AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾರುವ ದೋಸೆ ನಂತರ ವೈರಲ್ ಆಯ್ತು ರಜನಿಕಾಂತ್ ಸ್ಟೈಲ್ ದೋಸೆ

Viral Video: ಮುಂಬೈನ ದಾದರ್ ಪ್ರದೇಶದಲ್ಲಿರುವ ಖ್ಯಾತ ಫುಡ್ ಸ್ಟಾಲ್ 'ಮುತ್ತು ದೋಸಾ ಕಾರ್ನರ್'​ನಲ್ಲಿ ಮಾಡುವ ರಜನಿಕಾಂತ್ ಸ್ಟೈಲ್ ದೋಸೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಹಾರುವ ದೋಸೆ ನಂತರ ವೈರಲ್ ಆಯ್ತು ರಜನಿಕಾಂತ್ ಸ್ಟೈಲ್ ದೋಸೆ
ಮುಂಬೈನಲ್ಲಿ ರಜನಿಕಾಂತ್ ಸ್ಟೈಲ್ ದೋಸೆ (ವಿಡಿಯೊ ಚಿತ್ರ)
ರಶ್ಮಿ ಕಲ್ಲಕಟ್ಟ
|

Updated on: Feb 23, 2021 | 4:19 PM

Share

ಮುಂಬೈ: ದೋಸೆ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ವೈರಟಿ ದೋಸೆ ಎಂದಾಗ ಬೀದಿ ಬದಿಯಲ್ಲಿ ತಳ್ಳು ಗಾಡಿಯಲ್ಲಿ ಮಾಡುವ ಬಿಸಿಬಿಸಿ ದೋಸೆ ಕಣ್ಣುಮುಂದೆ ಬರುತ್ತವೆ. ಕಾದ ಕಾವಲಿ ಮೇಲೆ ನೀರು ಚಿಮುಕಿಸಿ ಅದನ್ನು ಒರೆಸಿದ ನಂತರ ದೋಸೆ ಹುಯ್ಯುವ ರೀತಿಯೇ ಚಂದ. ಅದರಲ್ಲೂ ಮಹಾನಗರಗಳಲ್ಲಿ ಸಿಗುವ ಬೀದಿ ಬದಿಯ ದೋಸೆಗಳು ಹಲವಾರು ಪರಿಷ್ಕರಣೆಗೊಳಗಾಗಿರುತ್ತವೆ. ಇತ್ತೀಚೆಗೆ ಮುಂಬೈ ಬೀದಿಬದಿಯಲ್ಲಿರುವ ಸ್ಟಾಲ್ ಒಂದರಲ್ಲಿ ರಜನಿಕಾಂತ್ ಸ್ಟೈಲ್ ದೋಸೆ ಮಾಡುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಮುಂಬೈನ ದಾದರ್ ಪ್ರದೇಶದಲ್ಲಿರುವ ಖ್ಯಾತ ಫುಡ್ ಸ್ಟಾಲ್ ‘ಮುತ್ತು ದೋಸಾ ಕಾರ್ನರ್​’ನಲ್ಲಿ ರಜನಿಕಾಂತ್ ಸ್ಟೈಲ್ ದೋಸೆ ಮಾಡುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದು. ಮಸಾಲೆ ದೋಸೆ, ಮೈಸೂರು ಮಸಾಲೆ ದೋಸೆ ಈ ಸ್ಟಾಲ್​ನ ವಿಶೇಷ. ಈ ಸ್ಟಾಲ್​ನ ಮಾಲೀಕ ದೋಸೆ ಹಿಟ್ಟು ಕಾವಲಿ ಮೇಲೆ ಎರೆದು ಅದಕ್ಕೆ ಬೆಣ್ಣೆ ಸವರಿ ದೋಸೆ ಮಧ್ಯಭಾಗದಲ್ಲಿ ಮಸಾಲೆ ತುಂಬಿಸಿ ಅದನ್ನು ಮಡಚಿ, ಸಟ್ಟುಗದಿಂದ ದೋಸೆಯನ್ನು ಕತ್ತರಿಸಿ ಅದನ್ನು ಪ್ಲೇಟ್ ಮೇಲೆ ಇಟ್ಟು ಆ ಪ್ಲೇಟನ್ನು ಇನ್ನೊಂದು ಬದಿಗೆ ದಾಟಿಸುವ ರೀತಿಯೇ ರಜನಿಕಾಂತ್ ಸ್ಟೈಲ್ ಎಂದು ಹೆಸರುಗಳಿಸಿಕೊಂಡಿದೆ. ದೋಸೆ ಮಾಡುವ ವೇಗ ಮತ್ತು ಅದನ್ನು ತಟ್ಟೆಯಲ್ಲಿರಿಸಿ ಕೊಡುವ ಈ ರೀತಿಗೆ ಮುಂಬೈ ಜನರು ಫಿದಾ ಆಗಿದ್ದಾರೆ.

ಈ ಹಿಂದೆ ಮುಂಬೈಯ ಕಲ್ಬಾದೇವಿ ಪ್ರದೇಶದಲ್ಲಿರುವ ಶ್ರೀ ಬಾಲಾಜಿ ದೋಸಾ ಫ್ಯಾಕ್ಟರಿಯಲ್ಲಿನ ಹಾರುವ ದೋಸೆ ವೈರಲ್ ಆಗಿತ್ತು. ದೋಸೆ ಮಾಡುವ ಕಾವಲಿಯಿಂದ ಬಾಣಸಿಗ ಆ ದೋಸೆಯನ್ನು ಎತ್ತಿ ಹಾರಿಸಿ ಅದು ಪ್ಲೇಟ್​ಗೆ ಬೀಳುವಂತೆ ಮಾಡುತ್ತಿರುವ ದೃಶ್ಯ ಅದಾಗಿತ್ತು.

ಇದನ್ನೂ ಓದಿ: ಸೋನು ಸೂದ್ ಢಾಬಾದಲ್ಲಿ ತಯಾರಾಗ್ತಿದೆ ಬಿಸಿಬಿಸಿ ತಂದೂರಿ ರೋಟಿ: ವಿಡಿಯೊ ವೈರಲ್

ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!