AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shocking News: ಬರ್ಗರ್​​ನಲ್ಲಿತ್ತು ಅರ್ಧ ಸೇದಿದ ಸಿಗರೇಟ್; ಇನ್ನೆಂದೂ ಫಾಸ್ಟ್​ಫುಡ್ ತಿನ್ನುವುದಿಲ್ಲ ಎಂದು ಯುವತಿಯ ಶಪಥ

ನಾವಿಬ್ಬರೂ ಇನ್ನೆಂದೂ ಫಾಸ್ಟ್​ಫುಡ್ ತಿನ್ನಲು ಹೋಗುವುದಿಲ್ಲ ಎಂದು ಆ ಯುವತಿ ಶಪಥ ಮಾಡಿದ್ದಾಳೆ. ಈ ವಿಷಯ ಆ ಶಾಪ್​ನವರಿಗೆ ತಿಳಿಸುತ್ತಿದ್ದಂತೆ ಅವರು ಪೂರ್ತಿ ಹಣವನ್ನು ವಾಪಾಸ್ ನೀಡಿದ್ದಾರೆ.

Shocking News: ಬರ್ಗರ್​​ನಲ್ಲಿತ್ತು ಅರ್ಧ ಸೇದಿದ ಸಿಗರೇಟ್; ಇನ್ನೆಂದೂ ಫಾಸ್ಟ್​ಫುಡ್ ತಿನ್ನುವುದಿಲ್ಲ ಎಂದು ಯುವತಿಯ ಶಪಥ
ಬರ್ಗರ್​​ನಲ್ಲಿ ಸಿಗರೇಟ್ ತುಂಡು
TV9 Web
| Updated By: ಸುಷ್ಮಾ ಚಕ್ರೆ|

Updated on: Jul 21, 2022 | 4:28 PM

Share

ಆಸೆಯಿಂದ ಬರ್ಗರ್ ತಿನ್ನಲು ಹೋದ ಯುವತಿಗೆ ಶಾಕ್ ಒಂದು ಕಾದಿತ್ತು. ಬರ್ಗರ್​ ಮಧ್ಯೆ ಅರ್ಧ ಸೇದಿದ ಸಿಗರೇಟ್ ತುಂಡೊಂದು ಸಿಕ್ಕಿತ್ತು. ಇದರಿಂದ ಶಾಕ್ ಆದ ಆ ಯುವತಿ ಇನ್ನೆಂದೂ ಬರ್ಗರ್ ತಿನ್ನುವುದಿಲ್ಲ ಎಂದು ಶಪಥ ಮಾಡಿದ್ದಾಳೆ. ಬರ್ಗರ್ ಮಧ್ಯೆ ಹೊಗೆಯಾಡುತ್ತಿದ್ದ ಸಿಗರೇಟ್ ತುಂಡು ಸಿಕ್ಕಿದ್ದು, ಅದನ್ನು ನೋಡಿದ ಗ್ರಾಹಕಿ ಆಘಾತಗೊಂಡಿದ್ದಾಳೆ. ಆ ಹುಡುಗಿ ತನ್ನ ತಾಯಿ ಜೆನ್ ಹೋಲಿಫೀಲ್ಡ್ ಜೊತೆ ಅಮೆರಿಕಾದ ಮಿಸಿಸಿಪ್ಪಿಯಲ್ಲಿರುವ ಮೆರಿಡಿಯನ್‌ನಲ್ಲಿರುವ ಬರ್ಗರ್ ಕಿಂಗ್‌ಗೆ ಹೋಗಿದ್ದರು. ಅಲ್ಲಿ ಈ ಘಟನೆ ನಡೆದಿದೆ.

ತಾಯ- ಮಗಳಿಬ್ಬರೂ 9 ಚಿಕನ್ ಫ್ರೈಸ್ ಮತ್ತು ಕೆಲವು ಜಲಪೆನೊ ಪಾಪ್ಪರ್‌ಗಳ ಬ್ಯಾಗ್ ಆರ್ಡರ್ ಮಾಡಿದರು. ಅವರ ಆರ್ಡರ್​ ಟೇಬಲ್​ಗೆ ಬರುತ್ತಿದ್ದಂತೆ ಅದನ್ನು ತೆಗೆದುಕೊಂಡು ಮನೆಗೆ ಹೊರಟರು. ಮನೆಗೆ ಹೋಗಿ ಪಾರ್ಟಲ್ ತೆಗೆದು ತಿನ್ನತೊಡಗಿದಾಗ ಸಿಗರೇಟ್ ವಾಸನೆ ಬರತೊಡಗಿತು. 6 ಚಿಕನ್ ಫ್ರೈಗಳನ್ನು ತಿಂದ ನಂತರ ಬರ್ಗರ್ ಮಧ್ಯೆ ಸಿಗರೇಟ್ ಇರುವುದು ಕಂಡಿತು.

ಇದನ್ನೂ ಓದಿ: Shocking News: ಗರ್ಭಪಾತ ಮಾಡಿಸಿಕೊಳ್ಳಲು ಪ್ರಿಯಕರನಿಂದ 14 ಬಾರಿ ಒತ್ತಾಯ; ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ

ನನ್ನ ಮಗಳು ಬಹಳ ಹಸಿದಿದ್ದಳು. ಅವಳು ಬರ್ಗರ್ ಅನ್ನು ತಿನ್ನಲು ಪ್ರಾರಂಭಿಸಿದಳು. ಬರ್ಗರ್ ತಿನ್ನುವಾಗ ಸಿಗರೇಟ್ ವಾಸನೆ ಬರುತ್ತಿದೆ ಎಂದು ಆಕೆ ಹೇಳಿದಳು. ನಾನು ಅದೆಲ್ಲ ನಿನ್ನ ಭ್ರಮೆ ಎಂದೆ. ಆದರೆ, ಆಕೆಯ ಬರ್ಗರ್​ನಲ್ಲಿ ಅರ್ಧ ತುಂಡಾದ ಸಿಗರೇಟ್ ಇರುವುದನ್ನು ನೋಡಿ ನಾವಿಬ್ಬರೂ ಶಾಕ್ ಆದೆವು. ಅದೊಂದು ಅಸಹ್ಯಕರ ಘಟನೆ ಎಂದಿರುವ ಅವರು ಅದಾದ ನಂತರ ನನ್ನ ಮಗಳು ಆಘಾತಕ್ಕೊಳಗಾಗಿದ್ದಾಳೆ ಎಂದು ಹೇಳಿದ್ದಾರೆ.

ನಾವಿಬ್ಬರೂ ಇನ್ನೆಂದೂ ಫಾಸ್ಟ್​ಫುಡ್ ತಿನ್ನಲು ಹೋಗುವುದಿಲ್ಲ ಎಂದು ಆ ಯುವತಿ ಶಪಥ ಮಾಡಿದ್ದಾಳೆ. ಈ ವಿಷಯ ಆ ಶಾಪ್​ನವರಿಗೆ ತಿಳಿಸುತ್ತಿದ್ದಂತೆ ಅವರು ಪೂರ್ತಿ ಹಣವನ್ನು ವಾಪಾಸ್ ನೀಡಿದರು.

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?