Viral Video: 73 ವರ್ಷದ ವೈದ್ಯರಿಗೆ ಮೊದಲ ಸಲ ಹಾಡಲು ವೇದಿಕೆ ಸಿಕ್ಕಾಗ…

National Doctor's Day 2023 : “ಎಲ್ಲವೂ ಕಗ್ಗಂಟಾಗಿ ಹೋದ ಇಂದಿನ ಈ ಜಗತ್ತಿನಲ್ಲಿ ಇಂಥ ಸುಂದರ ಗಳಿಗೆಯನ್ನು ನಮ್ಮೊಂದಿಗೆ ಹಂಚಿಕೊಂಡದ್ದಕ್ಕೆ ಧನ್ಯವಾದಗಳು, ನಿಜಕ್ಕೂ ಸ್ಫೂರ್ತಿದಾಯಕ! ಇವರ ಉತ್ಸಾಹಕ್ಕೆ ಸಲಾಂ,” ನೆಟ್ಟಿಗರ ಪ್ರಶಂಸೆ.

Viral Video: 73 ವರ್ಷದ ವೈದ್ಯರಿಗೆ ಮೊದಲ ಸಲ ಹಾಡಲು ವೇದಿಕೆ ಸಿಕ್ಕಾಗ...
ಕೇರಳದ ಡಾ. ಸುರೇಶ್​ ನಂಬಿಯಾರ್ ಗಾಯಕ ಶಾನ್​ನೊಂದಿಗೆ ಹಾಡುತ್ತಿರುವುದು
Follow us
|

Updated on:Jul 01, 2023 | 5:49 PM

Singer : ಹುಣಸೆ ಮರ ಮುಪ್ಪಾದರೆ ಹುಳಿಗೆ ಮುಪ್ಪೇ? ಜೀವ ಹಳತಾದರೂ ಒಳಗೆ ತುಡಿಯುವ ಜೀವಸೆಲೆ ಕ್ಷಣಕ್ಷಣಕ್ಕೂ ಹೊಸತೇ. “ಸಂಗೀತ ನಿಮ್ಮ ಧಮನಿಗಳಲ್ಲಿದ್ದರೆ ಅದನ್ನು ವಯಸ್ಸು ತಡೆಯಲಾರದು’.’ 73 ವರ್ಷ ಕೇರಳದ ಡಾ. ಸುರೇಶ್ ನಂಬಿಯಾರ್ (Dr. Suresh Nambiar) ಹುರುಪಿನಿಂದ ಹಾಡುತ್ತಿರುವ ವಿಡಿಯೋ ಅನ್ನು Nims ಎಂಬ ಟ್ವಿಟರ್​ ಖಾತೆದಾರರು ಹಂಚಿಕೊಂಡಿದ್ದಾರೆ. ಹಳೆಯ ಜನಪ್ರಿಯ ಹಿಂದೀ (Bollywood Song) ಹಾಡೊಂದನ್ನು ಖ್ಯಾತ ಬಾಲಿವುಡ್ ಗಾಯಕ ಶಾನ್ (Shaan) ಅವರೊಂದಿಗೆ ಹಾಡಿದ್ದಾರೆ. ಇದೀಗ ಈ ವಿಡಿಯೋ ಸ್ವಾಭಾವಿಕವಾಗಿ ಇದು ನೋಡುಗರ ಮನವನ್ನು ಗೆದ್ದಿದೆ. ಒಮ್ಮೆ ನೋಡಿದವರು ಪದೇಪದೇ ನೋಡುತ್ತ ಇತರರೊಂದಿಗೆ ಹಂಚಿಕೊಳ್ಳುತ್ತ ಇದು ವೈರಲ್ ಆಗಿದೆ.

“ನನಗೀಗ 73 ವರ್ಷ. ನಮ್ಮಲ್ಲಿ ಹಾಡುವವರಿಗಾಗಿ ಬಹಳಷ್ಟು ಸ್ಪರ್ಧೆಗಳಿವೆ, ವೇದಿಕೆಗಳಿವೆ. ಆದರೆ ಸಾಮಾನ್ಯವಾಗಿ ಅವೆಲ್ಲ 20 ವರ್ಷದ ಕೆಳಗಿನವರಿಗೆ, ಅಥವಾ 20ರಿಂದ 40 ವರ್ಷದವರಿಗೆ ಮಾತ್ರ ಲಭ್ಯ. ನಮ್ಮಂಥವರಿಗೆ ಇಂಥ ಅವಕಾಶಗಳು ವಿರಳ. ನಾನು ನೋಡಿದಂತೆ ಇದೇ ಮೊದಲು,” ಎಂದು ಆ ಕಾರ್ಯಕ್ರಮ ಆಯೋಜಿಸಿದ ಐಸಿಐಸಿಐ ಬ್ಯಾಂಕ್‌ನವರಿಗೆ (ICICI Bank) ಕೃತಜ್ಞತೆ ಸಲ್ಲಿಸಿದ್ದಾರೆ. ವೃತ್ತಿಯಲ್ಲಿ ವೈದ್ಯರಾದ ಡಾ. ಸುರೇಶ ನಂಬಿಯಾರ್ ಅವರು ನಿರರ್ಗಳವಾಗಿ ಇಂಗ್ಲಿಷ್​ನಲ್ಲಿ ಮಾತನಾಡುತ್ತ ಹಿರಿಯ ಗಾಯಕರಿಗಾಗಿ ವೇದಿಕೆಗಳನ್ನು ಸೃಷ್ಟಿಸುವಂತೆ ಈ ಮೂಲಕ ಕೋರಿದ್ದಾರೆ.

ಇದನ್ನೂ ಓದಿ : Viral Video: ಸಿಗರೇಟು ಭಾಗ್ಯದ ನಾರಿಯರು; ಇದೇನು ನಿಜವೋ ನಾಟಕವೋ ರಾಜಕೀಯದಾಟವೋ?

ಅಷ್ಟೇ ಅಸ್ಖಲಿತವಾಗಿಯೂ ಚೂರೂ ತಪ್ಪಿಲ್ಲದ ಉಚ್ಚಾರಣೆಯೊಂದಿಗೂ ಶಮ್ಮಿ ಕಪೂರ್ (Shammi Kapoor) ಅಭಿನಯದ ಮೊಹಮ್ಮದ್ ರಫಿ ಹಾಡಿದ “ಜವಾನಿಯಾಂ ಯೆ ಮಸ್ತ್ ಮಸ್ತ್ ಬಿನ್ ಪಿಯೇ” ಎಂಬ ಹಾಡನ್ನು ಗಾಯಕ ಶಾನ್ ಅವರೇ ಅಚ್ಚರಿ ಪಡುವಷ್ಟು ಸೊಗಸಾಗಿ ಹಾಡಿದ್ದಾರೆ. ಈ ಅಜ್ಜನ ಯೌವನವನ್ನು ನೋಡಿ ಶನಿವಾರದ ಈ ಸಂಜೆ ನಿಮಗೂ ಕುಡಿಯದೆಯೇ ನಶೆಯೇರುವುದೇ? ತಿಳಿಸಿ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:49 pm, Sat, 1 July 23

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ