AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Photo: ಮೊಸಳೆಯ ಗಾತ್ರವನ್ನು ಹೋಲುವ ವಿಶಿಷ್ಟ ಜಾತಿಯ ಹಲ್ಲಿ ಪತ್ತೆ

ವಿಜ್ಞಾನಿಗಳು ಮೆಕ್ಸಿಕೋದಲ್ಲಿ ಮೊಸಳೆಯಷ್ಟು ಗಾತ್ರವುಳ್ಳ ವಿಶಿಷ್ಟವಾದ ಹಲ್ಲಿಯನ್ನು ಪತ್ತೆಹಚ್ಚಿದ್ದಾರೆ. ಶೋಧದ ವೇಳೆ ಈ ಜೀವಿಯನ್ನು ಕಂಡು ವಿಜ್ಞಾನಿಗಳೂ ಬೆಚ್ಚಿಬಿದ್ದಿದ್ದಾರೆ. ಸದ್ಯ ಈ ವಿಶಿಷ್ಟ ಜಾತಿಯ ಹಲ್ಲಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿದೆ.

Viral Photo: ಮೊಸಳೆಯ ಗಾತ್ರವನ್ನು ಹೋಲುವ ವಿಶಿಷ್ಟ ಜಾತಿಯ ಹಲ್ಲಿ ಪತ್ತೆ
Alligator-like lizardImage Credit source: Pixabay
ಅಕ್ಷತಾ ವರ್ಕಾಡಿ
|

Updated on: Jan 09, 2024 | 10:43 AM

Share

ಮೆಕ್ಸಿಕೋದಲ್ಲಿ ಕಂಡುಬಂದ ಮೊಸಳೆಯ ಗಾತ್ರವನ್ನು ಹೋಲುವ ವಿಶಿಷ್ಟ ಜಾತಿಯ ಹಲ್ಲಿ ಇತ್ತೀಚಿನ ದಿನಗಳಲ್ಲಿ ಭಾರೀ ಚರ್ಚೆಯಲ್ಲಿದೆ. ವಾಸ್ತವವಾಗಿ, ವಿಜ್ಞಾನಿಗಳು ದಕ್ಷಿಣ ಮೆಕ್ಸಿಕೋದ ಮರದ ಮೇಲ್ಭಾಗದಲ್ಲಿ ಮೊಸಳೆಯಂತಹ ಗಾತ್ರದವುಳ್ಳ ಜೀವಿಯನ್ನು ಪತ್ತೆ ಹಚ್ಚಿದ್ದಾರೆ. ಈ ಹೊಸ ಜಾತಿಗೆ ಅಬ್ರೋನಿಯಾ ಕ್ಯುನೆಮಿಕಾ ಅಥವಾ ಕೊಪಿಲಾ ಅರ್ಬೊರಿಯಲ್ ಅಲಿಗೇಟರ್ ಲಿಸರ್ಡ್​​ ಎಂದು ಹೆಸರಿಸಲಾಗಿದೆ. ವಿಜ್ಞಾನಿಗಳ ಪ್ರಕಾರ, ಈ ಹಲ್ಲಿ ಸುಮಾರು 9.8 ಇಂಚುಗಳಷ್ಟು ಉದ್ದವಿದ್ದು, ಅದರ ದೇಹವು ಹಳದಿ-ಕಂದು ಬಣ್ಣದ ಚಿಪ್ಪುಗಳಿವೆ. ಜೊತೆಗೆ ಗಾಢ ಕಂದು ಬಣ್ಣದ ಚುಕ್ಕೆಗಳನ್ನು ಕಾಣಬಹುದು. ಈ ಜೀವಿಯ ಕಣ್ಣು ತಿಳಿ ಹಳದಿ ಮತ್ತು ಕಪ್ಪು ಕಲೆಗಳನ್ನು ಹೊಂದಿರುತ್ತವೆ ಎಂದು ಸಂಶೋಧಕರು ತಿಳಿಸಿದ್ದಾರೆ.

PLOS One ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, 2014 ರಲ್ಲಿ ಈ ಹಲ್ಲಿಯ ‘ಚಿತ್ರಗಳು’ ಬೆಳಕಿಗೆ ಬಂದ ನಂತರ, ಸಂಶೋಧಕರು 2015 ಮತ್ತು 2022 ರ ನಡುವೆ ಹುಡುಕಾಟ ನಡೆಸಿ ಹಲ್ಲಿಯಂತಹ ‘ಅಸ್ಪಷ್ಟ’ ಜೀವಿಗಳನ್ನು ಕಂಡುಹುಡುಕಿದ್ದಾರೆ. ಮಿಯಾಮಿ ಹೆರಾಲ್ಡ್ ವರದಿಯ ಪ್ರಕಾರ, ಈ ಹಲ್ಲಿಯನ್ನು ಹುಡುಕಲು ಸಂಶೋಧಕರು ಸುಮಾರು 20 ಮರಗಳನ್ನು ಏರಿ 350 ಗಂಟೆಗಳ ಕಾಲ ಹುಡುಕಾಟ ನಡೆಸಿದ್ದಾರೆ.

ಇದನ್ನೂ ಓದಿ: ಬರ್ಡ್ ಮ್ಯಾನ್ ಸುಮೇಧ್ ವಾಘಮಾರೆ ಜತೆ ವಿಶೇಷ ವಿಡಿಯೋ ಹಂಚಿಕೊಂಡ ಸಚಿನ್

ಈ ವಿಶಿಷ್ಟ ಹಲ್ಲಿ ಎಲ್ಲಿ ಕಂಡುಬಂದಿದೆ?

ವರದಿಗಳ ಪ್ರಕಾರ, ಸಂಶೋಧಕರು ಈ ಮೊಸಳೆಯಂತಹ ಹಲ್ಲಿಯನ್ನು ಮೆಕ್ಸಿಕೋ ನಗರದ ಆಗ್ನೇಯಕ್ಕೆ 700 ಕಿಲೋಮೀಟರ್ ದೂರದಲ್ಲಿರುವ ಚಿಯಾಪಾಸ್‌ನಲ್ಲಿರುವ ಕೋಪಿಲಾ ನಗರದಲ್ಲಿ ಪತ್ತೆ ಹಚ್ಚಿದ್ದಾರೆ.ಆದಾಗ್ಯೂ, ಅದರ ಸುರಕ್ಷತೆಗಾಗಿ ಈ ಹೊಸ ಜಾತಿಯ ಬಗ್ಗೆ ನಿಖರವಾದ ಸ್ಥಳವನ್ನು ಬಹಿರಂಗಪಡಿಸಿಲ್ಲ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಅಸ್ಸಾಂನಲ್ಲಿ ಹಿಂಸಾಚಾರ; ಸರ್ಕಾರದಿಂದ ಭದ್ರತೆ, ಇಂಟರ್​​ನೆಟ್​ ಸೇವೆ ಸ್ಥಗಿತ
ಅಸ್ಸಾಂನಲ್ಲಿ ಹಿಂಸಾಚಾರ; ಸರ್ಕಾರದಿಂದ ಭದ್ರತೆ, ಇಂಟರ್​​ನೆಟ್​ ಸೇವೆ ಸ್ಥಗಿತ
ಸಿದ್ದರಾಮಯ್ಯ ಭೇಟಿ ಬಳಿಕ ಬಿಗ್ ಅಪ್ಡೇಟ್ ಕೊಟ್ಟ ರಾಜಣ್ಣ!
ಸಿದ್ದರಾಮಯ್ಯ ಭೇಟಿ ಬಳಿಕ ಬಿಗ್ ಅಪ್ಡೇಟ್ ಕೊಟ್ಟ ರಾಜಣ್ಣ!
ದರ್ಶನ್ ಫ್ಯಾನ್ಸ್ ಎಂಥವರು ಗೊತ್ತಾ? ನೇರವಾಗಿ ಮಾತಾಡಿದ ತರುಣ್ ಸುಧೀರ್
ದರ್ಶನ್ ಫ್ಯಾನ್ಸ್ ಎಂಥವರು ಗೊತ್ತಾ? ನೇರವಾಗಿ ಮಾತಾಡಿದ ತರುಣ್ ಸುಧೀರ್
ಬಿಜೆಪಿ ನಾಯಕಿಯಿಂದ ದೃಷ್ಟಿಹೀನ ಮಹಿಳೆಗೆ ಚಿತ್ರಹಿಂಸೆ; ವಿಡಿಯೋ ವೈರಲ್
ಬಿಜೆಪಿ ನಾಯಕಿಯಿಂದ ದೃಷ್ಟಿಹೀನ ಮಹಿಳೆಗೆ ಚಿತ್ರಹಿಂಸೆ; ವಿಡಿಯೋ ವೈರಲ್
ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಮನೆಗಳಲ್ಲಿ ಕಳುವು ಮಾಡಿದ್ದಲ್ಲದೆ, ಚಹಾ ಮಾಡಿ ಕುಡಿದು ಹೋದ ಕಳ್ಳರು!
ಮನೆಗಳಲ್ಲಿ ಕಳುವು ಮಾಡಿದ್ದಲ್ಲದೆ, ಚಹಾ ಮಾಡಿ ಕುಡಿದು ಹೋದ ಕಳ್ಳರು!
CM ಕುರ್ಚಿ ಕದನ:ಡಿಕೆಶಿ ಹಿಂದೆನೇ ದೆಹಲಿಗೆ ತೆರಳಿದ ಸ್ವಾಮೀಜಿ ಹೇಳಿದ್ದಿಷ್ಟು
CM ಕುರ್ಚಿ ಕದನ:ಡಿಕೆಶಿ ಹಿಂದೆನೇ ದೆಹಲಿಗೆ ತೆರಳಿದ ಸ್ವಾಮೀಜಿ ಹೇಳಿದ್ದಿಷ್ಟು