Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ವಿಶೇಷ ಮಕ್ಕಳ ಕ್ಷೌರದಂಗಡಿ; ಮನದುಂಬಿ ಪ್ರತಿಕ್ರಿಯಿಸುತ್ತಿರುವ ಬಿಲ್ಲಿಯ ಗ್ರಾಹಕರು

Salon : ಸ್ವಾರ್ಥಕ್ಕಾಗಿ ಎಂಥವರನ್ನೂ ತುಳಿಯುವ ಕಾಲವಿದು. ವಿಶೇಷ ಮಕ್ಕಳು, ಮಹಿಳೆಯರು, ಪುರುಷರ ಬಗ್ಗೆ ಸಹಾನುಭೂತಿಯುಳ್ಳ ಮನುಷ್ಯರು ನಮ್ಮೊಂದಿಗೆ ಇದ್ದಾರೆ ಎಂದರೆ ಜಗತ್ತಿನಲ್ಲಿ ಮಾನವೀಯತೆ ಇನ್ನೂ ಇದೆ ಎಂದರ್ಥ.

Viral Video: ವಿಶೇಷ ಮಕ್ಕಳ ಕ್ಷೌರದಂಗಡಿ; ಮನದುಂಬಿ ಪ್ರತಿಕ್ರಿಯಿಸುತ್ತಿರುವ ಬಿಲ್ಲಿಯ ಗ್ರಾಹಕರು
ಕ್ಷೌರಿಕ ಬಿಲ್ಲಿ ವಿಶೇಷ ಮಗುವಿನ್ನು ಸಂತೈಸುತ್ತ ಕೂದಲು ಕತ್ತರಿಸುತ್ತಿರುವುದು
Follow us
ಶ್ರೀದೇವಿ ಕಳಸದ
|

Updated on:Jul 03, 2023 | 11:11 AM

Special Children: ಸಾಕಷ್ಟು ಹಠ, ಕೋಪದಿಂದ ರಗಳೆ ಮಾಡುತ್ತಿದೆ ಈ ಮಗು. ಆದರೂ ಇಲ್ಲಿರುವ ಕ್ಷೌರಿಕ (Barber) ಅದರ ಪ್ರತಿಯೊಂದು ಕ್ರಿಯೆಯನ್ನೂ ಬೇಸರಿಸಿಕೊಳ್ಳದೆ ಅದರ ಮೂಡ್​ ಬದಲಾಯಿಸಲು ಪ್ರಯತ್ನಿಸುತ್ತಿದ್ದಾನೆ. ಹಾಗೆಂದು ಈ ಕ್ಷೌರಿಕನೇನು ಯುವಕನಲ್ಲ ನಡುವಯಸ್ಸಿನವನಂತೆ ಕಾಣುತ್ತಾನೆ. ಆದರೂ ಇಷ್ಟೊಂದು ತಾಳ್ಮೆಯಿಂದ ನಿಭಾಯಿಸಿದ್ದಾನೆಂದರೆ! ಹೌದು ಇದು ವಿಶೇಷ ಮಕ್ಕಳಿಗಾಗಿಯೇ ಈತ ಶುರು ಮಾಡಿದ ಕ್ಷೌರದಂಗಡಿ (Salon). ಇದೀಗ ಈ ವಿಡಿಯೋ ವೈರಲ್ ಆಗುತ್ತಿದ್ದು ನೆಟ್ಟಿಗರ ಕಣ್ಣಾಲಿಗಳು ತುಂಬಿಕೊಳ್ಳುತ್ತಿವೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Good News Movement (@goodnews_movement)

ಭಯದಿಂದಲೋ ಅಥವಾ ತನಗೆ ಮನಸ್ಸಿಲ್ಲವೆಂದೋ ಸರೀ ರಚ್ಚೆ ಹಿಡಿದಿದೆ ಈ ಮಗು. ಆದರೂ ಆ ಪ್ರಕ್ರಿಯೆಯನ್ನು ಕ್ರಮೇಣ ಆಟಕ್ಕೆ ತಿರುಗಿಸುತ್ತ ಹಸನ್ಮುಖಿಯಾಗಿ ಕ್ಷೌರ ಮಾಡುತ್ತಾನೆ ಬಿಲ್ಲಿ ಎಂಬ ಹೆಸರಿನ ಈ ಕ್ಷೌರಿಕ. ವಿಶೇಷ ಮಕ್ಕಳಿಗಷ್ಟೇ ಅಲ್ಲ, ವಿಶೇಷ ಮಹಿಳೆಯಗೆ ಮತ್ತು ಪುರುಷರಿಗೂ ಇವನು ಕ್ಷೌರ ಮಾಡುತ್ತಾನೆ. ಎಲ್ಲರೊಂದಿಗೆ ಸಹಾನುಭೂತಿಯಿಂದ ಒಡನಾಡುತ್ತಾನೆ. ನೆಟ್ಟಿಗರು ಮತ್ತು ಇವನ ಅನೇಕ ಗ್ರಾಹಕರು ಇವನನ್ನು ಪ್ರಶಂಸಿಸುತ್ತಿದ್ಧಾರೆ.

ಇದನ್ನೂ ಓದಿ : Viral Video: ಎಎಸ್ಎಂಆರ್ ಕಲೆ: ಗುಜರಿ ಅಂಗಡಿಗೆ ಹಾಕಿದ ಟೈಪ್​ರೈಟರ್ ಹುಡುಕುವ ಆಲೋಚನೆ ಬಂದೀತು!

ಈತನಕ 2 ಮಿಲಿಯನ್​ಗಿಂತಲೂ ಹೆಚ್ಚು ಜನ ಈ ವಿಡಿಯೋ ನೋಡಿದ್ಧಾರೆ. 1 ಲಕ್ಷಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಸಾವಿರಾರು ಜನರು ಮನದುಂಬಿ ಪ್ರತಿಕ್ರಿಯಿಸಿದ್ದಾರೆ. ‘ಇವನು ನಮ್ಮ ಮಗನ ಕ್ಷೌರಿಕ, ಅದ್ಭುತ ವ್ಯಕ್ತಿ. ವಿಶೇಷ ಮಗುವೊಂದು ನಿಮ್ಮ ಕುಟುಂಬದಲ್ಲಿದ್ದರೆ ಅದನ್ನು ಪೋಷಿಸುವ ಕಷ್ಟಗಳ ಬಗ್ಗೆ ನಿಮಗರಿವಿರುತ್ತದೆ. ಈ ಬಿಲ್ಲಿ ಎಂಟು ವರ್ಷಗಳಿಂದ ನನ್ನ ಮಗನ ಕ್ಷೌರ ಮಾಡುತ್ತಿದ್ದಾನೆ. ಈತನಕ ಎಂದೂ ಅವನು ತಾಳ್ಮೆ ಕಳೆದುಕೊಂಡಿಲ್ಲ. ವಿಶೇಷ ಮಕ್ಕಳಿಗೆ ಬೇಕಾದಂಥ ಆಟಿಕೆಗಳು, ಪರಿಸರ ರೂಪಿಸಿದ್ದಾರೆ. ನಿಧಿ ಸಂಗ್ರಹವನ್ನೂ ಮಾಡುತ್ತ ತಮ್ಮದೇ ಆದ ಸಮುದಾಯವನ್ನು ಕಟ್ಟಿಕೊಂಡಿದ್ದಾರೆ. ಎಂದಿದ್ದಾರೆ ವಿಶೇಷ ಮಗುವಿನ ತಾಯಿಯೊಬ್ಬಾಕೆ.

ಇದನ್ನೂ ಓದಿ : Viral Video: 73 ವರ್ಷದ ವೈದ್ಯರಿಗೆ ಮೊದಲ ಸಲ ಹಾಡಲು ವೇದಿಕೆ ಸಿಕ್ಕಾಗ

‘ಓಹ್ ಇವನು ನನ್ನ ಸೋದರಳಿಯನ ಕ್ಷೌರಿಕ. ನಾನಂತೂ ಇವನಿಗೆ ಸದಾ ಕೃತಜ್ಞ. ಇವನಲ್ಲಿರುವ ಸಹನೆ ಮತ್ತು ಶಕ್ತಿ ಮಹಾನ್​. ಇಂಥ ವ್ಯಕ್ತಿ ಬಹುಶಃ ಜಗತ್ತಿನಲ್ಲಿಯೇ ಇಲ್ಲ ಎಂದೆನ್ನಿಸುತ್ತದೆ. ಮಕ್ಕಳೊಂದಿಗೆ ಭಾವನಾತ್ಮಕವಾಗಿ ಸ್ಪಂದಿಸುವುದನ್ನು ನೋಡುವುದೇ ಒಂದು ದಿವ್ಯಅನುಭವ ಎಂದಿದ್ಧಾರೆ’ ಮತ್ತೊಬ್ಬರು.

ನಿಮ್ಮೂರಿನಲ್ಲಿಯೂ ಇಂಥ ಒಬ್ಬ ಕ್ಷೌರಿಕನಿರಬೇಕು ಎನ್ನಿಸುತ್ತಿದೆಯೇ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:36 am, Mon, 3 July 23

ಕೇಕ್ ಕಟ್ ಮಾಡಿ ಮೊದಲ ಪೀಸನ್ನು ಶಿವಕುಮಾರ್​ಗೆ ನೀಡಿದ ಸಿದ್ದರಾಮಯ್ಯ
ಕೇಕ್ ಕಟ್ ಮಾಡಿ ಮೊದಲ ಪೀಸನ್ನು ಶಿವಕುಮಾರ್​ಗೆ ನೀಡಿದ ಸಿದ್ದರಾಮಯ್ಯ
ಮ್ಯಾಜಿಸ್ಟ್ರೇಟ್ 50,000 ರೂ. ಲಂಚ ಕೇಳಿದ್ದಕ್ಕೆ ಮರ ಹತ್ತಿದ ವೃದ್ಧೆ!
ಮ್ಯಾಜಿಸ್ಟ್ರೇಟ್ 50,000 ರೂ. ಲಂಚ ಕೇಳಿದ್ದಕ್ಕೆ ಮರ ಹತ್ತಿದ ವೃದ್ಧೆ!
ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ
ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ
ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
Video: ವೇಗವಾಗಿ ಬಂದು ವಾಹನಗಳ ಮೇಲೆ ಹರಿದ ಬಸ್, ಮೂವರು ಸಾವು
Video: ವೇಗವಾಗಿ ಬಂದು ವಾಹನಗಳ ಮೇಲೆ ಹರಿದ ಬಸ್, ಮೂವರು ಸಾವು