AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ದೇಶದಲ್ಲಿ ವಾಟ್ಸ್​​​ಆ್ಯಪ್​ ಮೆಸೇಜ್​ಗಳಲ್ಲಿ ರೆಡ್​ ಹಾರ್ಟ್​ ಎಮೋಜಿ ಕಳುಹಿಸಿದರೆ 5 ವರ್ಷ ಜೈಲು: ಯಾಕೆ ಗೊತ್ತಾ?

ಸೌದಿ ಅರೇಬಿಯಾದಲ್ಲಿ ಇಂಥದ್ದೊಂದು ನಿಯಮ ಜಾರಿಯಾಗಿದೆ. ವಾಟ್ಸಾಪ್​​ ಸಂದೇಶ ಕಳುಹಿಸುವಾಗ ರೆಡ್​ ಹಾರ್ಟ್​ ಎಮೋಜಿಗಳನ್ನು ಬಳಸುವಂತಿಲ್ಲ ಎಂದು ಆದೇಶ ಹೊರಡಿಸಲಾಗಿದೆ.

ಈ ದೇಶದಲ್ಲಿ ವಾಟ್ಸ್​​​ಆ್ಯಪ್​ ಮೆಸೇಜ್​ಗಳಲ್ಲಿ ರೆಡ್​ ಹಾರ್ಟ್​ ಎಮೋಜಿ ಕಳುಹಿಸಿದರೆ 5 ವರ್ಷ ಜೈಲು: ಯಾಕೆ ಗೊತ್ತಾ?
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Feb 20, 2022 | 5:10 PM

Share

ಇಂದಿನ ಯುಗದಲ್ಲಿ ಸಾಮಾಜಿಕ ಜಾಲತಾಣಗಳ (Social Media) ಬಳಕೆ ದಿನನಿತ್ಯದ ಭಾಗವಾಗಿದೆ.  ಚಾಟ್, ವಿಡಿಯೋ ಕಾಲ್​, ವಾಯ್ಸ್​ ಕಾಲ್​ಗಳ ಜಗತ್ತಿನಲ್ಲಿ ಎಮೋಜಿಗಳನ್ನು(Emojis) ಯಥೇಚ್ಛವಾಗಿ ಬಳಸುತ್ತೇವೆ. ಭಾವನೆಗಳನ್ನು ವಿವರಿಸಲು ಎಮೋಜಿಗಳನ್ನಿಟ್ಟು ಮೆಸೇಜ್​ಗಳನ್ನು ಕಳುಹಿಸುತ್ತೇವೆ. ಕೆಲವರಂತೂ ಖುಷಿಯನ್ನು ವ್ಯಕ್ತಪಡಿಸಲು ಕೆಂಪು ಬಣ್ಣದ ಹಾರ್ಟ್​ ಎಮೋಜಿಗಳನ್ನು ಕಳುಹಿಸುತ್ತಾರೆ. ಇನ್ನೂ ಕೆಲವರಿಗೆ ಎಮೋಜಿಗಳಿಲ್ಲದೆ ಮೆಸೇಜ್​ ಕಳುಹಿಸುವುದೆಂದರೆ ಅಲರ್ಜಿ ಎನ್ನುವಂತಿರುತ್ತದೆ. ಹೀಗಿದ್ದಾಗ ಯಾವುದಾದದರೂ ಒಂದು ಎಮೋಜಿಯನ್ನು ಬ್ಯಾನ್​ಮಾಡಿಬಿಟ್ಟರೆ? ಹೌದು, ಸೌದಿ ಅರೇಬಿಯಾದಲ್ಲಿ (Saudi Arabia) ಇಂಥದ್ದೊಂದು ನಿಯಮ ಜಾರಿಯಾಗಿದೆ. ವಾಟ್ಸಾಪ್​​ ಸಂದೇಶ ಕಳುಹಿಸುವಾಗ ರೆಡ್​ ಹಾರ್ಟ್​ ಎಮೋಜಿಗಳನ್ನು (Red Heart Emojis) ಬಳಸುವಂತಿಲ್ಲ ಎಂದು ಆದೇಶ ಹೊರಡಿಸಲಾಗಿದೆ. ಈ ಕುರಿತು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳ ವರದಿ ತಿಳಿಸಿದೆ.

ವಾಟ್ಸಾಪ್​ನಲ್ಲಿ ಕೆಂಪು ಬಣ್ಣದ ಹಾರ್ಟ್​ ಎಮೋಜಿ ಕಳುಹಿಸುವುದು ಕಿರುಕುಳ ನೀಡಿದಂತೆ. ಒಂದು ವೇಳೆ ಮೆಸೇಜ್​ನಲ್ಲಿ ರೆಡ್​ ಹಾರ್ಟ್​ ಎಮೋಜಿ ಕಳುಹಿಸಿರುವುದು ತಿಳಿದು ಬಂದರೆ ಅಂತಹವರಿಗೆ 5 ವರ್ಷ ಜೈಲು ಮತ್ತು 26 ಸಾವಿರ ಡಾಲರ್​ ದಂಡ ವಿಧಿಸಲಾಗುವುದು ಎಂದು ಸೈಬರ್​ ಕ್ರೈಮ್​ ತಜ್ಞರೊಬ್ಬರು ಹೇಳಿಕೆ ನೀಡಿದ್ದಾರೆ. ಸದ್ಯ ಈ ವಿಚಾರ ಜಗತ್ತಿನೆಲ್ಲೆಡೆ ಸುದ್ದಿಯಾಗಿದೆ.

ಸೌದಿ ಅರೇಬಿಯಾದ ಕಾನೂನಿ ಪ್ರಕಾರ ರೆಡ್​ ಹಾರ್ಟ್​ಗಳನ್ನು ಕಳುಹಿಸುವುದು ಲೈಂಗಿಕತೆಯನ್ನು ಉತ್ತೇಜಿಸುತ್ತದೆ. ಹೀಗಾಗಿ ಆನ್ಲೈನ್​ನಲ್ಲಿ ಚಾಟ್​ ಮಾಡುವ ವೇಳೆ ಈ ರೀತಿ ರೆಡ್​ ಹಾರ್ಟ್​ಗಳನ್ನು ಕಳುಹಿಸುವುದು ಕಿರುಕುಳಕ್ಕೆ ಸಮಾನವಾಗಿದೆ. ಕಾನೂನಿನ ಅಡಿಯಲ್ಲ ಅಂತಹ ಪ್ರಕರಣಗಳು ಸಾಬೀತಾದರೆ ಶಿಕ್ಷೆ ತಪ್ಪಿದ್ದಲ್ಲ ಎಂದು ಸೌದಿ ಅರೇಬಿಯಾದ ಆ್ಯಂಟಿ ಫ್ರಾಡ್​ ಅಸೋಸಿಯೇಷನ್​ನ ಸದಸ್ಯ ಅಲ್ ಮೊತಾಜ್ ಕುಟ್ಬಿ ತಿಳಿಸಿದ್ದು, ಸಾಮಾಜಿಕ ಜಾಲತಾಣಗಳ ಬಳಕೆದಾರರಿಗೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಅದೇ ರೀತಿಯ ತಪ್ಪು ಪುನಾರಾವರ್ತನೆಯಾದರೆ ದಂಡದ ಮೊತ್ತ ದುಪ್ಪಟ್ಟಾಗುವುದು ಜತೆಗೆ 5 ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು ಎಂದ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ:

1,868 ಮೀಟರ್ ಎತ್ತರದ ಅಗಸ್ತ್ಯರ್ಕೂಡಮ್ ಶಿಖರ ಏರಿದ 62ರ ವೃದ್ಧೆ: ​ವಿಡಿಯೋ ವೈರಲ್

Published On - 5:09 pm, Sun, 20 February 22

Follow Us
ಬೆಳಗ್ಗೆ ಎದ್ದು ಮನೆ ಮುಂದೆ ನೀರು ಹಾಕುವುದರಿಂದ ಏನೆಲ್ಲಾ ಲಾಭ ಇದೆ ಗೊತ್ತಾ?
ಬೆಳಗ್ಗೆ ಎದ್ದು ಮನೆ ಮುಂದೆ ನೀರು ಹಾಕುವುದರಿಂದ ಏನೆಲ್ಲಾ ಲಾಭ ಇದೆ ಗೊತ್ತಾ?
Horoscope Today: ಇಂದು ಈ ರಾಶಿಯವರಿಗೆ ಆಕಸ್ಮಿಕ ಧನಾಗಮನ!
Horoscope Today: ಇಂದು ಈ ರಾಶಿಯವರಿಗೆ ಆಕಸ್ಮಿಕ ಧನಾಗಮನ!
‘ರುದ್ರಾಭಿಷೇಕಂ’ ಸಿನಿಮಾ ಬಗ್ಗೆ ವಿಜಯ್ ರಾಘವೇಂದ್ರ ಭಾವುಕ ಮಾತು
‘ರುದ್ರಾಭಿಷೇಕಂ’ ಸಿನಿಮಾ ಬಗ್ಗೆ ವಿಜಯ್ ರಾಘವೇಂದ್ರ ಭಾವುಕ ಮಾತು
ಫುಟ್‌ಪಾತ್ ಅಂಗಡಿಗಳ ತೆರವು ವೇಳೆ ಇಳಕಲ್​​ನಲ್ಲಿ ಹೈಡ್ರಾಮಾ
ಫುಟ್‌ಪಾತ್ ಅಂಗಡಿಗಳ ತೆರವು ವೇಳೆ ಇಳಕಲ್​​ನಲ್ಲಿ ಹೈಡ್ರಾಮಾ
ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಮತ್ತೆ BJP ಸರ್ಕಾರ ಬರುತ್ತೆ: ಜೋಶಿ
ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಮತ್ತೆ BJP ಸರ್ಕಾರ ಬರುತ್ತೆ: ಜೋಶಿ
ತಮ್ಮೂರು ತುಮಕೂರಿನ ಬಗ್ಗೆ ಧ್ರುವ ಸರ್ಜಾ ಮಾತು: ವಿಡಿಯೋ ನೋಡಿ
ತಮ್ಮೂರು ತುಮಕೂರಿನ ಬಗ್ಗೆ ಧ್ರುವ ಸರ್ಜಾ ಮಾತು: ವಿಡಿಯೋ ನೋಡಿ
ಅಭಿಮಾನೋತ್ಸವದಲ್ಲಿ ಭಾವುಕವಾಗಿ ಮಾತನಾಡಿದ ಯಡಿಯೂರಪ್ಪ
ಅಭಿಮಾನೋತ್ಸವದಲ್ಲಿ ಭಾವುಕವಾಗಿ ಮಾತನಾಡಿದ ಯಡಿಯೂರಪ್ಪ
ಮೊದಲ ಬಾರಿಗೆ ಕಾನ್ಸರ್ಟ್ ನೀಡುತ್ತಿದ್ದಾರೆ ಅಜನೀಶ್: ಇಲ್ಲಿದೆ ಮಾಹಿತಿ
ಮೊದಲ ಬಾರಿಗೆ ಕಾನ್ಸರ್ಟ್ ನೀಡುತ್ತಿದ್ದಾರೆ ಅಜನೀಶ್: ಇಲ್ಲಿದೆ ಮಾಹಿತಿ
ಬಿಎಸ್​​ವೈ ಬರ್ತಿದ್ದಂತೆ ಜೈಕಾರ; ಹೇಗಿದೆ ನೋಡಿ ರಾಜಾಹುಲಿ ಎಂಟ್ರಿ
ಬಿಎಸ್​​ವೈ ಬರ್ತಿದ್ದಂತೆ ಜೈಕಾರ; ಹೇಗಿದೆ ನೋಡಿ ರಾಜಾಹುಲಿ ಎಂಟ್ರಿ
ಒಳಮೀಸಲಾತಿ ಹುದ್ದೆಗಳ ರೋಸ್ಟರ್ ಬಿಂದು ಸಮಸ್ಯೆ: ಮುನಿಯಪ್ಪ ಹೇಳಿದ್ದಿಷ್ಟು
ಒಳಮೀಸಲಾತಿ ಹುದ್ದೆಗಳ ರೋಸ್ಟರ್ ಬಿಂದು ಸಮಸ್ಯೆ: ಮುನಿಯಪ್ಪ ಹೇಳಿದ್ದಿಷ್ಟು