AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ತಾಳುವಿಕೆಗಿಂತನ್ಯ ತಪವು ಇಲ್ಲ; ಆಟೋಗಾಗಿ ಸರದಿಯಲ್ಲಿ ನಿಂತಿರುವ ಮುಂಬೈಕರ್ಸ್

Auto Queue : ಮುಂಬೈ ಸ್ಪಿರಿಟ್​ ಎಂಬ ಟ್ಯಾಗ್​​ಲೈನಿನಡಿ ಈ ವಿಡಿಯೋ ವೈರಲ್ ಆಗುತ್ತಿದೆ. ಇಲ್ಲಿರಲು ಬಯಸುವವರಿಗೆ ಮಹಾನಗರಿ ತಾಳ್ಮೆಯನ್ನು ಹೇಗೆ ಕಲಿಸುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ಈ ಒಂದು ವಿಡಿಯೋ ಸಾಕು.

Viral Video: ತಾಳುವಿಕೆಗಿಂತನ್ಯ ತಪವು ಇಲ್ಲ; ಆಟೋಗಾಗಿ ಸರದಿಯಲ್ಲಿ ನಿಂತಿರುವ ಮುಂಬೈಕರ್ಸ್
ಮುಂಬೈನ ದೊಂಬಿವಿಲಿಯಲ್ಲಿ ಆಟೋಗಾಗಿ ಸರದಿಯಲ್ಲಿ ನಿಂತಿರುವ ಜನರು
ಶ್ರೀದೇವಿ ಕಳಸದ
|

Updated on:Jul 04, 2023 | 10:49 AM

Share

Mumbai: ಒಂದು ನಿಮಿಷ, ಹತ್ತು ಸೆಕೆಂಡಿನ ಈ ವಿಡಿಯೋದಲ್ಲಿ ಪ್ಲ್ಯಾಟ್​ಫಾರ್ಮ್​​, ಮೆಟ್ಟಿಲುಗಳು, ನಿಲ್ದಾಣದ ಆವರಣ ಮತ್ತದನ್ನು ದಾಟಿಯೂ ಜನ ಹೀಗೆ ಸರದಿಯಲ್ಲಿ ನಿಂತಿದ್ದಾರೆಂದರೆ ಯೋಚಿಸಿ. ಇವರಿಗೆಲ್ಲ ಅದೆಷ್ಟು ತಾಳ್ಮೆಯನ್ನು ಮುಂಬೈ ಎಂಬ ಮಹಾನಗರಿ ಧಾರೆ ಎರೆದಿರಬಹುದು ಎಂದು. ರೈಲು ಪ್ರಯಾಣ (Train Journey) ಮುಗಿಸಿ ತಮ್ಮ ಮನೆಗಳಿಗೆ ಹೋಗಲು ಆಟೋಗಾಗಿ ಕಾಯುತ್ತ ನಿಂತಿದ್ದಾರೆ. ಇದೀಗ ಈ ವಿಡಿಯೋ ಅನ್ನು ಸಾಮಾಜಿಕ ಜಾಲತಾಣಿಗಳು ಅಚ್ಚರಿಯಿಂದ ನೋಡುತ್ತ ಪ್ರತಿಕ್ರಿಯಿಸುತ್ತಿದ್ದಾರೆ. ಮುಂಬೈನ ದೊಂಬಿವಿಲಿಯಲ್ಲಿ ನಿತ್ಯದ ಸಂಜೆಗಳು ಹೀಗೇ ಇರುತ್ತವೆ ಎನ್ನುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ. #MumbaiSpirit ನಡಿ ಇದೀಗ ವೈರಲ್ ಆಗುತ್ತಿದೆ.

ಈ ವಿಡಿಯೋ ಅನ್ನು ಜೂ. 29 ರಂದು ಪೋಸ್ಟ್ ಮಾಡಲಾಗಿದೆ. ಇದನ್ನು ವೀಕ್ಷಿಸಿದವರ ಸಂಖ್ಯೆ 1 ಮಿಲಿಯನ್​ ದಾಟಿದೆ. ಮುಂಬೈಕರ್​​ಗಳ ನಿಜವಾದ ಆತ್ಮ ಅಡಗಿರುವುದು ಇಲ್ಲಿಯೇ ಎಂದು ಹೇಳುತ್ತಿದ್ಧಾರೆ ಅನೇಕರು. ಈ ಸರದಿಯಲ್ಲಿರುವ ಜನರನ್ನು ಎಣಿಸಿ ನೋಡಿದೆ, 235 ಜನರು ಇಲ್ಲಿ ನಿಂತಿದ್ಧಾರೆ ಎಂದು ಒಬ್ಬರು ಹೇಳಿದರು. ಇವರೆಲ್ಲರ ಬಳಿ ಮೊಬೈಲ್​ ಇರದಿದ್ದರೆ ಏನು ಮಾಡುತ್ತಿದ್ದರು? ಎಂದು ಕೇಳಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral Video: ”ಜಪಾನಿನ ಸುಶಿ” ಅನ್ನ ಬೇಳೆಯನ್ನು ದಯವಿಟ್ಟು ಅವಮಾನಿಸಬೇಡಿ ಎನ್ನುತ್ತಿರುವ ನೆಟ್ಟಿಗರು 

ಅಯ್ಯೋ ಇವರೆಲ್ಲರೂ ಇಷ್ಟು ಹೊತ್ತು ನಿಂತುಕೊಂಡು ಎಷ್ಟೊಂದು ಸಮಯ ಕಳೆಯುತ್ತಿದ್ದಾರಲ್ಲ, ಬದಲಿಗೆ ನಡೆದುಕೊಂಡೇ ಹೋಗಬಹುದೇನೋ ಎಂದು ಮಗದೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇದನ್ನು ನೋಡಿ ನನಗೆ ದುಃಖವೆನ್ನಿಸುತ್ತಿದೆ ಎಂದು ಕೆಲವರು ಹೇಳಿದ್ದಾರೆ. ಇದು ಮುಂಬೈ ಸ್ಪಿರಿಟ್​ ಅಲ್ಲ. ದುಃಖಕರವಾದ ಜೀವನ. ಒಂದು ವರ್ಷ ಈ ಮಹಾನಗರದಲ್ಲಿದ್ದೆ ಎಂದಿದ್ದಾರೆ ಒಬ್ಬರು. ಸ್ಪಿರಿಟ್ ಎನ್ನುವುದನ್ನು ಮುಂಬೈ ನಿಮಗರಿವಿಲ್ಲದೇ ಕಲಿಸುತ್ತದೆ, ಇಲ್ಲವಾದಲ್ಲಿ ಅಲ್ಲಿ ಬದುಕುವುದು ಬಲು ದುಸ್ತರ ಎಂದಿದ್ದಾರೆ ಕೆಲವರು.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:49 am, Tue, 4 July 23

ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
ಕೃಷ್ಣರಾಜ ಒಡೆಯರ್-ಸಿದ್ದರಾಮಯ್ಯ ಇಬ್ಬರೂ ಸಾಮಾಜಿಕ ಹರಿಕಾರರು: ಸಚಿವ
ಕೃಷ್ಣರಾಜ ಒಡೆಯರ್-ಸಿದ್ದರಾಮಯ್ಯ ಇಬ್ಬರೂ ಸಾಮಾಜಿಕ ಹರಿಕಾರರು: ಸಚಿವ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ