AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ನಿಜ ಜೀವನದ ಭಜರಂಗಿ ಭಾಯ್​ಜಾನ್; ಕಿವಿ ಕೇಳದ, ಮಾತು ಬಾರದ ಬಾಲಕ ವಾಪಾಸ್ ಮನೆ ಸೇರಿದ್ದೇ ಅಚ್ಚರಿಯ ಕತೆ

ಜೋಧ್​ಪುರದಲ್ಲಿ ಸಿಕ್ಕ 14 ವರ್ಷದ ಮಾತು ಬಾರದ, ಕಿವಿ ಕೇಳದ ಬಾಲಕ ಒಂದು ವರ್ಷದ ಬಳಿಕ ಪಂಜಾಬ್​ನ ತಾರ್ನ್ ತರನ್ ಜಿಲ್ಲೆಯಲ್ಲಿರುವ ತನ್ನ ಮನೆಗೆ ಸೇರಿದ್ದಾನೆ. ಆದರೆ, ಮಗನದೇ ಯೋಚನೆಯಲ್ಲಿ ಅಷ್ಟರಲ್ಲಾಗಲೇ ಆ ಬಾಲಕನ ತಂದೆ ಸಾವನ್ನಪ್ಪಿದ್ದರು.

Viral News: ನಿಜ ಜೀವನದ ಭಜರಂಗಿ ಭಾಯ್​ಜಾನ್; ಕಿವಿ ಕೇಳದ, ಮಾತು ಬಾರದ ಬಾಲಕ ವಾಪಾಸ್ ಮನೆ ಸೇರಿದ್ದೇ ಅಚ್ಚರಿಯ ಕತೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Aug 09, 2021 | 8:53 PM

Share

ಜೈಪುರ: ಬಾಲಿವುಡ್​ನಲ್ಲಿ ಸಲ್ಮಾನ್​ ಖಾನ್​ಗೆ ಹೊಸ ಇಮೇಜ್ ತಂದುಕೊಟ್ಟ ಸೂಪರ್ ಹಿಟ್ ಸಿನಿಮಾ ಭಜರಂಗಿ ಭಾಯ್​ಜಾನ್ ನೋಡದೇ ಇದ್ದವರೇ ಕಡಿಮೆ ಎನ್ನಬಹುದು. ಮಾತು ಬಾರದ ಪಾಕಿಸ್ತಾನದ ಬಾಲಕಿಯೊಬ್ಬಳು ತನ್ನ ತಾಯಿಯಿಂದ ತಪ್ಪಿಸಿಕೊಂಡು ಅಚಾನಕ್ಕಾಗಿ ಭಜರಂಗಿ ಎಂದೇ ಪ್ರಸಿದ್ಧನಾಗಿದ್ದ ಹೀರೋಗೆ ಸಿಗುವ ಕತೆಯಿದು. ಆತ ಹೇಗೆಲ್ಲ ಸರ್ಕಸ್ ಮಾಡಿ ಆ ಬಾಲಕಿಯನ್ನು ನಮ್ಮ ಶತ್ರುದೇಶವಾದ ಪಾಕಿಸ್ತಾನದ ಗಡಿ ದಾಟಿ ಮನೆಗೆ ತಲುಪಿಸುತ್ತಾನೆ ಎಂಬ ಕುತೂಹಲಕಾರಿ ಕತೆ ಈ ಸಿನಿಮಾದ್ದು. ಅದೇ ರೀತಿಯ ನಿಜವಾದ ಘಟನೆಯೊಂದು ರಾಜಸ್ಥಾನದಲ್ಲಿ ನಡೆದಿದೆ.

ಜೋಧ್​ಪುರದಲ್ಲಿ ಸಿಕ್ಕ 14 ವರ್ಷದ ಮಾತು ಬಾರದ, ಕಿವಿ ಕೇಳದ ಬಾಲಕನನ್ನು ಪಂಜಾಬ್​ನ ತಾರ್ನ್ ತರನ್ ಜಿಲ್ಲೆಯಲ್ಲಿರುವ ಆತನ ಮನೆಗೆ ಚೈಲ್ಡ್​ಕೇರ್ ಸಂಸ್ಥೆಯವರು ತಲುಪಿಸಿದ್ದಾರೆ. 2020ರಲ್ಲಿ ಮನೆಯಿಂದ ನಾಪತ್ತೆಯಾಗಿದ್ದ ಬಾಲಕ ಕೊನೆಗೂ ತನ್ನ ತಾಯಿಯನ್ನು ಸೇರಿದ್ದಾನೆ. ಮೂಗ, ಕಿವುಡನಾಗಿದ್ದರೂ ಬಹಳ ಆ್ಯಕ್ಟಿವ್ ಆಗಿದ್ದ ಆ ಬಾಲಕ ಮನೆಯಿಂದ ತಪ್ಪಿಸಿಕೊಂಡ ಬಳಿಕ ಜೋಧ್​ಪುರದ ರೈಲ್ವೆ ಸ್ಟೇಷನ್​ನಲ್ಲಿ ಸಿಕ್ಕಿದ್ದ. ಆತನನ್ನು ಜೋಧ್​ಪುರದ ಚೈಲ್ಡ್​ಕೇರ್ ಇನ್​ಸ್ಟಿಟ್ಯೂಟ್​ನಲ್ಲಿ ಇರಿಸಿಕೊಳ್ಳಲಾಗಿತ್ತು. ಅದೊಂದು ದಿನ ರಾಜಸ್ಥಾನದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಸಂಗೀತಾ ಬೆನಿವಾಲ್ ಆ ಇನ್​ಸ್ಟಿಟ್ಯೂಟ್​ಗೆ ಹೋಗಿದ್ದಾಗ ಆ ಬಾಲಕ ಸಿಂಗ್​ಗಳು ತಲೆಗೆ ಸುತ್ತಿಕೊಳ್ಳುವ ತರ್ಬಾನ್​ ನೋಡಿ ಬಹಳ ಖುಷಿಯಾದ. ಆತನಿಂದ ಅವನ ಮನೆಯ ಬಗ್ಗೆ ಮಾಹಿತಿ ಸಿಗಬಹುದು ಎಂದು ಕೆಲವೊಂದು ಫೋಟೋಗಳನ್ನು ಆತನಿಗೆ ತೋರಿಸಲಾಯಿತು. ಸಿಖ್ಖರು ಹೆಚ್ಚಾಗಿರುವ ಪ್ರದೇಶದ ಫೋಟೋಗಳನ್ನು ತೋರಿಸಿದಾಗ ಆ ಬಾಲಕ ಗೋಲ್ಡನ್ ಟೆಂಪಲ್ ಫೋಟೋ ನೋಡಿ ಖುಷಿ ಪಟ್ಟ. ಅದರಿಂದ ಆ ಬಾಲಕ ಪಂಜಾಬ್​ನವನಿರಬಹುದು ಎಂದು ನಾವು ಅಂದಾಜಿಸಿದೆವು. ನಂತರ ಆತನಿಗೆ ಪಂಜಾಬಿ ಜಾನಪದ ಡ್ರೆಸ್ ಅನ್ನು ತೋರಿಸಲಾಯಿತು. ಅದನ್ನು ನೋಡಿದ ಮೇಲೆ ಆತನ ಖುಷಿ ಹೆಚ್ಚಾಯಿತು ಎಂದು ಸಂಗೀತಾ ಮಾಹಿತಿ ನೀಡಿದ್ದಾರೆ.

ಬಳಿಕ ನಮ್ಮ ತಂಡದವರು ಆ ಬಾಲಕನನ್ನು ಪಂಜಾಬ್​ಗೆ ಕರೆದುಕೊಂಡು ಹೋಗಲು ನಿರ್ಧರಿಸಿದರು. ಆತನನ್ನು ಅಮೃತಸರಕ್ಕೆ ಕರೆದುಕೊಂಡು ಹೋದಾಗ ಆತ ತಾನು ಇಲ್ಲಿ ಬಂದಿದ್ದಾಗಿ ನೆನಪಿಸಿಕೊಂಡ. ಹಿಂದಿಯಲ್ಲಿ ಬರೆದು ತೋರಿಸಿದ ಆ ಬಾಲಕ ತನ್ನನ್ನು ತಾರ್ನ್ ತರನ್ ಬಸ್ ಸ್ಟಾಪ್​ಗೆ ಕರೆದುಕೊಂಡು ಹೋಗುವಂತೆ ಅವರಲ್ಲಿ ಮನವಿ ಮಾಡಿದ. ಬಸ್​ ಸ್ಟಾಪ್​ಗೆ ಹೋದಾಗ ಬಸ್​ ಚಾಲಕ ಆ ಬಾಲಕನನ್ನು ಗುರುತಿಸಿ ಮಾತನಾಡಿಸಿದರು. ಆ ಬಸ್​ ಕೂಡ ಆ ಬಾಲಕನ ಊರಿಗೇ ಹೋಗುತ್ತದೆ ಎಂದು ಅವರು ತಿಳಿಸಿದರು. ಆ ಬಾಲಕನನ್ನು ಊರಿಗೆ ಕರೆದುಕೊಂಡು ಹೋದಾಗ ಅಲ್ಲಿದ್ದ ಎಲ್ಲರೂ ಆತನನ್ನು ಗುರುತಿಸಿದರು. ನಂತರ ಆತನನ್ನು ಆತನ ಮನೆಗೆ ಸೇರಿಸಲಾಯಿತು. ಒಂದು ವರ್ಷದ ಹಿಂದೆ ಕಳೆದುಹೋಗಿದ್ದ ಮಗ ಇದ್ದಕ್ಕಿದ್ದಂತೆ ಮನೆಗೆ ವಾಪಾಸ್ ಬಂದಿದ್ದನ್ನು ನೋಡಿ ಅವನ ತಾಯಿ ಜೋರಾಗಿ ಅಳುತ್ತಾ ಮಗನನ್ನು ತಬ್ಬಿಕೊಂಡರು.

ಆ ಊರಿನಿಂದ 2020ರಲ್ಲಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ ಬಾಲಕನ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ ಪ್ರಯೋಜನವಾಗಿರಲಿಲ್ಲ. ಮಾತು ಬಾರದ, ಕಿವಿ ಕೇಳದ ಮಗ ಎಲ್ಲಿದ್ದಾನೋ, ಬದುಕಿದ್ದಾನೋ ಇಲ್ಲವೋ ಎಂಬ ಕೊರಗಿನಲ್ಲಿಯೇ ಹಾಸಿಗೆ ಹಿಡಿದ ಆ ಬಾಲಕನ ತಂದೆ ಕೆಲವು ತಿಂಗಳ ಹಿಂದೆ ಸಾವನ್ನಪ್ಪಿದ್ದರು.

ಇದನ್ನೂ ಓದಿ: Viral News | ಬರೋಬ್ಬರಿ 1 ಕೋಟಿಗೆ ಹರಾಜಾಯ್ತು ವಿಸ್ಕಿ ಬಾಟಲ್; ಇದರ ವಿಶೇಷತೆ ಕೇಳಿದರೆ ಕಿಕ್ ಏರುತ್ತೆ!

Success Story: 3 ಲಕ್ಷ ರೂ.ನಲ್ಲಿ ಶುರುವಾದ ಟೀ ಶಾಪ್​ನ ಆದಾಯವೀಗ ವರ್ಷಕ್ಕೆ 100 ಕೋಟಿ!

Follow Us
ನೋರಾ ಫತೇಹಿ ಬಗ್ಗೆ ನಟಿ ರಕ್ಷಿತಾ ಮಾತು: ವಿಡಿಯೋ ನೋಡಿ
ನೋರಾ ಫತೇಹಿ ಬಗ್ಗೆ ನಟಿ ರಕ್ಷಿತಾ ಮಾತು: ವಿಡಿಯೋ ನೋಡಿ
ಮುನಿಸು ಮರೆತು ಲೋಕ ಅದಾಲತ್​​ನಲ್ಲಿ ಮತ್ತೆ ಒಂದಾದ ಮೂರು ಜೋಡಿಗಳು
ಮುನಿಸು ಮರೆತು ಲೋಕ ಅದಾಲತ್​​ನಲ್ಲಿ ಮತ್ತೆ ಒಂದಾದ ಮೂರು ಜೋಡಿಗಳು
ಬಿರು ಬೇಸಿಗೆಯಲ್ಲೂ ಆಲಿಕಲ್ಲು ಮಳೆ: ಧಾರವಾಡ ಮಂದಿಗೆ ತಂಪೆರೆದ ವರುಣ
ಬಿರು ಬೇಸಿಗೆಯಲ್ಲೂ ಆಲಿಕಲ್ಲು ಮಳೆ: ಧಾರವಾಡ ಮಂದಿಗೆ ತಂಪೆರೆದ ವರುಣ
ನೆಲಮಂಗಲದಲ್ಲಿ 6 ನವಿಲು ಸಾವು: ವಿಷ ಪ್ರಾಶನಮಾಡಿ ಕೊಂದಿರುವ ಶಂಕೆ
ನೆಲಮಂಗಲದಲ್ಲಿ 6 ನವಿಲು ಸಾವು: ವಿಷ ಪ್ರಾಶನಮಾಡಿ ಕೊಂದಿರುವ ಶಂಕೆ
ತಮ್ಮ ಕ್ಷೇತ್ರದ ಜಾತ್ರೆಗೆ ಸಿಎಂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ರಾ ?
ತಮ್ಮ ಕ್ಷೇತ್ರದ ಜಾತ್ರೆಗೆ ಸಿಎಂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ರಾ ?
ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್
ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್
ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ
ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ
ತಂದೆಯ ಅಂತ್ಯಸಂಸ್ಕಾರ ನೆರವೇರಿಸಿ ಲಿಂಗಸಮಾನತೆಯ ಸಂದೇಶ ಸಾರಿದ ಸಹೋದರಿಯರು
ತಂದೆಯ ಅಂತ್ಯಸಂಸ್ಕಾರ ನೆರವೇರಿಸಿ ಲಿಂಗಸಮಾನತೆಯ ಸಂದೇಶ ಸಾರಿದ ಸಹೋದರಿಯರು
ಮನೆಯ ಅಂಗಳದಲ್ಲಿ ಮಲಗಿದ್ದ ವೃದ್ಧೆಗೆ ಕಡಿದೇ ಬಿಡ್ತು ಹಾವು!
ಮನೆಯ ಅಂಗಳದಲ್ಲಿ ಮಲಗಿದ್ದ ವೃದ್ಧೆಗೆ ಕಡಿದೇ ಬಿಡ್ತು ಹಾವು!