Viral Video: ರಿಮಝಿಮ ಗಿರೆ ಸಾವನ್​; ಮುಂಬೈನಲ್ಲಿ ಈ ಹಾಡನ್ನು ಮರುಸೃಷ್ಟಿಸಿದ ಜೋಡಿ

Manzil : ರಾಜಸ್ಥಾನ ಮಹಿಳಾ ಆಯೋಗದ ಅಧ್ಯಕ್ಷೆ ರೆಹಾನಾ ರಯಾಝ್​ ಚಿಷ್ಟಿ ''ವಿಡಿಯೋ ಹಂಚಿಕೊಂಡಿದ್ದಕ್ಕೆ ಧನ್ಯವಾದ ಆನಂದ್​ಜೀ, ಇದೆಲ್ಲವನ್ನೂ ಮುಂದುವರೆಸಿಕೊಂಡು ಹೋಗಬೇಕು. ವಯಸ್ಸು ಎಂದೂ ಅಡ್ಡಿಯಾಗಬಾರದು” ಎಂದಿದ್ದಾರೆ.

Viral Video: ರಿಮಝಿಮ ಗಿರೆ ಸಾವನ್​; ಮುಂಬೈನಲ್ಲಿ ಈ ಹಾಡನ್ನು ಮರುಸೃಷ್ಟಿಸಿದ ಜೋಡಿ
ರಿಮಝಿಮ ಗಿರೇ ಸಾವನ್​- ಹಾಡನ್ನು ಮರುಸೃಷ್ಟಿಸಿದ ಜೋಡಿ
Follow us
|

Updated on:Jul 03, 2023 | 7:04 PM

Couple : ರಿಮಝಿಮ ಗಿರೇ ಸಾವನ್ (RimJhim Gire Sawan), ಅಮಿತಾಬ್​ ಬಚ್ಚನ್ (Amitab Bacchan) ಮತ್ತು ಮೌಶಮಿ ಚಟರ್ಜಿ ಅಭಿನಯದ ”ಮಂಜಿಲ್​”  ಸಿನೆಮಾದ ಈ ಹಾಡು ಕೇಳುತ್ತಿರುವಾಗಲೇ ಕಿಟಕಿಯಾಚೆ ಧೋಮಳೆ. ಹಾಡು ನಿಂತಾಗ ಪರದೆ ಮೇಲಿರುವವರು ಅವರಲ್ಲವೆ…? ಮತ್ತೆ  ಇವರು ಯಾರು? ಇವರು ನಡುವಯಸ್ಸಿನ ಜೋಡಿ. ಅದೇ ಸಮುದ್ರ ಅದೇ ತೀರ ಅದೇ ಹಾಡು ಅದೇ ಹೆಜ್ಜೆ ಅದೇ ಭಾವ. ಈ ಜೋಡಿ ಅದೇ ಹಾಡನ್ನು ಹೀಗೆ ಮರುಸೃಷ್ಟಿಸಿದೆ. ಇದೀಗ ಈ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರು ಈ ವಿಡಿಯೋ ನೋಡುತ್ತ ರೋಮಾಂಚನಗೊಳ್ಳುತ್ತಿದ್ದಾರೆ. ಉದ್ಯಮಿ ಆನಂದ್ ಮಹೀಂದ್ರಾ ಈ ವಿಡಿಯೋ ಟ್ವೀಟ್ ಮಾಡಿದ್ದಾರೆ.

”ಮುಂಬೈನ ಬೀಚಿನಲ್ಲಿ ಈ ಜೋಡಿ ವಿಡಿಯೋ ಅನ್ನು ಮರುಸೃಷ್ಟಿಸಿದೆ. ಈ ಜೋಡಿಯನ್ನು ಈ ಮೂಲಕ ನಾನು ಅಭಿನಂದಿಸುತ್ತಿದ್ದೇನೆ. ”ನಿಮ್ಮ ಕಲ್ಪನೆಗೆ ರೆಕ್ಕೆ ಹಚ್ಚಿಕೊಂಡರೆ ನಿಮಗೆ ಬೇಕಾದಂತೆ ನಿಮ್ಮ ಜೀವನವನ್ನು ಛಂದಗೊಳಿಸಿಕೊಳ್ಳಬಹುದು” ಎಂದು ಅವರು ನಮಗೆ ಸಂದೇಶ ರವಾನಿಸುತ್ತಿದ್ದಾರೆ!” ಎಂದಿದ್ದಾರೆ ಆನಂದ್ ಮಹೀಂದ್ರಾ.

ಇದನ್ನೂ ಓದು : Viral Video: ಅಣಾ ನೀನೆಷ್ಟಾರಾ ಕಣ್ಕಟ್ಟು ಬಯಲು ಮಾಡ್ಕೋ ನಾವ್ ಮಾತ್ರ ಆ ಹುಡುಗೀನೇ ನೋಡೋದು; ಸಮೂಹ ಸನ್ನಿಗೊಳಗಾದ ನೆಟ್ಟಿಗರು

ಈ ಜೋಡಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಾಗಿದೆ ಆದ್ದರಿಂದ ಇಂಥ ಮಳೆಗಾಲದ ದಿನಗಳನ್ನು ಆನಂದಿಸುತ್ತಿದ್ದಾರೆ ಎಂದಿದ್ದಾರೆ ಒಬ್ಬರು. ವಯಸ್ಸು ಒಂದು ಅಂಕಿಸಂಖ್ಯೆ ಅಷ್ಟೇ. ಆದರೆ ನಿಮ್ಮೊಳಗಿನ ನಿಮ್ಮ ಮಗುತನ ಯಾವತ್ತೂ ಕಾಪಾಡಿಕೊಳ್ಳಿ ಎಂದಿದ್ಧಾರೆ ಮತ್ತೊಬ್ಬರು. ನಿನ್ನೆಯಷ್ಟೇ ಹಂಚಿಕೊಂಡ ಈ ವಿಡಿಯೋ ಅನ್ನು ಈಗಾಗಲೇ 3 ಮಿಲಿಯನ್​ಗಿಂತಲೂ ಹೆಚ್ಚು ಜನರು ನೋಡಿದ್ದಾರೆ. ಸಾವಿರಾರು ಜನರು ರೀಟ್ವೀಟ್ ಮಾಡಿದ್ದಾರೆ.

ಇದನ್ನು ಓದಿದ ನಿಮಗೀಗ ಮಳೆಯಲ್ಲಿ ಹೋಗಿ ನೆನಯಬೇಕು ಹಾಗೇ ಹೆಜ್ಜೆ ಹಾಕಬೇಕು ಅನ್ನಿಸುತ್ತಿದೆಯಾ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 6:59 pm, Mon, 3 July 23

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ