AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: 73 ವರ್ಷದ ವೈದ್ಯರಿಗೆ ಮೊದಲ ಸಲ ಹಾಡಲು ವೇದಿಕೆ ಸಿಕ್ಕಾಗ…

National Doctor's Day 2023 : “ಎಲ್ಲವೂ ಕಗ್ಗಂಟಾಗಿ ಹೋದ ಇಂದಿನ ಈ ಜಗತ್ತಿನಲ್ಲಿ ಇಂಥ ಸುಂದರ ಗಳಿಗೆಯನ್ನು ನಮ್ಮೊಂದಿಗೆ ಹಂಚಿಕೊಂಡದ್ದಕ್ಕೆ ಧನ್ಯವಾದಗಳು, ನಿಜಕ್ಕೂ ಸ್ಫೂರ್ತಿದಾಯಕ! ಇವರ ಉತ್ಸಾಹಕ್ಕೆ ಸಲಾಂ,” ನೆಟ್ಟಿಗರ ಪ್ರಶಂಸೆ.

Viral Video: 73 ವರ್ಷದ ವೈದ್ಯರಿಗೆ ಮೊದಲ ಸಲ ಹಾಡಲು ವೇದಿಕೆ ಸಿಕ್ಕಾಗ...
ಕೇರಳದ ಡಾ. ಸುರೇಶ್​ ನಂಬಿಯಾರ್ ಗಾಯಕ ಶಾನ್​ನೊಂದಿಗೆ ಹಾಡುತ್ತಿರುವುದು
Follow us
ಶ್ರೀದೇವಿ ಕಳಸದ
|

Updated on:Jul 01, 2023 | 5:49 PM

Singer : ಹುಣಸೆ ಮರ ಮುಪ್ಪಾದರೆ ಹುಳಿಗೆ ಮುಪ್ಪೇ? ಜೀವ ಹಳತಾದರೂ ಒಳಗೆ ತುಡಿಯುವ ಜೀವಸೆಲೆ ಕ್ಷಣಕ್ಷಣಕ್ಕೂ ಹೊಸತೇ. “ಸಂಗೀತ ನಿಮ್ಮ ಧಮನಿಗಳಲ್ಲಿದ್ದರೆ ಅದನ್ನು ವಯಸ್ಸು ತಡೆಯಲಾರದು’.’ 73 ವರ್ಷ ಕೇರಳದ ಡಾ. ಸುರೇಶ್ ನಂಬಿಯಾರ್ (Dr. Suresh Nambiar) ಹುರುಪಿನಿಂದ ಹಾಡುತ್ತಿರುವ ವಿಡಿಯೋ ಅನ್ನು Nims ಎಂಬ ಟ್ವಿಟರ್​ ಖಾತೆದಾರರು ಹಂಚಿಕೊಂಡಿದ್ದಾರೆ. ಹಳೆಯ ಜನಪ್ರಿಯ ಹಿಂದೀ (Bollywood Song) ಹಾಡೊಂದನ್ನು ಖ್ಯಾತ ಬಾಲಿವುಡ್ ಗಾಯಕ ಶಾನ್ (Shaan) ಅವರೊಂದಿಗೆ ಹಾಡಿದ್ದಾರೆ. ಇದೀಗ ಈ ವಿಡಿಯೋ ಸ್ವಾಭಾವಿಕವಾಗಿ ಇದು ನೋಡುಗರ ಮನವನ್ನು ಗೆದ್ದಿದೆ. ಒಮ್ಮೆ ನೋಡಿದವರು ಪದೇಪದೇ ನೋಡುತ್ತ ಇತರರೊಂದಿಗೆ ಹಂಚಿಕೊಳ್ಳುತ್ತ ಇದು ವೈರಲ್ ಆಗಿದೆ.

“ನನಗೀಗ 73 ವರ್ಷ. ನಮ್ಮಲ್ಲಿ ಹಾಡುವವರಿಗಾಗಿ ಬಹಳಷ್ಟು ಸ್ಪರ್ಧೆಗಳಿವೆ, ವೇದಿಕೆಗಳಿವೆ. ಆದರೆ ಸಾಮಾನ್ಯವಾಗಿ ಅವೆಲ್ಲ 20 ವರ್ಷದ ಕೆಳಗಿನವರಿಗೆ, ಅಥವಾ 20ರಿಂದ 40 ವರ್ಷದವರಿಗೆ ಮಾತ್ರ ಲಭ್ಯ. ನಮ್ಮಂಥವರಿಗೆ ಇಂಥ ಅವಕಾಶಗಳು ವಿರಳ. ನಾನು ನೋಡಿದಂತೆ ಇದೇ ಮೊದಲು,” ಎಂದು ಆ ಕಾರ್ಯಕ್ರಮ ಆಯೋಜಿಸಿದ ಐಸಿಐಸಿಐ ಬ್ಯಾಂಕ್‌ನವರಿಗೆ (ICICI Bank) ಕೃತಜ್ಞತೆ ಸಲ್ಲಿಸಿದ್ದಾರೆ. ವೃತ್ತಿಯಲ್ಲಿ ವೈದ್ಯರಾದ ಡಾ. ಸುರೇಶ ನಂಬಿಯಾರ್ ಅವರು ನಿರರ್ಗಳವಾಗಿ ಇಂಗ್ಲಿಷ್​ನಲ್ಲಿ ಮಾತನಾಡುತ್ತ ಹಿರಿಯ ಗಾಯಕರಿಗಾಗಿ ವೇದಿಕೆಗಳನ್ನು ಸೃಷ್ಟಿಸುವಂತೆ ಈ ಮೂಲಕ ಕೋರಿದ್ದಾರೆ.

ಇದನ್ನೂ ಓದಿ : Viral Video: ಸಿಗರೇಟು ಭಾಗ್ಯದ ನಾರಿಯರು; ಇದೇನು ನಿಜವೋ ನಾಟಕವೋ ರಾಜಕೀಯದಾಟವೋ?

ಅಷ್ಟೇ ಅಸ್ಖಲಿತವಾಗಿಯೂ ಚೂರೂ ತಪ್ಪಿಲ್ಲದ ಉಚ್ಚಾರಣೆಯೊಂದಿಗೂ ಶಮ್ಮಿ ಕಪೂರ್ (Shammi Kapoor) ಅಭಿನಯದ ಮೊಹಮ್ಮದ್ ರಫಿ ಹಾಡಿದ “ಜವಾನಿಯಾಂ ಯೆ ಮಸ್ತ್ ಮಸ್ತ್ ಬಿನ್ ಪಿಯೇ” ಎಂಬ ಹಾಡನ್ನು ಗಾಯಕ ಶಾನ್ ಅವರೇ ಅಚ್ಚರಿ ಪಡುವಷ್ಟು ಸೊಗಸಾಗಿ ಹಾಡಿದ್ದಾರೆ. ಈ ಅಜ್ಜನ ಯೌವನವನ್ನು ನೋಡಿ ಶನಿವಾರದ ಈ ಸಂಜೆ ನಿಮಗೂ ಕುಡಿಯದೆಯೇ ನಶೆಯೇರುವುದೇ? ತಿಳಿಸಿ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:49 pm, Sat, 1 July 23

ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ