AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shweta Your Mic is On ಟ್ರೆಂಡ್​ ಆಗ್ತಿರೋದೆಕೆ? ಅಷ್ಟಕ್ಕೂ ಯಾರು ಈ ಶ್ವೇತಾ?

Shweta Your Mic is On ಟ್ವಿಟ್ಟರ್​​ನಲ್ಲಿ ಟ್ರೆಂಡ್​ ಆಗುತ್ತಿದೆ. ಅಷ್ಟಕ್ಕೂ ಇದು ಟ್ರೆಂಡ್​ ಆಗ್ತಿರೋದೆಕೆ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

Shweta Your Mic is On ಟ್ರೆಂಡ್​ ಆಗ್ತಿರೋದೆಕೆ? ಅಷ್ಟಕ್ಕೂ ಯಾರು ಈ ಶ್ವೇತಾ?
ಸಾಂದರ್ಭಿಕ ಚಿತ್ರ
ರಾಜೇಶ್ ದುಗ್ಗುಮನೆ
|

Updated on:Feb 20, 2021 | 6:39 PM

Share

ShwetaYourMicisOn ಇದು ಟ್ವಿಟ್ಟರ್​ನಲ್ಲಿ ಇಂದು  ಟ್ರೆಂಡ್​ ಆಗುತ್ತಿದೆ. ಅಷ್ಟೇ ಅಲ್ಲ, ಶ್ವೇತಾ ಬಗ್ಗೆ ಸಾಕಷ್ಟು ಮೀಮ್​ಗಳು ಕೂಡ ಹರಿದಾಡುತ್ತಿವೆ. ಅನೇಕರು ಶ್ವೇತಾ ಮೀಟಿಂಗ್​ ಅಟೆಂಡ್​ ಆದಾಗ, ಮೈಕ್​ ಆಫ್​ ಮಾಡೋದು ಹೇಗೆ ಎನ್ನುವ ಪಾಠವನ್ನು ಕೂಡ ಮಾಡಿದ್ದಾರೆ. ಅಷ್ಟಕ್ಕೂ ಯಾರು ಈ ಶ್ವೇತಾ? ಅವರು ಮಾಡಿದ ತಪ್ಪೇನು? ಅಷ್ಟಕ್ಕೂ ShwetaYourMicisOn ಎಂದು ಹೇಳ್ತಿರೋದೇಕೆ ಎನ್ನುವ ಬಗ್ಗೆ ಇಲ್ಲಿದೆ ವಿವರ.

ಕೊರೊನಾ ವೈರಸ್​ ಕಾಣಿಸಿಕೊಂಡ ನಂತರ ಅನೇಕರು ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಿದ್ದಾರೆ. ಹೀಗಾಗಿ, ಆನ್​ಲೈನ್​ನಲ್ಲೇ ಮೀಟಿಂಗ್​ ಅಟೆಂಡ್​ ಮಾಡೋದು ಅನಿವಾರ್ಯವಾಗಿದೆ. ಅಲ್ಲದೆ, ತರಗತಿಗಳು ಕೂಡ ಆನ್​ಲೈನ್​ ಮೂಲಕವೇ ನಡೆಯುತ್ತಿದೆ. ಹೀಗಾಗಿ, ಮೀಟಿಂಗ್​ಗೆ ಗೂಗಲ್​ ಮೀಟ್​, ಜೂಮ್​ ಕಾಲ್​ ಮೂಲಕ ಹಾಜರಿ ಹಾಕುತ್ತಿದ್ದಾರೆ. ಆನ್​ಲೈನ್​ ಮೂಲಕ ಮೀಟಿಂಗ್​ ಅಟೆಂಡ್​ ಆಗುವಾಗ ನಡೆದ ಅಧ್ವಾನಗಳು ಒಂದೆರಡಲ್ಲ. ಶ್ವೇತಾಗೆ ಆಗಿದ್ದೂ ಇದೆ!

ಶ್ವೇತಾ ಎಂಬ ವಿದ್ಯಾರ್ಥಿನಿ ಜೂಮ್​ ಮೂಲಕ ಆನ್​ಲೈನ್​ ತರಗತಿಗೆ ಅಟೆಂಡ್​ ಆಗಿದ್ದರು. ಈ ವೇಳೆ, ಅವರ ಮೈಕ್​ ಆನ್​ ಆಗಿಯೇ ಇತ್ತು. ಆದರೆ, ಹೆಡ್​ಫೋನ್​ ಹಾಕಿರದ ಕಾರಣ ಇದು ಅವರ ಗಮನಕ್ಕೆ ಬಂದಿರಲಿಲ್ಲ. ಇಷ್ಟೇ ಆಗಿದ್ದರೆ ಈ ವಿಚಾರ ಟ್ರೋಲ್​ ಆಗುತ್ತಲೇ ಇರಲಿಲ್ಲ. ಗೆಳತಿ ಒಬ್ಬಳಿಗೆ ಶ್ವೇತಾ ಕರೆ ಮಾಡಿ ಮಾತನಾಡುತ್ತಿದ್ದರು. ಈ ವೇಳೆ ಶ್ವೇತಾ ತನ್ನ ಖಾಸಗಿ ಮಾಹಿತಿಯನ್ನು ಇಂಚಿಂಚು ಬಿಚ್ಚಿಟ್ಟಿದ್ದರು. ಮೀಟಿಂಗ್​ನಲ್ಲಿದ್ದವರು, ಶ್ವೇತಾ ನಿನ್ನ ಮೈಕ್​ ಆನ್​ ಆಗಿದೆ (Shweta Your Mic is On ) ಎಂದು ಕೂಗುತ್ತಲೇ ಇದ್ದರು. ಆದರೆ, ಶ್ವೇತಾ ಮಾತ್ರ ಒಂದೇ ಸಮನೆ ಮಾತನಾಡುತ್ತಲೇ ಇದ್ದರು.

ಮೀಟಿಂಗ್​ನಲ್ಲಿದ್ದವರು ಯಾರೋ ಇದನ್ನು ರೆಕಾರ್ಡ್​ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಈಗ ಸಾಕಷ್ಟು ವೈರಲ್​ ಆಗಿದೆ. ShwetaYourMicisOn ಟ್ರೆಂಡ್​ ಆಗಲು ಕೂಡ ಇದುವೇ ಕಾರಣ. ಇನ್ನು, ಅನೇಕ ಬ್ರ್ಯಾಂಡ್​ಗಳು ಕೂಡ ಇದನ್ನು ಮೀಮ್​ ಮಾಡಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿವೆ.

ಇದನ್ನೂ ಓದಿ: ಟ್ರೆಂಡ್ ಆಯ್ತು Bharat Ratna For Ratan Tata ಹ್ಯಾಶ್ ಟ್ಯಾಗ್… ಈ ಅಭಿಯಾನ ನಿಲ್ಲಿಸಿ; ಅಭಿಮಾನ ಇರಲಿ ಎಂದ ರತನ್ ಟಾಟಾ

Published On - 4:47 pm, Fri, 19 February 21

Follow Us
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ