AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾವುದೂ ಅಸಾಧ್ಯವಲ್ಲ: ಕಡಿದಾದ ಬಂಡೆಯ ಮೇಲೆ ಆಕಾಶಮುಖಿಯಾಗಿ ಚಲಿಸಿದ ಬೈಕ್​ನ ವಿಡಿಯೋ ವೈರಲ್​

Bike Stunt : ಅತ್ಯಂತ ಅಪಾಯಕರವಾದ ಅಪರೂಪದ ಸಾಹಸವಿದು. ಈ ವ್ಯಕ್ತಿ ಇದನ್ನು ಅದ್ಭುತವಾಗಿ ನಿರ್ವಹಿಸಿದ್ದಾರೆ ಎಂದು ನೆಟ್ಟಿಗರು ಬೆನ್ನು ತಟ್ಟುತ್ತಿದ್ದಾರೆ. ಇನ್ನೂ ಕೆಲವರು ಇದೆಲ್ಲ ಬೇಕಿತ್ತೆ? ಎಂದು ಪ್ರಶ್ನಿಸುತ್ತಿದ್ಧಾರೆ. ನೀವೇನಂತೀರಿ?

ಯಾವುದೂ ಅಸಾಧ್ಯವಲ್ಲ: ಕಡಿದಾದ ಬಂಡೆಯ ಮೇಲೆ ಆಕಾಶಮುಖಿಯಾಗಿ ಚಲಿಸಿದ ಬೈಕ್​ನ ವಿಡಿಯೋ ವೈರಲ್​
TV9 Web
| Edited By: ಶ್ರೀದೇವಿ ಕಳಸದ|

Updated on: Dec 30, 2022 | 3:49 PM

Share

Viral Video : ಸಾಹಸಿಗರನ್ನು ಯಾರಾದರೂ ತಡೆಯಲಾಗುವುದೆ? ಸಾಧ್ಯವೇ ಇಲ್ಲ. ಒಂದು ಸಾಹಸದ ತುದಿ ಮುಟ್ಟಿದರು ಎನ್ನುತ್ತಿದ್ದಂತೆ ಮತ್ತದರ ಮುಂದೆ ಚಾಚಿಕೊಂಡಿರುವ ಇನ್ನೊಂದು ತುದಿಯ ಕಡೆ ಅವರ ಗಮನ ನೆಟ್ಟಿರುತ್ತದೆ. ಈಗ ವೈರಲ್ ಆಗಿರುವ ಈ ವಿಡಿಯೋ ಗಮನಿಸಿ, ಕಡಿದಾದ ಬಂಡೆಗಳ ಮೇಲೆ ಹೀಗೆ ಆಕಾಶಮುಖಿಯಾಗಿ ಈ ವ್ಯಕ್ತಿ ಬೈಕ್​ ಮೂಲಕ ಚಲಿಸುತ್ತಾನೆ. ಬಂಡೆಯ ತುದಿಯನ್ನೂ ತಲುಪುತ್ತಾನೆ. ನೆಟ್ಟಿಗರು ಈ ವಿಡಿಯೋ ನೋಡಿ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ.

ಈಗಾಗಲೇ ಈ ವಿಡಿಯೋ ಅನ್ನು ಸುಮಾರು 6 ಲಕ್ಷ ಜನರು ನೋಡಿದ್ದಾರೆ. 11,500 ಜನರು  ಇಷ್ಟಪಟ್ಟಿದ್ದಾರೆ. ಸಾವಿರಾರು ಜನರು ರೀಟ್ವೀಟ್ ಮಾಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ. ಇದು ತೀರಾ ಅಪಾಯಕಾರಿ ಮತ್ತು ಕಷ್ಟಕರವಾದ ಸಾಹಸ ಎಂದು ನೆಟ್ಟಿಗರು ಆತಂಕ ಪಡುತ್ತಿದ್ದಾರೆ.

ಇದನ್ನೂ ಓದಿ : ಸಿಲ್ಕಿ ಹೇರ್​ ಸಿಂಹಪ್ಪ ವೈರಲ್ ಆದನು ನೋಡಪ್ಪ

ಲಾಂಗ್​ ರೈಡ್​, ರಾಕ್​ ಕ್ಲೈಂಬಿಂಗ್​, ಡರ್ಟ್​ ಬೈಕಿಂಗ್​ ವಿಡಿಯೋಗಳು ಇದೀಗ ಅಂತರ್ಜಾಲದಲ್ಲಿ ಜನಪ್ರಿಯವಾಗುತ್ತಿವೆ. ಆದರೆ ನೋಡಲೇನೋ ಖುಷಿ. ಆದರೆ ಈ ಸಾಹಸಗಳಲ್ಲಿ ತೊಡಗಿಕೊಂಡವರ ಸುತ್ತ ಸದಾ ಅಪಾಯ ಗಿರಕಿ ಹಾಕುತ್ತಿರುತ್ತದೆ. ಹಾಗಾಗಿ ಅವರು ಮೈಯೆಲ್ಲ ಎಚ್ಚರವಾಗಿರಬೇಕು.

ಇದನ್ನೂ ಓದಿ : ಇಂಥ ಹುಚ್ಚುಸಾಹಸವನ್ನು ಯಾರೂ ಪ್ರಯತ್ನಿಸಬೇಡಿ ಎನ್ನುತ್ತಿದ್ದಾರೆ ನೆಟ್ಟಿಗರು

ಅನೇಕರು ಈ ವಿಡಿಯೋದಲ್ಲಿರುವ ವ್ಯಕ್ತಿಯ ಸಾಹಸವನ್ನು ಬಹುವಾಗಿ ಮೆಚ್ಚುತ್ತಿದ್ದಾರೆ. ಇನ್ನೂ ಕೆಲವರು ಹೆಲ್ಮೆಟ್​ ಇಲ್ಲದೆ ಈ ಸಾಹಸವನ್ನು ಮಾಡಬಾರದು ಎನ್ನುತ್ತಿದ್ದಾರೆ. ಒಂದು ಕ್ಷಣ ಎಚ್ಚರತಪ್ಪಿದರೆ ಈ ವ್ಯಕ್ತಿಯ ಗತಿ? ಎಂದು ಪ್ರಶ್ನಿಸಿದ್ಧಾರೆ ಕೆಲವರು. ಬೈಕ್​ ಓಡಿಸುತ್ತಿರುವ ವ್ಯಕ್ತಿ ಮುಂದೆ ಏನಾದ ಎನ್ನುವುದು ಯಾರಿಗಾದರೂ ತಿಳಿಯಿತೇ? ಎಂದಿದ್ದಾರೆ ಒಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Follow Us
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಕೆಲಸಕ್ಕೆ ಮಾತ್ರ ಸೀಮಿತ? ಗಂಭೀರ ಆರೋಪ
ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಕೆಲಸಕ್ಕೆ ಮಾತ್ರ ಸೀಮಿತ? ಗಂಭೀರ ಆರೋಪ
8 ಜನ ನಾಮಿನೇಟ್; ಇದರಲ್ಲಿ ಎಲಿಮಿನೇಟ್ ಆಗೋದು ಯಾರು?
8 ಜನ ನಾಮಿನೇಟ್; ಇದರಲ್ಲಿ ಎಲಿಮಿನೇಟ್ ಆಗೋದು ಯಾರು?
ಚಂದ್ರ ಕನ್ಯಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಚಂದ್ರ ಕನ್ಯಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಮೊಬೈಲ್ ನೋಡುತ್ತಾ ಹೋಗುತ್ತಿದ್ದಾಗ ಫ್ಲೋರ್​ನಿಂದ ಕೆಳಗೆ ಬಿದ್ದ ವ್ಯಕ್ತಿ
ಮೊಬೈಲ್ ನೋಡುತ್ತಾ ಹೋಗುತ್ತಿದ್ದಾಗ ಫ್ಲೋರ್​ನಿಂದ ಕೆಳಗೆ ಬಿದ್ದ ವ್ಯಕ್ತಿ
ನಿಮ್ಮ ಏರಿಯಾದಲ್ಲಿ ಗಣೇಶ ಕೂರಿಸ್ಬೇಕಾ? ಹಾಗಾದರೆ ಈ ವಿಡಿಯೋ ನೋಡಿ
ನಿಮ್ಮ ಏರಿಯಾದಲ್ಲಿ ಗಣೇಶ ಕೂರಿಸ್ಬೇಕಾ? ಹಾಗಾದರೆ ಈ ವಿಡಿಯೋ ನೋಡಿ
ಒಂದು ವಾರದಲ್ಲಿ ಮಂಜ ಕಾಮಿಡಿ ಪೀಸ್ ಆಗ್ತಾನೆ; ತಾಂಡವ್ ರಾಮ್ ಭವಿಷ್ಯ
ಒಂದು ವಾರದಲ್ಲಿ ಮಂಜ ಕಾಮಿಡಿ ಪೀಸ್ ಆಗ್ತಾನೆ; ತಾಂಡವ್ ರಾಮ್ ಭವಿಷ್ಯ