AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ‘ಚಿಕ್ಕವಳಿದ್ದಾಗ ಬಾರ್ಬಿಯನ್ನು ಕಳೆದುಕೊಂಡೆ’ ಹೆಂಡತಿ ಗಂಡನಿಗೆ ಹೇಳಿದಾಗ…

Husband and Wife : ''ನೀನು ಕಳೆದುಕೊಂಡಿದ್ದನ್ನೆಲ್ಲ ಪಡೆಯುತ್ತೀ'' ಆಹಾ! ಈ ಒಂದು ವಾಕ್ಯ ನನ್ನನ್ನು ಕಾಡುತ್ತಿದೆ ಮತ್ತು ಭರವಸೆಯನ್ನು ಹುಟ್ಟುಹಾಕುತ್ತಿದೆ ಎಂದಿದ್ಧಾರೆ ಒಬ್ಬ ಟ್ವೀಟಿಗರು. ಈತನಕ 7.8 ಮಿಲಿಯನ್ ಜನರು ಈ ಟ್ವೀಟ್ ನೋಡಿದ್ದಾರೆ.

Viral: 'ಚಿಕ್ಕವಳಿದ್ದಾಗ ಬಾರ್ಬಿಯನ್ನು ಕಳೆದುಕೊಂಡೆ' ಹೆಂಡತಿ ಗಂಡನಿಗೆ ಹೇಳಿದಾಗ...
ಗಂಡ ಹೆಂಡತಿಗೆ ತಂದುಕೊಟ್ಟ ಬಾರ್ಬಿ
ಶ್ರೀದೇವಿ ಕಳಸದ
|

Updated on:Jul 04, 2023 | 6:18 PM

Share

Barbie : ನಗರದ ಪುಟ್ಟ ಹೆಣ್ಣುಮಕ್ಕಳಿಗೆ ಬಾರ್ಬಿ (Barbie) ಎಂದರೆ ಆಪ್ತಗೆಳತಿಯಿದ್ದಂತೆ. ಆಕೆ 24 ಗಂಟೆಗಳ ಕಾಲವೂ ತನ್ನೊಂದಿಗೇ ಇರಬೇಕೆನ್ನುವ ಇಚ್ಛೆ. ಹೀಗಿದ್ದಾಗ ಆಕೆ ಇದ್ದಕ್ಕಿದ್ದ ಹಾಕೆ ಕಣ್ಮರೆಯಾದರೆ? ಆ ಮಕ್ಕಳಿಗಾಗುವ ದುಃಖ ಸಣ್ಣದಲ್ಲ. ಜೀವನಪರ್ಯಂತೆ ಅದು ಅವುಗಳ ಮನಸ್ಸಿನಲ್ಲಿ ಉಳಿದುಬಿಡುತ್ತದೆ. ಇದೀಗ ವೈರಲ್ ಆಗಿರುವ ಈ ಟ್ವೀಟ್​ ನೋಡಿ. ತಾನು ಚಿಕ್ಕವಳಿದ್ಧಾಗ ನನ್ನ ಬಾರ್ಬಿಯನ್ನು ಕಳೆದುಕೊಂಡೆ ಎಂದು ತನ್ನ ಗಂಡನಿಗೆ ಹೇಳಿದ್ದಾಳೆ. ಆಗ ಆತ, ನೀನೀಗ ದೊಡ್ಡವಳಾಗಿದ್ದೀಯಲ್ಲವೇ? ಎಂದು ಪ್ರಶ್ನಿಸಿಲ್ಲ. ಚಿಕ್ಕಮಗುವಿನಂತೆ ನಿನಗೆ ಈಗಲೂ ಬಾರ್ಬೀ ಬೇಕಾ? ಎಂದು ಕೇಳಿಲ್ಲ. ಬದಲಾಗಿ ಹೊಸ ಬಾರ್ಬಿಯೊಂದನ್ನು ಆಕೆಗೆ ಉಡುಗೊರೆಯಾಗಿ ನೀಡಿದ್ದಾನೆ.

“ನನ್ನ ಪ್ರೀತಿಯ ಹೆಂಡತಿ ಆಯಿಷಾ, ಬದುಕಿನಲ್ಲಿ ನೀನು ಎಂಥ ಚಿಕ್ಕಪುಟ್ಟದ್ದನ್ನು ಎಷ್ಟೋ ವರ್ಷಗಳ ಹಿಂದೆ ಕಳೆದುಕೊಂಡಿದ್ದರೂ ಅದು ನಿನಗೆ ವಾಪಾಸು ಸಿಕ್ಕೇ ಸಿಗುತ್ತದೆ ಎನ್ನುವ ಭರವಸೆಯನ್ನು ನಾನು ಕೊಡುತ್ತೇನೆ. ಏಕೆಂದರೆ ನಾನು ನಿನ್ನನ್ನು ಪ್ರೀತಿಸುತ್ತೇನೆ. – ಇಂತಿ ನಿನ್ನ ಗಂಡ.” ಇದು ಇಲ್ಲಿರುವ ಪತ್ರದ ಸಾರಾಂಶ. ಜೂ. 29 ರಂದು ಮಾಡಿದ ಈ ಟ್ವೀಟ್​ ಇದೀಗ 7.8 ಮಿಲಿಯನ್​ ಜನರಿಂದ ವೀಕ್ಷಿಸಲ್ಪಟ್ಟಿದೆ. ಅನೇಕರು ಬಾರ್ಬಿಯೊಂದಿಗಿನ ತಮ್ಮ ನೆನಪುಗಳನ್ನು ಕೆದಕುತ್ತಿದ್ದಾರೆ.

ಇದನ್ನೂ ಓದಿ : Viral: ಬೀದಿನಾಯಿ ಬೆಕ್ಕುಗಳಿಗೆ ತಾತ್ಕಾಲಿಕವಾದರೂ ಆಶ್ರಯ ಕೊಡೋಣ; ರತನ್​ ಟಾಟಾ

ನಾನು ಬಾರ್ಬಿಯ ಅಪ್ಪಟ ಅಭಿಮಾನಿ. ಈತನಕ ಎಲ್ಲಾ ರೀತಿಯ ಬಾರ್ಬಿಯ ಸಂಗ್ರಹ ಮತ್ತು ನೆನಪುಗಳು ನನ್ನಲ್ಲಿ ಬೆಚ್ಚಗೆ ಇವೆ. ಆದರೆ ಈ ಟ್ವೀಟ್ ನನ್ನನ್ನು ಭಾವುಕಗೊಳಿಸಿದೆ ಎಂದು ಒಬ್ಬರು ಹೇಳಿದ್ದಾರೆ. ”ನೀನು ಕಳೆದುಕೊಂಡಿದ್ದನ್ನೆಲ್ಲ ಪಡೆಯುತ್ತೀ” ಆಹಾ ಈ ಒಂದು ವಾಕ್ಯ ನನ್ನನ್ನು ಬಹಳ ಇಷ್ಟವಾಯಿತು ಮತ್ತು ಕಾಡುತ್ತಿದೆ, ನೀವು ಅದೃಷ್ಟವಂತರು ಎಂದಿದ್ಧಾರೆ ಮತ್ತೊಬ್ಬರು. ಇಂಥ ಚಿಕ್ಕಚಿಕ್ಕ ಸಂಗತಿಗಳಡಿಯೇ ಬಾಂಧವ್ಯ ಎನ್ನುವುದು ಗಟ್ಟಿಯಾಗಿ ನಿಂತಿರುತ್ತದೆ. ನಿಮ್ಮಿಬ್ಬರಿಗೂ ಒಳ್ಳೆಯದಾಗಲಿ ಎಂದು ನೆಟ್ಟಿಗರು ಹಾರೈಸಿದ್ದಾರೆ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 6:15 pm, Tue, 4 July 23

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ