AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Funny Video: ಟ್ರೆಡಿಷನಲ್​​ ಶಾಕ್! ಕೊಳದಲ್ಲಿ ನಾಣ್ಯ ಹಾಕುವುದು ನೋಡಿದ್ದೇವೆ, ಆದರೆ ಈ ಪುಣ್ಯಾತಗಿತ್ತಿ ಕ್ರೆಡಿಟ್​​ ಕಾರ್ಡ್ ಸ್ವೈಪ್ ಮಾಡಿದಳು!

ಒಬ್ಬ ಯುವತಿ ಎಲ್ಲರಂತೆ ಕೊಳದಲ್ಲಿ ತಾನೂ ನಾಣ್ಯ ಹಾಕಿ ತನ್ನ ದುಡ್ಡು ಖರ್ಚು ಮಾಡದೆ ತನ್ನ ಬಳಿಯಿರುವ ಅಗಾಧವಾದ ಬುದ್ಧಿವಂತಿಕೆ ಖರ್ಚು ಮಾಡಿದ್ದಾಳೆ. ಜಸ್ಟ್​ ಆ ಯುವತಿ ನಾಣ್ಯ ಹಾಕುವ ಬದಲಿಗೆ ತನ್ನ ಬಳಿಯಿದ್ದ ಕ್ರೆಡಿಟ್​​ ಕಾರ್ಡ್ ತೆಗೆದು ಕೊಳದ ನೀರಿನಲ್ಲಿ ಕಾರ್ಡ್ ಸ್ವೈಪ್ ಮಾಡಿದ್ದಾಳೆ.

Funny Video:  ಟ್ರೆಡಿಷನಲ್​​ ಶಾಕ್! ಕೊಳದಲ್ಲಿ ನಾಣ್ಯ ಹಾಕುವುದು ನೋಡಿದ್ದೇವೆ, ಆದರೆ ಈ ಪುಣ್ಯಾತಗಿತ್ತಿ ಕ್ರೆಡಿಟ್​​ ಕಾರ್ಡ್ ಸ್ವೈಪ್ ಮಾಡಿದಳು!
Funny Video: ಈ ಪುಣ್ಯಾತಗಿತ್ತಿ ಕ್ರೆಡಿಟ್​​ ಕಾರ್ಡ್ ಸ್ವೈಪ್ ಮಾಡಿದಳು!
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Jun 24, 2023 | 12:59 PM

Share

ನೀವು ಏನೇ ಹೇಳಿ ತಲೆಗೊಂದು ಬುದ್ಧಿ, ಐಡಿಯಾ ಬಂದೇ ಬರುತ್ತದೆ. ಅದರಲ್ಲಿ ಒಂದಷ್ಟು ಭಾರಿ ಸಾಮ್ಯತೆಯಿದ್ದರೆ, ಬಹಳಷ್ಟು ಬಾರಿ ವಿಭಿನ್ನ ಆಲೋಚನೆಗಳು ಬಂದಿರುತ್ತವೆ. ದೊಡ್ಡವರು ಅದಕೇ ಹೇಳೋದು ಪ್ರತಿಯೊಬ್ಬರ ಅಭಿರುಚಿಯೂ ಭಿನ್ನವಾಗಿರುತ್ತದೆ. ಪ್ರತಿಯೊಬ್ಬರ ಆಲೋಚನೆ ಮತ್ತು ಅಭಿಪ್ರಾಯವೂ ಭಿನ್ನವಾಗಿರುತ್ತದೆ. ಆದಾಗ್ಯೂ, ಕೆಲವು ಸಮಯ ಸಂದರ್ಭಗಳುನ ಅಂತಾ ಇರುತ್ತವೆ. ಅದರಲ್ಲೂ ವಿಶೇಷವಾಗಿ ಧಾರ್ಮಿಕ ಚಟುವಟಿಕೆಗಳು, ಸಾರ್ವಜನಿಕ ಸ್ಥಳಗಳಲ್ಲಿ ಅಲ್ಲಿನ ಪದ್ಧತಿ/ ವಾಡಿಕೆ ಹೇಗಿರುತ್ತದೋ ಅದೇ ರೀತಿ ಮಾಡಬೇಕಾಗುತ್ತದೆ. ದೇವಾಲಯ, ಪುಣ್ಯ ಕ್ಷೇತ್ರಗಳಲ್ಲಂತೂ ಭಕ್ತರು ಸಂಪ್ರದಾಯಗಳನ್ನು ಅನುಸರಿಸುತ್ತಾರೆ. ಕೆಲ ದೇವಸ್ಥಾನಗಳ ಬಳಿ ಪುರಾತನ ನೀರಿನ ಕೊಳಗಳು ಇರುತ್ತವೆ. ಅಲ್ಲಿ ಜನ ಸ್ನಾನ ಮಾಡುವುದು ಅಥವಾ ಆ ಕೊಳದಲ್ಲಿ ನಾಣ್ಯಗಳನ್ನು ಹಾಕುವ ಭಕ್ತಿ ಪರಂಪರೆಯಿರುತ್ತದೆ.

ಇದನ್ನೆಲ್ಲಾ ಈಗ ಯಾಕೆ ಹೇಳಬೇಕು ಅಂದರೆ ಇತ್ತೀಚಿಗೆ ಮಹಿಳಾ ಭಕ್ತೆಯೊಬ್ಬಳು ಅದರಲ್ಲೂ ವಿದೇಶಿ ಮಹಿಳೆ ಮಾಡಿರುವ ಕೆಲಸ ತಮಾಷೆಯಾಗಿದ್ದು, ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯಾಕೆಂದರೆ.. ಆ ಹುಡುಗಿ ಏನು ಮಾಡಿದಳು ಎಂಬುದು ಕುತೂಹಲಕಾರಿಯಾಗಿದೆ. ಕಾಲಾಯತಸ್ಮೈನಮಃ ಇದು ಹೇಳಿಕೇಳಿ ಡಿಜಿಟಲ್​​ ಯುಗ. ಅಂದ್ರೆ ಭೌತಿಕವಾಗಿ ಹಣ ವ್ಯವಹಾರ ಮಾಡುವುದು ಕಡಿಮೆಯಾಗುತ್ತಿದ್ದು, ಏನಿದ್ದರೂ ಮೊಬೈಲ್​​ ಅಥವಾ ಕಾರ್ಡ್​​​ಗಳ ಮೂಲಕ ಹಣ ಪಾವತಿ ನಡೆಯುತ್ತದೆ.

ಕೆಲವು ಪುರಾತನ ದೇವಾಲಯಗಳು ಪ್ರಸಿದ್ಧ ಕೊಳಗಳನ್ನು ಹೊಂದಿವೆ. ಅಲ್ಲಿಗೆ ಭೇಟಿ ಮಾಡುವ ಭಕ್ತರು ಕೊಳಗಳಲ್ಲಿ ನಾಣ್ಯಗಳನ್ನು ಹಾಕುವ ಮೂಲಕ ತಮ್ಮ ಇಷ್ಟಾರ್ಥಗಳನ್ನು ಪೂರೈಸಲು ಬಯಸುತ್ತಾರೆ. ದೇವಸ್ಥಾನಗಳಲ್ಲಿ ಇಂತಹವುಗಳನ್ನು ಸಾಮಾನ್ಯವಾಗಿ ನೋಡುತ್ತಲೇ ಇರುತ್ತೇವೆ. ಇತ್ತೀಚಿಗೆ ವೈರಲ್ ಆಗಿರುವ ವಿಡಿಯೋದಲ್ಲಿಯೂ ಇಂತಹುದೆ ದೃಶ್ಯವಿದೆ.

ಅಲ್ಲೊಂದು ದೇವಸ್ಥಾನದಲ್ಲಿ ಚಿಕ್ಕ ಕೊಳವಿತ್ತು. ಅದರಲ್ಲಿ ಭಕ್ತರು ನಾಣ್ಯಗಳನ್ನು ಹಾಕುತ್ತಿದ್ದರು. ಇದನ್ನು ನೋಡಿದ ಒಬ್ಬ ಯುವತಿ ಎಲ್ಲರಂತೆ ತಾನೂ ನಾಣ್ಯ ಹಾಕಿ ತನ್ನ ಬಳಿಯಿರುವ ದುಡ್ಡನ್ನು ಖರ್ಚು ಮಾಡದೆ ತನ್ನ ಬಳಿಯಿರುವ ಅಗಾಧವಾದ ಬುದ್ಧಿವಂತಿಕೆಯನ್ನು ಖರ್ಚು ಮಾಡಿ, ತೋರಿಸಿದ್ದಾಳೆ. ಜಸ್ಟ್​ ಆ ಯುವತಿ ನಾಣ್ಯ ಹಾಕುವ ಬದಲಿಗೆ ತನ್ನ ಬಳಿಯಿದ್ದ ಕ್ರೆಡಿಟ್​​ ಕಾರ್ಡ್ ತೆಗೆದು ಕೊಳದ ನೀರಿನಲ್ಲಿ ಕಾರ್ಡ್ ಸ್ವೈಪ್ ಮಾಡಿದ್ದಾಳೆ.

ಸಮೀಪದಲ್ಲೇ ಇದ್ದ ಕೆಲವು ಭಕ್ತರು ಈ ದೃಶ್ಯವನ್ನು ತಮ್ಮ ಫೋನ್‌ನಲ್ಲಿ ರೆಕಾರ್ಡ್ ಮಾಡಿದ್ದಾರೆ. ಇದನ್ನು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದು, ವೈರಲ್ ಆಗಿದೆ. ವಿಡಿಯೋ ನೋಡಿ ನೆಟ್ಟಿಗರು ಕಲ್ಚರಲ್​​, ಟ್ರೆಡಿಷನಲ್​​ ಶಾಕ್ (traditional shock) ಗೆ ಒಳಗಾಗಿದ್ದಾರೆ! ಎಂತಾ ಕಾಲ ಬಂತಪ್ಪಾ ಎಂದು ಮೂಗು ಮುರಿದಿದ್ದಾರೆ. ಆಕೆ ನಿಜಕ್ಕೂ ಮಹಾನ್​​ ಪ್ರತಿಭಾವಂತಳು ಎಂದು ವ್ಯಂಗ್ಯವಾಡಿದ್ದಾರೆ. ನೀರಿನಲ್ಲಿ ಎಷ್ಟು ದುಡ್ಡು ಸ್ವೈಪ್ ಮಾಡಿದಳಂತೆ, ಲೆಕ್ಕ ಹಾಕಿ ಹೇಳಿ ಎಂಬ ಕಾಮೆಂಟ್‌ಗಳು ಹರಿದಿವೆ. ಮೇಲಿನ ಫನ್ನಿ ವಿಡಿಯೋ ನೀವೂ ನೋಡಿ.

Published On - 12:56 pm, Sat, 24 June 23

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!