AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಇಂಡಿಯಾ ಗೇಟ್​ ಬಳಿ ನಿನ್ನೆ ಒಂದು ಮ್ಯಾಜಿಕ್​ ನಡೆದಿದೆ!

India Gate : ಮರಳು ಶಿಲ್ಪಕಲಾವಿದ ಸುದರ್ಶನ ಪಟ್ನಾಯಕ್, ನಿನ್ನೆ ಟ್ವಿಟರ್​ನಲ್ಲಿ ಹಾಕಿದ ಈ ಪೋಸ್ಟ್​ಗೆ ಅಧಿಕಾರಿಗಳು ಅದೆಷ್ಟು ವೇಗದಲ್ಲಿ ಸ್ಪಂದಿಸಿದರೆಂದರೆ... ವಿಡಿಯೋ ನೋಡಿ.

Viral Video: ಇಂಡಿಯಾ ಗೇಟ್​ ಬಳಿ ನಿನ್ನೆ ಒಂದು ಮ್ಯಾಜಿಕ್​ ನಡೆದಿದೆ!
ಇಂಡಿಯಾ ಗೇಟ್​ ಎದುರಿನಲ್ಲಿ ಕಸದರಾಶಿ
TV9 Web
| Updated By: ಶ್ರೀದೇವಿ ಕಳಸದ|

Updated on:Aug 23, 2022 | 3:46 PM

Share

India Gate: ಐತಿಹಾಸಿಕ ಪ್ರವಾಸಿ ಸ್ಥಳಗಳಿಗೆ ನಮ್ಮ ಭಾರತ ಅತೀ ಪ್ರಸಿದ್ಧ. ಅತಿಥಿ ದೇವೋ ಭವ ಎಂಬ ಟ್ಯಾಗ್​ಲೈನ್​ನೊಂದಿಗೆ ನಿತ್ಯವೂ ಸಾವಿರಾರು ಜನರನ್ನು ನಮ್ಮ ದೇಶ ಬರಮಾಡಿಕೊಳ್ಳುತ್ತದೆ. ಈ ಸ್ಥಳಗಳ ಪೈಕಿ ಹೊಸದೆಹಲಿಯಲ್ಲಿರುವ ಇಂಡಿಯಾ ಗೇಟ್ ಕೂಡ ಅತ್ಯಂತ ಜನಪ್ರಿಯ ಪ್ರವಾಸಿ ಸ್ಥಳ. ದಿನಕ್ಕೆ ನೂರಾರು ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ತೆಗೆಸಿಕೊಂಡ ಫೋಟೋಗಳನ್ನು, ಸೆಲ್ಫೀಗಳನ್ನು ತಕ್ಷಣವೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂಭ್ರಮಿಸುತ್ತಾರೆ. ಖ್ಯಾತ ಮರಳು ಶಿಲ್ಪಕಲಾವಿದ ಸುದರ್ಶನ ಪಟ್ನಾಯಕ್ ಕೂಡ ಎಲ್ಲರಂತೆ ಈ ಸ್ಥಳಕ್ಕೆ ನಿನ್ನೆ ಭೇಟಿ ನೀಡಿದರು. ನಂತರ ಅವರೂ ಫೋಟೋ, ವಿಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರು. ಮುಂದೆ? ನೋಡಿ ನೀವೇ.

ನೋಡಿದಿರಲ್ಲ ರಸ್ತೆಯುದ್ದಕ್ಕೂ ಹರಡಿಕೊಂಡಿರುವ ಕಸದ ರಾಶಿಯ ಈ ವಿಡಿಯೋ. ‘ಇದು ಇಂಡಿಯಾ ಗೇಟ್​. ದೆಹಲಿಗೆ ಭೇಟಿ ನೀಡಲು ಸಂತೋಷವೇನೋ ಆಯಿತು. ಆದರೆ ಈ ಕಸದ ರಾಶಿ ನೋಡಿ ಅತೀವ ನಿರಾಶೆಯಾಯಿತು. ದಯವಿಟ್ಟು ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ನಗರಗಳನ್ನು ಅದರಲ್ಲೂ ರಾಷ್ಟ್ರೀಯ ಐತಿಹ್ಯವುಳ್ಳ ಮಹಾನಗರಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು’ ಎಂದು ಸುದರ್ಶನ ಮನವಿಯುಕ್ತ ಪೋಸ್ಟ್ ಮಾಡಿದರು.

ತಕ್ಷಣವೇ ಅಧಿಕಾರಿಗಳು ಕ್ರಮ ಕೈಗೊಂಡರು! ಆನಂತರದ ಪೋಸ್ಟ್​ ಹಂಚಿಕೊಂಡ ಸುದರ್ಶನ ಧನ್ಯವಾದ ತಿಳಿಸಿದರು.

ಏನೇ ಸುಧಾರಣೆಯಾಗಬೇಕೆಂದರೂ ಸಾಮಾಜಿಕ ಜಾಲತಾಣದ ಮೂಲಕವೇ ಗಮನ ಸೆಳೆಯಬೇಕು ಎನ್ನುವಂಥ ಡಿಜಿಟಲ್​ ಕಾಲದಲ್ಲಿ ನಾವಿದ್ದೇವೆ. ಅಂತೂ ಕೂಡಿಟ್ಟ ಕಸ ಮುಕ್ತಿ ಕಂಡಿತಲ್ಲ. ಒಳ್ಳೆಯದೇ!

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:55 pm, Tue, 23 August 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ