AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಂಟ ಪೂರ್ತಿ ಕುಡಿದು ತನ್ನ ಮದುವೆ ಮರೆದು ಬಿಟ್ಟ ವರ, ವಧು ಮಾಡಿದೇನು ಗೊತ್ತಾ?

ವ್ಯಕ್ತಿಯೋರ್ವ ತನ್ನ ಮದುವೆಯ ಹಿಂದಿನ ದಿನ ಖುಷಿಯೋ, ದು:ಖನೋ , ಕಂಟ ಪೂರ್ತಿ ಕುಡಿದು ಬಿದ್ದಿದ್ದಾನೆ. ಜೊತೆಗೆ ಮರುದಿನ ತನ್ನ ಮದುವೆ ಎಂಬುದನ್ನೇ ಮರೆತು ಬಿಟ್ಟಿದ್ದಾನೆ. ಈ ಘಟನೆ ಬಿಹಾರದ ಭಾಗಲ್ಪುರದ ಸುಲ್ತಂಗಂಜ್ ಗ್ರಾಮದಲ್ಲಿ ನಡೆದಿದೆ. ಇಂತಹ ಘಟನೆ ಇದೇ ಮೊದಲಲ್ಲ, ಇತ್ತಿಚೆಗಷ್ಟೇ ಅಸ್ಸಾಂನಲ್ಲಿ ಮದುವೆ ಮಂಟಪದಲ್ಲೇ ವರ ಟೈಟಾಗಿ ಬಿದ್ದದ್ದ ಘಟನೆ ವೈರಲ್​ ಆಗಿತ್ತು.

ಕಂಟ ಪೂರ್ತಿ ಕುಡಿದು ತನ್ನ ಮದುವೆ ಮರೆದು ಬಿಟ್ಟ ವರ, ವಧು ಮಾಡಿದೇನು ಗೊತ್ತಾ?
ಕಂಟ ಪೂರ್ತಿ ಕುಡಿದು ತನ್ನ ಮದುವೆಯನ್ನೇ ಮರೆತ Image Credit source: CNN
ಅಕ್ಷತಾ ವರ್ಕಾಡಿ
|

Updated on:Mar 19, 2023 | 11:58 AM

Share

ಮದುವೆ ಪ್ರತಿಯೊಬ್ಬರ ಜೀವನದ ಒಂದು ಸುಂದರವಾದ ಘಟ್ಟ. ಮದುವೆ ತಯಾರಿಗಳು ಕೂಡ ಹಾಗೆ ಒಂದು ತಿಂಗಳ ಹಿಂದೆಯೇ ಪ್ರಾರಂಭವಾಗುತ್ತದೆ. ಮದುವೆ ದಿನ ವಧು ವರನ ಮನೆಯಲ್ಲಿ ಸಂಭ್ರಮ ಸಡಗರಗಳು ಮನೆ ಮಾಡಿರುತ್ತದೆ. ಆದರೆ ಇಲ್ಲೊಂದು ಮದುವೆ ಕಾರ್ಯಕ್ರಮ ಜಗಳದಿಂದ ಕೊನೆಗೊಂಡಿದೆ. ಅಷ್ಟಕ್ಕೂ ಸಂಭ್ರಮದಿಂದಿರಬೇಕಾದ ಮದುವೆ ಮಂಟಪದಲ್ಲಿ ಜಗಳ ಯಾಕಾಯಿತು ಅಂತಾ ಅನ್ಕೊತ್ತಿದ್ದೀರಾ? ಇಲ್ಲಿದೆ ಕಂಪ್ಲೀಟ್​​ ಸ್ಟೋರಿ.

ವ್ಯಕ್ತಿಯೋರ್ವ ತನ್ನ ಮದುವೆಯ ಹಿಂದಿನ ದಿನ ಖುಷಿಯೋ, ದು:ಖನೋ ಕಾರಣ ಇನ್ನೂ ತಿಳಿದಿಲ್ಲ, ಕಂಟ ಪೂರ್ತಿ ಕುಡಿದು ಬಿದ್ದಿದ್ದಾನೆ. ಜೊತೆಗೆ ಮರುದಿನ ತನ್ನ ಮದುವೆ ಎಂಬುದನ್ನೇ ಮರೆತು ಬಿಟ್ಟಿದ್ದಾನೆ. ಈ ಘಟನೆ ಬಿಹಾರದ ಭಾಗಲ್ಪುರದ ಸುಲ್ತಂಗಂಜ್ ಗ್ರಾಮದಲ್ಲಿ ನಡೆದಿದೆ. ಮದುವೆಯ ದಿನದಂದು ವಧುವಿನ ಕುಟುಂಬ ಹಾಗೂ ಮದುವೆಗೆ ಬಂದ ಅತಿಥಿಗಳೆಲ್ಲರೂ ವರನ ಆಗಮನದ ಸ್ವಾಗತಕ್ಕಾಗಿ ಮಂಟಪದಲ್ಲಿ ಕಾದು ಕುಳಿತ್ತಿದ್ದಾರೆ. ಆದರೆ ಎಷ್ಟೇ ಹೊತ್ತಾದರೂ ವರನ ಕುಟುಂಬದವರು ಬರದೇ ಇರುವುದನ್ನು ಕಂಡು ವಧುವಿನ ಕುಟುಂಬದವರಲ್ಲಿ ಚಿಂತೆ ಉಂಟಾಗಿದೆ. ಕೆಲ ಹೊತ್ತಿನ ನಂತರ ವರನಿಗೆ ಪ್ರಜ್ಞೆ ಬಂದ ನಂತರ ಮಂಟಪಕ್ಕೆ ಕರೆ ತರಲಾಗಿದೆ. ಆದರೆ ಅಲ್ಲಿ ಮದುವೆ ನಡೆದಿಲ್ಲ, ಬದಲಾಗಿ ವಧು, ವರನ ವಿಪರೀತ ಕುಡಿತದ ಚಟದ ವಿಷಯ ತಿಳಿದು ಆತನನ್ನು ನಿರಾಕರಿಸಿದ್ದಾಳೆ. ಆಕೆ ನಿರಾಕರಿಸುತ್ತಿದ್ದಂತೆ ವಧುವಿನ ಕುಟುಂಬ ಮದುವೆಯನ್ನು ರದ್ದುಗೊಳಿಸಿ, ಮಂಟಪದಿಂದ ಹೊರ ನಡೆದ್ದಿದ್ದಾರೆ ಎಂದು ಈಟಿವಿ ಭಾರತ್ ವರದಿ ಮಾಡಿದೆ.

ಇದನ್ನೂ ಓದಿ: 4ವರ್ಷ ಪ್ರೀತಿಸಿ ಹಸೆಮಣೆ ಏರಿದ ವಿಶ್ವದ ಅತ್ಯಂತ ಕುಳ್ಳ ಬಾಡಿಬಿಲ್ಡರ್ ಪ್ರತೀಕ್ ವಿಠ್ಠಲ್

ಮದುವೆ ಮಂಟಪದಲ್ಲಿ ವಧು ಹಾಗೂ ವರನ ಮನೆಯವರ ನಡುವೆ ಮಾತಿನ ಚಕಾಮಕಿ ನಡೆದಿದೆ. ಜೊತೆಗೆ ಮದುವೆಯ ಸಿದ್ಧತೆಗಾಗಿ ಸಾಕಷ್ಟು ಹಣವನ್ನು ವಧು ಕುಟುಂಬ ಖರ್ಚು ಮಾಡಿದ್ದು, ಇವೆಲ್ಲವನ್ನು ಹಿಂದಿರುಗಿಸಿ ನೀಡುವಂತೆ ವರನ ಕುಟುಂಬಕ್ಕೆ ಹೇಳಿದ್ದಾರೆ. ಜೊತೆಗೆ ವಧುವಿನ ಕುಟುಂಬ ವರನ ಕುಟುಂಬದ ವಿರುದ್ಧ ಕೇಸು ದಾಖಲಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 11:58 am, Sun, 19 March 23

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ