AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ‘ಕೇದಾರನಾಥನೇ, ನಮ್ಮ ಪ್ರೀತಿಗೆ ನೀನೇ ಸಾಕ್ಷಿ’; ದಾಳಿಯಿಟ್ಟ ಸಂಸ್ಕೃತಿ ರಕ್ಷಕರು

Love Proposal : ಈ ಜೋಡಿಯ ಬದುಕಿನ ಮಹತ್ತರ ನಿರ್ಧಾರಕ್ಕೆ ದೇವರೇ ಸುಮ್ಮನಿದ್ದಾನೆ. ಆದರೆ ಅಂತರ್ಜಾಲದ 'ನೀತಿ ಶಿಕ್ಷಕರು' ಇಲ್ಲಿಯೂ ಬಂದು ಈ ಸುಂದರ ಕ್ಷಣಗಳ ನಡುವೆ ದೂಳೆಬ್ಬಿಸಿ ಹೋಗಿದ್ದಾರೆ. ಏನಂತೀರಿ ನೀವು ಇದಕ್ಕೆ?

Viral Video: 'ಕೇದಾರನಾಥನೇ, ನಮ್ಮ ಪ್ರೀತಿಗೆ ನೀನೇ ಸಾಕ್ಷಿ'; ದಾಳಿಯಿಟ್ಟ ಸಂಸ್ಕೃತಿ ರಕ್ಷಕರು
ಕೇದಾರನಾಥ ದೇವಸ್ಥಾನದ ಎದುರು ಸಂಗಾಯ ಬಳಿ ಪ್ರೇಮ ನಿವೇದನೆ ಮಾಡಿಕೊಂಡ ಯೂಟ್ಯೂಬರ್​​
ಶ್ರೀದೇವಿ ಕಳಸದ
|

Updated on:Jul 04, 2023 | 3:13 PM

Share

Kedarnath : ಕೇದಾರನಾಥ ದೇವಸ್ಥಾನ ಮಂಜಿನಿಂದ ಆವೃತವಾಗಿದೆ. ಅಂಗಳ ಒದ್ದೆಯಾಗಿದೆ. ಅಲ್ಲಿದ್ದವರೆಲ್ಲ ದರ್ಶನ ಪಡೆಯುವಲ್ಲಿ ನಿರತರಾಗಿದ್ದಾರೆ. ಈ ಎಲ್ಲದರ ಮಧ್ಯೆ ಹಳದಿ ಉಡುಪು (Yellow Dress) ಧರಿಸಿದ ಜೋಡಿಯೊಂದು ಗಮನ ಸೆಳೆಯುವಂತಿದೆ. ಇಬ್ಬರೂ ಕೈಮುಗಿದು ದೇವರ ಬಳಿ ಏನನ್ನೋ ಕೇಳಿಕೊಳ್ಳುತ್ತಿದ್ಧಾರೆ. ಅಷ್ಟರಲ್ಲಿ ಆ ಯುವತಿ ಹಿಂದೆ ಕೈಸನ್ನೆ ಮಾಡುತ್ತಾಳೆ. ಅವಳ ಕೈಗೆ ಪುಟ್ಟ ಡಬ್ಬಿಯೊಂದನ್ನು ಯಾರೋ ರವಾನಿಸುತ್ತಾರೆ. ಮುಂದೇನಾಗುತ್ತದೆ ಎಂದು ನೀವೇ ಈ ವಿಡಿಯೋದಲ್ಲಿ ನೋಡಿಬಿಡಿ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Vishakha Fulsunge || India?? (@ridergirlvishakha)

ಅವನು ದೇವರ ಬಳಿ ತನ್ನ ಪ್ರೇಮ ಫಲಿಸುವಂತೆ ಬೇಡಿಕೊಳ್ಳುತ್ತಿದ್ದನೋ ಏನೋ, ಅವ ತಿರುಗಿ ಕಣ್ಣು ಬಿಡುವುದರೊಳಗೆ ಅವನ ಹುಡುಗಿ (Vishakha Fulsunge) ಮಂಡಿಯೂರಿ ಕೈಯಲ್ಲಿ ಉಂಗುರವನ್ನು ಹಿಡಿದು ಪ್ರತ್ಯಕ್ಷ! ಅವನಿಗೆ ಅಚ್ಚರಿ ಪುಳಕ ಎಲ್ಲವೂ ಏಕಕಾಲಕ್ಕೆ! ”ನನ್ನ ಕನಸು ನನಸಾದ ದಿನವಿದು. ನಾನು ಒಂದು ತಿಂಗಳಿನಿಂದ ಈ ದಿನಕ್ಕಾಗಿ ತಯಾರಿ ನಡೆಸಿದ್ದೆ. ಸಮುದ್ರ ಮಟ್ಟದಿಂದ 11,750 ಅಡಿ ಎತ್ತರದಲ್ಲಿರುವ ಕೇದಾರನಾಥನ ಸನ್ನಿಧಿಯಲ್ಲಿ ನಾನು ಮೊಣಕಾಲುಗಳನ್ನೂರಿ ನನ್ನ ಸಂಗಾತಿಯೆದುರು ಅಧಿಕೃತವಾಗಿ ಪ್ರೇಮ ನಿವೇದನೆ ಮಾಡಿಕೊಂಡಿದ್ದೇನೆ. ಈ ಸ್ಥಳವು ಶುದ್ಧವೂ ಮತ್ತು ಮಾಂತ್ರಿಕತೆಯಿಂದ ಕೂಡಿದೆ. ಬೋಲೇನಾಥನ ಆಶೀರ್ವಾದದೊಂದಿಗೆ” ಎಂದು ಯೂಟ್ಯೂಬರ್ ಆಗಿರುವ ಈ ಯುವತಿ ತನ್ನ ಪೋಸ್ಟ್​ಗೆ ಒಕ್ಕಣೆ ಬರೆದುಕೊಂಡಿದ್ದಾಳೆ.

ಇದನ್ನೂ ಓದಿ : Viral: ಅಮೆರಿಕದ ”ಫ್ರೆಂಡ್ಸ್”; ಮೋನಿಕಾ ಮತ್ತು ಚಾಂಡ್ಲರ್ ಭಾರತಕ್ಕೆ ಏಕೆ ಬಂದಿದ್ದಾರೆ?

ಈ ಜೋಡಿ ಹೀಗೆ ಸಾರ್ಥಕ ಕ್ಷಣಗಳಲ್ಲಿ ಸಂಭ್ರಮಿಸಿದರೆ, ನೆಟ್ಟಿಗರು ಮಾತ್ರ ಮನಬಂದಂತೆ ಪ್ರತಿಕ್ರಿಯಿಸಿದ್ದಾರೆ. ಇಂಥ ಚಟುವಟಿಕೆಗಳಿಂದಾಗಿ ಕೇದಾರನಾಥ ದೇವಾಲಯದ ಪಾವಿತ್ರ್ಯಕ್ಕೆ ಧಕ್ಕೆಯಾಗಿದೆ ಎಂದು ಕೆಲವರು ಪ್ರತಿಕ್ರಿಯಿಸುತ್ತಿದ್ದಾರೆ. ನಾನು ಕೇದಾರನಾಥದಿಂದಲೇ ಇಲ್ಲಿ ಪ್ರತಿಕ್ರಿಯಿಸುತ್ತಿದ್ದೇನೆ. ಎಲ್ಲಾ ಮುಖ್ಯ ದೇವಾಲಯಗಳಲ್ಲಿ ಸ್ಮಾರ್ಟ್​​​ಫೋನ್​ ನಿಷೇಧಿಸುವುದು ಇದೇ ಕಾರಣಕ್ಕೇ. 20 ಕಿ.ಮೀ ಅಂತರದಲ್ಲಿ ಬೇಸಿಕ್​ ಮೊಬೈಲ್​ ಬಳಸಲಷ್ಟೇ ಅವಕಾಶ ಕೊಟ್ಟರೆ ಜನಸಂದಣಿ ಸಮಸ್ಯೆಯನ್ನು ನಿವಾರಿಸಬಹುದು ಎಂದಿದ್ದಾರೆ ಒಬ್ಬರು.

ಇದನ್ನೂ ಓದಿ : Viral Video: ಮಸ್ಕ್ ಚಾಟ್ ಭಂಡಾರ್, ಮೆಸ್ಸೀಸ್​ ಆಂಧ್ರಾ ಮೆಸ್, ಆಸ್ಕರ್​ ಚಾಯ್​ವಾಲಾ; ಬಂದರು ನೋಡಿ ಝೊಮ್ಯಾಟೋ ಬಾಣಸಿಗರು

ಈ ವಿಡಿಯೋದಲ್ಲಿ ನನಗೇನೂ ತಪ್ಪು ಕಾಣಲಿಲ್ಲ, ಬದಲಾಗಿ ಇದು ಬಹಳ ಸುಂದರವಾಗಿದ ಎನ್ನಿಸಿತು. ಭಾರತದ ದೇವಾಲಯಗಳಲ್ಲಿ ಮದುವೆಗಳು ನಡೆಯುವುದು ಸಹಜ. ಈ ಜೋಡಿ ಕೇದಾರನಾಥನ ಸನ್ನಿಧಿಯಲ್ಲಿ ಮದುವೆಗೆ ನಿರ್ಧರಿಸಿದೆ. ಅಲ್ಲದೆ ದೇವಸ್ಥಾನದ ವಸ್ತ್ರಸಂಹಿತೆಯನ್ನು ಇವರು ಪಾಲಿಸಿದ್ದಾರೆ. ಈಗಿನ ಕಾಲಮಾನದವರು ಹಿಂದೂ ದೇವರುಗಳಲ್ಲಿ ನಂಬಿಕೆ ಇಟ್ಟಿರುವುದು ಇನ್ನೂ ಸುಂದರ ಅಲ್ಲವೆ? ಎಂದು ಕೇಳಿದ್ದಾರೆ.

ಇದನ್ನೂ ಓದಿ : viral video: ಕಥಕ್​ನಲ್ಲಿ”ಬೇಬಿ ಕಾಮ್​ ಡೌನ್” ಇಂಥ ಪ್ರಯೋಗಗಳು ನಡೆಯಲಿ ಎನ್ನುತ್ತಿರುವ ನೆಟ್ಟಿಗರು

ಈ ಒಣವಾವನ್ನೆಲ್ಲಾ ಬಿಟ್ಟು ಇವರಿಬ್ಬರಿಗೂ ಆಶೀರ್ವದಿಸಿ, ಮಹಾದೇವನು ಇವರಿಗೆ ಒಳ್ಳೇಯದನ್ನು ಮಾಡಲಿ, ಇವರು ಆನಂದದ ಕ್ಷಣಗಳನ್ನು ಅನುಭವಿಸಲಿ ಎಂದು ಮಗದೊಬ್ಬರು ಎಲ್ಲರಿಗೂ ಕ್ಲಾಸ್ ತೆಗೆದುಕೊಂಡಿದ್ದಾರೆ.

ನೀವೇನಂತೀರಿ?

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 3:10 pm, Tue, 4 July 23

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು