AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಮಹಿಳೆಯ ಐಫೋನ್​ ಪತ್ತೆಗೆ ನೆರವಾದ ಆಟೋ ಚಾಲಕ ಮತ್ತು ಸ್ವಿಗ್ಗಿ ಏಜೆಂಟ್

iPhone : ನಂಬಿಕೆ, ವಿಶ್ವಾಸ ಎನ್ನುವುದು ಈಗಲೂ ಜಗತ್ತಿನಲ್ಲಿ ಉಳಿದುಕೊಂಡಿದೆಯೆಂದರೆ ಅದು ಇಂಥ ಶ್ರಮಜೀವಿಗಳಿಂದ ಎನ್ನುತ್ತಿದ್ದಾರೆ ನೆಟ್ಟಿಗರು. ಆಟೋ ಚಾಲಕ ನಿಖಿಲ್ ಮತ್ತು ಸ್ವಿಗ್ಗಿ ಡೆಲಿವರಿ ಏಜೆಂಟ್​ ರಾಹುಲ್​ನನ್ನು ಶ್ಲಾಘಿಸುತ್ತಿದ್ದಾರೆ.

Viral: ಮಹಿಳೆಯ ಐಫೋನ್​ ಪತ್ತೆಗೆ ನೆರವಾದ ಆಟೋ ಚಾಲಕ ಮತ್ತು ಸ್ವಿಗ್ಗಿ ಏಜೆಂಟ್
ಸೌಜನ್ಯ : ಅಂತರ್ಜಾಲ
Follow us
ಶ್ರೀದೇವಿ ಕಳಸದ
|

Updated on:Jul 04, 2023 | 4:38 PM

Mumbai : ಭೂತ, ವಾಸ್ತವ, ಭವಿಷ್ಯವನ್ನೇ ಅಡಗಿಸಿಕೊಂಡಿರುವ ಮೊಬೈಲ್​ ಪರಮಾತ್ಮ ಎಲ್ಲ ಸಂಬಂಧಗಳನ್ನೂ ಮೀರಿರುವ ಆತ್ಮಬಂಧು. ಅರೆಗಳಿಗೆ ಅದು ನಮ್ಮ ಕಣ್ಣಿನಿಂದ ತಪ್ಪಿಸಿಕೊಂಡರೆ ಪರಿಸ್ಥಿತಿಯ ಬಗ್ಗೆ ವಿವರಿಸುವುದೇ ಬೇಡ. ಏಕೆಂದರೆ ಮೊಬೈಲ್​ ಬಳಸುತ್ತಿರುವ ಪ್ರತಿಯೊಬ್ಬರೂ ಈ ಸಂಕಟದ ಕ್ಷಣಗಳಿಗೆ ಸಾಕ್ಷಿಯಾಗಿರುತ್ತಾರೆ. ಇದೀಗ ಹೇಳಹೊರಟಿರುವುದೂ ಕಳೆದು ಹೋಗಿದ್ದ ಮೊಬೈಲೊಂದರ ಕಥೆಯನ್ನೇ. ಮಹಿಳೆಯೊಬ್ಬರು ಮುಂಬೈನಲ್ಲಿ ತನ್ನ ಐಫೋನ್ (iPhone) ಕಳೆದುಕೊಂಡಿದ್ದಾರೆ. ಮುಂದೇನಾಯಿತು ಅಂತ ಗೊತ್ತಾಯಿತು ಬಿಡಿ, ಅದು ಮೊದಲೇ ಮಾಯಾನಗರಿ ಎಂದುಕೊಳ್ಳುತ್ತಿದ್ದೀರೇ? ಖಂಡಿತ ನಿಮ್ಮ ಊಹೆ ತಪ್ಪು. ಮುಂಬೈನ ಅಪರಿಚಿತರು ಆಕೆಯ ಫೋನ್​ ಹುಡುಕಲು ಹೇಗೆ ಸಹಾಯ ಮಾಡಿದರೆಂಬುದನ್ನು ಆಕೆ ತನ್ನ ಟ್ವೀಟ್​ ಥ್ರೆಡ್​ನಲ್ಲಿ ಬರೆದುಕೊಂಡಿದ್ದಾರೆ.

ಮುಂಬೈನ ವರ್ಸೋವಾ ಮೆಟ್ರೋ ನಿಲ್ದಾಣ ಸಮೀಪಿಸುತ್ತಿದ್ದಂತೆ (Versova Metro Station, Mumbai) ತಾನು  ಐಫೋನ್ ಕಳೆದುಕೊಂಡಿದ್ದೇನೆ ಎನ್ನುವುದು ಆಕೆಯ ಅರಿವಿಗೆ ಬರುತ್ತಿದ್ದಂತೆ ತಾನು ಪ್ರಯಾಣಿಸಿದ ಶೇರಿಂಗ್​ ಆಟೋ ಹುಡುಕಲು ರಿಕ್ಷಾ ಸ್ಟ್ಯಾಂಡಿನತ್ತ ಧಾವಿಸಿದರು. ಅದೃಷ್ಟಕ್ಕೆ ಆಟೋ ಚಾಲಕ ನಿಖಿಲ್ ಆಕೆಯನ್ನು ಗುರುತು ಹಿಡಿದು ಪ್ರತಿಕ್ರಿಯಿಸಿದ. ಇಬ್ಬರೂ ಸೇರಿ ಐಫೋನ್ ಹುಡುಕಲು ಶುರುಮಾಡಿದರು. ಆರಂಭದಲ್ಲಿ ಎಷ್ಟು ಸಲ ಕರೆ ಮಾಡಿದರೂ ಕರೆ ಹೋಗುತ್ತಿರಲಿಲ್ಲ. ನಂತರ ಆಕೆಯ ಬ್ಯಾಗ್ ಹಿಡಿದು ಮೆಟ್ರೋ ನಿಲ್ದಾಣ, ಮೆಟ್ರೋ ಮೆಟ್ಟಿಲುಗಳ ಮೇಲೆಲ್ಲ ಹುಡುಕಿದ್ದಾಯಿತು. ಎಲ್ಲೂ ಫೋನ್​ ಸಿಗಲಿಲ್ಲ. ಆದರೆ ಸ್ವಲ್ಪ ಹೊತ್ತಿನ ನಂತರ ಕರೆ ಮಾಡಿದಾಗ ​ರಿಂಗ್ ಆಯಿತಾದರೂ ಆ ಕಡೆಯಿಂದ ಯಾರೂ ಉತ್ತರಿಸಲಿಲ್ಲ. ಅಷ್ಟೊತ್ತಿಗಾಗಲೆ ಆಕೆಗೆ ತನ್ನ ಐಫೋನ್​ ಇನ್ನು ಕೈಬಿಟ್ಟ ಹಾಗೆ ಎಂಬ ಭಾವ ದಟ್ಟವಾಗತೊಡಗಿತು.

ಇದನ್ನೂ ಓದಿ : Viral Video: ”ಕೇದಾರನಾಥನೇ, ನಮ್ಮ ಪ್ರೀತಿಗೆ ನೀನೇ ಸಾಕ್ಷಿ”; ದಾಳಿಯಿಟ್ಟ ಸಂಸ್ಕೃತಿ ರಕ್ಷಕರು

FIR ದಾಖಲಿಸುವುದೊಂದೇ ದಾರಿ ಎಂದು ಆಟೋ ಏರಿ ಮನೆಯತ್ತ ಹೊರಟಳು. ಸ್ವಲ್ಪ ಸಮಯದ ನಂತರ ಯಾರೋ ಒಬ್ಬರು ಫೋನ್ ಫೋನ್ ಎಂದು ಕೂಗುತ್ತ ಆಟೋವನ್ನು ಹಿಂಬಾಲಿಸುತ್ತಿರುವುದು ಅರಿವಿಗೆ ಬಂದಿತು. ಆತ ರಾಹುಲ್​ ಕುಮಾರ್ ಎಂಬ ಸ್ವಿಗ್ಗಿ ಡೆಲಿವರಿ ಎಕ್ಸಿಕ್ಯೂಟಿವ್ ಆಗಿದ್ದ. ನಂತರ ಆಝಾದ್ ನಗರ ಮೆಟ್ರೋ ನಿಲ್ದಾಣದಲ್ಲಿ ಭೇಟಿಯಾಗೋಣವೆಂಬ ನಿರ್ಧಾರಕ್ಕೆ ಅವರು ಬಂದರು. ಮಳೆಯಲ್ಲಿಯೇ ರೇನ್​ ಕೋಟ್​ ಧರಿಸಿ ಸೈಕಲ್​ ತುಳಿದುಕೊಂಡು ಹೇಳಿದ ಜಾಗಕ್ಕೆ ತಲುಪಿದ ರಾಹುಲ್​. ಮೆಟ್ರೋ ಸ್ಟೇಷನ್​ನಲ್ಲಿ ನಿಮ್ಮ ಮೊಬೈಲ್​ ಸಿಕ್ಕಿತು ಎಂದು ಹೇಳಿ ಅದನ್ನು ಆಕೆಗೆ ಒಪ್ಪಿಸಿದ.

ಇದನ್ನೂ ಓದಿ : Viral:ನಿಮ್ಮ ಪ್ರೇಮಿಯ ಜೊತೆ ಹೀಗಿರಲು ನಿಮಗಿರುವ ಅಡ್ಡಿಯೇನು?

ಜು. 2 ರಂದು ಈ ಟ್ವೀಟ್​ ಹಂಚಿಕೊಳ್ಳಲಾಗಿದೆ. ಎಲ್ಲರೂ ಆಟೋಚಾಲಕ ಮತ್ತು ರಾಹುಲ್​ನನ್ನು ಶ್ಲಾಘಿಸುತ್ತಿದ್ಧಾರೆ. ಜಗತ್ತಿನಲ್ಲಿ ಇನ್ನೂ ನಂಬಿಕೆ ಉಳಿದುಕೊಂಡಿದೆ ಎಂದರೆ ಅದು ಇಂಥ ಶ್ರಮಜೀವಿಗಳಿಂದ ಎಂದು ನೆಟ್ಟಿಗರು ಮನಸಾರೆ ಅವರಿಬ್ಬರನ್ನೂ ಅಭಿನಂದಿಸುತ್ತಿದ್ದಾರೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 4:34 pm, Tue, 4 July 23

ಆಪರೇಷನ್ ಸಿಂಧೂರವನ್ನು ಹಣೆಗೆ ತಿಲಕ ಇಟ್ಟುಕೊಂಡೇ ಹೊಗಳಿದ ಸಿಎಂ ಸಿದ್ದರಾಮಯ್ಯ
ಆಪರೇಷನ್ ಸಿಂಧೂರವನ್ನು ಹಣೆಗೆ ತಿಲಕ ಇಟ್ಟುಕೊಂಡೇ ಹೊಗಳಿದ ಸಿಎಂ ಸಿದ್ದರಾಮಯ್ಯ
ಮನೆಮಾಳಿಗೆ ಮೇಲೆ ನಿಂತು ಧ್ವಂಸಗೊಂಡಿರುವ ಮಸೀದಿಯನ್ನು ವೀಕ್ಷಿಸಿದ ಜನ
ಮನೆಮಾಳಿಗೆ ಮೇಲೆ ನಿಂತು ಧ್ವಂಸಗೊಂಡಿರುವ ಮಸೀದಿಯನ್ನು ವೀಕ್ಷಿಸಿದ ಜನ
ಎಚ್ಚರಿಕೆಯನ್ನು ಹಗುರವಾಗಿ ತೆಗೆದುಕೊಂಡ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ!
ಎಚ್ಚರಿಕೆಯನ್ನು ಹಗುರವಾಗಿ ತೆಗೆದುಕೊಂಡ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ!
‘ಭಾಷೆ-ಸಂಸ್ಕೃತಿಗೆ ಗೌರವಿಸಬೇಕು’; ಸೋನು ನಿಗಮ್​ಗೆ ರಾಗಿಣಿ ಕಿವಿಮಾತು
‘ಭಾಷೆ-ಸಂಸ್ಕೃತಿಗೆ ಗೌರವಿಸಬೇಕು’; ಸೋನು ನಿಗಮ್​ಗೆ ರಾಗಿಣಿ ಕಿವಿಮಾತು
Live: ಆಪರೇಷನ್ ಸಿಂಧೂರ್ ಬೆನ್ನಲ್ಲೇ ಸೇನಾಧಿಕಾರಿಗಳಿಂದ ಸುದ್ದಿಗೋಷ್ಠಿ
Live: ಆಪರೇಷನ್ ಸಿಂಧೂರ್ ಬೆನ್ನಲ್ಲೇ ಸೇನಾಧಿಕಾರಿಗಳಿಂದ ಸುದ್ದಿಗೋಷ್ಠಿ
ಭಾರತದ ಬಲಿಷ್ಠ ಸೇನೆಯನ್ನು ತಡವಿರುವ ಪಾಕ್ ಪತರುಗುಟ್ಟಿದೆ: ಮಾಜಿ ಸೈನಿಕರು
ಭಾರತದ ಬಲಿಷ್ಠ ಸೇನೆಯನ್ನು ತಡವಿರುವ ಪಾಕ್ ಪತರುಗುಟ್ಟಿದೆ: ಮಾಜಿ ಸೈನಿಕರು
ಆಪರೇಷನ್ ಸಿಂಧೂರ್​ಗೆ ಉಗ್ರರ ನೆಲೆಗಳು ಧ್ವಂಸ, ಫೋಟೊಗಳು ಇಲ್ಲಿವೆ ನೋಡಿ
ಆಪರೇಷನ್ ಸಿಂಧೂರ್​ಗೆ ಉಗ್ರರ ನೆಲೆಗಳು ಧ್ವಂಸ, ಫೋಟೊಗಳು ಇಲ್ಲಿವೆ ನೋಡಿ
VIDEO: ಪವರ್​ಪ್ಲೇನಲ್ಲೇ 3 ಕ್ಯಾಚ್ ಕೈಚೆಲ್ಲಿದ ಗುಜರಾತ್ ಟೈಟಾನ್ಸ್
VIDEO: ಪವರ್​ಪ್ಲೇನಲ್ಲೇ 3 ಕ್ಯಾಚ್ ಕೈಚೆಲ್ಲಿದ ಗುಜರಾತ್ ಟೈಟಾನ್ಸ್
ಭಾರತೀಯ ಸೇನೆ ಕ್ಷಿಪಣಿ ದಾಳಿ, ಎದೆ ಝಲ್​ ಎನ್ನುವ ದೃಶ್ಯ ಇಲ್ಲಿದೆ
ಭಾರತೀಯ ಸೇನೆ ಕ್ಷಿಪಣಿ ದಾಳಿ, ಎದೆ ಝಲ್​ ಎನ್ನುವ ದೃಶ್ಯ ಇಲ್ಲಿದೆ
Daily Devotional: ಮನೆಯಲ್ಲಿ ಒರಳು ಕಲ್ಲು ಇರಲೇಬೇಕು ಯಾಕೆ ಗೊತ್ತಾ?
Daily Devotional: ಮನೆಯಲ್ಲಿ ಒರಳು ಕಲ್ಲು ಇರಲೇಬೇಕು ಯಾಕೆ ಗೊತ್ತಾ?