AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ನೀವೇನು ಹೇಳುತ್ತೀರಿ? ಈ ಮಹಿಳೆ ಕುದಿಯುವ ಎಣ್ಣೆಯಲ್ಲಿ ಬರಿಗೈಯಿಂದ ವಡಾಪಾವ್​ ತೆಗೆಯುತ್ತಿದ್ದಾರಲ್ಲ

Woman Dips Hand In Hot Oil : ಕಾಯ್ದ ಒಂದು ಹನಿ ಎಣ್ಣೆ ಮೈಮೇಲೆ ಸಿಡಿದರೆ ಬೊಬ್ಬೆ ಬಂದಿರುತ್ತದೆ. ಅಂಥದ್ದರಲ್ಲಿ ಈಕೆ...; ನೆಟ್ಟಿಗರು ಈ ವಿಷಯವಾಗಿ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಈ ತಂತ್ರದ ಹಿಂದಿನ ಸತ್ಯ ಇಲ್ಲಿದೆ!

Viral Video : ನೀವೇನು ಹೇಳುತ್ತೀರಿ? ಈ ಮಹಿಳೆ ಕುದಿಯುವ ಎಣ್ಣೆಯಲ್ಲಿ ಬರಿಗೈಯಿಂದ ವಡಾಪಾವ್​ ತೆಗೆಯುತ್ತಿದ್ದಾರಲ್ಲ
ನಾಸಿಕ್​ನ ವಡಾಪಾವ್​ ವ್ಯಾಪಾರಿ
TV9 Web
| Updated By: ಶ್ರೀದೇವಿ ಕಳಸದ|

Updated on:Sep 09, 2022 | 5:24 PM

Share

Viral Video : ಭಾತೀಯರಾದ ನಮಗೆ ರಸ್ತೆಬದಿಯ ತಿಂಡಿ ತಿನಿಸುಗಳ ಹುಚ್ಚು ಮುಗಿಯದ್ದು. ಒಂದೊಂದು ಹಳ್ಳಿ ಊರುಗಳಲ್ಲಿಯೂ ಅಷ್ಟೇ ವೈವಿಧ್ಯಮಯ ಅಷ್ಟೇ ಭಿನ್ನ ಭಿನ್ನ ರುಚಿ ತಿಂಡಿ ತಿನಿಸುಗಳು. ಸಂಜೆಯಾಗುತ್ತಲೇ ಕಿಕ್ಕಿರಿದು ತುಂಬುವ ಈ ಫುಡ್​ ಸ್ಟ್ರೀಟ್​ಗಳನ್ನು ನೋಡುವುದೇ ಚೆಂದ. ಅಲ್ಲಿಯ ಭಾಷೆ, ಅಲ್ಲಿಯ ವ್ಯವಹಾರ ಸಂಸ್ಕೃತಿ, ಪರಿಮಳ, ಮಾರುವವರ ಉತ್ಸಾಹ, ತಿನ್ನುವವರ ಆತುರ! ಹೀಗೆ… ಆದರೆ ಅಷ್ಟು ವೇಗದಲ್ಲಿ ರುಚಿಕಟ್ಟಾದ ತಿನಿಸುಗಳನ್ನು ತಯಾರಿಸುವುದು ಒಂದು ಕಲೆ ಮತ್ತು ಕೌಶಲ. ನಿತ್ಯವೂ ಇಷ್ಟೇ ವೇಗದಲ್ಲಿ, ಬಿಸಿಬಿಸಿ ಕಡಾಯಿಯ ಮುಂದೆ ನಿಂತುಕೊಂಡೇ, ಎದುರಿಗೆ ಗ್ರಾಹಕರೊಂದಿಗೆ ವ್ಯವಹರಿಸುತ್ತಲೇ, ರುಚಿ ವ್ಯತ್ಯಾಸವಾಗದಂತೆ ತಯಾರಿಸುವ ಕೆಲಸ ಇದೆಯಲ್ಲ, ಸವಾಲಿನದು. ಅದಕ್ಕೆ ಬೇಕಾಗುವ ಪರಿಕರಗಳನ್ನೆಲ್ಲ ನಿತ್ಯವೂ ಹೊಂದಿಸಿಕೊಳ್ಳುವ ಪರಿಶ್ರಮ ಮುಗಿಯದ್ದು. ನಾಸಿಕ್​ನಲ್ಲಿ ಮಹಿಳೆಯೊಬ್ಬಳು ಕುದಿಯುತ್ತಿರುವ ಎಣ್ಣೆಯಲ್ಲಿ ಬರಿಗೈಯಿಂದ ವಡಾ ಪಾವ್​ ತೆಗೆಯುತ್ತಿರುವ ವಿಡಿಯೋ ವೈರಲ್ ಆಗಿದ್ದನ್ನು ಈಗಾಗಲೇ ನೀವು ನೋಡಿರಬಹುದು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈಕೆ ಮೊದಲು ಪಾವ್​ನ ಹೊಟ್ಟೆ ಸೀಳುತ್ತಾಳೆ. ಅದರೊಳಗೆ ಚೀಸ್​ ಸ್ಲೈಸ್​ ಇಟ್ಟು ಆಲೂಮಸಾಲಾ ತುಂಬುತ್ತಾಳೆ. ನಂತರ ಅದನ್ನು ಕಡಲೆಹಿಟ್ಟಿನಲ್ಲಿ ಅದ್ದಿ ಕಾದ ಎಣ್ಣೆಯಲ್ಲಿ ಕರಿಯುತ್ತಾಳೆ. ಬೆಂದ ನಂತರ ಕುದಿಯುವ ಎಣ್ಣೆಯೊಳಗೆ ಕೈಹಾಕಿ ಚೀಸಿ ವಡಾ ಪಾವ್​ ಹೊರತೆಗೆದು ತಟ್ಟೆಯಲ್ಲಿ ಹಾಕುತ್ತಾಳೆ.

ಈ  ವಿಡಿಯೋ  ಅನ್ನು ಈತನಕ 41 ಲಕ್ಷಕ್ಕಿಂತೂ ಹೆಚ್ಚು ಜನ ವೀಕ್ಷಿಸಿದ್ದಾರೆ. 1,60,700 ಜನರು ಮೆಚ್ಚಿದ್ದಾರೆ. ಸಾವಿರಾರು ಜನರು ತಮಗನ್ನಿಸಿದ್ದನ್ನು ಕಮೆಂಟ್ ಮಾಡಿದ್ದಾರೆ.

‘ಯಾಕೆ ಇಷ್ಟೊಂದು ಆತುರ? ಚಮಚದ ಬದಲಾಗಿ ಬಿಸೀ ಎಣ್ಣೆಯಲ್ಲಿ ಕೈ ಅದ್ದಿ ತಗೆಯುವಂಥ ಅವಸರ ಏನಿದೆ?’

‘ಮೇಡಮ್​, ಗ್ಲೌಸ್​ ಹಾಕಿಕೊಳ್ಳಿ. ಶುಚಿತ್ವ ಕೂಡ ಬಹಳ ಮುಖ್ಯ’

‘ಈ ಮಹಿಳೆ ಹೀಗೆ ಬಿಸಿ ಎಣ್ಣೆಯಲ್ಲಿ ಕೈ ಹಾಕಿ ವಡಾ ತೆಗೆಯುವುದನ್ನು ನೋಡಿ ನಾನಂತೂ ಇಂಪ್ರೆಸ್​ ಆಗಿದ್ದೇನೆ’‘

‘ಯಾಕೆ ಈಕೆ ಹೀಗೆ ಕೈ ಅದ್ದುತ್ತಿರುವುದು?’

ನಿಮಗೇನಾದರೂ ಹೊಳೆಯುತ್ತಿದೆಯೇ? ಯಾಕೆ ಮತ್ತು ಹೇಗೆ ಈಕೆ ಬಿಸಿ ಎಣ್ಣೆಯಲ್ಲಿ ಕೈ ಅದ್ದುವುದೆಂದು? ಪವಾಡ ನಡೆಯುತ್ತಿದೆ ಎಂದು ಅನುಮಾನ ಬರುತ್ತಿದೆಯಾ? ಹೋಗಲಿ ವೈಜ್ಞಾನಿಕವಾಗಿ ಏನಾದರೂ ತಂತ್ರ ಇದೆಯಾ?  ಏಕೆಂದರೆ ವಾಸ್ತವದಲ್ಲಿ ಒಂದು ಹನಿ ಎಣ್ಣೆ ಸಿಡಿದರೆ ಮಾರನೇ ದಿನ ಬೊಬ್ಬೆ ಬಂದಿರುತ್ತದೆ ಎನ್ನುವುದು ನಿಮಗೆಲ್ಲರಿಗೂ ಗೊತ್ತಿರುವಂಥದ್ದೇ.

ಹೌದು ಇದರ ಹಿಂದೆ ಒಂದು ತಂತ್ರ ಅಡಗಿದೆ. ಕೈಗೆ ಥಣ್ಣನೆಯ ಎಣ್ಣೆ ಮತ್ತು ನಿಂಬೆಹಣ್ಣಿನ ರಸ ಹಚ್ಚಿಕೊಂಡು ಹೀಗೆ ಕುದಿಯುವ ಎಣ್ಣೆಯಲ್ಲಿ ಕೈ ಅದ್ದಬಹುದು. ಬಹುಶಃ ಈಕೆ ಇದೇ ವೈಜ್ಞಾನಿಕ ತಂತ್ರವನ್ನು ಅನುಸರಿಸಿರಬಹುದು. ಏಕೆಂದರೆ, ನಿಂಬೆಹಣ್ಣಿನಲ್ಲಿರುವ ಸಿಟ್ರಿಕ್ ಆಮ್ಲ ಕುದಿಯುವ ಎಣ್ಣೆಯ ಶಾಖವನ್ನು ಹೀರಿಕೊಳ್ಳುತ್ತದೆ. ಆಗ ಕೈಗೆ ಶಾಖ ತಾಕದು.

ಹುಕಿ ಬಂದು ಪ್ರಯತ್ನಿಸಬೇಕು ಎನ್ನಿಸುತ್ತಿದೆಯೇ? ಹುಷಾರು. ಇದೆಲ್ಲ ಅಪಾಯಕಾರಿ. ಪರಿಣತರ ಮಾರ್ಗದರ್ಶನವಿಲ್ಲದೆ ಇಂಥ ಪ್ರಯೋಗಗಳಿಗೆ ಕೈಹಾಕಬಾರದು.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:05 pm, Fri, 9 September 22

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?