Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕಾರ್​ ಡ್ರೈವರ್​​ಗಳು ಕಾರಿನಲ್ಲಿ ಟೂತ್​ಪೇಸ್ಟ್​ ಯಾಕೆ ಇಟ್ಟುಕೊಂಡಿರುತ್ತಾರೆ ಗೊತ್ತೆ?

Toothpaste : ಲಕ್ಷಗಟ್ಟಲೆ ಜನ ಈ ವಿಡಿಯೋ ನೋಡಿದ್ಧಾರೆ. ಹೌದು, ಈ ವಿಡಿಯೋದಲ್ಲಿ ಹೇಳಿದ ಹಾಗೆ ನಾನು ಮಾಡಿ ನೋಡಿದೆ, ನಿಜಕ್ಕೂ ಇದು ಪ್ರಯೋಜಕಾರಿ ಎಂದು ಹಲವಾರು ಜನ ಪ್ರತಿಕ್ರಿಯಿಸುತ್ತಿದ್ದಾರೆ.

Viral Video: ಕಾರ್​ ಡ್ರೈವರ್​​ಗಳು ಕಾರಿನಲ್ಲಿ ಟೂತ್​ಪೇಸ್ಟ್​ ಯಾಕೆ ಇಟ್ಟುಕೊಂಡಿರುತ್ತಾರೆ ಗೊತ್ತೆ?
ಕಾರಿನ ಸ್ಕ್ರ್ಯಾಚ್​​ಗೆ ಟೂತ್​ಪೇಸ್ಟ್​ ಹಚ್ಚುತ್ತಿರುವುದು
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jul 03, 2023 | 3:10 PM

Car Driver : ಅನುಭವಿ ಮತ್ತು ವೃತ್ತಿಪರ ಕಾರ್​ ಡ್ರೈವರ್​ಗಳು  ಸದಾ ಪ್ರಯಾಣದಲ್ಲಿರುತ್ತಾರೆ. ಅವರಳ ಬಳಿ ಟೂತ್​ಪೇಸ್ಟ್​ ಇರುತ್ತದೆ. ಯಾಕೆ? ಅವರಿಗೆ ಹಲ್ಲುಜ್ಜಲು ಟೂತ್​ಪೇಸ್ಟ್​ (Toothpaste) ಬೇಕು ಎಂಬ ಉತ್ತರ ಯಾರಿಗಾದರೂ ಹೊಳೆಯುವಂಥದ್ದು. ಆದರೆ ಅದು ತಪ್ಪು. ಹೇಗೆ ತಪ್ಪು ಎಂದು ನೀವು ಹುಬ್ಬೇರಿಸಬಹುದು. ಟೂತ್​ಪೇಸ್ಟ್ ಅನ್ನು ಹಲ್ಲಿಗೆ ಉಜ್ಜದೇ ಇನ್ನು ಕಾರಿನ ಮೂತಿಗೆ ಉಜ್ಜೋದಕ್ಕಾಗುತ್ತದೆಯೇ? ಎಂದು ಹುಸಿಕೋಪ ಮತ್ತು ತುಸು ಕೊಂಕಿನಿಂದ ನೀವು ಕೇಳಬಹುದು. ಆದರೆ ಇದೇ ನಿಜವಾದ ಉತ್ತರ! ಅದು ಹೇಗೆ ಎನ್ನುತ್ತೀರಾ? ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ಕೆಳಗಿನ ವಿಡಿಯೋ ನೋಡಿ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by @uccu.r

ನಿಮ್ಮ ತಪ್ಪಿನಿಂದಲೋ ಅಥವಾ ಬೇರೆಯವರ ತಪ್ಪಿನಿಂದಲೋ ನಿಮ್ಮ ಕಾರ್​ ಸ್ಕ್ರ್ಯಾಚ್​ಗೆ ಒಳಗಾಗುತ್ತದೆ ಎಂದುಕೊಳ್ಳಿ. ಅಯ್ಯೋ ಇದಕ್ಕಿನ್ನು ಸಾವಿರಾರು ರೂಪಾಯಿ ಖರ್ಚು ಮಾಡಬೇಕು, ಅಲ್ಲದೇ ಆ ಪ್ಯಾಚ್ ಬೇರೆ​ ಹಾಗೆಯೇ ಉಳಿದುಕೊಂಡುಬಿಡುತ್ತದೆ ಎಂದು ಚಿಂತಿಸಬೇಕಿಲ್ಲ. ಹಾಗಿದ್ದರೆ ಏನು ಮಾಡಬೇಕು ಎಂದು ಮೇಲಿನ ವಿಡಿಯೋದಲ್ಲಿ ನೋಡಿದಿರಿ. ಹಾಗೆಯೇ ತುಂಬಾ ದಿನಗಳ ಮೇಲೆ ಕಾರಿನ ಗಾಜನ್ನು ಒರೆಸಬೇಕೆಂದರೆ ವೈಪರ್​​ನ ಒಳಮೈತುಂಬಾ ಪೇಸ್ಟ್​ ಹಚ್ಚಿಬಿಡುವುದು. ಹಾಗೆ ಇಲಿಗಳು ಎಂಜಿನ್​ ವಯರ್​ ಕತ್ತರಿಸುತ್ತಿರುತ್ತವೆ, ಅದಕ್ಕೂ ಪೇಸ್ಟ್ ಮದ್ದು!

ಇದನ್ನೂ ಓದಿ : Viral Video: ಮಟಮಟ ಮಧ್ಯಾಹ್ನ ಮಟನ್​ ಮ್ಯಾಗೀ, ಬೆಲೆ ಕೇವಲ ರೂ. 600!

ಈ ವಿಡಿಯೋ ಎಷ್ಟು ಉಪಯುಕ್ತವಾಗಿದೆಯಲ್ಲ ಎಂದು ಅನ್ನಿಸಿದಾಗೆಲ್ಲ ವಿಷಯದ ಬಗ್ಗೆ ಖಚಿತಪಡಿಸಿಕೊಳ್ಳಲು ಕಮೆಂಟ್​ ಸೆಕ್ಷನ್​ಗೆ ಹೋಗುತ್ತೇನೆ ಎಂದಿದ್ದಾರೆ ಒಬ್ಬರು. ಹೌದು ಹೌದು ನಾವೂ ಹಾಗೇ ಎಂದಿದ್ದಾರೆ ಹಲವಾರು ಜನ. ನಾ ಕೂಡ ಹೀಗೆ ಟೂತ್​ಪೇಸ್ಟ್​ ಬಳಸುತ್ತೇನೆ ಕಾರಿಗೆ ಎಂದಿದ್ದಾರೆ ಕೆಲವರು. ಯಾವುದೇ ಬಗೆಯ ಟೂತ್​ಪೇಸ್ಟ್​ ಪರವಾಗಿಲ್ವಾ ಎಂದು ಕೇಳಿದ್ದಾರೆ ಕೆಲವರು. ನನ್ನ ಕಾರಿನ ವಯರುಗಳನ್ನು ಇಲಿಗಳು ಕಡೆಯದಂತೆ ದಾಲ್ಚಿನ್ನಿ ದ್ರಾವಣ ಸಿಂಪಡಿಸುತ್ತಿದ್ದೆ, ಇನ್ನು ಪೇಸ್ಟ್​ ಹಚ್ಚಿ ನೋಡುವೆ ಎಂದಿದ್ದಾರೆ ಮತ್ತೊಬ್ಬರು. ಮಂಜಿನಿಂದ ಮಬ್ಬಾದ ಗಾಜುಗಳನ್ನು ಇದು ಬೇಗನೆ ಸ್ವಚ್ಛಗೊಳಿಸುತ್ತದೆ ಎಂದಿದ್ಧಾರೆ ಇನ್ನೂ ಒಬ್ಬರು. ಹಲ್ಲುಜ್ಜುವುದನ್ನು ಬಿಟ್ಟು ಟೂತ್​ಪೇಸ್ಟ್​ನಿಂದ ಏನೇನೆಲ್ಲ ಪ್ರಯೋಜನ ಇದೆ ಎಂಬ ಮಾಹಿತಿಯ ಮಹಾಪೂರವೇ ಈ ಪೋಸ್ಟಿಗೆ ಹರಿದು ಬಂದಿದೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:06 pm, Mon, 3 July 23

ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..
ಪಹಲ್ಗಾಮ್​ನಲ್ಲಿ ಉಗ್ರರ ಅಟ್ಟಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅಭಿಜನ್
ಪಹಲ್ಗಾಮ್​ನಲ್ಲಿ ಉಗ್ರರ ಅಟ್ಟಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅಭಿಜನ್