AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shocking News: ಬರ್ಗರ್​​ನಲ್ಲಿತ್ತು ಅರ್ಧ ಸೇದಿದ ಸಿಗರೇಟ್; ಇನ್ನೆಂದೂ ಫಾಸ್ಟ್​ಫುಡ್ ತಿನ್ನುವುದಿಲ್ಲ ಎಂದು ಯುವತಿಯ ಶಪಥ

ನಾವಿಬ್ಬರೂ ಇನ್ನೆಂದೂ ಫಾಸ್ಟ್​ಫುಡ್ ತಿನ್ನಲು ಹೋಗುವುದಿಲ್ಲ ಎಂದು ಆ ಯುವತಿ ಶಪಥ ಮಾಡಿದ್ದಾಳೆ. ಈ ವಿಷಯ ಆ ಶಾಪ್​ನವರಿಗೆ ತಿಳಿಸುತ್ತಿದ್ದಂತೆ ಅವರು ಪೂರ್ತಿ ಹಣವನ್ನು ವಾಪಾಸ್ ನೀಡಿದ್ದಾರೆ.

Shocking News: ಬರ್ಗರ್​​ನಲ್ಲಿತ್ತು ಅರ್ಧ ಸೇದಿದ ಸಿಗರೇಟ್; ಇನ್ನೆಂದೂ ಫಾಸ್ಟ್​ಫುಡ್ ತಿನ್ನುವುದಿಲ್ಲ ಎಂದು ಯುವತಿಯ ಶಪಥ
ಬರ್ಗರ್​​ನಲ್ಲಿ ಸಿಗರೇಟ್ ತುಂಡು
TV9 Web
| Edited By: |

Updated on: Jul 21, 2022 | 4:28 PM

Share

ಆಸೆಯಿಂದ ಬರ್ಗರ್ ತಿನ್ನಲು ಹೋದ ಯುವತಿಗೆ ಶಾಕ್ ಒಂದು ಕಾದಿತ್ತು. ಬರ್ಗರ್​ ಮಧ್ಯೆ ಅರ್ಧ ಸೇದಿದ ಸಿಗರೇಟ್ ತುಂಡೊಂದು ಸಿಕ್ಕಿತ್ತು. ಇದರಿಂದ ಶಾಕ್ ಆದ ಆ ಯುವತಿ ಇನ್ನೆಂದೂ ಬರ್ಗರ್ ತಿನ್ನುವುದಿಲ್ಲ ಎಂದು ಶಪಥ ಮಾಡಿದ್ದಾಳೆ. ಬರ್ಗರ್ ಮಧ್ಯೆ ಹೊಗೆಯಾಡುತ್ತಿದ್ದ ಸಿಗರೇಟ್ ತುಂಡು ಸಿಕ್ಕಿದ್ದು, ಅದನ್ನು ನೋಡಿದ ಗ್ರಾಹಕಿ ಆಘಾತಗೊಂಡಿದ್ದಾಳೆ. ಆ ಹುಡುಗಿ ತನ್ನ ತಾಯಿ ಜೆನ್ ಹೋಲಿಫೀಲ್ಡ್ ಜೊತೆ ಅಮೆರಿಕಾದ ಮಿಸಿಸಿಪ್ಪಿಯಲ್ಲಿರುವ ಮೆರಿಡಿಯನ್‌ನಲ್ಲಿರುವ ಬರ್ಗರ್ ಕಿಂಗ್‌ಗೆ ಹೋಗಿದ್ದರು. ಅಲ್ಲಿ ಈ ಘಟನೆ ನಡೆದಿದೆ.

ತಾಯ- ಮಗಳಿಬ್ಬರೂ 9 ಚಿಕನ್ ಫ್ರೈಸ್ ಮತ್ತು ಕೆಲವು ಜಲಪೆನೊ ಪಾಪ್ಪರ್‌ಗಳ ಬ್ಯಾಗ್ ಆರ್ಡರ್ ಮಾಡಿದರು. ಅವರ ಆರ್ಡರ್​ ಟೇಬಲ್​ಗೆ ಬರುತ್ತಿದ್ದಂತೆ ಅದನ್ನು ತೆಗೆದುಕೊಂಡು ಮನೆಗೆ ಹೊರಟರು. ಮನೆಗೆ ಹೋಗಿ ಪಾರ್ಟಲ್ ತೆಗೆದು ತಿನ್ನತೊಡಗಿದಾಗ ಸಿಗರೇಟ್ ವಾಸನೆ ಬರತೊಡಗಿತು. 6 ಚಿಕನ್ ಫ್ರೈಗಳನ್ನು ತಿಂದ ನಂತರ ಬರ್ಗರ್ ಮಧ್ಯೆ ಸಿಗರೇಟ್ ಇರುವುದು ಕಂಡಿತು.

ಇದನ್ನೂ ಓದಿ: Shocking News: ಗರ್ಭಪಾತ ಮಾಡಿಸಿಕೊಳ್ಳಲು ಪ್ರಿಯಕರನಿಂದ 14 ಬಾರಿ ಒತ್ತಾಯ; ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ

ನನ್ನ ಮಗಳು ಬಹಳ ಹಸಿದಿದ್ದಳು. ಅವಳು ಬರ್ಗರ್ ಅನ್ನು ತಿನ್ನಲು ಪ್ರಾರಂಭಿಸಿದಳು. ಬರ್ಗರ್ ತಿನ್ನುವಾಗ ಸಿಗರೇಟ್ ವಾಸನೆ ಬರುತ್ತಿದೆ ಎಂದು ಆಕೆ ಹೇಳಿದಳು. ನಾನು ಅದೆಲ್ಲ ನಿನ್ನ ಭ್ರಮೆ ಎಂದೆ. ಆದರೆ, ಆಕೆಯ ಬರ್ಗರ್​ನಲ್ಲಿ ಅರ್ಧ ತುಂಡಾದ ಸಿಗರೇಟ್ ಇರುವುದನ್ನು ನೋಡಿ ನಾವಿಬ್ಬರೂ ಶಾಕ್ ಆದೆವು. ಅದೊಂದು ಅಸಹ್ಯಕರ ಘಟನೆ ಎಂದಿರುವ ಅವರು ಅದಾದ ನಂತರ ನನ್ನ ಮಗಳು ಆಘಾತಕ್ಕೊಳಗಾಗಿದ್ದಾಳೆ ಎಂದು ಹೇಳಿದ್ದಾರೆ.

ನಾವಿಬ್ಬರೂ ಇನ್ನೆಂದೂ ಫಾಸ್ಟ್​ಫುಡ್ ತಿನ್ನಲು ಹೋಗುವುದಿಲ್ಲ ಎಂದು ಆ ಯುವತಿ ಶಪಥ ಮಾಡಿದ್ದಾಳೆ. ಈ ವಿಷಯ ಆ ಶಾಪ್​ನವರಿಗೆ ತಿಳಿಸುತ್ತಿದ್ದಂತೆ ಅವರು ಪೂರ್ತಿ ಹಣವನ್ನು ವಾಪಾಸ್ ನೀಡಿದರು.

Follow Us
ಇಂದು ಆಷಾಢ ಮಾಸದ ಆಡಿ ಶುಕ್ರವಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಆಷಾಢ ಮಾಸದ ಆಡಿ ಶುಕ್ರವಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್