Sign In

By signing in or creating an account, you agree with Associated Broadcasting Company's Terms & Conditions and Privacy Policy.

Spending Hubby Money is Hobby​​: ಅಬ್ಬಾ ಇಂಥಾ ಹೆಂಡತಿಯಿದ್ದರೆ ಇಡೀ ಆಸ್ತಿ ಮಾರಬೇಕಾಗುತ್ತೆ ಅಷ್ಟೇಯಾ! ಒಂದೇ ದಿನದಲ್ಲಿ 73 ಲಕ್ಷ ರೂ ಶಾಪಿಂಗ್ ಮಾಡಿದ ಮಡದಿ!

‘ನನ್ನ ಪತಿಯ ಮನಸ್ಥಿತಿಗೆ ಅನುಗುಣವಾಗಿ ನಾನು ದಿನಕ್ಕೆ 73 ಲಕ್ಷ ರೂ. ವರೆಗೆ ಶಾಪಿಂಗ್ ಮಾಡುತ್ತೇವೆ ಎಂದ ದುಬೈನ ಸಾದಿಯಾ

Spending Hubby Money is Hobby​​: ಅಬ್ಬಾ ಇಂಥಾ ಹೆಂಡತಿಯಿದ್ದರೆ ಇಡೀ ಆಸ್ತಿ ಮಾರಬೇಕಾಗುತ್ತೆ ಅಷ್ಟೇಯಾ! ಒಂದೇ ದಿನದಲ್ಲಿ 73 ಲಕ್ಷ  ರೂ ಶಾಪಿಂಗ್ ಮಾಡಿದ ಮಡದಿ!
ಒಂದೇ ದಿನದಲ್ಲಿ 73 ಲಕ್ಷ ರೂ ಶಾಪಿಂಗ್ ಮಾಡಿದ ಮಡದಿ!
Follow us
ಸಾಧು ಶ್ರೀನಾಥ್​
|

Updated on:May 29, 2023 | 2:14 PM

‘ಹೆಂಡತಿ ಜೊತೆ ಶಾಪಿಂಗ್ ಹೋಗುವುದಕ್ಕಿಂತ ಬುದ್ದಿಹೀನ ಕೆಲಸ ಮತ್ತೊಂದಿಲ್ಲ’.. ಇದು ಅನೇಕ ಗಂಡಂದಿರ ಸಾಮಾನ್ಯ ಮಾತು. ಏಕೆಂದರೆ ಆ ಸಮಯದಲ್ಲಿ ಹಣವು ನೀರಿನಂತೆ ಖರ್ಚಾಗುತ್ತದೆ. ಸಾಮಾನ್ಯವಾಗಿ ಮಹಿಳೆಯರು ಶಾಪಿಂಗ್ ಮಾಡಲು ಇಷ್ಟಪಡುತ್ತಾರೆ. ಕಂಡದ್ದನ್ನೆಲ್ಲ ಕೊಂಡುಕೊಳ್ಳುತ್ತಾರೆ. ಅದಕ್ಕೇ ಗಂಡಂದಿರು ಹೆಂಡತಿಯ ಜೊತೆ ಶಾಪಿಂಗ್ ಮಾಡಲು ಹೆದರುತ್ತಾರೆ! ಆದರೆ ಇಲ್ಲಿ ನಾವು ಒಬ್ಬ ಮಹಿಳೆಯ ಶಾಪಿಂಗ್ ಬಗ್ಗೆ ಹೇಳುತ್ತೇವೆ ಕೇಳಿ. ಆಕೆ ದಿನಕ್ಕೆ ಎಷ್ಟು ಶಾಪಿಂಗ್ ಮಾಡಿದ್ದಾಳೆ ಅಂತ ಗೊತ್ತಾದ್ರೆ.. ನೀವು ಶಾಕ್ ಆಗೋದು ಗ್ಯಾರಂಟಿ.

ದುಬೈನ ಸಾದಿಯಾ ಎಂಬುವವರು, ಸೌದಿ ಅರೇಬಿಯಾದ ಜಮಾಲ್ ಎಂಬ ವ್ಯಕ್ತಿಯನ್ನು ವಿವಾಹವಾದರು. ಅವರಿಬ್ಬರೂ ದುಬೈ ಯೂನಿವರ್ಸಿಟಿಯಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದರು. ನಂತರ ಅದು ಸ್ವಲ್ಪ ಪ್ರೀತಿಗೆ ತಿರುಗಿತು. ಎರಡು ವರ್ಷಗಳ ನಂತರ, ಇಬ್ಬರೂ ಮೂರುಗಂಟಿನ ಬಂಧದಲ್ಲಿ ಬಿಗಿಯಾದರು. ಜಮಾಲ್ ಬಹಳ ಶ್ರೀಮಂತ ವ್ಯಕ್ತಿ. ಹಾಗಾಗಿ, ಮದುವೆಯ ನಂತರ ಸಾದಿಯಾ ಬಯಸಿದ್ದನ್ನೆಲ್ಲ ಪಡೆಯುತ್ತಾಳೆ. ತಮ್ಮ ಐಷಾರಾಮಿ ಜೀವನವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ನೆಟಿಜನ್‌ ಫ್ರೆಂಡ್ಸ್​​ ಜೊತೆ ಹಂಚಿಕೊಂಡಿದ್ದಾರೆ.

‘‘ನನ್ನ ಪತಿಯ ಮನಸ್ಥಿತಿಗೆ ಅನುಗುಣವಾಗಿ ನಾನು ದಿನಕ್ಕೆ 73 ಲಕ್ಷ ರೂ. ವರೆಗೆ ಶಾಪಿಂಗ್ ಮಾಡುತ್ತೇವೆ. ನಮ್ಮಿಬ್ಬರ ನೆಚ್ಚಿನ ತಾಣ ಮಾಲ್ಡೀವ್ಸ್. ನಾವು ಲಂಡನ್‌ನಲ್ಲಿದ್ದರೆ, ನಾವು ಆಗಾಗ್ಗೆ ಅಲ್ಲಿಗೆ ಹೋಗುತ್ತೇವೆ. ಇದೀಗಗತಾನೆ ಸಿಷೆಲ್ಸ್ ಪ್ರವಾಸದಿಂದ ಹಿಂತಿರುಗಿದ್ದೆ. ಮುಂದಿನ ಪ್ರವಾಸ ಜಪಾನ್. ನನ್ನ ಪತಿ ನನಗೆ ಪ್ರತಿದಿನ ಕಾರ್ಡ್‌ಗಳ ಉಡುಗೊರೆಯನ್ನು ತರುತ್ತಾನೆ. ಅವರು ಇತ್ತೀಚೆಗೆ ಎರಡು ದುಬಾರಿ ಕಾರುಗಳನ್ನು ಖರೀದಿಸಿದ್ದಾರೆ. ಹೊರಗಡೆ ರೆಸ್ಟೋರೆಂಟ್ ಗೆ ಹೋದರೆ.. ರೂ. 1.10 ಲಕ್ಷ ಖರ್ಚಾಗುತ್ತದೆ’ ಎಂದು ಸಾದಿಯಾ ತನ್ನ ಜೀವನದ ಬಗ್ಗೆ ಹೇಳಿಕೊಂಡಿದ್ದಾರೆ. ಕೊನೆಗೆ ‘ನಾನು ಶ್ರೀಮಂತ ದುಬೈ ಗೃಹಿಣಿ, ಗಂಡನ ಸಂಪಾದನೆ ಖರ್ಚು ಮಾಡುವುದು ನನ್ನ ಹವ್ಯಾಸ’ ಎಂದು ಬರೆದುಕೊಂಡಿದ್ದಾಳೆ. ಈ ನಡುವೆ ನೆಟ್ಟಿಗರು ತಮ್ಮದೇ ಶೈಲಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:12 pm, Mon, 29 May 23

ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ
ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ