AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಲ್ಲಿ ಚಾಲಕರಿಗೆ ಆಟೋ ಮೀಟರ್ ಮಾರ್ಪಾಟಿಗೆ 90 ದಿನದ ಅವಕಾಶ; ಇಲ್ಲಿದೆ ಏರಿಕೆಯಾದ ಹೊಸ ದರ ಪಟ್ಟಿ

ಬೆಂಗಳೂರಿನಲ್ಲಿ ಡಿಸೆಂಬರ್ 1, 2021ರಿಂದ ಆಟೋ ಪ್ರಯಾಣ ದರವನ್ನು ಹೆಚ್ಚಳ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಆಟೋ ಮೀಟರ್​ಗೆ ಮಾಡಬೇಕಾದ ಮಾರ್ಪಾಡುಗಳಿಗೆ 90 ದಿನದ ಗಡುವು ನೀಡಿದ್ದು, ಪರಿಷ್ಕೃತ ದರ ಪಟ್ಟಿ ವಿವರ ಇಲ್ಲಿದೆ.

ಬೆಂಗಳೂರಲ್ಲಿ ಚಾಲಕರಿಗೆ ಆಟೋ ಮೀಟರ್ ಮಾರ್ಪಾಟಿಗೆ 90 ದಿನದ ಅವಕಾಶ; ಇಲ್ಲಿದೆ ಏರಿಕೆಯಾದ ಹೊಸ ದರ ಪಟ್ಟಿ
ಆದೇಶದ ವಿವರ
Follow us
TV9 Web
| Updated By: Srinivas Mata

Updated on:Dec 07, 2021 | 2:32 PM

ಬೆಂಗಳೂರು: ಬೆಂಗಳೂರು ನಗರದ ಆಟೋ ಚಾಲಕರು ಹಾಗೂ ಪ್ರಯಾಣಿಕರು ಇಬ್ಬರಿಗೂ ಅತಿ ಮುಖ್ಯವಾದ ಸುದ್ದಿ ಇದು. ಈಗಾಗಲೇ ಆಟೋ ಪ್ರಯಾಣ ದರಗಳನ್ನು ಡಿಸೆಂಬರ್ 1, 2021ರಿಂದ ಪರಿಷ್ಕರಣೆ ಮಾಡಲಾಗಿದೆ. ಈಗಾಗಲೇ ಇದಕ್ಕೆ ಸಂಬಂಧಪಟ್ಟಂತೆ ದರಪಟ್ಟಿಯನ್ನು ಸಹ ಬೆಂಗಳೂರು ನಗರ ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಕಳುಹಿಸಿಕೊಟ್ಟಿದೆ. ಇದಕ್ಕೆ ತಕ್ಕಂತೆ ಡಿಸೆಂಬರ್ 1ರಿಂದ ಆರಂಭಗೊಂಡು 90 ದಿನಗಳ ಒಳಗಾಗಿ ಆಟೋ ಮೀಟರ್​ಗಳನ್ನು ಹೊಸ ದರಕ್ಕೆ ತಕ್ಕಂತೆ ಮಾರ್ಪಾಟುಗಳನ್ನು ಪರಿಶೀಲಿಸಿ ಹಾಗೂ ಮರು ಮುದ್ರೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವುದಕ್ಕೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಎಲ್ಲ ಕಾನೂನು ಮಾಪನ ನಿರೀಕ್ಷಕರಿಗೆ (ತನಿಖಾ ದಳವನ್ನು ಹೊರತುಪಡಿಸಿ) ಆದೇಶ ಮಾಡಲಾಗಿದೆ.

Revised Rate

ಹಳೆ ಹಾಗೂ ಹೊಸ ಪ್ರಯಾಣ ದರ ಪಟ್ಟಿ

ಹೊಸದಾದ ಪರಿಷ್ಕರಣೆ ಆದ ಮೇಲೆ ಈವರೆಗೆ 1.90 ಕಿ.ಮೀ. ದೂರಕ್ಕೆ ಇದ್ದ ಪ್ರಯಾಣ ದರವು 25 ರೂಪಾಯಿಂದ ಮೂವತ್ತು ರೂಪಾಯಿಗೆ ಹೆಚ್ಚಳವಾಗುತ್ತದೆ. ಆ ನಂತರ ಮೂರು ಕಿಲೋಮೀಟರ್​ಗಾದರೆ 6 ರೂಪಾಯಿ, 4 ಕಿ.ಮೀ.ಗಾದರೆ 8 ರೂಪಾಯಿ, 5 ಕಿ.ಮೀ.ಗೆ 10 ರೂಪಾಯಿ, 6 ಕಿ.ಮೀ.ಗೆ 12 ರೂಪಾಯಿ ಹೀಗೆ ಹೆಚ್ಚಳವಾಗುತ್ತದೆ. ಉದಾಹರಣೆಗೆ ಈ ಹಿಂದೆ 2 ಕಿ.ಮೀ. ಪ್ರಯಾಣದರ 30 ರೂಪಾಯಿ ಇದ್ದದ್ದು 35 ರೂ. ಆಗುತ್ತದೆ. ಅದೇ ರೀತಿ 3 ಕಿ.ಮೀ.ಗೆ 39 ರೂಪಾಯಿ ಇದ್ದದ್ದು 45 ರೂ. ಆಗುತ್ತದೆ. ಇನ್ನು 4 ಕಿಲೋಮೀಟರ್​ಗೆ 52 ರೂಪಾಯಿಯಿಂದ 60 ರೂಪಾಯಿಗೆ ಮುಟ್ಟುತ್ತದೆ.

Revised Rate

ಹಳೇ ಹಾಗೂ ಹೊಸ ದರದ ಪಟ್ಟಿ

ಇದೇ ರೀತಿಯಾಗಿ ಗರಿಷ್ಠ 25 ಕಿ.ಮೀ. ದೂರಕ್ಕೆ ಆಟೋದಲ್ಲಿ ಪ್ರಯಾಣಿಸಿದರೆ 325 ರೂಪಾಯಿ ಆಗುತ್ತಿದ್ದದ್ದು ದರ ಹೆಚ್ಚಳ ಮಾಡಿದ ನಂತರದಲ್ಲಿ 375 ರೂಪಾಯಿ ಆಗುತ್ತದೆ. ಆ ಮೂಲಕ 50 ರೂಪಾಯಿ ಜಾಸ್ತಿ ಆಗುತ್ತದೆ. ತೈಲ ದರಗಳ ಬೆಲೆಯಲ್ಲಿ ಭಾರೀ ಹೆಚ್ಚಳವಾದ ಹಿನ್ನೆಲೆಯಲ್ಲಿ ಆಟೋ ಪ್ರಯಾಣ ದರವನ್ನು ಹೆಚ್ಚಿಸಬೇಕು ಎಂದು ಆಟೋ ಚಾಲಕರ ಒತ್ತಾಯವಾಗಿತ್ತು. ಇದೀಗ ಹೆಚ್ಚಳ ಮಾಡಲಾಗಿದೆ. ಹಿಂದಿನ ಮತ್ತು ಈಗಿನ ದರಗಳ ಪಟ್ಟಿ ವಿವರ ಇಲ್ಲಿ ಲಭ್ಯವಿದೆ.

ಇದನ್ನೂ ಓದಿ: ಆಟೋ ಪ್ರಯಾಣಿಕರೇ ಗಮನಿಸಿ; ಬೆಂಗಳೂರಿನಲ್ಲಿ ಇವತ್ತಿನಿಂದ ಆಟೋ ಪ್ರಯಾಣ ದರ ಏರಿಕೆ

Published On - 2:31 pm, Tue, 7 December 21

ರೇಣುಕಾ ಸ್ವಾಮಿ ಕೊಲೆಯಾಗಿ ಒಂದು ವರ್ಷ, ಕುಟುಂಬದವರಿಂದ ಪೂಜೆ
ರೇಣುಕಾ ಸ್ವಾಮಿ ಕೊಲೆಯಾಗಿ ಒಂದು ವರ್ಷ, ಕುಟುಂಬದವರಿಂದ ಪೂಜೆ
ಆಂಗ್ಲರ ನಾಡಿನಲ್ಲಿ ಸಮರಾಭ್ಯಾಸ ಶುರು ಮಾಡಿದ ಟೀಂ ಇಂಡಿಯಾ
ಆಂಗ್ಲರ ನಾಡಿನಲ್ಲಿ ಸಮರಾಭ್ಯಾಸ ಶುರು ಮಾಡಿದ ಟೀಂ ಇಂಡಿಯಾ
RCB ಅಂದ್ರೆ ರಿಯಲ್ ಕಲ್ಪ್ರಿಟ್ ಆಫ್ ಬೆಂಗಳೂರು: ಅಶೋಕ್ ಲೇವಡಿ
RCB ಅಂದ್ರೆ ರಿಯಲ್ ಕಲ್ಪ್ರಿಟ್ ಆಫ್ ಬೆಂಗಳೂರು: ಅಶೋಕ್ ಲೇವಡಿ
ಮಕ್ಕಳಿದ್ದ ಆಟೋ ನ್ಯೂಟ್ರಲ್​ ಮಾಡಿ ಹಿಂದೆ ತಳ್ಳಿ ಬಿಟ್ಟ ಯುವಕ!
ಮಕ್ಕಳಿದ್ದ ಆಟೋ ನ್ಯೂಟ್ರಲ್​ ಮಾಡಿ ಹಿಂದೆ ತಳ್ಳಿ ಬಿಟ್ಟ ಯುವಕ!
ದರ್ಶನ್ ಸಂಪರ್ಕಿಸುತ್ತಾರೆ ಎಂಬ ನಂಬಿಕೆ ಇಲ್ಲ: ರೇಣುಕಾಸ್ವಾಮಿ ತಂದೆ
ದರ್ಶನ್ ಸಂಪರ್ಕಿಸುತ್ತಾರೆ ಎಂಬ ನಂಬಿಕೆ ಇಲ್ಲ: ರೇಣುಕಾಸ್ವಾಮಿ ತಂದೆ
ಸಸ್ಪೆಂಡ್ ಆದ ಕಮಿಷನರ್ ದಯಾನಂದ್ ದಕ್ಷತೆ, ಪ್ರಮಾಣಿಕತೆ: ವಿಡಿಯೋ ವೈರಲ್
ಸಸ್ಪೆಂಡ್ ಆದ ಕಮಿಷನರ್ ದಯಾನಂದ್ ದಕ್ಷತೆ, ಪ್ರಮಾಣಿಕತೆ: ವಿಡಿಯೋ ವೈರಲ್
ಬೆಂಗಳೂರು ಕಾಲ್ತುಳಿತ ದುರಂತದ ಭೀಕರತೆ ಬಿಚ್ಚಿಟ್ಟ ಗಾಯಾಳು
ಬೆಂಗಳೂರು ಕಾಲ್ತುಳಿತ ದುರಂತದ ಭೀಕರತೆ ಬಿಚ್ಚಿಟ್ಟ ಗಾಯಾಳು
ಬೆಂಗಳೂರು ಕಾಲ್ತುಳಿತ: ಅಶೋಕ್ ತುರ್ತು ಸುದ್ದಿಗೋಷ್ಠಿಯ ನೇರಪ್ರಸಾರ
ಬೆಂಗಳೂರು ಕಾಲ್ತುಳಿತ: ಅಶೋಕ್ ತುರ್ತು ಸುದ್ದಿಗೋಷ್ಠಿಯ ನೇರಪ್ರಸಾರ
ರೇಣುಕಾಸ್ವಾಮಿ ಹತ್ಯೆಗೆ 1ವರ್ಷ;ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಕುಟುಂಬಸ್ಥರು
ರೇಣುಕಾಸ್ವಾಮಿ ಹತ್ಯೆಗೆ 1ವರ್ಷ;ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಕುಟುಂಬಸ್ಥರು
ರ್‍ಯಾಲಿ ವೇಳೆ ಕೊಲಂಬಿಯಾದ ಅಧ್ಯಕ್ಷೀಯ ಅಭ್ಯರ್ಥಿ ಟರ್ಬೆಗೆ ಗುಂಡೇಟು
ರ್‍ಯಾಲಿ ವೇಳೆ ಕೊಲಂಬಿಯಾದ ಅಧ್ಯಕ್ಷೀಯ ಅಭ್ಯರ್ಥಿ ಟರ್ಬೆಗೆ ಗುಂಡೇಟು