Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಡು ಹೇಳಿ, ಆರತಿ ಬೆಳಗಿ ನೆಚ್ಚಿನ ಶ್ವಾನದ ಹುಟ್ಟುಹಬ್ಬ ಆಚರಿಸಿದ ಸುಧಾಮೂರ್ತಿ: ವೀಡಿಯೋ ವೈರಲ್​

ಇನ್ಫೋಸಿಸ್ ಪೌಂಡೇಶನ್​ ಅಧ್ಯಕ್ಷೆ ಸುಧಾ ಮೂರ್ತಿ ಹಾಗೂ ಅವರ ಸಹೋದರಿ ತಮ್ಮ ಮನೆಯಲ್ಲಿ ಸಾಕಿದ ಮುದ್ದಿನ ನಾಯಿ ಗೋಪಿಯ ಜನ್ಮದಿನದಂದು ಹಾಡು ಹೇಳಿಕೊಂಡು ಆರತಿ ಬೆಳಗಿ ಸಂಭ್ರಮಿಸಿದ್ದಾರೆ. ಈ ವೀಡಿಯೋ ನವೆಂಬರ್​ 26,27ರಂದು ನಡೆದಿದ್ದು, ಆದರೆ ಈಗ ವೈರಲ್​ ಆಗಿದೆ.

ಹಾಡು ಹೇಳಿ, ಆರತಿ ಬೆಳಗಿ ನೆಚ್ಚಿನ ಶ್ವಾನದ ಹುಟ್ಟುಹಬ್ಬ ಆಚರಿಸಿದ ಸುಧಾಮೂರ್ತಿ: ವೀಡಿಯೋ ವೈರಲ್​
ಗೋಪಿಗೆ ಆರತಿ ಬೆಳಗುತ್ತಿರುವುದು
Follow us
TV9 Web
| Updated By: Pavitra Bhat Jigalemane

Updated on: Dec 07, 2021 | 4:05 PM

ಬೆಂಗಳೂರು : ಮನೆಯಲ್ಲಿ ಪ್ರಾಣಿಗಳನ್ನು ಮುದ್ದಿನಿಂದ ಸಾಕಿಕೊಂಡು ಅವುಗಳನ್ನು ಮನೆಯ ಜನರಂತೆ ಕಾಣುತ್ತೇವೆ. ಅವುಗಳ ಜನ್ಮದಿನವನ್ನೂ ಆಚರಣೆ ಮಾಡಿ ಖುಷಿಪಡುತ್ತೇವೆ. ಅಂತಹ ಸಾಕು ಪ್ರಾಣಿಗಳಲ್ಲಿ ಮುಂಚೂಣಿಯಲ್ಲಿ ಕಂಡುಬರುವವು ಶ್ವಾನಗಳು. ತನ್ನ ಒಡೆಯನಿಗೆ, ತನ್ನನ್ನು ಮುದ್ದಿಸುವವರಿಗೆ ನಿಯತ್ತಿನಿಂದ ಇರುವ ಜೀವಿ. ಮನೆಯ ಕಾವಲಾಗಿ, ಮನೆ ಜನರ ನೆಚ್ಚಿನ ಸ್ನೇಹಿತನಾಗಿ ಶ್ವಾನಗಳು ಇರುತ್ತವೆಅವುಗಳ ತುಂಟಾಟ, ಅವುಗಳ ಜೀವನ ಪ್ರೀತಿ ನಿಜಕ್ಕೂ ಮಾನವನ ಜೀವನಕ್ಕೆ ಮಾದರಿ. ಇಂತಹ ಶ್ವಾನಗಳ ವಿವಿಧ ರೀತಿಯ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಲೇ ಇರುತ್ತವೆ. ಇದಕ್ಕೆ ನೆಟ್ಟಿಗರು ಮನಸೋತು ವಿವಿಧ ರೀತಿಯ ಕಾಮೆಂಟ್​ಗಳನ್ನು ಹಂಚಿಕೊಳ್ಳುತ್ತಾರೆ. ಅಂತಹದ್ದೇ ಒಂದು ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಇನ್ಫೋಸಿಸ್ ಪೌಂಡೇಶನ್​ ಅಧ್ಯಕ್ಷೆ ಸುಧಾ ಮೂರ್ತಿ ಹಾಗೂ ಅವರ ಸಹೋದರಿ ತಮ್ಮ ಮನೆಯಲ್ಲಿ ಸಾಕಿದ ಮುದ್ದಿನ ನಾಯಿ ಗೋಪಿಯ ಜನ್ಮದಿನದಂದು ಹಾಡು ಹೇಳಿಕೊಂಡು ಆರತಿ ಬೆಳಗಿ ಸಂಭ್ರಮಿಸಿದ್ದಾರೆ. ಈ ವೀಡಿಯೋ ನವೆಂಬರ್​ 27ರಂದು ನಡೆದಿದ್ದು, ಆದರೆ ಈಗ ವೈರಲ್​ ಆಗಿದೆ. ಸುಧಾಮೂರ್ತಿ ಅವರು ತಮ್ಮ ಮುದ್ದಿನ ಶ್ವಾನಕ್ಕೆ ಹಾಡು ಹೇಳಿ ಆರತಿ ಬೆಳಗಿ ಜನ್ಮದಿನ ಆಚರಿಸಿದ ವಿಡಿಯೋವನ್ನು ಪತ್ರಕರ್ತ ಆರ್​ ಶ್ರೀಕಾಂತ್​ ಅವರು ಹಂಚಿಕೊಂಡಿದ್ದಾರೆ. ವೀಡಿಯೋ ನೋಡಿದ ನೆಟ್ಟಿಗರು ಮನಸೋತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸುಧಾ ಮೂರ್ತಿ ಯುವಜನತೆಗೆ ಸದಾ ಸ್ಪೂರ್ತಿಯಾದವರು. ತಮ್ಮ ನಡೆ, ನುಡಿ, ಸಮಾಜ ಸೇವಗಳಲ್ಲಿ ಸದಾ ತೊಡಗಿಸಿಕೊಂಡು ಜನತೆಗೆ ಹತ್ತಿರವಾದವರು. ಪ್ರಾಣಿಗಳ ವಿಷಯದಲ್ಲಿಯೂ ಅಷ್ಟೇ ಭಾವುಕ ಮನಸ್ಥಿಯುಳ್ಳವರು ಸುಧಾ ಮೂರ್ತಿಯವರು ಎನ್ನುವುದಕ್ಕೆ ಈ ವೀಡಿಯೋ ಸಾಕ್ಷಿಯಾಗಿದೆ.

ವೀಡಿಯೋ ಇಲ್ಲಿದೆ

ಇದನ್ನೂ ಓದಿ:

ಬೆಂಗಳೂರಲ್ಲಿ ಚಾಲಕರಿಗೆ ಆಟೋ ಮೀಟರ್ ಮಾರ್ಪಾಟಿಗೆ 90 ದಿನದ ಅವಕಾಶ; ಇಲ್ಲಿದೆ ಏರಿಕೆಯಾದ ಹೊಸ ದರ ಪಟ್ಟಿ

GGVV: ‘ಗರುಡ ಗಮನ..’ ಚಿತ್ರ ಪ್ರದರ್ಶನಕ್ಕೆ ತಡೆ ಕೋರಿ ಕೋರ್ಟ್​ಗೆ ಅರ್ಜಿ; ಮಾದೇವ ಹಾಡಿನ ಬಗ್ಗೆ ಆಕ್ಷೇಪ

ತೆರವು ಕಾರ್ಯಾಚರಣೆ ಆರಂಭಿಸುವ ಮೊದಲು ನೋಟೀಸ್ ನೀಡಿಲ್ಲ: ಕುಮಾರಸ್ವಾಮಿ
ತೆರವು ಕಾರ್ಯಾಚರಣೆ ಆರಂಭಿಸುವ ಮೊದಲು ನೋಟೀಸ್ ನೀಡಿಲ್ಲ: ಕುಮಾರಸ್ವಾಮಿ
ನಮಗಾದರೋ ಕುಮಾರಸ್ವಾಮಿ ಎಲ್ಲದಕ್ಕೂ ರಾಜೀನಾಮೆ ಕೇಳುತ್ತಿದ್ದರಲ್ಲ? ಸಚಿವ
ನಮಗಾದರೋ ಕುಮಾರಸ್ವಾಮಿ ಎಲ್ಲದಕ್ಕೂ ರಾಜೀನಾಮೆ ಕೇಳುತ್ತಿದ್ದರಲ್ಲ? ಸಚಿವ
ತೋಟದ ಮನೆ ಸುತ್ತ ಸರ್ಕಾರಿ ಒತ್ತುವರಿ ಭೂಮಿ ತೆರವು: ಎಚ್​ಡಿಕೆ ಹೇಳಿದ್ದಿಷ್ಟು
ತೋಟದ ಮನೆ ಸುತ್ತ ಸರ್ಕಾರಿ ಒತ್ತುವರಿ ಭೂಮಿ ತೆರವು: ಎಚ್​ಡಿಕೆ ಹೇಳಿದ್ದಿಷ್ಟು
ಭಾರತೀಯ ಸಂಸ್ಕೃತಿಯ ರಾಯಭಾರಿ; ಅಂಧ ಯುವತಿಯ ಸ್ಫೂರ್ತಿಯ ಕತೆ ಹೇಳಿದ ಮೋದಿ
ಭಾರತೀಯ ಸಂಸ್ಕೃತಿಯ ರಾಯಭಾರಿ; ಅಂಧ ಯುವತಿಯ ಸ್ಫೂರ್ತಿಯ ಕತೆ ಹೇಳಿದ ಮೋದಿ
RCB ಅನ್​ಬಾಕ್ಸ್ ಕಾರ್ಯಕ್ರಮ ಮಿಸ್ ಮಾಡಿಕೊಂಡಿದ್ದೀರಾ? ಇಲ್ಲಿದೆ ವಿಡಿಯೋ
RCB ಅನ್​ಬಾಕ್ಸ್ ಕಾರ್ಯಕ್ರಮ ಮಿಸ್ ಮಾಡಿಕೊಂಡಿದ್ದೀರಾ? ಇಲ್ಲಿದೆ ವಿಡಿಯೋ
ಎಚ್​ಡಿಕೆ ತೋಟದ ಮನೆ ಸುತ್ತ ಎಷ್ಟು ಎಕರೆ ಒತ್ತುವರಿ?ಸ್ಫೋಟಕ ಮಾಹಿತಿ ಇಲ್ಲಿದೆ
ಎಚ್​ಡಿಕೆ ತೋಟದ ಮನೆ ಸುತ್ತ ಎಷ್ಟು ಎಕರೆ ಒತ್ತುವರಿ?ಸ್ಫೋಟಕ ಮಾಹಿತಿ ಇಲ್ಲಿದೆ
ಕೇಂದ್ರ ಸಚಿವರೊಬ್ಬರ ವಿರುದ್ಧ ಒತ್ತುವರಿ ಕಾರ್ಯಾಚರಣೆ ನಡೆದ ಪ್ರಕರಣಗಳು ವಿರಳ
ಕೇಂದ್ರ ಸಚಿವರೊಬ್ಬರ ವಿರುದ್ಧ ಒತ್ತುವರಿ ಕಾರ್ಯಾಚರಣೆ ನಡೆದ ಪ್ರಕರಣಗಳು ವಿರಳ
ಮುಸ್ಲಿಮರಿಗೆ ಶೇ 4 ಮೀಸಲಾತಿ ಸುಪ್ರೀಂ​ನಲ್ಲಿ ಪ್ರಶ್ನಿಸಲಾಗ್ತಿದೆ: ಬೊಮ್ಮಾಯಿ
ಮುಸ್ಲಿಮರಿಗೆ ಶೇ 4 ಮೀಸಲಾತಿ ಸುಪ್ರೀಂ​ನಲ್ಲಿ ಪ್ರಶ್ನಿಸಲಾಗ್ತಿದೆ: ಬೊಮ್ಮಾಯಿ
ತುಮಕೂರು: ಓರ್ವ ವಿದ್ಯಾರ್ಥಿನಿಗಾಗಿ ಒಂದು ಸರ್ಕಾರಿ ಶಾಲೆ, ಓರ್ವ ಶಿಕ್ಷಕಿ
ತುಮಕೂರು: ಓರ್ವ ವಿದ್ಯಾರ್ಥಿನಿಗಾಗಿ ಒಂದು ಸರ್ಕಾರಿ ಶಾಲೆ, ಓರ್ವ ಶಿಕ್ಷಕಿ
ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಗೌರವ ನೀಡದಿದ್ದರೆ ಹೇಗೆ? ಯುಟಿ ಖಾದರ್
ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಗೌರವ ನೀಡದಿದ್ದರೆ ಹೇಗೆ? ಯುಟಿ ಖಾದರ್