AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಈ ಜೀವಿ ಜಗತ್ತಿನಲ್ಲಿ ಅತ್ಯಂತ ಅಪರೂಪ, ಇದು ಮೀನು ಅಲ್ಲ, ಹಾವು ಅಲ್ಲ ಮತ್ತೇನೂ? 

ಇದೀಗ ವಿಡಿಯೋವೊಂದು ವೈರಲ್ ಆಗಿದ್ದು, ಇದೇನಪ್ಪಾ ದೈತ್ಯ ಹಾವು ನೀರಿನಲ್ಲಿ ಮೀನಿನಂತೆ ಈಜಾಡುತ್ತಿದೆ, ನಿಜಕ್ಕೂ ಇದು ಮೀನೇನಾ ಅಥವಾ ದೈತ್ಯ ಸರ್ಪವೇ ಅಂತ ಹಲವರು ಕನ್ಫ್ಯೂಸ್ ಆಗಿದ್ದಾರೆ. ಆದ್ರೆ ಇದು ಹಾವಲ್ಲ, ಹಾಗಾದ್ರೆ ಮತ್ತೇನೂ ಅಂತ ಯೋಚನೆ ಮಾಡ್ತಿದ್ದೀರಾ? ಈ ಕುರಿತ ಮಾಹಿತಿ ಇಲ್ಲಿದೆ ನೋಡಿ.

Viral Video: ಈ ಜೀವಿ ಜಗತ್ತಿನಲ್ಲಿ ಅತ್ಯಂತ ಅಪರೂಪ, ಇದು ಮೀನು ಅಲ್ಲ, ಹಾವು ಅಲ್ಲ ಮತ್ತೇನೂ? 
ಮಾಲಾಶ್ರೀ ಅಂಚನ್​
| Edited By: |

Updated on: Jan 08, 2024 | 6:02 PM

Share

ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಏನಪ್ಪಾ ಇದು ಅನಕೊಂಡದಂತಿರುವ ಎರಡು ಹಾವುಗಳು ನೀರಿನಲ್ಲಿ ಮೀನಿನಂತೆ ಈಜುತ್ತಿವೆ. ನಿಜಕ್ಕೂ ಇದು ಯಾವುದೋ ದೈತ್ಯ ಮೀನೇನಾ ಅಥವಾ ದೈತ್ಯ ಸರ್ಪವೇ ಅಂತ ಈ ವಿಡಿಯೋ ನೋಡಿ ಹಲವರು ಫುಲ್ ಕನ್ಫ್ಯೂಸ್ ಆಗಿದ್ದಾರೆ. ನೀವು ಕೂಡಾ ಅದೇ ರೀತಿ ಯೋಚ್ನೆ ಮಾಡ್ತಿದ್ದಿರಾ?  ಆದ್ರೆ ನೀವು ಭಾವಿಸಿರುವ ಹಾಗೆ ಇವುಗಳು ಹಾವುಗಳಲ್ಲ.

ಇವುಗಳ ಹೆಸರು ʼಸಲಾಮಾಂಡರ್ʼ.  ಮೀನಿನಂತೆ ನೀರಿನಲ್ಲಿ ವಾಸಿಸುವ ಈ ಉಭಯಚರಗಳ ವೈಜ್ಞಾನಿಕ ಹೆಸರು ಆಂಡ್ರಿಯಾಸ್ ಡೇವಿಡಿಯನಸ್.  ನೋಡಲು ದೈತ್ಯ ಹಾವಿನಂತೆ ಕಾಣುವ ಈ ಜೀವಿಗಳು ನೀರಿನಲ್ಲಿರುವ ಮೀನು, ಏಡಿ, ಕಪ್ಪೆ ಇತ್ಯಾದಿ ಜಲಚರ ಜೀವಿಗಳನ್ನು ತಿಂದು ಬದುಕುತ್ತವೆ. ಹೆಚ್ಚಾಗಿ ಅಮೇರಿಕಾ, ಆಫ್ರಿಕಾ, ಯುರೋಪ್, ಏಷ್ಯಾ ಮತ್ತು ರಷ್ಯಾದಲ್ಲಿ ಈ ಸಲಾಮಾಂಡರ್​​ಗಳು ಕಂಡುಬರುತ್ತವೆ. ಹೆಚ್ಚಾಗಿ ಇವುಗಳು ತೊರೆಗಳು, ಅರಣ್ಯ ಪ್ರದೇಶದ ತಪ್ಪಲಿನಲ್ಲಿರುವ ನದಿ ನೀರುಗಳಲ್ಲಿ, ಹಾಗೂ ತೇವವಾಗಿರುವ ಪ್ರದೇಶಗಳಲ್ಲಿ ವಾಸಿಸುತ್ತವೆ. ಹಲವು ಬಗೆಯ ಸಲಾಮಾಂಡರ್ ಗಳಿವೆ.

ವೈರಲ್ ಆಗಿರುವ ವಿಡಿಯೋದಲ್ಲಿ ನಾವು ದೈತ್ಯ ಚೀನಿ ಸಲಾಮಂಡರ್​​ಗಳನ್ನು ಕಾಣಬಹುದು. ಇವುಗಳು ಚೀನಾದಲ್ಲಿ ಕಾಣಸಿಗುತ್ತವೆ. ವಿಶೇಷವಾಗಿ ಚೀನಾದಲ್ಲಿ ಕಾಣಸಿಗುವಂತಹ  ದೈತ್ಯ ಸಲಾಮಾಂಡರ್ 5.9 ಅಡಿ ಉದ್ದ ಮತ್ತು 140 ಪೌಂಡ್ ತೂಗುತ್ತವೆ. ದೊಡ್ಡ ಗಾತ್ರದ ತಲೆ, ಸಣ್ಣ ಕಣ್ಣುಗಳು, ಸುಕ್ಕುಗಟ್ಟಿದಂತೆ ಕಾಣುವ ಚರ್ಮವನ್ನು ಹೊಂದಿರುವ ಈ ಉಭಯಚರ ಜೀವಿ ಕಾಣಲು ಥೇಟ್ ದೈತ್ಯ ಹಾವಿನಂತಿದೆ. ಆಹಾರ, ಸಾಂಪ್ರದಾಯಿಕ ಔಷಧಿ, ಆವಾಸಸ್ಥಾನಗಳ ನಾಶದಿಂದಾಗಿ ಇಂದು ಈ ದೈತ್ಯ ಸಲಾಮಾಂಡರ್ ಅಳಿವಿನಂಚಿನಲ್ಲಿವೆ. ಇದೀಗ ಅಳಿವಿನಂಚಿನಲ್ಲಿರುವ ಈ ಉಭಯಚರ ಜೀವಿಯ ವಿಡಿಯೋವೊಂದು  ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

@AMAZINGNATURE ಎಂಬ X ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು,  ನೀರಿನ ತೊರೆಯಲ್ಲಿ ಎರಡು ದೈತ್ಯ ಸಲಾಮಾಂಡರ್ ಗಳು ಈಜುತ್ತಿರುವ ದೃಶ್ಯವನ್ನು ಕಾಣಬಹುದು.

ವೈರಲ್ ವಿಡಿಯೋದಲ್ಲಿ ಸಣ್ಣ ನೀರಿನ ತೊರೆಯಲ್ಲಿ ಎರಡು ದೈತ್ಯ ಸಲಾಮಾಂಡರ್ಗಳು ಆಹಾರವನ್ನರಸುತ್ತಾ, ಅತ್ತಿಂದ ಇತ್ತ ನಿಧಾನವಾಗಿ ಈಜಾಡುತ್ತಾ ಹೋಗುವ ದೃಶ್ಯವನ್ನು ಕಾಣಬಹುದು. ಈ ದೈತ್ಯ ಉಭಯಚರ ಜೀವಿಯನ್ನು ಕಂಡು ಹೆಚ್ಚಿನವರು ಇದ್ಯಾವುದಪ್ಪಾ ಇಷ್ಟು ದೊಡ್ಡ ಹಾವು ಎಂದು ಭಯಪಟ್ಟುಕೊಂಡಿದ್ದಾರೆ.

ಇದನ್ನೂ ಓದಿ:  ಲಿಫ್ಟ್​​​​ನಲ್ಲಿ ಸಿಲುಕಿಕೊಂಡ ನಾಯಿ ಮರಿಯನ್ನು ರಕ್ಷಿಸಿದ ಬಾಲಕ; ಇತನ ಸಮಯ ಪ್ರಜ್ಞೆ ನೋಡಿ

ಜನವರಿ 08 ರಂದು ಹಂಚಿಕೊಳ್ಳಲಾದ ಈ ವಿಡಿಯೋ 16.3 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼಅಷ್ಟಕ್ಕೂ ಇದು ಯಾವ ಜೀವಿʼ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಇನ್ನೊಬ್ಬ ಬಳಕೆದಾರರು ʼಇದು ಸಲಾಮಾಂಡರ್ ಎಂಬ ಉಭಯಚರ ಜೀವಿʼ ಎಂದು ಉತ್ತರಿಸಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇದು ಮೊಸಳೆಯೇʼ ಎಂದು ಕೇಳಿದ್ದಾರೆ. ಇನ್ನೂ ಈ ಸಲಾಮಾಂಡರ್ ಉಭಯಚರವನ್ನು ಮೊದಲ ಬಾರಿಗೆ ಕಂಡ ಅನೇಕರು ಇದು ದೈತ್ಯ ಸರ್ಪವೇ ಅಂತ ಪ್ರಶ್ನೆ ಕೇಳಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
ಬೆಂಗಳೂರಿನಲ್ಲಿ ಆಲಿಕಲ್ಲು ಮಳೆ ಆರ್ಭಟ: ಹತ್ತಾರು ಅವಾಂತರ; ಮರಗಳು ಧರೆಗೆ!
ಬೆಂಗಳೂರಿನಲ್ಲಿ ಆಲಿಕಲ್ಲು ಮಳೆ ಆರ್ಭಟ: ಹತ್ತಾರು ಅವಾಂತರ; ಮರಗಳು ಧರೆಗೆ!
‘ಡ್ರ್ಯಾಗನ್’ ಟೀಸರ್: ಚಿತ್ರಮಂದಿರದಲ್ಲಿ ಸಂಭ್ರಮಿಸಿದ ಪ್ರಶಾಂತ್ ನೀಲ್ ಪತ್ನಿ
‘ಡ್ರ್ಯಾಗನ್’ ಟೀಸರ್: ಚಿತ್ರಮಂದಿರದಲ್ಲಿ ಸಂಭ್ರಮಿಸಿದ ಪ್ರಶಾಂತ್ ನೀಲ್ ಪತ್ನಿ
‘ಧುರಂಧರ್’ ಸಿನಿಮಾಕ್ಕೆ ಎದುರಾಗಿರುವ ಕಾನೂನು ಸಂಕಷ್ಟ ಏನು: ವಿಡಿಯೋ
‘ಧುರಂಧರ್’ ಸಿನಿಮಾಕ್ಕೆ ಎದುರಾಗಿರುವ ಕಾನೂನು ಸಂಕಷ್ಟ ಏನು: ವಿಡಿಯೋ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು