AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ‘ಅಣಾ ನೀನೆಷ್ಟಾರಾ ಕಣ್ಕಟ್ಟು ಬಯಲು ಮಾಡ್ಕೋ ನಾವ್ ಮಾತ್ರ ಆ ಹುಡುಗೀನೇ ನೋಡೋದು!​’ ಸಮೂಹ ಸನ್ನಿಗೊಳಗಾದ ನೆಟ್ಟಿಗರು

Magic Reveal : ಆ ಮಂತರ್ ಈ ಮಂತರ್ ನೂರಾಎಂಟ್​ ಮಂತರ್​​ ಹಿಂದಿನ ಮರ್ಮಾನೇ ತೋರಿಸ್​​ಬುಟ್ಟಿವ್ನೀ. ಆದ್ರೂ ನೀವ್ಗಳು ನನ್ ತಾವಾ ಇರೋ ಹುಡುಗೀನ್ನೇ ಶ್ಯಾನೆ ಹೊಗಳ್ತಿದೀರಲ್ಲ. ನ್ಯಾಯಾನಾ ಸೋಮಿ? ಕೇಳ್ತವ್ನೆ ಪಾರಿನ್​ ಮಾಂತ್ರಿಕ!

Viral Video: 'ಅಣಾ ನೀನೆಷ್ಟಾರಾ ಕಣ್ಕಟ್ಟು ಬಯಲು ಮಾಡ್ಕೋ ನಾವ್ ಮಾತ್ರ ಆ ಹುಡುಗೀನೇ ನೋಡೋದು!​' ಸಮೂಹ ಸನ್ನಿಗೊಳಗಾದ ನೆಟ್ಟಿಗರು
ಜಾದೂವೆಂದರೆ ತಂತ್ರ!
ಶ್ರೀದೇವಿ ಕಳಸದ
|

Updated on:Jul 03, 2023 | 12:31 PM

Share

Magic : ಓಹ್​ ಪವಾಡವೇ ನಡೆಯಿತು, ಜಾದೂ ನಡೆಯಿತು, ಅದ್ಭುತ ನಡೆಯಿತು, ಕಣ್ಣಿಂದ ನಂಬಲು ಸಾಧ್ಯವೇ ಇಲ್ಲ… ಜಾತ್ರೆಯಲ್ಲಿ, ಪ್ರದರ್ಶನದಲ್ಲಿ, ಶಾಲೆಯಲ್ಲಿ ಜಾದೂ ನೋಡಿ ಹೀಗೆ ಉದ್ಗರಿಸಿರುತ್ತೀರಿ ಅಲ್ಲವೆ? ಆದರೆ ಇದೆಲ್ಲ ಹೇಗೆ ಸಾಧ್ಯವಾಯಿತು? ಕೆಲವರಿಗೆ ತಮ್ಮ ತಲೆಯನ್ನು ಹೊಕ್ಕ ಈ ಹುಳಕ್ಕೆ ಬಹುಶಃ ಉತ್ತರಗಳು ಸಿಕ್ಕಿರಲಿಕ್ಕಿಲ್ಲ. ಆದರೆ ಈ ವಿಡಿಯೋ ನೋಡಿ ಭಾರೀ ವೈರಲ್ ಆಗುತ್ತಿದೆ. ಒಂದಿಷ್ಟು ಜಾದೂ ತಂತ್ರಗಳನ್ನು (Magic Techniques) ಇದು ಬಯಲು ಮಾಡಿದೆ. ಈತನಕ ಸುಮಾರು 5.3 ಮಿಲಿಯನ್​ ನೆಟ್ಟಿಗರು ಈ ವಿಡಿಯೋ ನೋಡಿದ್ದಾರೆ. 9,000ಕ್ಕಿಂತಲೂ ಹೆಚ್ಚು ಜನ ರೀಟ್ವೀಟ್ ಮಾಡಿದ್ದಾರೆ.

ಹೆಸರೇ ಹೇಳುವಂತೆ ಇದು ಕಣ್ಕಟ್ಟು ವಿದ್ಯೆ. ಅಪಾರ ಪರಿಶ್ರಮ, ಜಾಣತನ, ಚಾಕಚಕ್ಯತೆ, ಬುದ್ಧಿವಂತಿಕೆಯಿಂದ ಇದನ್ನು ಸಾಧಿಸಬೇಕಾಗುತ್ತದೆ. ಹಾಗಾಗಿ ಇದು ಕೆಲವರಿಗಷ್ಟೇ ಒಲಿಯುವ ವಿದ್ಯೆ. ನಿಮ್ಮ ಗಮನವನ್ನು ಬೇರೆಡೆ ಸೆಳೆಯುತ್ತಲೇ ಜಾದೂಗಾರರು ಜಾದೂ ಮಾಡಿಬಿಟ್ಟಿರುತ್ತಾರೆ. ನೆಟ್ಟಿಗರಂತೂ ಈ ವಿಡಿಯೋ ನೋಡಿ, ಅಬ್ಬಾ ಇಷ್ಟು ವರ್ಷಗಳ ಮೇಲಾದರು ಜಾದೂ ಹಿಂದಿನ ತಂತ್ರಗಳನ್ನು ಸ್ವತಃ ನೋಡಲು ಸಿಕ್ಕಿತಲ್ಲ! ಎಂಥ ತಯಾರಿ ಬೇಕಲ್ಲ ಇದರ ಪ್ರದರ್ಶನಕ್ಕೆ ಎಂದು ಅಚ್ಚರಿ ಪಡುತ್ತಿದ್ದಾರೆ.

ಇದನ್ನೂ ಓದಿ : Viral Video: ಜಪಾನಿನ ಸುಶಿ; ಅನ್ನ ಬೇಳೆಯನ್ನು ದಯವಿಟ್ಟು ಅವಮಾನಿಸಬೇಡಿ ಎನ್ನುತ್ತಿರುವ ನೆಟ್ಟಿಗರು

ಜಾದೂಗಾರರು ಕಣ್ಣುಮಿಟುಕಿಸುವುದರಲ್ಲಿ ತಮ್ಮ ತಂತ್ರಗಳನ್ನು ಸಾಧಿಸಿಬಿಟ್ಟಿರುತ್ತಾರೆ. ನಿಜಕ್ಕೂ ಅವರು ಮಾಂತ್ರಿಕರೇ ಎಂದಿದ್ದಾರೆ ಒಬ್ಬರು. ಯಾರನ್ನೋ ಕೊಲ್ಲಲು ಹೊರಟಿದ್ಧಾನೇನೋ ಎಂಬಂತಿದೆ ಅವನ ಹಾವಭಾವ ಎಂದಿದ್ಧಾರೆ ಇನ್ನೊಬ್ಬರು. ಆಕೆಯಂತೂ ಮುದ್ದಾಗಿದ್ದಾಳೆ ಎಂದು ಮತ್ತೊಬ್ಬರು. ಈ ಜಾದೂಗಾರನಿಗಿಂತ ನಾನು ಆ ಹುಡುಗಿಯನ್ನು ನೋಡುತ್ತಿದ್ದೇನೆ, ಆಕೆ ದೇವರ ಮಾಂತ್ರಿಕ ಸೃಷ್ಟಿ! ಎಂದಿದ್ದಾರೆ ಇನ್ನೂ ಒಬ್ಬರು. ನಾನಂತೂ ಈ ಹುಡುಗಿಯೊಂದಿಗೆ ಪ್ರೀತಿಯಲ್ಲಿ ತೇಲುತ್ತಿದ್ದೇನೆ ಎಂದು ಅನೇಕರು ಹೇಳುತ್ತಿದ್ಧಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:30 pm, Mon, 3 July 23

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ