AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮರಿ ಜಿಂಕೆಯನ್ನು ಉಳಿಸಲು ಹೋಗಿ ಮೊಸಳೆಗೆ ಆಹಾರವಾದ ತಾಯಿ ಜಿಂಕೆ; ತಾಯಿಯ ತ್ಯಾಗಕ್ಕೆ ಕಣ್ಣೀರು ಹಾಕಿದ ನೆಟ್ಟಿಗರು

ತಾಯಿಯ ಪ್ರೀತಿಯ ಶಕ್ತಿ, ಸೌಂದರ್ಯ ಮತ್ತು ವೀರತ್ವವನ್ನು ಯಾವುದೆ ಪದಗಳಿಂದ ವಿವರಿಸಲು ಸಾಧ್ಯವಿಲ್ಲ. ತಾಯಿ ಜಿಂಕೆಯೊಂದು ತನ್ನ ಮಗುವನ್ನು ರಕ್ಷಿಸಲು ತ್ಯಾಗ ಮಾಡಿದ ಹೃದಯವಿದ್ರಾವಕ ವಿಡಿಯೋ ಇದು.

ಮರಿ ಜಿಂಕೆಯನ್ನು ಉಳಿಸಲು ಹೋಗಿ ಮೊಸಳೆಗೆ ಆಹಾರವಾದ ತಾಯಿ ಜಿಂಕೆ; ತಾಯಿಯ ತ್ಯಾಗಕ್ಕೆ ಕಣ್ಣೀರು ಹಾಕಿದ ನೆಟ್ಟಿಗರು
ಮರಿ ಜಿಂಕೆಯನ್ನು ಉಳಿಸಲು ಹೋಗಿ ಮೊಸಳೆಗೆ ಆಹಾರವಾದ ತಾಯಿ ಜಿಂಕೆ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Apr 09, 2022 | 9:15 PM

Share

viral video: ತಾಯಿ ಜಿಂಕೆ (Deer) ಗಳು ತಮ್ಮ ಸಂತತಿಯನ್ನು ತೀವ್ರವಾಗಿ ರಕ್ಷಿಸುತ್ತವೆ ಮತ್ತು ಸಾಮಾನ್ಯವಾಗಿ ತಮ್ಮ ಎರಡು ವರ್ಷಗಳವರೆಗೆ ವಿಶೇಷವಾಗಿ ತಮ್ಮ ಮರಿಗಳಿಗೆ ಹತ್ತಿರವಾಗಿರುತ್ತವೆ. ಹೆಣ್ಣು ಜಿಂಕೆ ತನ್ನ ಮಕ್ಕಳನ್ನು ಎಷ್ಟು ಪ್ರೀತಿಸುತ್ತದೆ ಎಂಬುದಕ್ಕೆ ಸಾಕ್ಷಿ ಎನ್ನುವಂತೆ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಏಪ್ರಿಲ್ 6 ರಂದು ಐಎಎಸ್ ಅಧಿಕಾರಿ ಸೋನಾಲ್ ಗೋಯೆಲ್ ಅವರು ಟ್ವಿಟರ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದು, ಇಲ್ಲಿಯವರೆಗೆ 124k ವೀಕ್ಷಣೆಗಳು ಮತ್ತು 8k ಲೈಕ್‌ಗಳನ್ನು ಪಡೆದುಕೊಂಡಿದೆ. ಹೃದಯ ವಿದ್ರಾವಕ ವಿಡಿಯೋದಲ್ಲಿ ಜಿಂಕೆಯೊಂದು ನದಿಯಲ್ಲಿ ಈಜುತ್ತಿರುವಾಗ ಮೊಸಳೆಯು ಅದನ್ನು ಬೇಟೆಯಾಡಲು ಅದರ ಕಡೆಗೆ ಧಾವಿಸುತ್ತದೆ. ಇದನ್ನು ನೋಡಿದ ತಾಯಿ ಜಿಂಕೆ ತಕ್ಷಣವೇ ನೀರಿಗೆ ಹಾರಿ ತನ್ನ ಮರಿ ಜಿಂಕೆಯ ಜೀವ ಉಳಿಸುತ್ತದೆ. ಜಿಂಕೆ ಮರಿ ದಡ ತಲುಪಿದ ನಂತರ, ತಾಯಿ ಜಿಂಕೆಯು ಮೊಸಳೆಗೆ ತನ್ನನ್ನು ಬೇಟೆಯಾಗಿ ತೆಗೆದುಕೊಳ್ಳಲು ಅವಕಾಶ ನೀಡುತ್ತದೆ. ಮೊಸಳೆ ತನ್ನ ಚುಪಾದ ಹಲ್ಲುಗಳಿಂದ ಜಿಂಕೆಯನ್ನು ಕೊಂದು ಅದನ್ನು ತಿನ್ನುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ತಾಯಿಯ ಪ್ರೀತಿಯ ಶಕ್ತಿ, ಸೌಂದರ್ಯ ಮತ್ತು ವೀರತ್ವವನ್ನು ಯಾವುದೆ ಪದಗಳಿಂದ ವಿವರಿಸಲು ಸಾಧ್ಯವಿಲ್ಲ. ತಾಯಿ ಜಿಂಕೆಯೊಂದು ತನ್ನ ಮಗುವನ್ನು ರಕ್ಷಿಸಲು ತ್ಯಾಗ ಮಾಡಿದ ಹೃದಯವಿದ್ರಾವಕ ವಿಡಿಯೋ ಇದು. ನಿಮ್ಮ ಪೋಷಕರು ಮತ್ತು ಕುಟುಂಬವನ್ನು ಎಂದಿಗೂ ನಿರ್ಲಕ್ಷಿಸಬೇಡಿ ಎಂದು ಇದು ನಮಗೆ ನೆನಪಿಸುತ್ತದೆ. ಅವರನ್ನು ಗೌರವಿಸಿ ಮತ್ತು ನಿಮ್ಮ ಸರದಿ ಬಂದಾಗ ಅವರನ್ನು ನೋಡಿಕೊಳ್ಳಿ ಎಂದು ಅಧಿಕಾರಿ ವಿಡಿಯೋದೊಂದಿಗೆ ಟ್ವೀಟ್ ಮಾಡಿದ್ದಾರೆ. ಜಿಂಕೆಗಳು ವೀರಾವೇಶದಿಂದ ಬಲಿಯಾಗುತ್ತಿರುವುದು ನೆಟ್ಟಿಗರ ಕಣ್ಣಲ್ಲಿ ನೀರು ತರಿಸಿದೆ. ಟ್ವಿಟರ್ ಬಳಕೆದಾರರು ಆಕೆಯ ನಿಸ್ವಾರ್ಥತೆ ಮತ್ತು ಧೈರ್ಯವನ್ನು ಶ್ಲಾಘಿಸಿದ್ದಾರೆ. ಭಾವನಾತ್ಮಕವಾಗುವುದು !!! ನಿಜವಾದ ಪಾಠ.. ತಾಯಿ ತಾಯಿನೇ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ:

ಮಂಗಳೂರು: ಡಿವೈಡರ್​​ ಹಾರಿ ಸ್ಕೂಟಿಗೆ ಡಿಕ್ಕಿ ಹೊಡೆದ ಬಿಎಂಡಬ್ಲ್ಯು ಕಾರು; ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಗವಿಸಿದ್ದಪ್ಪ ಕೊಲೆಗೆ ಮತ್ತೊಂದು ಟ್ವಿಸ್ಟ್: ಸ್ಫೋಟಕ ಅಂಶ ಬಿಚ್ಚಿಟ್ಟ ತಾಯಿ
ಗವಿಸಿದ್ದಪ್ಪ ಕೊಲೆಗೆ ಮತ್ತೊಂದು ಟ್ವಿಸ್ಟ್: ಸ್ಫೋಟಕ ಅಂಶ ಬಿಚ್ಚಿಟ್ಟ ತಾಯಿ
ಆತ್ಮಹತ್ಯೆಗೆ ಯತ್ನಿಸಿದವನಿಗೆ ಕೊನೆ ಕ್ಷಣದಲ್ಲಿ ಹುಟ್ಟಿತು ಬದುಕಬೇಕೆಂಬ ಆಸೆ
ಆತ್ಮಹತ್ಯೆಗೆ ಯತ್ನಿಸಿದವನಿಗೆ ಕೊನೆ ಕ್ಷಣದಲ್ಲಿ ಹುಟ್ಟಿತು ಬದುಕಬೇಕೆಂಬ ಆಸೆ
ಪ್ರವಾಹದಲ್ಲಿ ಸಿಲುಕಿದ್ದ ಶಾಲಾ ಮಕ್ಕಳನ್ನು ಕಾಪಾಡಿದ ಮುಂಬೈ ಪೊಲೀಸರು
ಪ್ರವಾಹದಲ್ಲಿ ಸಿಲುಕಿದ್ದ ಶಾಲಾ ಮಕ್ಕಳನ್ನು ಕಾಪಾಡಿದ ಮುಂಬೈ ಪೊಲೀಸರು
ಮನೆಗೆ ಬಂದ ಶುಭಾಂಶು ಶುಕ್ಲಾಗೆ ಪ್ರಧಾನಿ ಮೋದಿಯಿಂದ ಅಪ್ಪುಗೆಯ ಸ್ವಾಗತ
ಮನೆಗೆ ಬಂದ ಶುಭಾಂಶು ಶುಕ್ಲಾಗೆ ಪ್ರಧಾನಿ ಮೋದಿಯಿಂದ ಅಪ್ಪುಗೆಯ ಸ್ವಾಗತ
ಜೈಲು ಚೆಕ್ ಪೋಸ್ಟ್ ಬಳಿ ವಿಜಯಲಕ್ಷ್ಮಿ ದರ್ಶನ್​ ಕಾರು ತಡೆದ ಜೈಲು ಸಿಬ್ಬಂದಿ
ಜೈಲು ಚೆಕ್ ಪೋಸ್ಟ್ ಬಳಿ ವಿಜಯಲಕ್ಷ್ಮಿ ದರ್ಶನ್​ ಕಾರು ತಡೆದ ಜೈಲು ಸಿಬ್ಬಂದಿ
ಧರ್ಮಸ್ಥಳ ಪ್ರಕರಣ ತನಿಖೆಯಲ್ಲಿ ಏನೇನಾಯ್ತು? ಗೃಹ ಸಚಿವ ಕೊಟ್ಟ ಮಾಹಿತಿ
ಧರ್ಮಸ್ಥಳ ಪ್ರಕರಣ ತನಿಖೆಯಲ್ಲಿ ಏನೇನಾಯ್ತು? ಗೃಹ ಸಚಿವ ಕೊಟ್ಟ ಮಾಹಿತಿ
ದರ್ಶನ್ ಇಲ್ಲದಿದ್ದರೂ ಈ ವರ್ಷವೇ ಬಿಡುಗಡೆ ಆಗುತ್ತಾ ‘ದಿ ಡೆವಿಲ್’ ಸಿನಿಮಾ?
ದರ್ಶನ್ ಇಲ್ಲದಿದ್ದರೂ ಈ ವರ್ಷವೇ ಬಿಡುಗಡೆ ಆಗುತ್ತಾ ‘ದಿ ಡೆವಿಲ್’ ಸಿನಿಮಾ?
ಅಲೆಗಳ ಅಬ್ಬರಕ್ಕೆ ಕಡಲ ತೀರಕ್ಕೆ ಬಂದ ಡಾಲ್ಫಿನ್ ಮೀನು
ಅಲೆಗಳ ಅಬ್ಬರಕ್ಕೆ ಕಡಲ ತೀರಕ್ಕೆ ಬಂದ ಡಾಲ್ಫಿನ್ ಮೀನು
ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ ಎಲ್ಲರಿಗೂ ಇದೆ ಮಾರಿ ಹಬ್ಬ
ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ ಎಲ್ಲರಿಗೂ ಇದೆ ಮಾರಿ ಹಬ್ಬ
ದಾರಿಯುಲ್ಲಿ ಹೋಗುತ್ತಿದ್ದ ವ್ಯಕ್ತಿಯ ಮುಖ ಕಚ್ಚಿದ ಬೀದಿ ನಾಯಿ
ದಾರಿಯುಲ್ಲಿ ಹೋಗುತ್ತಿದ್ದ ವ್ಯಕ್ತಿಯ ಮುಖ ಕಚ್ಚಿದ ಬೀದಿ ನಾಯಿ