AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ‘ಅಣಾ ನೀನೆಷ್ಟಾರಾ ಕಣ್ಕಟ್ಟು ಬಯಲು ಮಾಡ್ಕೋ ನಾವ್ ಮಾತ್ರ ಆ ಹುಡುಗೀನೇ ನೋಡೋದು!​’ ಸಮೂಹ ಸನ್ನಿಗೊಳಗಾದ ನೆಟ್ಟಿಗರು

Magic Reveal : ಆ ಮಂತರ್ ಈ ಮಂತರ್ ನೂರಾಎಂಟ್​ ಮಂತರ್​​ ಹಿಂದಿನ ಮರ್ಮಾನೇ ತೋರಿಸ್​​ಬುಟ್ಟಿವ್ನೀ. ಆದ್ರೂ ನೀವ್ಗಳು ನನ್ ತಾವಾ ಇರೋ ಹುಡುಗೀನ್ನೇ ಶ್ಯಾನೆ ಹೊಗಳ್ತಿದೀರಲ್ಲ. ನ್ಯಾಯಾನಾ ಸೋಮಿ? ಕೇಳ್ತವ್ನೆ ಪಾರಿನ್​ ಮಾಂತ್ರಿಕ!

Viral Video: 'ಅಣಾ ನೀನೆಷ್ಟಾರಾ ಕಣ್ಕಟ್ಟು ಬಯಲು ಮಾಡ್ಕೋ ನಾವ್ ಮಾತ್ರ ಆ ಹುಡುಗೀನೇ ನೋಡೋದು!​' ಸಮೂಹ ಸನ್ನಿಗೊಳಗಾದ ನೆಟ್ಟಿಗರು
ಜಾದೂವೆಂದರೆ ತಂತ್ರ!
Follow us
ಶ್ರೀದೇವಿ ಕಳಸದ
|

Updated on:Jul 03, 2023 | 12:31 PM

Magic : ಓಹ್​ ಪವಾಡವೇ ನಡೆಯಿತು, ಜಾದೂ ನಡೆಯಿತು, ಅದ್ಭುತ ನಡೆಯಿತು, ಕಣ್ಣಿಂದ ನಂಬಲು ಸಾಧ್ಯವೇ ಇಲ್ಲ… ಜಾತ್ರೆಯಲ್ಲಿ, ಪ್ರದರ್ಶನದಲ್ಲಿ, ಶಾಲೆಯಲ್ಲಿ ಜಾದೂ ನೋಡಿ ಹೀಗೆ ಉದ್ಗರಿಸಿರುತ್ತೀರಿ ಅಲ್ಲವೆ? ಆದರೆ ಇದೆಲ್ಲ ಹೇಗೆ ಸಾಧ್ಯವಾಯಿತು? ಕೆಲವರಿಗೆ ತಮ್ಮ ತಲೆಯನ್ನು ಹೊಕ್ಕ ಈ ಹುಳಕ್ಕೆ ಬಹುಶಃ ಉತ್ತರಗಳು ಸಿಕ್ಕಿರಲಿಕ್ಕಿಲ್ಲ. ಆದರೆ ಈ ವಿಡಿಯೋ ನೋಡಿ ಭಾರೀ ವೈರಲ್ ಆಗುತ್ತಿದೆ. ಒಂದಿಷ್ಟು ಜಾದೂ ತಂತ್ರಗಳನ್ನು (Magic Techniques) ಇದು ಬಯಲು ಮಾಡಿದೆ. ಈತನಕ ಸುಮಾರು 5.3 ಮಿಲಿಯನ್​ ನೆಟ್ಟಿಗರು ಈ ವಿಡಿಯೋ ನೋಡಿದ್ದಾರೆ. 9,000ಕ್ಕಿಂತಲೂ ಹೆಚ್ಚು ಜನ ರೀಟ್ವೀಟ್ ಮಾಡಿದ್ದಾರೆ.

ಹೆಸರೇ ಹೇಳುವಂತೆ ಇದು ಕಣ್ಕಟ್ಟು ವಿದ್ಯೆ. ಅಪಾರ ಪರಿಶ್ರಮ, ಜಾಣತನ, ಚಾಕಚಕ್ಯತೆ, ಬುದ್ಧಿವಂತಿಕೆಯಿಂದ ಇದನ್ನು ಸಾಧಿಸಬೇಕಾಗುತ್ತದೆ. ಹಾಗಾಗಿ ಇದು ಕೆಲವರಿಗಷ್ಟೇ ಒಲಿಯುವ ವಿದ್ಯೆ. ನಿಮ್ಮ ಗಮನವನ್ನು ಬೇರೆಡೆ ಸೆಳೆಯುತ್ತಲೇ ಜಾದೂಗಾರರು ಜಾದೂ ಮಾಡಿಬಿಟ್ಟಿರುತ್ತಾರೆ. ನೆಟ್ಟಿಗರಂತೂ ಈ ವಿಡಿಯೋ ನೋಡಿ, ಅಬ್ಬಾ ಇಷ್ಟು ವರ್ಷಗಳ ಮೇಲಾದರು ಜಾದೂ ಹಿಂದಿನ ತಂತ್ರಗಳನ್ನು ಸ್ವತಃ ನೋಡಲು ಸಿಕ್ಕಿತಲ್ಲ! ಎಂಥ ತಯಾರಿ ಬೇಕಲ್ಲ ಇದರ ಪ್ರದರ್ಶನಕ್ಕೆ ಎಂದು ಅಚ್ಚರಿ ಪಡುತ್ತಿದ್ದಾರೆ.

ಇದನ್ನೂ ಓದಿ : Viral Video: ಜಪಾನಿನ ಸುಶಿ; ಅನ್ನ ಬೇಳೆಯನ್ನು ದಯವಿಟ್ಟು ಅವಮಾನಿಸಬೇಡಿ ಎನ್ನುತ್ತಿರುವ ನೆಟ್ಟಿಗರು

ಜಾದೂಗಾರರು ಕಣ್ಣುಮಿಟುಕಿಸುವುದರಲ್ಲಿ ತಮ್ಮ ತಂತ್ರಗಳನ್ನು ಸಾಧಿಸಿಬಿಟ್ಟಿರುತ್ತಾರೆ. ನಿಜಕ್ಕೂ ಅವರು ಮಾಂತ್ರಿಕರೇ ಎಂದಿದ್ದಾರೆ ಒಬ್ಬರು. ಯಾರನ್ನೋ ಕೊಲ್ಲಲು ಹೊರಟಿದ್ಧಾನೇನೋ ಎಂಬಂತಿದೆ ಅವನ ಹಾವಭಾವ ಎಂದಿದ್ಧಾರೆ ಇನ್ನೊಬ್ಬರು. ಆಕೆಯಂತೂ ಮುದ್ದಾಗಿದ್ದಾಳೆ ಎಂದು ಮತ್ತೊಬ್ಬರು. ಈ ಜಾದೂಗಾರನಿಗಿಂತ ನಾನು ಆ ಹುಡುಗಿಯನ್ನು ನೋಡುತ್ತಿದ್ದೇನೆ, ಆಕೆ ದೇವರ ಮಾಂತ್ರಿಕ ಸೃಷ್ಟಿ! ಎಂದಿದ್ದಾರೆ ಇನ್ನೂ ಒಬ್ಬರು. ನಾನಂತೂ ಈ ಹುಡುಗಿಯೊಂದಿಗೆ ಪ್ರೀತಿಯಲ್ಲಿ ತೇಲುತ್ತಿದ್ದೇನೆ ಎಂದು ಅನೇಕರು ಹೇಳುತ್ತಿದ್ಧಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:30 pm, Mon, 3 July 23

ಎರಡ್ಮೂರು ಮಹಾನ್ ನಾಯಕರಿಗೆ ಅಪಮೃತ್ಯು, ಡೆಲ್ಲಿಗೂ ಅಪಾಯ: ಕೋಡಿಶ್ರೀ ಭವಿಷ್ಯ
ಎರಡ್ಮೂರು ಮಹಾನ್ ನಾಯಕರಿಗೆ ಅಪಮೃತ್ಯು, ಡೆಲ್ಲಿಗೂ ಅಪಾಯ: ಕೋಡಿಶ್ರೀ ಭವಿಷ್ಯ
ಕೊರೋನಾ ತರ ಮತ್ತೊಂದು ರೋಗ ಅಪಾಯದ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ
ಕೊರೋನಾ ತರ ಮತ್ತೊಂದು ರೋಗ ಅಪಾಯದ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಕೋಡಿಶ್ರೀ ಮತ್ತೆ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಕೋಡಿಶ್ರೀ ಮತ್ತೆ ಸ್ಫೋಟಕ ಭವಿಷ್ಯ
ಕ್ರಿಮಿ ಕೊಲ್ಲಬಾರದೆಂದು ಕುರಾನ್​​ನಲ್ಲಿದೆ, ಆದ್ರೆ..ಕೋಡಿಮಠಶ್ರೀ ಮಾತು
ಕ್ರಿಮಿ ಕೊಲ್ಲಬಾರದೆಂದು ಕುರಾನ್​​ನಲ್ಲಿದೆ, ಆದ್ರೆ..ಕೋಡಿಮಠಶ್ರೀ ಮಾತು
ಸ್ಕೂಟಿ ಸ್ಟಾರ್ಟ್​ ಮಾಡುತ್ತಲೇ ಕುಸಿದುಬಿದ್ದು ವ್ಯಕ್ತಿ ಸಾವು
ಸ್ಕೂಟಿ ಸ್ಟಾರ್ಟ್​ ಮಾಡುತ್ತಲೇ ಕುಸಿದುಬಿದ್ದು ವ್ಯಕ್ತಿ ಸಾವು
RCB vs CSK: ರೂಲ್ಸ್ ಗೊತ್ತಿಲ್ದೆ ಪಂದ್ಯ ಸೋತ ಚೆನ್ನೈ ಸೂಪರ್ ಕಿಂಗ್ಸ್
RCB vs CSK: ರೂಲ್ಸ್ ಗೊತ್ತಿಲ್ದೆ ಪಂದ್ಯ ಸೋತ ಚೆನ್ನೈ ಸೂಪರ್ ಕಿಂಗ್ಸ್
ಆಕ್ರೋಶ... ವಿರಾಟ್ ಕೊಹ್ಲಿ ಔಟಾದಾಗ ಖಲೀಲ್ ಅಹ್ಮದ್ ಸಂಭ್ರಮ ಹೇಗಿತ್ತು ನೋಡಿ
ಆಕ್ರೋಶ... ವಿರಾಟ್ ಕೊಹ್ಲಿ ಔಟಾದಾಗ ಖಲೀಲ್ ಅಹ್ಮದ್ ಸಂಭ್ರಮ ಹೇಗಿತ್ತು ನೋಡಿ
ಊಟಿಯಲ್ಲಿ ದೆವ್ವದ ಅನುಭವ: ಪ್ರಿಯಾಂಕಾ ಉಪೇಂದ್ರ ಮಾತು ಕೇಳಿ ಸೃಜನ್ ಶಾಕ್
ಊಟಿಯಲ್ಲಿ ದೆವ್ವದ ಅನುಭವ: ಪ್ರಿಯಾಂಕಾ ಉಪೇಂದ್ರ ಮಾತು ಕೇಳಿ ಸೃಜನ್ ಶಾಕ್
ಗರ್ಲ್​ಫ್ರೆಂಡ್​ ಜತೆ ಸುತ್ತುತ್ತಿದ್ದ ಮಗ, ಇಬ್ಬರಿಗೂ ಬಿತ್ತು ಏಟು
ಗರ್ಲ್​ಫ್ರೆಂಡ್​ ಜತೆ ಸುತ್ತುತ್ತಿದ್ದ ಮಗ, ಇಬ್ಬರಿಗೂ ಬಿತ್ತು ಏಟು
ಕಳೆದು ಹೋದ ಮೊಬೈಲ್ ಕೊರಗಜ್ಜನ ಕೃಪೆಯಿಂದ ಸಿಕ್ತು: ನಟಿ ಇಳಾ ವಿಟ್ಲಾ
ಕಳೆದು ಹೋದ ಮೊಬೈಲ್ ಕೊರಗಜ್ಜನ ಕೃಪೆಯಿಂದ ಸಿಕ್ತು: ನಟಿ ಇಳಾ ವಿಟ್ಲಾ