಬ ಇನ್​ಸ್ಟಾಗ್ರಾಂ ಪುಟವು ಈ ವಿಡಿಯೋ ಅನ್ನು ಹಂಚಿಕೊಂಡಿದೆ. ಈ ಲೀಡರ್​ಗೆ ಸನ್ಮಾನ ಮಾಡಬೇಕು ಎಂದಿದ್ದಾರೆ ಕೆಲವರು. 2.8 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. 16,000 ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ.

ಇದನ್ನೂ ಓದಿ : ವಿಮಾನ ನಿಲ್ದಾಣದ ಸ್ಕ್ಯಾನಿಂಗ್​ ಮಶೀನಿನಲ್ಲಿ ಪತ್ತೆಯಾದ ನಾಯಿ; ನೆಟ್ಟಿಗರ ಆಕ್ರೋಶ

ಜರ್ಮನ್ ಶೆಫರ್ಡ್​ ನಿಷ್ಠೆಗೆ ಹೆಸರಾದ ತಳಿ ಎಂದಿದ್ದಾರೆ ಕೆಲವರು. ಪಡೆದ ಪ್ರೀತಿಯನ್ನು ಹೀಗೆ ಸಕಾಲದಲ್ಲಿ ಹಿಂದಿರುಗಿಸುತ್ತವೆ ಈ ನಾಯಿಗಳು ಎಂದಿದ್ದಾರೆ ಒಬ್ಬರು. ಸದ್ಯ ಈ ನಾಯಿ ಅಲ್ಲಿದ್ದು ರಕ್ಷಿಸಿತಲ್ಲ ಆ ಹುಡುಗನನ್ನು ಎಂದಿದ್ದಾರೆ ಹಲವರು. ದೇವರು ಒಳ್ಳೆಯದನ್ನು ಮಾಡಲಿ ಈ ನಾಯಿಗೆ ಎಂದಿದ್ದಾರೆ ಹಲವಾರು ಜನ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:07 am, Tue, 27 December 22

ದೆಹಲಿಯ ಅಕ್ಷರಧಾಮದಲ್ಲಿ ಮಾಕ್ ಡ್ರಿಲ್; ಮತ್ತೆ ಹೊತ್ತಿದ ದೀಪಗಳು
ದೆಹಲಿಯ ಅಕ್ಷರಧಾಮದಲ್ಲಿ ಮಾಕ್ ಡ್ರಿಲ್; ಮತ್ತೆ ಹೊತ್ತಿದ ದೀಪಗಳು
ನಗರದ ಹಲವಾರು ಏರಿಯಾಗಳ ನಿವಾಸಿಗಳಿಗೆ ಸೈರನ್ ಕೇಳಿಸಿಲ್ಲ
ನಗರದ ಹಲವಾರು ಏರಿಯಾಗಳ ನಿವಾಸಿಗಳಿಗೆ ಸೈರನ್ ಕೇಳಿಸಿಲ್ಲ
ಮಗಳ ಸಿನಿಮಾ ಪಯಣಕ್ಕೆ ದರ್ಶನ್, ಸುದೀಪ್ ಬೆಂಬಲ ನೆನೆದ ನಟ ಪ್ರೇಮ್
ಮಗಳ ಸಿನಿಮಾ ಪಯಣಕ್ಕೆ ದರ್ಶನ್, ಸುದೀಪ್ ಬೆಂಬಲ ನೆನೆದ ನಟ ಪ್ರೇಮ್
ಭಾರತದ ದಾಳಿಗೆ ಬಲಿಯಾದ ಉಗ್ರರಿಗೆ ಪಾಕಿಸ್ತಾನದ ಧ್ವಜ ಹೊದಿಸಿ ಅಂತ್ಯಕ್ರಿಯೆ
ಭಾರತದ ದಾಳಿಗೆ ಬಲಿಯಾದ ಉಗ್ರರಿಗೆ ಪಾಕಿಸ್ತಾನದ ಧ್ವಜ ಹೊದಿಸಿ ಅಂತ್ಯಕ್ರಿಯೆ
ರಾಜತಾಂತ್ರಿಕವಾಗಿಯೂ ಭಾರತ ಪಾಕಿಸ್ತಾನದ ವಿರುದ್ಧ ಗೆದ್ದಿದೆ: ಡಾ ಮಂಜುನಾಥ್
ರಾಜತಾಂತ್ರಿಕವಾಗಿಯೂ ಭಾರತ ಪಾಕಿಸ್ತಾನದ ವಿರುದ್ಧ ಗೆದ್ದಿದೆ: ಡಾ ಮಂಜುನಾಥ್
ಬೆಂಗಳೂರಿನಲ್ಲಿ ಬ್ಲ್ಯಾಕ್ ಔಟ್: ಕಗ್ಗತ್ತಲಾದ ರಾಜಧಾನಿ, ವಿಡಿಯೋ ನೋಡಿ
ಬೆಂಗಳೂರಿನಲ್ಲಿ ಬ್ಲ್ಯಾಕ್ ಔಟ್: ಕಗ್ಗತ್ತಲಾದ ರಾಜಧಾನಿ, ವಿಡಿಯೋ ನೋಡಿ
ಆಪರೇಷನ್​ ಸಿಂಧೂರ್: ಭಾರತ ವಿವೇಕಯುತದಿಂದ ಹೆಜ್ಜೆ ಇಟ್ಟಿದೆ, ​ಗುರೂಜಿ
ಆಪರೇಷನ್​ ಸಿಂಧೂರ್: ಭಾರತ ವಿವೇಕಯುತದಿಂದ ಹೆಜ್ಜೆ ಇಟ್ಟಿದೆ, ​ಗುರೂಜಿ
ಆಪರೇಷನ್ ಸಿಂಧೂರ್: ಮೋದಿಯ ನಾಯಕತ್ವವ ಕೊಂಡಾಡಿದ ತಾರಾ
ಆಪರೇಷನ್ ಸಿಂಧೂರ್: ಮೋದಿಯ ನಾಯಕತ್ವವ ಕೊಂಡಾಡಿದ ತಾರಾ
ಸರ್ಕಾರದ ನಿರ್ಧಾರ ಸರಿ ಇದೆ: ಆಪರೇಷನ್ ಸಿಂಧೂರ್ ಬಗ್ಗೆ ಶಿವಣ್ಣ ಪ್ರತಿಕ್ರಿಯೆ
ಸರ್ಕಾರದ ನಿರ್ಧಾರ ಸರಿ ಇದೆ: ಆಪರೇಷನ್ ಸಿಂಧೂರ್ ಬಗ್ಗೆ ಶಿವಣ್ಣ ಪ್ರತಿಕ್ರಿಯೆ
ಸೇನೆ ಮತ್ತು ಪ್ರಧಾನಿ ಮೋದಿಯವರಿಗೆ ಅಭಿನಂದನೆಗಳು: ಮುತಾಲಿಕ್
ಸೇನೆ ಮತ್ತು ಪ್ರಧಾನಿ ಮೋದಿಯವರಿಗೆ ಅಭಿನಂದನೆಗಳು: ಮುತಾಲಿಕ್