Viral Photo: ಮೊಸಳೆಯ ಗಾತ್ರವನ್ನು ಹೋಲುವ ವಿಶಿಷ್ಟ ಜಾತಿಯ ಹಲ್ಲಿ ಪತ್ತೆ

ವಿಜ್ಞಾನಿಗಳು ಮೆಕ್ಸಿಕೋದಲ್ಲಿ ಮೊಸಳೆಯಷ್ಟು ಗಾತ್ರವುಳ್ಳ ವಿಶಿಷ್ಟವಾದ ಹಲ್ಲಿಯನ್ನು ಪತ್ತೆಹಚ್ಚಿದ್ದಾರೆ. ಶೋಧದ ವೇಳೆ ಈ ಜೀವಿಯನ್ನು ಕಂಡು ವಿಜ್ಞಾನಿಗಳೂ ಬೆಚ್ಚಿಬಿದ್ದಿದ್ದಾರೆ. ಸದ್ಯ ಈ ವಿಶಿಷ್ಟ ಜಾತಿಯ ಹಲ್ಲಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿದೆ.

Viral Photo: ಮೊಸಳೆಯ ಗಾತ್ರವನ್ನು ಹೋಲುವ ವಿಶಿಷ್ಟ ಜಾತಿಯ ಹಲ್ಲಿ ಪತ್ತೆ
Alligator-like lizardImage Credit source: Pixabay
Follow us
|

Updated on: Jan 09, 2024 | 10:43 AM

ಮೆಕ್ಸಿಕೋದಲ್ಲಿ ಕಂಡುಬಂದ ಮೊಸಳೆಯ ಗಾತ್ರವನ್ನು ಹೋಲುವ ವಿಶಿಷ್ಟ ಜಾತಿಯ ಹಲ್ಲಿ ಇತ್ತೀಚಿನ ದಿನಗಳಲ್ಲಿ ಭಾರೀ ಚರ್ಚೆಯಲ್ಲಿದೆ. ವಾಸ್ತವವಾಗಿ, ವಿಜ್ಞಾನಿಗಳು ದಕ್ಷಿಣ ಮೆಕ್ಸಿಕೋದ ಮರದ ಮೇಲ್ಭಾಗದಲ್ಲಿ ಮೊಸಳೆಯಂತಹ ಗಾತ್ರದವುಳ್ಳ ಜೀವಿಯನ್ನು ಪತ್ತೆ ಹಚ್ಚಿದ್ದಾರೆ. ಈ ಹೊಸ ಜಾತಿಗೆ ಅಬ್ರೋನಿಯಾ ಕ್ಯುನೆಮಿಕಾ ಅಥವಾ ಕೊಪಿಲಾ ಅರ್ಬೊರಿಯಲ್ ಅಲಿಗೇಟರ್ ಲಿಸರ್ಡ್​​ ಎಂದು ಹೆಸರಿಸಲಾಗಿದೆ. ವಿಜ್ಞಾನಿಗಳ ಪ್ರಕಾರ, ಈ ಹಲ್ಲಿ ಸುಮಾರು 9.8 ಇಂಚುಗಳಷ್ಟು ಉದ್ದವಿದ್ದು, ಅದರ ದೇಹವು ಹಳದಿ-ಕಂದು ಬಣ್ಣದ ಚಿಪ್ಪುಗಳಿವೆ. ಜೊತೆಗೆ ಗಾಢ ಕಂದು ಬಣ್ಣದ ಚುಕ್ಕೆಗಳನ್ನು ಕಾಣಬಹುದು. ಈ ಜೀವಿಯ ಕಣ್ಣು ತಿಳಿ ಹಳದಿ ಮತ್ತು ಕಪ್ಪು ಕಲೆಗಳನ್ನು ಹೊಂದಿರುತ್ತವೆ ಎಂದು ಸಂಶೋಧಕರು ತಿಳಿಸಿದ್ದಾರೆ.

PLOS One ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, 2014 ರಲ್ಲಿ ಈ ಹಲ್ಲಿಯ ‘ಚಿತ್ರಗಳು’ ಬೆಳಕಿಗೆ ಬಂದ ನಂತರ, ಸಂಶೋಧಕರು 2015 ಮತ್ತು 2022 ರ ನಡುವೆ ಹುಡುಕಾಟ ನಡೆಸಿ ಹಲ್ಲಿಯಂತಹ ‘ಅಸ್ಪಷ್ಟ’ ಜೀವಿಗಳನ್ನು ಕಂಡುಹುಡುಕಿದ್ದಾರೆ. ಮಿಯಾಮಿ ಹೆರಾಲ್ಡ್ ವರದಿಯ ಪ್ರಕಾರ, ಈ ಹಲ್ಲಿಯನ್ನು ಹುಡುಕಲು ಸಂಶೋಧಕರು ಸುಮಾರು 20 ಮರಗಳನ್ನು ಏರಿ 350 ಗಂಟೆಗಳ ಕಾಲ ಹುಡುಕಾಟ ನಡೆಸಿದ್ದಾರೆ.

ಇದನ್ನೂ ಓದಿ: ಬರ್ಡ್ ಮ್ಯಾನ್ ಸುಮೇಧ್ ವಾಘಮಾರೆ ಜತೆ ವಿಶೇಷ ವಿಡಿಯೋ ಹಂಚಿಕೊಂಡ ಸಚಿನ್

ಈ ವಿಶಿಷ್ಟ ಹಲ್ಲಿ ಎಲ್ಲಿ ಕಂಡುಬಂದಿದೆ?

ವರದಿಗಳ ಪ್ರಕಾರ, ಸಂಶೋಧಕರು ಈ ಮೊಸಳೆಯಂತಹ ಹಲ್ಲಿಯನ್ನು ಮೆಕ್ಸಿಕೋ ನಗರದ ಆಗ್ನೇಯಕ್ಕೆ 700 ಕಿಲೋಮೀಟರ್ ದೂರದಲ್ಲಿರುವ ಚಿಯಾಪಾಸ್‌ನಲ್ಲಿರುವ ಕೋಪಿಲಾ ನಗರದಲ್ಲಿ ಪತ್ತೆ ಹಚ್ಚಿದ್ದಾರೆ.ಆದಾಗ್ಯೂ, ಅದರ ಸುರಕ್ಷತೆಗಾಗಿ ಈ ಹೊಸ ಜಾತಿಯ ಬಗ್ಗೆ ನಿಖರವಾದ ಸ್ಥಳವನ್ನು ಬಹಿರಂಗಪಡಿಸಿಲ್ಲ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ತಾಜಾ ಸುದ್ದಿ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ