ನಾಯಿಯ ದಾಳಿಯಿಂದ ತನ್ನ ‘ಅಣ್ಣ’ನನ್ನು ರಕ್ಷಿಸಿದ ಜರ್ಮನ್ ಶೆಫರ್ಡ್​

German Shephard: ನಾಯಿಗಳು ಅತೀ ಸೂಕ್ಷ್ಮ ಸಂವೇದನೆಯುಳ್ಳ ಪ್ರಾಣಿಗಳು. ಇನ್ನೊಂದು ನಾಯಿ ದಾಳಿ ಮಾಡುವ ಮೂಡ್​ನಲ್ಲಿದೆ ಎನ್ನುವುದನ್ನು ಸೆಕೆಂಡುಗಳ ವೇಗದಲ್ಲಿ ಅರ್ಥ ಮಾಡಿಕೊಂಡು ರಕ್ಷಣೆಗೆ ಸನ್ನದ್ಧರಾಗುತ್ತವೆ. ನೋಡಿ ಈ ವಿಡಿಯೋ.

ನಾಯಿಯ ದಾಳಿಯಿಂದ ತನ್ನ ‘ಅಣ್ಣ’ನನ್ನು ರಕ್ಷಿಸಿದ ಜರ್ಮನ್ ಶೆಫರ್ಡ್​
ಅಣ್ಣನನ್ನು ರಕ್ಷಿಸುತ್ತಿರುವ ಜರ್ಮನ್ ಶೆಫರ್ಡ್​
Follow us
| Updated By: Digi Tech Desk

Updated on:Dec 27, 2022 | 10:57 AM

Viral Video: ತನ್ನ ಅಣ್ಣನೊಂದಿಗೆ ಈ ಜರ್ಮನ್​ ಶೆಫರ್​ ವಾಕಿಂಗ್​ ಬಂದಿದೆ. ಆದರೆ ವಾಕಿಂಗ್​ ಬಂದ ಇನ್ನೊಂದು ನಾಯಿಯು ಇದ್ದಕ್ಕಿದ್ದ ಹಾಗೆ ತನ್ನ ಪೋಷಕನಿಂದ ತಪ್ಪಿಸಿಕೊಂಡು ಬಂದು ಅಣ್ಣನ ಮೇಲೆ ದಾಳಿ ಮಾಡಲು ನೋಡಿದೆ. ಆಗ ಜರ್ಮನ್​ ಶೆಫರ್ಡ್​ ಶರವೇಗದಲ್ಲಿ ಅಣ್ಣನನ್ನು ತಳ್ಳಿ ಆ ನಾಯಿಯೊಂದಿಗೆ ಕಾದಾಡಿ ಅಣ್ಣನನ್ನು ರಕ್ಷಿಸಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಜರ್ಮನ್ ಶೆಫರ್ಡ್​ಗೆ ಶಭಾಷ್​ ಹೇಳುತ್ತಿದ್ದಾರೆ.

ಜರ್ಮನ್ ಶೆಫರ್ಡ್​ಗೆ ಅದೆಷ್ಟು ಬೇಗ ಅರ್ಥವಾಗುತ್ತದೆ ನೋಡಿ ಆ ನಾಯಿಯ ನಡೆವಳಿಕೆ ದಾಳಿಯ ಉದ್ದೇಶದಿಂದ ಕೂಡಿದೆ ಎಂದು.  ಹೇಗೆ ಅವನ ಮೇಲೆ ಬಿದ್ದು ಅವನನ್ನು ರಕ್ಷಿಸುತ್ತದೆ. ಎಲ್ಲವೂ ಸೆಕೆಂಡುಗಳ ಲೆಕ್ಕದಲ್ಲಿ ನಡೆದುಹೋಗುತ್ತದೆ. ಪಾಸಿಟಿವ್ ನ್ಯೂಸ್​ ಎಂಬ ಇನ್​ಸ್ಟಾಗ್ರಾಂ ಪುಟವು ಈ ವಿಡಿಯೋ ಅನ್ನು ಹಂಚಿಕೊಂಡಿದೆ. ಈ ಲೀಡರ್​ಗೆ ಸನ್ಮಾನ ಮಾಡಬೇಕು ಎಂದಿದ್ದಾರೆ ಕೆಲವರು. 2.8 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. 16,000 ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ.

ಇದನ್ನೂ ಓದಿ : ವಿಮಾನ ನಿಲ್ದಾಣದ ಸ್ಕ್ಯಾನಿಂಗ್​ ಮಶೀನಿನಲ್ಲಿ ಪತ್ತೆಯಾದ ನಾಯಿ; ನೆಟ್ಟಿಗರ ಆಕ್ರೋಶ

ಜರ್ಮನ್ ಶೆಫರ್ಡ್​ ನಿಷ್ಠೆಗೆ ಹೆಸರಾದ ತಳಿ ಎಂದಿದ್ದಾರೆ ಕೆಲವರು. ಪಡೆದ ಪ್ರೀತಿಯನ್ನು ಹೀಗೆ ಸಕಾಲದಲ್ಲಿ ಹಿಂದಿರುಗಿಸುತ್ತವೆ ಈ ನಾಯಿಗಳು ಎಂದಿದ್ದಾರೆ ಒಬ್ಬರು. ಸದ್ಯ ಈ ನಾಯಿ ಅಲ್ಲಿದ್ದು ರಕ್ಷಿಸಿತಲ್ಲ ಆ ಹುಡುಗನನ್ನು ಎಂದಿದ್ದಾರೆ ಹಲವರು. ದೇವರು ಒಳ್ಳೆಯದನ್ನು ಮಾಡಲಿ ಈ ನಾಯಿಗೆ ಎಂದಿದ್ದಾರೆ ಹಲವಾರು ಜನ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:07 am, Tue, 27 December 22

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ