AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ರಿಮಝಿಮ ಗಿರೆ ಸಾವನ್​; ಮುಂಬೈನಲ್ಲಿ ಈ ಹಾಡನ್ನು ಮರುಸೃಷ್ಟಿಸಿದ ಜೋಡಿ

Manzil : ರಾಜಸ್ಥಾನ ಮಹಿಳಾ ಆಯೋಗದ ಅಧ್ಯಕ್ಷೆ ರೆಹಾನಾ ರಯಾಝ್​ ಚಿಷ್ಟಿ ''ವಿಡಿಯೋ ಹಂಚಿಕೊಂಡಿದ್ದಕ್ಕೆ ಧನ್ಯವಾದ ಆನಂದ್​ಜೀ, ಇದೆಲ್ಲವನ್ನೂ ಮುಂದುವರೆಸಿಕೊಂಡು ಹೋಗಬೇಕು. ವಯಸ್ಸು ಎಂದೂ ಅಡ್ಡಿಯಾಗಬಾರದು” ಎಂದಿದ್ದಾರೆ.

Viral Video: ರಿಮಝಿಮ ಗಿರೆ ಸಾವನ್​; ಮುಂಬೈನಲ್ಲಿ ಈ ಹಾಡನ್ನು ಮರುಸೃಷ್ಟಿಸಿದ ಜೋಡಿ
ರಿಮಝಿಮ ಗಿರೇ ಸಾವನ್​- ಹಾಡನ್ನು ಮರುಸೃಷ್ಟಿಸಿದ ಜೋಡಿ
Follow us
ಶ್ರೀದೇವಿ ಕಳಸದ
|

Updated on:Jul 03, 2023 | 7:04 PM

Couple : ರಿಮಝಿಮ ಗಿರೇ ಸಾವನ್ (RimJhim Gire Sawan), ಅಮಿತಾಬ್​ ಬಚ್ಚನ್ (Amitab Bacchan) ಮತ್ತು ಮೌಶಮಿ ಚಟರ್ಜಿ ಅಭಿನಯದ ”ಮಂಜಿಲ್​”  ಸಿನೆಮಾದ ಈ ಹಾಡು ಕೇಳುತ್ತಿರುವಾಗಲೇ ಕಿಟಕಿಯಾಚೆ ಧೋಮಳೆ. ಹಾಡು ನಿಂತಾಗ ಪರದೆ ಮೇಲಿರುವವರು ಅವರಲ್ಲವೆ…? ಮತ್ತೆ  ಇವರು ಯಾರು? ಇವರು ನಡುವಯಸ್ಸಿನ ಜೋಡಿ. ಅದೇ ಸಮುದ್ರ ಅದೇ ತೀರ ಅದೇ ಹಾಡು ಅದೇ ಹೆಜ್ಜೆ ಅದೇ ಭಾವ. ಈ ಜೋಡಿ ಅದೇ ಹಾಡನ್ನು ಹೀಗೆ ಮರುಸೃಷ್ಟಿಸಿದೆ. ಇದೀಗ ಈ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರು ಈ ವಿಡಿಯೋ ನೋಡುತ್ತ ರೋಮಾಂಚನಗೊಳ್ಳುತ್ತಿದ್ದಾರೆ. ಉದ್ಯಮಿ ಆನಂದ್ ಮಹೀಂದ್ರಾ ಈ ವಿಡಿಯೋ ಟ್ವೀಟ್ ಮಾಡಿದ್ದಾರೆ.

”ಮುಂಬೈನ ಬೀಚಿನಲ್ಲಿ ಈ ಜೋಡಿ ವಿಡಿಯೋ ಅನ್ನು ಮರುಸೃಷ್ಟಿಸಿದೆ. ಈ ಜೋಡಿಯನ್ನು ಈ ಮೂಲಕ ನಾನು ಅಭಿನಂದಿಸುತ್ತಿದ್ದೇನೆ. ”ನಿಮ್ಮ ಕಲ್ಪನೆಗೆ ರೆಕ್ಕೆ ಹಚ್ಚಿಕೊಂಡರೆ ನಿಮಗೆ ಬೇಕಾದಂತೆ ನಿಮ್ಮ ಜೀವನವನ್ನು ಛಂದಗೊಳಿಸಿಕೊಳ್ಳಬಹುದು” ಎಂದು ಅವರು ನಮಗೆ ಸಂದೇಶ ರವಾನಿಸುತ್ತಿದ್ದಾರೆ!” ಎಂದಿದ್ದಾರೆ ಆನಂದ್ ಮಹೀಂದ್ರಾ.

ಇದನ್ನೂ ಓದು : Viral Video: ಅಣಾ ನೀನೆಷ್ಟಾರಾ ಕಣ್ಕಟ್ಟು ಬಯಲು ಮಾಡ್ಕೋ ನಾವ್ ಮಾತ್ರ ಆ ಹುಡುಗೀನೇ ನೋಡೋದು; ಸಮೂಹ ಸನ್ನಿಗೊಳಗಾದ ನೆಟ್ಟಿಗರು

ಈ ಜೋಡಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಾಗಿದೆ ಆದ್ದರಿಂದ ಇಂಥ ಮಳೆಗಾಲದ ದಿನಗಳನ್ನು ಆನಂದಿಸುತ್ತಿದ್ದಾರೆ ಎಂದಿದ್ದಾರೆ ಒಬ್ಬರು. ವಯಸ್ಸು ಒಂದು ಅಂಕಿಸಂಖ್ಯೆ ಅಷ್ಟೇ. ಆದರೆ ನಿಮ್ಮೊಳಗಿನ ನಿಮ್ಮ ಮಗುತನ ಯಾವತ್ತೂ ಕಾಪಾಡಿಕೊಳ್ಳಿ ಎಂದಿದ್ಧಾರೆ ಮತ್ತೊಬ್ಬರು. ನಿನ್ನೆಯಷ್ಟೇ ಹಂಚಿಕೊಂಡ ಈ ವಿಡಿಯೋ ಅನ್ನು ಈಗಾಗಲೇ 3 ಮಿಲಿಯನ್​ಗಿಂತಲೂ ಹೆಚ್ಚು ಜನರು ನೋಡಿದ್ದಾರೆ. ಸಾವಿರಾರು ಜನರು ರೀಟ್ವೀಟ್ ಮಾಡಿದ್ದಾರೆ.

ಇದನ್ನು ಓದಿದ ನಿಮಗೀಗ ಮಳೆಯಲ್ಲಿ ಹೋಗಿ ನೆನಯಬೇಕು ಹಾಗೇ ಹೆಜ್ಜೆ ಹಾಕಬೇಕು ಅನ್ನಿಸುತ್ತಿದೆಯಾ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 6:59 pm, Mon, 3 July 23

‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್