AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಲಿಯೊಂದಿಗೆ ಮೈಂಡ್​ ಗೇಮ್ ಆಡಿ ಪ್ರಾಣ ಉಳಿಸಿಕೊಂಡ ಜಾಣಕೋತಿ!

Viral Video : ತನ್ನನ್ನು ಬೇಟೆಯಾಡಲು ಬಂದಿರುವ ಹುಲಿಯನ್ನು ಹೇಗೆ ಮರದಿಂದ ಉಪಾಯವಾಗಿ ನೆಲಕ್ಕೆ ಬೀಳಿಸುತ್ತದೆ ನೋಡಿ ಈ ಬುದ್ಧಿವಂತ ಕೋತಿ.

ಹುಲಿಯೊಂದಿಗೆ ಮೈಂಡ್​ ಗೇಮ್ ಆಡಿ ಪ್ರಾಣ ಉಳಿಸಿಕೊಂಡ ಜಾಣಕೋತಿ!
ಮರದಿಂದ ಹುಲಿಯನ್ನು ಕೆಡವಿದ ಕೋತಿ
ಶ್ರೀದೇವಿ ಕಳಸದ
|

Updated on:Oct 01, 2022 | 11:59 AM

Share

Viral Video : ಹುಲಿ! ಈ ಹುಲಿ ಕೋತಿಯಿಂದ ಸೋಲನ್ನಪ್ಪುವುದೆ? ಸಾಧ್ಯವೇ ಇಲ್ಲ ಎಂದು ಸಲೀಸಾಲಿ ಹೇಳಿಬಿಡುತ್ತೀರಿ. ಆದರೆ ಇದು ಸಾಧ್ಯ ಎಂದಿದೆ ಇದೀಗ ವೈರಲ್ ಆಗಿರುವ ಹಳೆಯ ವಿಡಿಯೋ. ಹುಲಿಯೊಂದು ಕೋತಿಯನ್ನು ಬೇಟೆಯಾಡಲು ಬೆನ್ನಟ್ಟಿಕೊಂಡು ಬರುತ್ತದೆ. ಕೋತಿಯು ಸರಸರನೆ ಅಲ್ಲಿದ್ದ ಸಾಧಾರಣ ಎತ್ತರದ ಮರವೊಂದನ್ನು ಏರಿ ಕುಳಿತುಕೊಳ್ಳುತ್ತದೆ. ಹುಲಿಯೂ ಮರವನ್ನೇರುತ್ತದೆ. ಹೇಗೆ ತಪ್ಪಿಸಿಕೊಳ್ಳುವುದು ಎಂದು ಉಪಾಯ ಮಾಡುತ್ತಲೇ ಕೋತಿ ಎದುರಿನ ಟೊಂಗೆಗೆ ಹಾರುತ್ತದೆ. ಮುಂದೇನಾಗುತ್ತದೆ ಎಂದು ತಿಳಿದುಕೊಳ್ಳಲು ಈ ವಿಡಿಯೋ ನೋಡಿ.

ಹುಲಿ ಎಷ್ಟೇ ಬಲಶಾಲಿಯಾದರೂ ಕೋತಿ ಧೈರ್ಯಗೆಡದೆ, ತನ್ನ ಬುದ್ಧಿಶಕ್ತಿಯಿಂದ ತನ್ನನ್ನು ತಾ ಪಾರುಮಾಡಿಕೊಳ್ಳುವುದರ ಬಗ್ಗೆ ಯೋಚಿಸುತ್ತದೆ. ತಕ್ಷಣವೇ ಕೋತಿ ಎದುರಿನ ಕೊಂಬೆಗೆ ಹಾರಿ ಜೋತುಬೀಳುತ್ತದೆ. ಇನ್ನೇನು ತಾನು ಕೆಳಗೆ ಬಿದ್ದೇ ಹೋಗುತ್ತೇನೆ ಎಂಬಂತೆ ನಟಿಸುತ್ತದೆ. ಇದೇ ಸರಿಯಾದ ಸಮಯ ಎಂದು ಹುಲಿ ಕೋತಿಯ ಮೇಲೆ ಆಕ್ರಮಣ ಮಾಡಬೇಕೆನ್ನುವ ಹೊತ್ತಿಗೆ ಕೋತಿ ಪಕ್ಕದ ಕೊಂಬೆಗೆ ಹಾರಿಬಿಡುತ್ತದೆ. ಬೇಟೆ ತಪ್ಪಿಸಿಕೊಂಡ ಹುಲಿ ಮರದಿಂದ ಧೊಪ್ಪನೆ ನೆಲಕ್ಕೆ ಬೀಳುತ್ತದೆ.

ಈ ವಿಡಿಯೋವನ್ನು ಐಎಎಸ್ ಅಧಿಕಾರಿ ಅವನೀಶ್ ಶರಣ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಹಾಲತ್ ಕಾ ‘ಶಿಕಾರ್’ ಎಂಬ ಶೀರ್ಷಿಕೆ ಇದಕ್ಕಿದೆ. ಸುಮಾರು ಒಂದೂ ಮುಕ್ಕಾಲು ಲಕ್ಷದಷ್ಟು ಜನ ಈ ವಿಡಿಯೋ ವೀಕ್ಷಿಸಿದ್ದಾರೆ. 8,300 ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 11:57 am, Sat, 1 October 22

‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ