Viral Video: ಇಂಡಿಯಾ ಗೇಟ್​ ಬಳಿ ನಿನ್ನೆ ಒಂದು ಮ್ಯಾಜಿಕ್​ ನಡೆದಿದೆ!

India Gate : ಮರಳು ಶಿಲ್ಪಕಲಾವಿದ ಸುದರ್ಶನ ಪಟ್ನಾಯಕ್, ನಿನ್ನೆ ಟ್ವಿಟರ್​ನಲ್ಲಿ ಹಾಕಿದ ಈ ಪೋಸ್ಟ್​ಗೆ ಅಧಿಕಾರಿಗಳು ಅದೆಷ್ಟು ವೇಗದಲ್ಲಿ ಸ್ಪಂದಿಸಿದರೆಂದರೆ... ವಿಡಿಯೋ ನೋಡಿ.

Viral Video: ಇಂಡಿಯಾ ಗೇಟ್​ ಬಳಿ ನಿನ್ನೆ ಒಂದು ಮ್ಯಾಜಿಕ್​ ನಡೆದಿದೆ!
ಇಂಡಿಯಾ ಗೇಟ್​ ಎದುರಿನಲ್ಲಿ ಕಸದರಾಶಿ
Follow us
| Updated By: ಶ್ರೀದೇವಿ ಕಳಸದ

Updated on:Aug 23, 2022 | 3:46 PM

India Gate: ಐತಿಹಾಸಿಕ ಪ್ರವಾಸಿ ಸ್ಥಳಗಳಿಗೆ ನಮ್ಮ ಭಾರತ ಅತೀ ಪ್ರಸಿದ್ಧ. ಅತಿಥಿ ದೇವೋ ಭವ ಎಂಬ ಟ್ಯಾಗ್​ಲೈನ್​ನೊಂದಿಗೆ ನಿತ್ಯವೂ ಸಾವಿರಾರು ಜನರನ್ನು ನಮ್ಮ ದೇಶ ಬರಮಾಡಿಕೊಳ್ಳುತ್ತದೆ. ಈ ಸ್ಥಳಗಳ ಪೈಕಿ ಹೊಸದೆಹಲಿಯಲ್ಲಿರುವ ಇಂಡಿಯಾ ಗೇಟ್ ಕೂಡ ಅತ್ಯಂತ ಜನಪ್ರಿಯ ಪ್ರವಾಸಿ ಸ್ಥಳ. ದಿನಕ್ಕೆ ನೂರಾರು ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ತೆಗೆಸಿಕೊಂಡ ಫೋಟೋಗಳನ್ನು, ಸೆಲ್ಫೀಗಳನ್ನು ತಕ್ಷಣವೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂಭ್ರಮಿಸುತ್ತಾರೆ. ಖ್ಯಾತ ಮರಳು ಶಿಲ್ಪಕಲಾವಿದ ಸುದರ್ಶನ ಪಟ್ನಾಯಕ್ ಕೂಡ ಎಲ್ಲರಂತೆ ಈ ಸ್ಥಳಕ್ಕೆ ನಿನ್ನೆ ಭೇಟಿ ನೀಡಿದರು. ನಂತರ ಅವರೂ ಫೋಟೋ, ವಿಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರು. ಮುಂದೆ? ನೋಡಿ ನೀವೇ.

ನೋಡಿದಿರಲ್ಲ ರಸ್ತೆಯುದ್ದಕ್ಕೂ ಹರಡಿಕೊಂಡಿರುವ ಕಸದ ರಾಶಿಯ ಈ ವಿಡಿಯೋ. ‘ಇದು ಇಂಡಿಯಾ ಗೇಟ್​. ದೆಹಲಿಗೆ ಭೇಟಿ ನೀಡಲು ಸಂತೋಷವೇನೋ ಆಯಿತು. ಆದರೆ ಈ ಕಸದ ರಾಶಿ ನೋಡಿ ಅತೀವ ನಿರಾಶೆಯಾಯಿತು. ದಯವಿಟ್ಟು ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ನಗರಗಳನ್ನು ಅದರಲ್ಲೂ ರಾಷ್ಟ್ರೀಯ ಐತಿಹ್ಯವುಳ್ಳ ಮಹಾನಗರಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು’ ಎಂದು ಸುದರ್ಶನ ಮನವಿಯುಕ್ತ ಪೋಸ್ಟ್ ಮಾಡಿದರು.

ತಕ್ಷಣವೇ ಅಧಿಕಾರಿಗಳು ಕ್ರಮ ಕೈಗೊಂಡರು! ಆನಂತರದ ಪೋಸ್ಟ್​ ಹಂಚಿಕೊಂಡ ಸುದರ್ಶನ ಧನ್ಯವಾದ ತಿಳಿಸಿದರು.

ಏನೇ ಸುಧಾರಣೆಯಾಗಬೇಕೆಂದರೂ ಸಾಮಾಜಿಕ ಜಾಲತಾಣದ ಮೂಲಕವೇ ಗಮನ ಸೆಳೆಯಬೇಕು ಎನ್ನುವಂಥ ಡಿಜಿಟಲ್​ ಕಾಲದಲ್ಲಿ ನಾವಿದ್ದೇವೆ. ಅಂತೂ ಕೂಡಿಟ್ಟ ಕಸ ಮುಕ್ತಿ ಕಂಡಿತಲ್ಲ. ಒಳ್ಳೆಯದೇ!

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:55 pm, Tue, 23 August 22

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ