Viral Video: ‘ಅಣಾ ನೀನೆಷ್ಟಾರಾ ಕಣ್ಕಟ್ಟು ಬಯಲು ಮಾಡ್ಕೋ ನಾವ್ ಮಾತ್ರ ಆ ಹುಡುಗೀನೇ ನೋಡೋದು!​’ ಸಮೂಹ ಸನ್ನಿಗೊಳಗಾದ ನೆಟ್ಟಿಗರು

Magic Reveal : ಆ ಮಂತರ್ ಈ ಮಂತರ್ ನೂರಾಎಂಟ್​ ಮಂತರ್​​ ಹಿಂದಿನ ಮರ್ಮಾನೇ ತೋರಿಸ್​​ಬುಟ್ಟಿವ್ನೀ. ಆದ್ರೂ ನೀವ್ಗಳು ನನ್ ತಾವಾ ಇರೋ ಹುಡುಗೀನ್ನೇ ಶ್ಯಾನೆ ಹೊಗಳ್ತಿದೀರಲ್ಲ. ನ್ಯಾಯಾನಾ ಸೋಮಿ? ಕೇಳ್ತವ್ನೆ ಪಾರಿನ್​ ಮಾಂತ್ರಿಕ!

Viral Video: 'ಅಣಾ ನೀನೆಷ್ಟಾರಾ ಕಣ್ಕಟ್ಟು ಬಯಲು ಮಾಡ್ಕೋ ನಾವ್ ಮಾತ್ರ ಆ ಹುಡುಗೀನೇ ನೋಡೋದು!​' ಸಮೂಹ ಸನ್ನಿಗೊಳಗಾದ ನೆಟ್ಟಿಗರು
ಜಾದೂವೆಂದರೆ ತಂತ್ರ!
Follow us
|

Updated on:Jul 03, 2023 | 12:31 PM

Magic : ಓಹ್​ ಪವಾಡವೇ ನಡೆಯಿತು, ಜಾದೂ ನಡೆಯಿತು, ಅದ್ಭುತ ನಡೆಯಿತು, ಕಣ್ಣಿಂದ ನಂಬಲು ಸಾಧ್ಯವೇ ಇಲ್ಲ… ಜಾತ್ರೆಯಲ್ಲಿ, ಪ್ರದರ್ಶನದಲ್ಲಿ, ಶಾಲೆಯಲ್ಲಿ ಜಾದೂ ನೋಡಿ ಹೀಗೆ ಉದ್ಗರಿಸಿರುತ್ತೀರಿ ಅಲ್ಲವೆ? ಆದರೆ ಇದೆಲ್ಲ ಹೇಗೆ ಸಾಧ್ಯವಾಯಿತು? ಕೆಲವರಿಗೆ ತಮ್ಮ ತಲೆಯನ್ನು ಹೊಕ್ಕ ಈ ಹುಳಕ್ಕೆ ಬಹುಶಃ ಉತ್ತರಗಳು ಸಿಕ್ಕಿರಲಿಕ್ಕಿಲ್ಲ. ಆದರೆ ಈ ವಿಡಿಯೋ ನೋಡಿ ಭಾರೀ ವೈರಲ್ ಆಗುತ್ತಿದೆ. ಒಂದಿಷ್ಟು ಜಾದೂ ತಂತ್ರಗಳನ್ನು (Magic Techniques) ಇದು ಬಯಲು ಮಾಡಿದೆ. ಈತನಕ ಸುಮಾರು 5.3 ಮಿಲಿಯನ್​ ನೆಟ್ಟಿಗರು ಈ ವಿಡಿಯೋ ನೋಡಿದ್ದಾರೆ. 9,000ಕ್ಕಿಂತಲೂ ಹೆಚ್ಚು ಜನ ರೀಟ್ವೀಟ್ ಮಾಡಿದ್ದಾರೆ.

ಹೆಸರೇ ಹೇಳುವಂತೆ ಇದು ಕಣ್ಕಟ್ಟು ವಿದ್ಯೆ. ಅಪಾರ ಪರಿಶ್ರಮ, ಜಾಣತನ, ಚಾಕಚಕ್ಯತೆ, ಬುದ್ಧಿವಂತಿಕೆಯಿಂದ ಇದನ್ನು ಸಾಧಿಸಬೇಕಾಗುತ್ತದೆ. ಹಾಗಾಗಿ ಇದು ಕೆಲವರಿಗಷ್ಟೇ ಒಲಿಯುವ ವಿದ್ಯೆ. ನಿಮ್ಮ ಗಮನವನ್ನು ಬೇರೆಡೆ ಸೆಳೆಯುತ್ತಲೇ ಜಾದೂಗಾರರು ಜಾದೂ ಮಾಡಿಬಿಟ್ಟಿರುತ್ತಾರೆ. ನೆಟ್ಟಿಗರಂತೂ ಈ ವಿಡಿಯೋ ನೋಡಿ, ಅಬ್ಬಾ ಇಷ್ಟು ವರ್ಷಗಳ ಮೇಲಾದರು ಜಾದೂ ಹಿಂದಿನ ತಂತ್ರಗಳನ್ನು ಸ್ವತಃ ನೋಡಲು ಸಿಕ್ಕಿತಲ್ಲ! ಎಂಥ ತಯಾರಿ ಬೇಕಲ್ಲ ಇದರ ಪ್ರದರ್ಶನಕ್ಕೆ ಎಂದು ಅಚ್ಚರಿ ಪಡುತ್ತಿದ್ದಾರೆ.

ಇದನ್ನೂ ಓದಿ : Viral Video: ಜಪಾನಿನ ಸುಶಿ; ಅನ್ನ ಬೇಳೆಯನ್ನು ದಯವಿಟ್ಟು ಅವಮಾನಿಸಬೇಡಿ ಎನ್ನುತ್ತಿರುವ ನೆಟ್ಟಿಗರು

ಜಾದೂಗಾರರು ಕಣ್ಣುಮಿಟುಕಿಸುವುದರಲ್ಲಿ ತಮ್ಮ ತಂತ್ರಗಳನ್ನು ಸಾಧಿಸಿಬಿಟ್ಟಿರುತ್ತಾರೆ. ನಿಜಕ್ಕೂ ಅವರು ಮಾಂತ್ರಿಕರೇ ಎಂದಿದ್ದಾರೆ ಒಬ್ಬರು. ಯಾರನ್ನೋ ಕೊಲ್ಲಲು ಹೊರಟಿದ್ಧಾನೇನೋ ಎಂಬಂತಿದೆ ಅವನ ಹಾವಭಾವ ಎಂದಿದ್ಧಾರೆ ಇನ್ನೊಬ್ಬರು. ಆಕೆಯಂತೂ ಮುದ್ದಾಗಿದ್ದಾಳೆ ಎಂದು ಮತ್ತೊಬ್ಬರು. ಈ ಜಾದೂಗಾರನಿಗಿಂತ ನಾನು ಆ ಹುಡುಗಿಯನ್ನು ನೋಡುತ್ತಿದ್ದೇನೆ, ಆಕೆ ದೇವರ ಮಾಂತ್ರಿಕ ಸೃಷ್ಟಿ! ಎಂದಿದ್ದಾರೆ ಇನ್ನೂ ಒಬ್ಬರು. ನಾನಂತೂ ಈ ಹುಡುಗಿಯೊಂದಿಗೆ ಪ್ರೀತಿಯಲ್ಲಿ ತೇಲುತ್ತಿದ್ದೇನೆ ಎಂದು ಅನೇಕರು ಹೇಳುತ್ತಿದ್ಧಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:30 pm, Mon, 3 July 23

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ