Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ‘ಚಿಕ್ಕವಳಿದ್ದಾಗ ಬಾರ್ಬಿಯನ್ನು ಕಳೆದುಕೊಂಡೆ’ ಹೆಂಡತಿ ಗಂಡನಿಗೆ ಹೇಳಿದಾಗ…

Husband and Wife : ''ನೀನು ಕಳೆದುಕೊಂಡಿದ್ದನ್ನೆಲ್ಲ ಪಡೆಯುತ್ತೀ'' ಆಹಾ! ಈ ಒಂದು ವಾಕ್ಯ ನನ್ನನ್ನು ಕಾಡುತ್ತಿದೆ ಮತ್ತು ಭರವಸೆಯನ್ನು ಹುಟ್ಟುಹಾಕುತ್ತಿದೆ ಎಂದಿದ್ಧಾರೆ ಒಬ್ಬ ಟ್ವೀಟಿಗರು. ಈತನಕ 7.8 ಮಿಲಿಯನ್ ಜನರು ಈ ಟ್ವೀಟ್ ನೋಡಿದ್ದಾರೆ.

Viral: 'ಚಿಕ್ಕವಳಿದ್ದಾಗ ಬಾರ್ಬಿಯನ್ನು ಕಳೆದುಕೊಂಡೆ' ಹೆಂಡತಿ ಗಂಡನಿಗೆ ಹೇಳಿದಾಗ...
ಗಂಡ ಹೆಂಡತಿಗೆ ತಂದುಕೊಟ್ಟ ಬಾರ್ಬಿ
Follow us
ಶ್ರೀದೇವಿ ಕಳಸದ
|

Updated on:Jul 04, 2023 | 6:18 PM

Barbie : ನಗರದ ಪುಟ್ಟ ಹೆಣ್ಣುಮಕ್ಕಳಿಗೆ ಬಾರ್ಬಿ (Barbie) ಎಂದರೆ ಆಪ್ತಗೆಳತಿಯಿದ್ದಂತೆ. ಆಕೆ 24 ಗಂಟೆಗಳ ಕಾಲವೂ ತನ್ನೊಂದಿಗೇ ಇರಬೇಕೆನ್ನುವ ಇಚ್ಛೆ. ಹೀಗಿದ್ದಾಗ ಆಕೆ ಇದ್ದಕ್ಕಿದ್ದ ಹಾಕೆ ಕಣ್ಮರೆಯಾದರೆ? ಆ ಮಕ್ಕಳಿಗಾಗುವ ದುಃಖ ಸಣ್ಣದಲ್ಲ. ಜೀವನಪರ್ಯಂತೆ ಅದು ಅವುಗಳ ಮನಸ್ಸಿನಲ್ಲಿ ಉಳಿದುಬಿಡುತ್ತದೆ. ಇದೀಗ ವೈರಲ್ ಆಗಿರುವ ಈ ಟ್ವೀಟ್​ ನೋಡಿ. ತಾನು ಚಿಕ್ಕವಳಿದ್ಧಾಗ ನನ್ನ ಬಾರ್ಬಿಯನ್ನು ಕಳೆದುಕೊಂಡೆ ಎಂದು ತನ್ನ ಗಂಡನಿಗೆ ಹೇಳಿದ್ದಾಳೆ. ಆಗ ಆತ, ನೀನೀಗ ದೊಡ್ಡವಳಾಗಿದ್ದೀಯಲ್ಲವೇ? ಎಂದು ಪ್ರಶ್ನಿಸಿಲ್ಲ. ಚಿಕ್ಕಮಗುವಿನಂತೆ ನಿನಗೆ ಈಗಲೂ ಬಾರ್ಬೀ ಬೇಕಾ? ಎಂದು ಕೇಳಿಲ್ಲ. ಬದಲಾಗಿ ಹೊಸ ಬಾರ್ಬಿಯೊಂದನ್ನು ಆಕೆಗೆ ಉಡುಗೊರೆಯಾಗಿ ನೀಡಿದ್ದಾನೆ.

“ನನ್ನ ಪ್ರೀತಿಯ ಹೆಂಡತಿ ಆಯಿಷಾ, ಬದುಕಿನಲ್ಲಿ ನೀನು ಎಂಥ ಚಿಕ್ಕಪುಟ್ಟದ್ದನ್ನು ಎಷ್ಟೋ ವರ್ಷಗಳ ಹಿಂದೆ ಕಳೆದುಕೊಂಡಿದ್ದರೂ ಅದು ನಿನಗೆ ವಾಪಾಸು ಸಿಕ್ಕೇ ಸಿಗುತ್ತದೆ ಎನ್ನುವ ಭರವಸೆಯನ್ನು ನಾನು ಕೊಡುತ್ತೇನೆ. ಏಕೆಂದರೆ ನಾನು ನಿನ್ನನ್ನು ಪ್ರೀತಿಸುತ್ತೇನೆ. – ಇಂತಿ ನಿನ್ನ ಗಂಡ.” ಇದು ಇಲ್ಲಿರುವ ಪತ್ರದ ಸಾರಾಂಶ. ಜೂ. 29 ರಂದು ಮಾಡಿದ ಈ ಟ್ವೀಟ್​ ಇದೀಗ 7.8 ಮಿಲಿಯನ್​ ಜನರಿಂದ ವೀಕ್ಷಿಸಲ್ಪಟ್ಟಿದೆ. ಅನೇಕರು ಬಾರ್ಬಿಯೊಂದಿಗಿನ ತಮ್ಮ ನೆನಪುಗಳನ್ನು ಕೆದಕುತ್ತಿದ್ದಾರೆ.

ಇದನ್ನೂ ಓದಿ : Viral: ಬೀದಿನಾಯಿ ಬೆಕ್ಕುಗಳಿಗೆ ತಾತ್ಕಾಲಿಕವಾದರೂ ಆಶ್ರಯ ಕೊಡೋಣ; ರತನ್​ ಟಾಟಾ

ನಾನು ಬಾರ್ಬಿಯ ಅಪ್ಪಟ ಅಭಿಮಾನಿ. ಈತನಕ ಎಲ್ಲಾ ರೀತಿಯ ಬಾರ್ಬಿಯ ಸಂಗ್ರಹ ಮತ್ತು ನೆನಪುಗಳು ನನ್ನಲ್ಲಿ ಬೆಚ್ಚಗೆ ಇವೆ. ಆದರೆ ಈ ಟ್ವೀಟ್ ನನ್ನನ್ನು ಭಾವುಕಗೊಳಿಸಿದೆ ಎಂದು ಒಬ್ಬರು ಹೇಳಿದ್ದಾರೆ. ”ನೀನು ಕಳೆದುಕೊಂಡಿದ್ದನ್ನೆಲ್ಲ ಪಡೆಯುತ್ತೀ” ಆಹಾ ಈ ಒಂದು ವಾಕ್ಯ ನನ್ನನ್ನು ಬಹಳ ಇಷ್ಟವಾಯಿತು ಮತ್ತು ಕಾಡುತ್ತಿದೆ, ನೀವು ಅದೃಷ್ಟವಂತರು ಎಂದಿದ್ಧಾರೆ ಮತ್ತೊಬ್ಬರು. ಇಂಥ ಚಿಕ್ಕಚಿಕ್ಕ ಸಂಗತಿಗಳಡಿಯೇ ಬಾಂಧವ್ಯ ಎನ್ನುವುದು ಗಟ್ಟಿಯಾಗಿ ನಿಂತಿರುತ್ತದೆ. ನಿಮ್ಮಿಬ್ಬರಿಗೂ ಒಳ್ಳೆಯದಾಗಲಿ ಎಂದು ನೆಟ್ಟಿಗರು ಹಾರೈಸಿದ್ದಾರೆ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 6:15 pm, Tue, 4 July 23

ಅಡುಗೆ ಅನಿಲ ಸಿಲಿಂಡರ್ ಬೆಲೆಯೇರಿಕೆ ವಿರುದ್ಧ ಕಾಂಗ್ರೆಸ್ ನಾಯಕರ ಪ್ರತಿಭಟನೆ
ಅಡುಗೆ ಅನಿಲ ಸಿಲಿಂಡರ್ ಬೆಲೆಯೇರಿಕೆ ವಿರುದ್ಧ ಕಾಂಗ್ರೆಸ್ ನಾಯಕರ ಪ್ರತಿಭಟನೆ
ಅಧಿಕಾರದಲ್ಲಿ ಉಳಿಯಲು ಸಿದ್ದರಾಮಯ್ಯ ವ್ಯರ್ಥ ಪ್ರಯತ್ನ ನಡೆಸಿದ್ದಾರೆ: ಕೃಷ್ಣ
ಅಧಿಕಾರದಲ್ಲಿ ಉಳಿಯಲು ಸಿದ್ದರಾಮಯ್ಯ ವ್ಯರ್ಥ ಪ್ರಯತ್ನ ನಡೆಸಿದ್ದಾರೆ: ಕೃಷ್ಣ
ವೇದಿಕೆ ಮೇಲಿದ್ದ ಸಿಲಿಂಡರ್​ಗೆ ಹಣೆಹಚ್ಚಿ ನಮಸ್ಕರಿಸಿದ ಶಿವಕುಮಾರ್
ವೇದಿಕೆ ಮೇಲಿದ್ದ ಸಿಲಿಂಡರ್​ಗೆ ಹಣೆಹಚ್ಚಿ ನಮಸ್ಕರಿಸಿದ ಶಿವಕುಮಾರ್
ನಗರದಲ್ಲೆಲ್ಲ ವಿಜಯೇಂದ್ರ ಹೋರ್ಡಿಂಗ್ ಮತ್ತು ಬ್ಯಾನರ್​ಗಳು
ನಗರದಲ್ಲೆಲ್ಲ ವಿಜಯೇಂದ್ರ ಹೋರ್ಡಿಂಗ್ ಮತ್ತು ಬ್ಯಾನರ್​ಗಳು
VIDEO: ನೋಡ್ಕೊ ಗುರು... ನಾವೇನು ಫಿಕ್ಸಿಂಗ್ ಮಾಡ್ಕೊಂಡಿಲ್ಲ..!
VIDEO: ನೋಡ್ಕೊ ಗುರು... ನಾವೇನು ಫಿಕ್ಸಿಂಗ್ ಮಾಡ್ಕೊಂಡಿಲ್ಲ..!
ಯತ್ನಾಳ್ ಖುದ್ದು ಮಾತಾಡುತ್ತಿಲ್ಲ, ಅವರ ಬಗ್ಗೆ ಏನು ಮಾತಾಡೋದು: ಸಚಿವ
ಯತ್ನಾಳ್ ಖುದ್ದು ಮಾತಾಡುತ್ತಿಲ್ಲ, ಅವರ ಬಗ್ಗೆ ಏನು ಮಾತಾಡೋದು: ಸಚಿವ
VIDEO: ಇಡೀ ಪಂದ್ಯದ ಚಿತ್ರಣ ಬದಲಿಸಿದ ಆ ಒಂದು ಕ್ಯಾಚ್
VIDEO: ಇಡೀ ಪಂದ್ಯದ ಚಿತ್ರಣ ಬದಲಿಸಿದ ಆ ಒಂದು ಕ್ಯಾಚ್
ಲಾರಿ ಮುಷ್ಕರ ನಿಲ್ಲದಿದ್ದರೆ ಎಪಿಎಂಸಿಗಳು ಬಂದ್ ಆಗುವ ಸಾಧ್ಯತೆ?
ಲಾರಿ ಮುಷ್ಕರ ನಿಲ್ಲದಿದ್ದರೆ ಎಪಿಎಂಸಿಗಳು ಬಂದ್ ಆಗುವ ಸಾಧ್ಯತೆ?
ಜಾತಿ ಗಣತಿ ಅವಶ್ಯಕತೆ ಇಲ್ಲ ಎಂದ ಸಾರ್ವಜನಿಕರು: ಮೈಸೂರಿನಲ್ಲಿ ಜನಾಕ್ರೋಶ
ಜಾತಿ ಗಣತಿ ಅವಶ್ಯಕತೆ ಇಲ್ಲ ಎಂದ ಸಾರ್ವಜನಿಕರು: ಮೈಸೂರಿನಲ್ಲಿ ಜನಾಕ್ರೋಶ
ಮೂಡಿಗೆರೆ: ಮಾಕೋನಹಳ್ಳಿ ಗ್ರಾಮದಲ್ಲಿ ಮನೆಗೆ ನುಗ್ಗಿ ಕಾಡಾನೆ ದಾಂಧಲೆ
ಮೂಡಿಗೆರೆ: ಮಾಕೋನಹಳ್ಳಿ ಗ್ರಾಮದಲ್ಲಿ ಮನೆಗೆ ನುಗ್ಗಿ ಕಾಡಾನೆ ದಾಂಧಲೆ