ಯಾವುದೂ ಅಸಾಧ್ಯವಲ್ಲ: ಕಡಿದಾದ ಬಂಡೆಯ ಮೇಲೆ ಆಕಾಶಮುಖಿಯಾಗಿ ಚಲಿಸಿದ ಬೈಕ್​ನ ವಿಡಿಯೋ ವೈರಲ್​

Bike Stunt : ಅತ್ಯಂತ ಅಪಾಯಕರವಾದ ಅಪರೂಪದ ಸಾಹಸವಿದು. ಈ ವ್ಯಕ್ತಿ ಇದನ್ನು ಅದ್ಭುತವಾಗಿ ನಿರ್ವಹಿಸಿದ್ದಾರೆ ಎಂದು ನೆಟ್ಟಿಗರು ಬೆನ್ನು ತಟ್ಟುತ್ತಿದ್ದಾರೆ. ಇನ್ನೂ ಕೆಲವರು ಇದೆಲ್ಲ ಬೇಕಿತ್ತೆ? ಎಂದು ಪ್ರಶ್ನಿಸುತ್ತಿದ್ಧಾರೆ. ನೀವೇನಂತೀರಿ?

ಯಾವುದೂ ಅಸಾಧ್ಯವಲ್ಲ: ಕಡಿದಾದ ಬಂಡೆಯ ಮೇಲೆ ಆಕಾಶಮುಖಿಯಾಗಿ ಚಲಿಸಿದ ಬೈಕ್​ನ ವಿಡಿಯೋ ವೈರಲ್​
Follow us
| Updated By: ಶ್ರೀದೇವಿ ಕಳಸದ

Updated on: Dec 30, 2022 | 3:49 PM

Viral Video : ಸಾಹಸಿಗರನ್ನು ಯಾರಾದರೂ ತಡೆಯಲಾಗುವುದೆ? ಸಾಧ್ಯವೇ ಇಲ್ಲ. ಒಂದು ಸಾಹಸದ ತುದಿ ಮುಟ್ಟಿದರು ಎನ್ನುತ್ತಿದ್ದಂತೆ ಮತ್ತದರ ಮುಂದೆ ಚಾಚಿಕೊಂಡಿರುವ ಇನ್ನೊಂದು ತುದಿಯ ಕಡೆ ಅವರ ಗಮನ ನೆಟ್ಟಿರುತ್ತದೆ. ಈಗ ವೈರಲ್ ಆಗಿರುವ ಈ ವಿಡಿಯೋ ಗಮನಿಸಿ, ಕಡಿದಾದ ಬಂಡೆಗಳ ಮೇಲೆ ಹೀಗೆ ಆಕಾಶಮುಖಿಯಾಗಿ ಈ ವ್ಯಕ್ತಿ ಬೈಕ್​ ಮೂಲಕ ಚಲಿಸುತ್ತಾನೆ. ಬಂಡೆಯ ತುದಿಯನ್ನೂ ತಲುಪುತ್ತಾನೆ. ನೆಟ್ಟಿಗರು ಈ ವಿಡಿಯೋ ನೋಡಿ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ.

ಈಗಾಗಲೇ ಈ ವಿಡಿಯೋ ಅನ್ನು ಸುಮಾರು 6 ಲಕ್ಷ ಜನರು ನೋಡಿದ್ದಾರೆ. 11,500 ಜನರು  ಇಷ್ಟಪಟ್ಟಿದ್ದಾರೆ. ಸಾವಿರಾರು ಜನರು ರೀಟ್ವೀಟ್ ಮಾಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ. ಇದು ತೀರಾ ಅಪಾಯಕಾರಿ ಮತ್ತು ಕಷ್ಟಕರವಾದ ಸಾಹಸ ಎಂದು ನೆಟ್ಟಿಗರು ಆತಂಕ ಪಡುತ್ತಿದ್ದಾರೆ.

ಇದನ್ನೂ ಓದಿ : ಸಿಲ್ಕಿ ಹೇರ್​ ಸಿಂಹಪ್ಪ ವೈರಲ್ ಆದನು ನೋಡಪ್ಪ

ಲಾಂಗ್​ ರೈಡ್​, ರಾಕ್​ ಕ್ಲೈಂಬಿಂಗ್​, ಡರ್ಟ್​ ಬೈಕಿಂಗ್​ ವಿಡಿಯೋಗಳು ಇದೀಗ ಅಂತರ್ಜಾಲದಲ್ಲಿ ಜನಪ್ರಿಯವಾಗುತ್ತಿವೆ. ಆದರೆ ನೋಡಲೇನೋ ಖುಷಿ. ಆದರೆ ಈ ಸಾಹಸಗಳಲ್ಲಿ ತೊಡಗಿಕೊಂಡವರ ಸುತ್ತ ಸದಾ ಅಪಾಯ ಗಿರಕಿ ಹಾಕುತ್ತಿರುತ್ತದೆ. ಹಾಗಾಗಿ ಅವರು ಮೈಯೆಲ್ಲ ಎಚ್ಚರವಾಗಿರಬೇಕು.

ಇದನ್ನೂ ಓದಿ : ಇಂಥ ಹುಚ್ಚುಸಾಹಸವನ್ನು ಯಾರೂ ಪ್ರಯತ್ನಿಸಬೇಡಿ ಎನ್ನುತ್ತಿದ್ದಾರೆ ನೆಟ್ಟಿಗರು

ಅನೇಕರು ಈ ವಿಡಿಯೋದಲ್ಲಿರುವ ವ್ಯಕ್ತಿಯ ಸಾಹಸವನ್ನು ಬಹುವಾಗಿ ಮೆಚ್ಚುತ್ತಿದ್ದಾರೆ. ಇನ್ನೂ ಕೆಲವರು ಹೆಲ್ಮೆಟ್​ ಇಲ್ಲದೆ ಈ ಸಾಹಸವನ್ನು ಮಾಡಬಾರದು ಎನ್ನುತ್ತಿದ್ದಾರೆ. ಒಂದು ಕ್ಷಣ ಎಚ್ಚರತಪ್ಪಿದರೆ ಈ ವ್ಯಕ್ತಿಯ ಗತಿ? ಎಂದು ಪ್ರಶ್ನಿಸಿದ್ಧಾರೆ ಕೆಲವರು. ಬೈಕ್​ ಓಡಿಸುತ್ತಿರುವ ವ್ಯಕ್ತಿ ಮುಂದೆ ಏನಾದ ಎನ್ನುವುದು ಯಾರಿಗಾದರೂ ತಿಳಿಯಿತೇ? ಎಂದಿದ್ದಾರೆ ಒಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ