AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈರಲ್ ವಿಡಿಯೋ: ದೋಣಿಯಲ್ಲಿ ಮಜವಾಗಿ ವಿಹರಿಸುತ್ತಿದ್ದವರ ಮೇಲೆ ಎಲ್ಲಿಂದಲೋ ಹಾರಿಬಂದ ಹಾವು ಬಿತ್ತು!

ಕೆರೆಯ ತೀರದಲ್ಲಿರುವ ಒಬ್ಬ ವ್ಯಕ್ತಿ ಅಲ್ಲಿ ಕಾಣಿಸುವ ಒಂದು ಹಾವನ್ನು ಹಿಡಿದು ಕೆರೆಯಲ್ಲಿ ದೂರ ಎಸೆಯುವ ಪ್ರಯತ್ನ ಮಾಡುತ್ತಾನೆ. ಆದರೆ ಅವನ ಗುರಿ ತಪ್ಪಿ ಹತ್ತಿರದಲ್ಲೇ ದೋಣಿಯಲ್ಲಿ ವಿಹರಿಸುತ್ತಿದ್ದ ಇಬ್ಬರ ನಡುವೆ ಬೀಳುತ್ತದೆ!

ವೈರಲ್ ವಿಡಿಯೋ: ದೋಣಿಯಲ್ಲಿ ಮಜವಾಗಿ ವಿಹರಿಸುತ್ತಿದ್ದವರ ಮೇಲೆ ಎಲ್ಲಿಂದಲೋ ಹಾರಿಬಂದ ಹಾವು ಬಿತ್ತು!
ಹಾವನ್ನು ಎಸೆಯಲು ಅಣಿಯಾಗುತ್ತಿರುವ ವ್ಯಕ್ತಿ
TV9 Web
| Edited By: |

Updated on: Jul 29, 2022 | 3:08 PM

Share

ನಾವೆಷ್ಟೇ ಧೈರ್ಯಶಾಲಿಗಳಾಗಿದ್ದರೂ (brave) ಹಾವನ್ನು ಕಂಡಾಕ್ಷಣ ಹೆದರಿ ಬಿಡುತ್ತೇವೆ. ಹಾವಿನ (snake) ಗಾತ್ರ ಎಷ್ಟೇ ಅಗಿರಲಿ ನಮ್ಮಲ್ಲಿ ಭಯ ಹುಟ್ಟೋದು ಮಾತ್ರ ಗ್ಯಾರಂಟಿ. ಒಕೆ, ನೀವು ಹಾಯಾಗಿ ರಜೆ ಕಳೆಯಲೆಂದು ಕುಟುಂಬ ಇಲ್ಲವೇ ಸ್ನೇಹಿತರೊಂದಿಗೆ ಯಾವುದಾದರೂ ನದಿ ಅಥವಾ ಕೆರೆಯಲ್ಲಿ (lake) ದೋಣಿ ವಿಹಾರ ಮಾಡುವಾಗ ಎಲ್ಲಿಂದಲೋ ಹಾರಿ ಬರುವ ಹಾವೊಂದು ನಿಮ್ಮ ಮೇಲೆ ಬಿದ್ದರೆ ಹೇಗಾಗಬೇಡ!?

ಥೇಟ್ ಇಂಥದ್ದೇ ಒಂದು ಸನ್ನಿವೇಶ ಸೆರೆಯಾಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ ಮಾರಾಯ್ರೇ. ಇದು ಕೆಲವರಿಗೆ ಭಯಾನಕ ಎನಿಸಿದರೆ ಉಳಿದವರಿಗೆ ಭಾರಿ ತಮಾಷೆಯಾಗಿ ಕಂಡಿದೆ. ಗೆಳೆಯರ ಗುಂಪೊಂದು ಒಂದು ಕೆರೆಯಲ್ಲಿ ದೋಣಿ ವಿಹಾರ ಮಾಡಿತ್ತಾ ಎಂಜಾಯ್ ಮಾಡುತ್ತಿದೆ. ಕೆರೆಯ ತೀರದಲ್ಲಿರುವ ಒಬ್ಬ ವ್ಯಕ್ತಿ ಅಲ್ಲಿ ಕಾಣಿಸುವ ಒಂದು ಹಾವನ್ನು ಹಿಡಿದು ಕೆರೆಯಲ್ಲಿ ದೂರ ಎಸೆಯುವ ಪ್ರಯತ್ನ ಮಾಡುತ್ತಾನೆ. ಆದರೆ ಅವನ ಗುರಿ ತಪ್ಪಿ ಹತ್ತಿರದಲ್ಲೇ ದೋಣಿಯಲ್ಲಿ ವಿಹರಿಸುತ್ತಿದ್ದ ಇಬ್ಬರ ನಡುವೆ ಬೀಳುತ್ತದೆ.

ಐಪಿಎಸ್ ಅಧಿಕಾರಿ ದಿಪಾಂಶು ಕಾಬ್ರಾ ತಮ್ಮ ಟ್ವಿಟರ್ ಹ್ಯಾಂಡಲ್ ನಲ್ಲಿ ಇದನ್ನು ಶೇರ್ ಮಾಡಿ ‘ನಾಟ್ ಓನ್ಲೀ ದಿ ಟಾರ್ಗೆಟ್, ದಿ ಟಾರ್ಗೆಟ್ ಶುಡ್ ಆಲ್ಸೋ ಶುಡ್ ಬಿ ರೈಟ್’ ಅಂತ ಶೀರ್ಷಿಕೆ ನೀಡಿದ್ದಾರೆ.

ಈ ವಿಡಿಯೋ ವೈರಲ್ ಆಗಿದೆ ಮಾರಾಯ್ರೇ. ಅದನ್ನು ವೀಕ್ಷಿಸಿದವರು ಭಾರಿ ಆನಂದಪಡುತ್ತಿದ್ದಾರೆ. ಒಬ್ಬರು, ‘ಹಾವನ್ನು ಹೀಗೆ ಬೇರೆಯವರ ಮೇಲೆ ಎಸೆಯುವುದು ಅಪಾಯಕಾರಿ, ಎಚ್ಚರದಿಂದರಬೇಕು,’ ಅಂತ ಕಾಮೆಂಟ್ ಮಾಡಿದರೆ, ‘ತಮ್ಮ ಪಾಡಿಗೆ ತಾವು ಎಂಜಾಯ್ ಮಾಡುತ್ತಿದ್ದವರ ಜೊತೆ ನೀವು ತಮಾಷೆ ಮಾಡಿದಿರಾ?’ ಎಂದು ಮತ್ತೊಬ್ಬರು ಬರೆದಿದ್ದಾರೆ. ಮೂರನೇಯವರು ‘ದೋಣಿಯಲ್ಲಿ ಮಜವಾಗಿ ವಿಹರಿಸುತ್ತಿದ್ದವರ ಬಗ್ಗೆ ಯೋಚಿಸಿ, ಎಲ್ಲಿಂದಲೋ ಬರುವ ಹಾವು ಅವರ ಮೇಲೆ ಬೀಳೋದು ಅಂದ್ರೆ!’ ಅಂತ ಹೇಳಿದ್ದಾರೆ.

Follow Us
Live: ತಮಿಳುನಾಡು ಸಿಎಂ ವಿಜಯ್ ವಿಶ್ವಾಸಮತ ಯಾಚನೆ ನೇರಪ್ರಸಾರ
Live: ತಮಿಳುನಾಡು ಸಿಎಂ ವಿಜಯ್ ವಿಶ್ವಾಸಮತ ಯಾಚನೆ ನೇರಪ್ರಸಾರ
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!