AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಡಿಶಾ: ಆಳವಾದ ಗುಂಡಿಯಲ್ಲಿ ಬಿದ್ದ ಆನೆಯನ್ನು ರಕ್ಷಿಸಿ ಕರ್ತವ್ಯ ಮೆರೆದ ಅರಣ್ಯ ಇಲಾಖೆ

ಹಳ್ಳಿ ದಾಟಿ ಕಾಡಿಗೆ ಹೋಗಲು ದಾರಿ ತೋಚದೇ ಆನೆಗಳು ಪರದಾಡುತ್ತಿದ್ದವು, ಈ ವೇಳೆಯಲ್ಲಿ ಜನರನ್ನು ಕಂಡು ಕಂಗಾಲಾದ ಆನೆಗಳು ದಿಕ್ಕಾ ಪಾಲಾಗಿ ಓಡಿವೆ. ಅದರಲ್ಲೊಂದು ವಯಸ್ಕ ಆನೆ ಆಳವಾದ ಹಳ್ಳಕ್ಕೆ ಬಿದ್ದಿದೆ ಎಂದು ವರದಿ ಮಾಡಲಾಗಿದೆ.

ಒಡಿಶಾ: ಆಳವಾದ ಗುಂಡಿಯಲ್ಲಿ ಬಿದ್ದ ಆನೆಯನ್ನು ರಕ್ಷಿಸಿ ಕರ್ತವ್ಯ ಮೆರೆದ ಅರಣ್ಯ ಇಲಾಖೆ
ಆಳವಾದ ಗುಂಡಿಯಲ್ಲಿ ಬಿದ್ದ ಆನೆಯನ್ನು ರಕ್ಷಿಸಿದ ಅರಣ್ಯ ಇಲಾಖೆ
TV9 Web
| Edited By: |

Updated on:Oct 06, 2021 | 12:28 PM

Share

ಆಳವಾದ ಗುಂಡಿಯಲ್ಲಿ ಬಿದ್ದಿದ್ದ ಆನೆಯನ್ನು ಅರಣ್ಯ ಇಲಾಖೆ ರಕ್ಷಿಸಿದೆ. ರಕ್ಷಣಾ ಕಾರ್ಯಾಚಾರಣೆಯಲ್ಲಿ ಜೆಸಿಬಿಯನ್ನು ತಂದು ಆನೆಯನ್ನು ರಕ್ಷಿಸಿ ಒಡಿಶಾ ಬಾಂಗಿರಿಪೋಸಿ ಅರಣ್ಯ ಇಲಾಖೆ ಕರ್ತವ್ಯ ಮೆರೆದಿದೆ. ಈ ಕುರಿತಂತೆ ಎಎನ್ಐ ವರದಿ ಮಾಡಿದೆ. ರಾತ್ರಿ ವೇಳೆಯಲ್ಲಿ ಸುಮಾರು 10 ಆನೆಗಳು ಮಯೂರ್​ಭಂಜ್​ ಜಿಲ್ಲೆಯಲ್ಲಿರುವ ಪುಟ್ಟ ಹಳ್ಳಿಯನ್ನು ಪ್ರವೇಶಿಸಿವೆ. ಹಳ್ಳಿ ದಾಟಿ ಕಾಡಿಗೆ ಹೋಗಲು ದಾರಿ ತೋಚದೇ ಆನೆಗಳು ಪರದಾಡುತ್ತಿದ್ದವು, ಈ ವೇಳೆಯಲ್ಲಿ ಜನರನ್ನು ಕಂಡು ಕಂಗಾಲಾದ ಆನೆಗಳು ದಿಕ್ಕಾ ಪಾಲಾಗಿ ಓಡಿವೆ. ಅದರಲ್ಲೊಂದು ವಯಸ್ಕ ಆನೆ ಆಳವಾದ ಹಳ್ಳಕ್ಕೆ ಬಿದ್ದಿದೆ ಎಂದು ವರದಿ ಮಾಡಲಾಗಿದೆ.

ಶನಿವಾರ ತಡ ರಾತ್ರಿ ಮಯೂರ್​ಭಂಜ್​ ಜಿಲ್ಲೆಯ ಟೆಂಬಟೊಲ ಗ್ರಾಮದ ಸಮೀಪದಲ್ಲಿರುವ ಹಳ್ಳದಲ್ಲಿ ಆನೆ ಜಾರಿ ಬಿದ್ದಿದೆ. ಜನರನ್ನು ನೋಡಿದ ಆನೆಗಳು ಹೆದರಿ ಓಡಲು ಪ್ರಾರಂಭಿಸಿದವು ಆ ವೇಳೆ ಆನೆಯೊಂದು ಹಳ್ಳಕ್ಕೆ ಬಿದ್ದಿದೆ ಎಂಬ ಮಾಹಿತಿಯನ್ನು ವನ್ಯಜೀವಿ ತಜ್ಞ ಅನೂಮಿತ್ರ ಆಚಾರ್ಯ ಎಎನ್ಐಗೆ ತಿಳಿಸಿದ್ದಾರೆ.

ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಕ್ಷಣ ವಿಷಯ ತಿಳಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಕೈಗೊಂಡ ಇಲಾಖೆ ಆನೆಯನ್ನು ರಕ್ಷಿಸಿದೆ. ಬಳಿಕ ಕಾಡಿಗೆ ಕಳುಹಿಸಲಾಗಿದೆ. ಮಯೂರ್​ಭಂಜ್​ ಜಿಲ್ಲೆಯಲ್ಲಿ ಇಂಥಹ ಘಟನೆ ನಡೆಯುತ್ತಿರುವುದು ಇದೇ ಮೊದಲಲ್ಲ. 2021 ಏಪ್ರಿಲ್​ನಲ್ಲಿ ಮರಿ ಆನೆಯೊಂದು 15ಅಡಿ ಆಳದ ಬಾವಿಗೆ ಬಿದ್ದಿತ್ತು. ಕಾರ್ಯಾಚರಣೆಯನ್ನು ಕೈಗೊಂಡ ಇಲಾಖೆ ಸುರಕ್ಷಿತವಾಗಿ ಆನೆ ಮರಿಯನ್ನು ರಕ್ಷಿಸಿತ್ತು.

ಇದನ್ನೂ ಓದಿ:

ಶೌಚಗುಂಡಿಗೆ ಬಿದ್ದು ಮೇಲೆ ಬರಲಾಗದೆ ಆನೆ ಮರಿ ನರಳಾಟ; ರಕ್ಷಣೆಗೆ ಮುಂದಾಗಿರುವ ಗ್ರಾಮಸ್ಥರು

ಮೈಸೂರು: ತಾಯಿಯಿಂದ ಬೇರ್ಪಟ್ಟ ಎರಡು ಚಿರತೆ ಮರಿಗಳ ರಕ್ಷಣೆ

Published On - 12:27 pm, Wed, 6 October 21

ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಅಶ್ವಿನಿ-ಗಿಲ್ಲಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸಿ; ಆರಂಭವಾಯ್ತು ಫೈಟ್
ಅಶ್ವಿನಿ-ಗಿಲ್ಲಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸಿ; ಆರಂಭವಾಯ್ತು ಫೈಟ್
4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
ಹುಬ್ಬಳ್ಳಿ ಮಂದಿಗೆ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ
ಹುಬ್ಬಳ್ಳಿ ಮಂದಿಗೆ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ