AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈರಲ್ ವಿಡಿಯೋ: ದೋಣಿಯಲ್ಲಿ ಮಜವಾಗಿ ವಿಹರಿಸುತ್ತಿದ್ದವರ ಮೇಲೆ ಎಲ್ಲಿಂದಲೋ ಹಾರಿಬಂದ ಹಾವು ಬಿತ್ತು!

ಕೆರೆಯ ತೀರದಲ್ಲಿರುವ ಒಬ್ಬ ವ್ಯಕ್ತಿ ಅಲ್ಲಿ ಕಾಣಿಸುವ ಒಂದು ಹಾವನ್ನು ಹಿಡಿದು ಕೆರೆಯಲ್ಲಿ ದೂರ ಎಸೆಯುವ ಪ್ರಯತ್ನ ಮಾಡುತ್ತಾನೆ. ಆದರೆ ಅವನ ಗುರಿ ತಪ್ಪಿ ಹತ್ತಿರದಲ್ಲೇ ದೋಣಿಯಲ್ಲಿ ವಿಹರಿಸುತ್ತಿದ್ದ ಇಬ್ಬರ ನಡುವೆ ಬೀಳುತ್ತದೆ!

ವೈರಲ್ ವಿಡಿಯೋ: ದೋಣಿಯಲ್ಲಿ ಮಜವಾಗಿ ವಿಹರಿಸುತ್ತಿದ್ದವರ ಮೇಲೆ ಎಲ್ಲಿಂದಲೋ ಹಾರಿಬಂದ ಹಾವು ಬಿತ್ತು!
ಹಾವನ್ನು ಎಸೆಯಲು ಅಣಿಯಾಗುತ್ತಿರುವ ವ್ಯಕ್ತಿ
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 29, 2022 | 3:08 PM

Share

ನಾವೆಷ್ಟೇ ಧೈರ್ಯಶಾಲಿಗಳಾಗಿದ್ದರೂ (brave) ಹಾವನ್ನು ಕಂಡಾಕ್ಷಣ ಹೆದರಿ ಬಿಡುತ್ತೇವೆ. ಹಾವಿನ (snake) ಗಾತ್ರ ಎಷ್ಟೇ ಅಗಿರಲಿ ನಮ್ಮಲ್ಲಿ ಭಯ ಹುಟ್ಟೋದು ಮಾತ್ರ ಗ್ಯಾರಂಟಿ. ಒಕೆ, ನೀವು ಹಾಯಾಗಿ ರಜೆ ಕಳೆಯಲೆಂದು ಕುಟುಂಬ ಇಲ್ಲವೇ ಸ್ನೇಹಿತರೊಂದಿಗೆ ಯಾವುದಾದರೂ ನದಿ ಅಥವಾ ಕೆರೆಯಲ್ಲಿ (lake) ದೋಣಿ ವಿಹಾರ ಮಾಡುವಾಗ ಎಲ್ಲಿಂದಲೋ ಹಾರಿ ಬರುವ ಹಾವೊಂದು ನಿಮ್ಮ ಮೇಲೆ ಬಿದ್ದರೆ ಹೇಗಾಗಬೇಡ!?

ಥೇಟ್ ಇಂಥದ್ದೇ ಒಂದು ಸನ್ನಿವೇಶ ಸೆರೆಯಾಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ ಮಾರಾಯ್ರೇ. ಇದು ಕೆಲವರಿಗೆ ಭಯಾನಕ ಎನಿಸಿದರೆ ಉಳಿದವರಿಗೆ ಭಾರಿ ತಮಾಷೆಯಾಗಿ ಕಂಡಿದೆ. ಗೆಳೆಯರ ಗುಂಪೊಂದು ಒಂದು ಕೆರೆಯಲ್ಲಿ ದೋಣಿ ವಿಹಾರ ಮಾಡಿತ್ತಾ ಎಂಜಾಯ್ ಮಾಡುತ್ತಿದೆ. ಕೆರೆಯ ತೀರದಲ್ಲಿರುವ ಒಬ್ಬ ವ್ಯಕ್ತಿ ಅಲ್ಲಿ ಕಾಣಿಸುವ ಒಂದು ಹಾವನ್ನು ಹಿಡಿದು ಕೆರೆಯಲ್ಲಿ ದೂರ ಎಸೆಯುವ ಪ್ರಯತ್ನ ಮಾಡುತ್ತಾನೆ. ಆದರೆ ಅವನ ಗುರಿ ತಪ್ಪಿ ಹತ್ತಿರದಲ್ಲೇ ದೋಣಿಯಲ್ಲಿ ವಿಹರಿಸುತ್ತಿದ್ದ ಇಬ್ಬರ ನಡುವೆ ಬೀಳುತ್ತದೆ.

ಐಪಿಎಸ್ ಅಧಿಕಾರಿ ದಿಪಾಂಶು ಕಾಬ್ರಾ ತಮ್ಮ ಟ್ವಿಟರ್ ಹ್ಯಾಂಡಲ್ ನಲ್ಲಿ ಇದನ್ನು ಶೇರ್ ಮಾಡಿ ‘ನಾಟ್ ಓನ್ಲೀ ದಿ ಟಾರ್ಗೆಟ್, ದಿ ಟಾರ್ಗೆಟ್ ಶುಡ್ ಆಲ್ಸೋ ಶುಡ್ ಬಿ ರೈಟ್’ ಅಂತ ಶೀರ್ಷಿಕೆ ನೀಡಿದ್ದಾರೆ.

ಈ ವಿಡಿಯೋ ವೈರಲ್ ಆಗಿದೆ ಮಾರಾಯ್ರೇ. ಅದನ್ನು ವೀಕ್ಷಿಸಿದವರು ಭಾರಿ ಆನಂದಪಡುತ್ತಿದ್ದಾರೆ. ಒಬ್ಬರು, ‘ಹಾವನ್ನು ಹೀಗೆ ಬೇರೆಯವರ ಮೇಲೆ ಎಸೆಯುವುದು ಅಪಾಯಕಾರಿ, ಎಚ್ಚರದಿಂದರಬೇಕು,’ ಅಂತ ಕಾಮೆಂಟ್ ಮಾಡಿದರೆ, ‘ತಮ್ಮ ಪಾಡಿಗೆ ತಾವು ಎಂಜಾಯ್ ಮಾಡುತ್ತಿದ್ದವರ ಜೊತೆ ನೀವು ತಮಾಷೆ ಮಾಡಿದಿರಾ?’ ಎಂದು ಮತ್ತೊಬ್ಬರು ಬರೆದಿದ್ದಾರೆ. ಮೂರನೇಯವರು ‘ದೋಣಿಯಲ್ಲಿ ಮಜವಾಗಿ ವಿಹರಿಸುತ್ತಿದ್ದವರ ಬಗ್ಗೆ ಯೋಚಿಸಿ, ಎಲ್ಲಿಂದಲೋ ಬರುವ ಹಾವು ಅವರ ಮೇಲೆ ಬೀಳೋದು ಅಂದ್ರೆ!’ ಅಂತ ಹೇಳಿದ್ದಾರೆ.

ಆಷಾಢ ಶುಕ್ರವಾರ: ಮೈಸೂರು ಚಾಮುಂಡೇಶ್ವರಿ ದರ್ಶನಕ್ಕೆ ಬರುವ ಭಕ್ತರೇ ಗಮನಿಸಿ
ಆಷಾಢ ಶುಕ್ರವಾರ: ಮೈಸೂರು ಚಾಮುಂಡೇಶ್ವರಿ ದರ್ಶನಕ್ಕೆ ಬರುವ ಭಕ್ತರೇ ಗಮನಿಸಿ
ಕನ್ನಡದಲ್ಲೇ ಮಾತು ಆರಂಭಿಸಿದ ನೀರಜ್ ಚೋಪ್ರಾ ಬೆಂಗಳೂರಿನ ಬಗ್ಗೆ ಹೇಳಿದ್ದೇನು?
ಕನ್ನಡದಲ್ಲೇ ಮಾತು ಆರಂಭಿಸಿದ ನೀರಜ್ ಚೋಪ್ರಾ ಬೆಂಗಳೂರಿನ ಬಗ್ಗೆ ಹೇಳಿದ್ದೇನು?
ಪತ್ನಿಯೊಂದಿಗೆ ಚಾಮುಂಡೇಶ್ವರಿ ತಾಯಿ ದರ್ಶನ ಪಡೆದ ನಟ ದರ್ಶನ್
ಪತ್ನಿಯೊಂದಿಗೆ ಚಾಮುಂಡೇಶ್ವರಿ ತಾಯಿ ದರ್ಶನ ಪಡೆದ ನಟ ದರ್ಶನ್
ಟ್ರಿನಿಡಾಡ್ ಮತ್ತು ಟೊಬಾಗೊ ಪ್ರಧಾನಿ ಕಮಲಾರನ್ನು ಬಿಹಾರದ ಮಗಳು
ಟ್ರಿನಿಡಾಡ್ ಮತ್ತು ಟೊಬಾಗೊ ಪ್ರಧಾನಿ ಕಮಲಾರನ್ನು ಬಿಹಾರದ ಮಗಳು
Daily Devotional: ಗುಳಿ ಕೆನ್ನೆಯವರು ನಿಜಕ್ಕೂ ಅದೃಷ್ಟವಂತರಾ ತಿಳಿಯಿರಿ
Daily Devotional: ಗುಳಿ ಕೆನ್ನೆಯವರು ನಿಜಕ್ಕೂ ಅದೃಷ್ಟವಂತರಾ ತಿಳಿಯಿರಿ
Daily Horoscope: ಅನ್ಯರ ಸಮಸ್ಯೆಯನ್ನು ನಿಮ್ಮ ಸಮಸ್ಯೆ ಎಂದುಕೊಳ್ಳುವಿರಿ
Daily Horoscope: ಅನ್ಯರ ಸಮಸ್ಯೆಯನ್ನು ನಿಮ್ಮ ಸಮಸ್ಯೆ ಎಂದುಕೊಳ್ಳುವಿರಿ
2 ದಿನಗಳ ಘಾನಾ ಭೇಟಿ ಮುಗಿಸಿ ಟ್ರಿನಿಡಾಡ್ ಮತ್ತು ಟೊಬೆಗೊಗೆ ತೆರಳಿದ ಮೋದಿ
2 ದಿನಗಳ ಘಾನಾ ಭೇಟಿ ಮುಗಿಸಿ ಟ್ರಿನಿಡಾಡ್ ಮತ್ತು ಟೊಬೆಗೊಗೆ ತೆರಳಿದ ಮೋದಿ
ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!
ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!
ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಅಮರನಾಥ ಯಾತ್ರೆ; ಕಾಲ್ನಡಿಗೆಯಲ್ಲೇ ಬೋಲೆನಾಥನ ದರ್ಶನ ಪಡೆದ ಶೋಭಾ ಕರಂದ್ಲಾಜೆ
ಅಮರನಾಥ ಯಾತ್ರೆ; ಕಾಲ್ನಡಿಗೆಯಲ್ಲೇ ಬೋಲೆನಾಥನ ದರ್ಶನ ಪಡೆದ ಶೋಭಾ ಕರಂದ್ಲಾಜೆ